ETV Bharat / international

ಲಂಡನ್​​ಗೆ ಬಸವರಾಜ ಬೊಮ್ಮಾಯಿ ​ಭೇಟಿ: ಬಸವೇಶ್ವರರ ಪುತ್ಥಳಿಗೆ ನಮನ ಸಲ್ಲಿಸಿದ ಸಂಸದ - Basavaraja Bommai London Visit

author img

By ETV Bharat Karnataka Team

Published : Sep 14, 2024, 5:33 PM IST

ಕಾರ್ಯಕ್ರಮ ನಿಮಿತ್ತ ಲಂಡನ್​ಗೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ, ಅಲ್ಲಿನ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು.

Basavaraja Bommai London Visit
ಬೊಮ್ಮಾಯಿ ಲಂಡನ್​ ಭೇಟಿ (ETV Bharat)

ಲಂಡನ್: ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ನಿಮಿತ್ತ ಲಂಡನ್​ಗೆ ಭೇಟಿ ನೀಡಿದ್ದು, ಅಲ್ಲಿ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಅವರೊಂದಿಗೆ ಪುತ್ಥಳಿಗೆ ಭೇಟಿ ನೀಡಿದರು.

ಬಸವರಾಜ ಬೊಮ್ಮಾಯಿ (ETV Bharat)

ಲಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್​ಡಮ್‌ನ ಬಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು. ಲಾಂಬೆತ್ ಮಾಜಿ ಮೇಯರ್ ಡಾ.ನೀರಜ್​​​ ಪಾಟೀಲ್, ಬಸವ ಸಮಿತಿ ಅಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಉಪಸ್ಥಿತರಿದ್ದರು.

Basavaraja Bommai London Visit
ಬೊಮ್ಮಾಯಿ ಲಂಡನ್​ ಭೇಟಿ (ETV Bharat)

ಈ ಐತಿಹಾಸಿಕ ಪುತ್ಥಳಿಯ ದಶಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿಗೆ ಆಹ್ವಾನ ಪತ್ರವನ್ನು ಹಸ್ತಾಂತರಿಸುವಂತೆ ವಿನಂತಿಸಿ ಲಾಂಬೆತ್ ಬಸವೇಶ್ವರ ಫೌಂಡೇಶನ್ ಬೊಮ್ಮಾಯಿ ಅವರಿಗೆ ಆಹ್ವಾನ ಪತ್ರ ನೀಡಿತು. 2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸ್ಮಾರಕವನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ: ಟಿಕೆಟ್​ಗಾಗಿ ಬೊಮ್ಮಾಯಿ ಪುತ್ರ ಸೇರಿ 57 ಆಕಾಂಕ್ಷಿಗಳಿಂದ ಅರ್ಜಿ - Shiggaon Byelection

ಲಂಡನ್: ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ನಿಮಿತ್ತ ಲಂಡನ್​ಗೆ ಭೇಟಿ ನೀಡಿದ್ದು, ಅಲ್ಲಿ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಅವರೊಂದಿಗೆ ಪುತ್ಥಳಿಗೆ ಭೇಟಿ ನೀಡಿದರು.

ಬಸವರಾಜ ಬೊಮ್ಮಾಯಿ (ETV Bharat)

ಲಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್​ಡಮ್‌ನ ಬಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು. ಲಾಂಬೆತ್ ಮಾಜಿ ಮೇಯರ್ ಡಾ.ನೀರಜ್​​​ ಪಾಟೀಲ್, ಬಸವ ಸಮಿತಿ ಅಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಉಪಸ್ಥಿತರಿದ್ದರು.

Basavaraja Bommai London Visit
ಬೊಮ್ಮಾಯಿ ಲಂಡನ್​ ಭೇಟಿ (ETV Bharat)

ಈ ಐತಿಹಾಸಿಕ ಪುತ್ಥಳಿಯ ದಶಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿಗೆ ಆಹ್ವಾನ ಪತ್ರವನ್ನು ಹಸ್ತಾಂತರಿಸುವಂತೆ ವಿನಂತಿಸಿ ಲಾಂಬೆತ್ ಬಸವೇಶ್ವರ ಫೌಂಡೇಶನ್ ಬೊಮ್ಮಾಯಿ ಅವರಿಗೆ ಆಹ್ವಾನ ಪತ್ರ ನೀಡಿತು. 2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸ್ಮಾರಕವನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ: ಟಿಕೆಟ್​ಗಾಗಿ ಬೊಮ್ಮಾಯಿ ಪುತ್ರ ಸೇರಿ 57 ಆಕಾಂಕ್ಷಿಗಳಿಂದ ಅರ್ಜಿ - Shiggaon Byelection

ETV Bharat Logo

Copyright © 2024 Ushodaya Enterprises Pvt. Ltd., All Rights Reserved.