ಕೊಪನ್ಹೇಗನ್: ಹೃದಯ ರಕ್ತನಾಳ, ಕ್ಯಾನ್ಸರ್, ದೀರ್ಘಾವಧಿ ಶ್ವಾಸಕೋಶ ಸಮಸ್ಯೆ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗಗಳಾದ (ಎನ್ಸಿಡಿ) ಜಾಗತಿಕವಾಗಿ ಶೇ 75ರಷ್ಟು ಸಾವಿಗೆ ಕಾರಣವಾಗುತ್ತಿದೆ. ಮಾನವೀಯತೆ ತುರ್ತುಕ್ರಮದ ಸಿದ್ಧತೆಗಳು ಇಂತಹ ಸಾವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಯುಎನ್ ಏಜೆನ್ಸಿಯ ಜಂಟಿ ವರದಿ ತಿಳಿಸಿದೆ.
ಮಾನವೀಯ ತುರ್ತುಪರಿಸ್ಥಿತಿಗಳು ಎನ್ಸಿಡಿ ಅಪಾಯವನ್ನು ಹೆಚ್ಚಿಸಿದೆ. ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಪ್ರಕರಣಗಳು ವಿಪತ್ತಿಗಿಂತ ಮೂರು ಪ್ರಮಾಣದ ಹಾನಿ ಹೊಂದಿದೆ. ಆದಾಗ್ಯೂ, ಎನ್ಸಿಡಿಯ ಆರೈಕೆ ಮತ್ತು ಚಿಕಿತ್ಸೆ ಮಾನವ ತುರ್ತು ಕ್ರಮದ ಸಿದ್ಧತೆ ಮತ್ತು ಪ್ರತಿಕ್ರಿಯೆಯ ಭಾಗದ ಗುಣಮಟ್ಟವನ್ನು ಒಳಗೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ರೆಫ್ಯೂಜಿ ಎಜೆನ್ಸಿ ಯುಎನ್ಎಚ್ಸಿಆರ್ ತಜ್ಞರು ತಿಳಿಸಿದ್ದಾರೆ. ಈ ಸಂಬಂಧ ಡೆನ್ಮಾರ್ಕ್ನಲ್ಲಿ ಎನ್ಸಿಡಿ ಕುರಿತಾಗಿ ಮೂರು ದಿನಗಳ ಜಾಗತಿಕ ಉನ್ನತ ಮಟ್ಟದ ತಾಂತ್ರಿಕ ಸಭೆ ನಡೆಸಲಾಗಿದೆ.
ವಿಶ್ವಸಂಸ್ಥೆ ಅಂದಾಜಿಸಿದಂತೆ 2024ರಲ್ಲಿ 300 ಮಿಲಿಯನ್ ಜನರಿಗೆ ಮಾನವೀಯತೆ ಸಹಾಯ ಮತ್ತು ರಕ್ಷಣೆಯು ಬೇಕಿದೆ. ಇದರಲ್ಲಿ ಅರ್ಧದಷ್ಟು ಮಂದಿಗೆ ಅಂದರೆ 165.7 ಮಿಲಿಯನ್ ಮಂದಿಗೆ ತುರ್ತು ಆರೋಗ್ಯ ಸಲಹೆ ಬೇಕಿದೆ.
ಎನ್ಸಿಡಿಯಲ್ಲಿನ ಮಾನವೀಯ ಬಿಕ್ಕಟ್ಟಿನ ಜೊತೆಗೆ ಬದುಕುತ್ತಿರುವ ಜನರಲ್ಲಿ ಆಘಾತ, ಒತ್ತಡ ಅಥವಾ ವೈದ್ಯಕೀಯ ಸೌಲಭ್ಯಗಳಿಲ್ಲದೆ ಅವರ ಪರಿಸ್ಥಿತಿ ಕೆಟ್ಟದಾಗಿದೆ. ಅವರಿಗೆ ಹೆಚ್ಚಿನ ಅಗತ್ಯತೆ ಬೇಕಿದೆ. ಆದರೆ, ಸಂಪನ್ಮೂಗಳು ಇಲ್ಲ ಎಂದು ಡಬ್ಲ್ಯೂಎಚ್ಒನ ಪ್ರಧಾನ ಮುಖ್ಯಸ್ಥರಾದ ಡಾ ಟೆಡ್ರೆಸ್ ಗೇಬ್ರಿಯಸೆಸ್ ತಿಳಿಸಿದ್ದಾರೆ.
ಎನ್ಸಿಡಿ ಆರೈಕೆಯಲ್ಲಿನ ತುರ್ತು ಪ್ರತಿಕ್ರಿಯೆ, ಆಘಾತಗಳನ್ನು ತಡೆದು, ಜನರ ಜೀವನ ಉತ್ತಮವಾಗಿಸುವ ಆರೋಗ್ಯ ಭದ್ರತೆ ಸುಧಾರಿಸುವ ದಾರಿಯನ್ನು ನಾವು ಹುಡುಕಬೇಕಿದೆ ಎಂದರು. ಮಾನವೀಯತೆ ಪ್ರತಿಕ್ರಿಯೆಯಲ್ಲಿ ತಾಂತ್ರಿಕ ಮತ್ತು ಕಾರ್ಯ ನಿರ್ವಹಣಾ ಮಾರ್ಗದರ್ಶನ ಮತ್ತು ಸಾಮಾರ್ಥ್ಯ ಹಾಗೂ ಸಂಪನ್ಮೂಲ ಕೊರತೆಯಿಂದ ಎನ್ಸಿಡಿಯನ್ನು ನಿರ್ಲಕ್ಷಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಎನ್ಸಿಡಿ ಪರಿಹರಿಸಲು ಕೆಲವು ದೇಶಗಳಲ್ಲಿ ಇದರ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ನೀತಿ ಮತ್ತು ಸೇವೆ ಒಳಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಭಾಗವಾಗಿ ಆರೋಗ್ಯ ತುರ್ತುಸ್ಥಿತಿಗಳಿಗೆ ಸಿದ್ಧವಾಗಿ ಪ್ರತಿಕ್ರಿಯಿಸಬೇಕಿದೆ. ಆದಾಗ್ಯೂ ಹೆಚ್ಚಿನದನ್ನು ನಾವು ಮಾಡಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಡಯಾಲಿಸೀಸ್ ಅಥವಾ ಕ್ಯಾನ್ಸರ್ನಂತಹ ಆರೈಕೆಗೆ ಕೆಲವು ವಿಶೇಷ ಸೇವೆ ನಿರ್ದಿಷ್ಟ ಯೋಜನೆ ಮತ್ತು ಅಳವಡಿಕೆ ಆಗಬೇಕಿದೆ. ಎನ್ಸಿಡಿ ನಿರ್ವಹಣೆಗೆ ಹೆಚ್ಚಿನ ಒಳನೋಟ ಮತ್ತು ತುರ್ತುಸಿದ್ಧತೆ ಬೇಕಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದ ಮಕ್ಕಳಲ್ಲಿ ಹೆಚ್ಚುತ್ತಿರುವ ಎನ್ಸಿಡಿ ಹೊರೆ: ಕಾರಣವೇನು?