ETV Bharat / health

ಅಜೀರ್ಣಕ್ಕೆ ಆಯುರ್ವೇದದ ಮನೆ ಮದ್ದು; ಇದನ್ನು 1 ಚಮಚ ಸೇವಿಸಿ ಸಾಕು, ಸಮಸ್ಯೆಯಿಂದ ಮುಕ್ತಿ! - Ayurvedic Treatment For Indigestion

author img

By ETV Bharat Health Team

Published : Sep 6, 2024, 11:11 AM IST

Indigestion: ಅಜೀರ್ಣ ಸಮಸ್ಯೆ ಅನೇಕರನ್ನು ಕಾಡುತ್ತಿರುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವರು ನೇರವಾಗಿ ಔಷಧಿಗಳನ್ನು ಬಳಸುತ್ತಾರೆ. ಆದರೆ, ಆಯುರ್ವೇದದಲ್ಲಿ ಸಿದ್ಧಪಡಿಸಿದ ಈ ಔಷಧಿ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

INDIGESTION TREATMENT IN AYURVEDA  DIGESTION PROBLEM SOLUTION  AYURVEDIC TREATMENT FOR INDIGESTION  INDIGESTION TREATMENT AS AYURVEDA
ಅಜೀರ್ಣ ಸಮಸ್ಯೆಗೆ ಪರಿಹಾರ (ETV Bharat)

Ayurvedic Home Remedy To Reduce Indigestion: ಹೊಟ್ಟೆಯ ಸಮಸ್ಯೆ ಕೆಲವೊಮ್ಮೆ ತುಂಬಾ ತ್ರಾಸದಾಯಕವಾಗಿರುತ್ತದೆ. ಅದರಲ್ಲೂ ಅಜೀರ್ಣವಾದರೆ ಹೇಳಲಾಗದಷ್ಟು ನೋವು. ಊಟ ಮಾಡಿದ ನಂತರ ಹೊಟ್ಟೆ ಉಬ್ಬರಿಸಿಕೊಂಡು ಕಲ್ಲಿನಂತಾಗುತ್ತದೆ. ಇದರಿಂದ ಓಡಾಡಲೂ ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೂ ಕಷ್ಟವೆನಿಸುತ್ತದೆ.

ಆದರೆ, ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರವಿದೆ ಎನ್ನುತ್ತಾರೆ ಪ್ರಮುಖ ಆಯುರ್ವೇದ ವೈದ್ಯೆ ಗಾಯತ್ರಿ ದೇವಿ. ಆಹಾರ ಸೇವನೆಯ ಬಳಿಕ ಆಗುವ ಅಜೀರ್ಣದಿಂದ ಮುಕ್ತಿ ಪಡೆಯಬಹುದು ಎಂದು ಅವರು ಹೇಳುತ್ತಾರೆ. ಈ ಔಷಧಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.

ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • 250 ಗ್ರಾಂ ಹಸಿ ಶುಂಠಿ ಪೇಸ್ಟ್
  • 275 ಗ್ರಾಂ ಕಲ್ಲು ಸಕ್ಕರೆ ಪುಡಿ
  • 5 ಗ್ರಾಂ ಒಣ ಶುಂಠಿ ಪುಡಿ
  • 10 ಗ್ರಾಂ ಕಡಲೆ ಪುಡಿ
  • 10 ಗ್ರಾಂ ಕಾಳು ಮೆಣಸಿನ ಪುಡಿ
  • 5 ಗ್ರಾಂ ಏಲಕ್ಕಿ ಪುಡಿ
  • ಜೇನು

ಔಷಧ ಸಿದ್ಧಪಡಿಸುವುದು ಹೇಗೆ?:

  • ಸ್ಟವ್ ಹೊತ್ತಿಸಿ ಒಂದು ಪಾತ್ರೆಯಲ್ಲಿ ಹಸಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬೇಯಿಸಿ.
  • ನಂತರ ಕಲ್ಲು ಸಕ್ಕರೆ ಪುಡಿ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿ.
  • ಒಣ ಶುಂಠಿ ಪುಡಿ, ಮೆಣಸು, ಏಲಕ್ಕಿ ಪುಡಿ ಮತ್ತು ಪಿಪ್ಪಲ್ ಪುಡಿ ಸೇರಿಸಿ.
  • ಈ ಎಲ್ಲಾ ಪುಡಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಸ್ಟೌವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಪಕ್ಕಕ್ಕಿರಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ.
  • ಅಜೀರ್ಣದಿಂದ ಬಳಲುತ್ತಿರುವವರು ಹಾಗೂ ಮಲಬದ್ಧತೆ ಇರುವವರು ಈ ಔಷಧಿಯನ್ನು ಸೇವಿಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
  • ಅಜೀರ್ಣ ಸಮಸ್ಯೆಯನ್ನು ತೊಡೆದುಹಾಕಲು ಆಹಾರಕ್ಕೆ 10 ನಿಮಿಷಗಳ ಮೊದಲು ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಸೇವಿಸಲು ಸೂಚಿಸಲಾಗುತ್ತದೆ.

ಔಷಧಕ್ಕೆ ಬಳಸಲಾಗಿರುವ ಪದಾರ್ಥಗಳಿಂದ ದೊರೆಯುವ ಲಾಭಗಳೇನು?:

ಶುಂಠಿ: ನಮ್ಮ ಹಿರಿಯರು ಸಾಮಾನ್ಯವಾಗಿ ಅಜೀರ್ಣವಾದಾಗ ಶುಂಠಿ ತಿನ್ನಲು ಹೇಳುತ್ತಾರೆ. ಏಕೆಂದರೆ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಕಡಲೆ: ಕಡಲೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.

ಕಾಳುಮೆಣಸು: ಕಾಳುಮೆಣಸನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸೋಂಕುಗಳನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಅವುಗಳನ್ನು ಬಳಸಲಾಗುತ್ತದೆ. ಇದು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಏಲಕ್ಕಿ: ಆಯುರ್ವೇದ ತಜ್ಞರು ಹೇಳುವಂತೆ ಮಸಾಲೆ ಏಲಕ್ಕಿ ಅಜೀರ್ಣ ಚಿಕಿತ್ಸೆಗೆ ಒಳ್ಳೆಯದು.

ಇದನ್ನೂ ಓದಿ:

ಡಯಾಬಿಟಿಸ್​ಗೆ ದಾಲ್ಚಿನ್ನಿಯೇ ರಾಮಬಾಣ; ನಿಮಗೆ ಕಾಡುತ್ತಿರುವ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಿ! - Cinnamon Control Sugar Level

ಡಾರ್ಕ್​ ಸರ್ಕಲ್​ ಸಮಸ್ಯೆ; ಉತ್ತಮ ಫಲಿತಾಂಶಕ್ಕೆ ಇಲ್ಲಿದೆ ವೈದ್ಯರ ಸಲಹೆ - Dark Circles Causes and Treatment

Ayurvedic Home Remedy To Reduce Indigestion: ಹೊಟ್ಟೆಯ ಸಮಸ್ಯೆ ಕೆಲವೊಮ್ಮೆ ತುಂಬಾ ತ್ರಾಸದಾಯಕವಾಗಿರುತ್ತದೆ. ಅದರಲ್ಲೂ ಅಜೀರ್ಣವಾದರೆ ಹೇಳಲಾಗದಷ್ಟು ನೋವು. ಊಟ ಮಾಡಿದ ನಂತರ ಹೊಟ್ಟೆ ಉಬ್ಬರಿಸಿಕೊಂಡು ಕಲ್ಲಿನಂತಾಗುತ್ತದೆ. ಇದರಿಂದ ಓಡಾಡಲೂ ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೂ ಕಷ್ಟವೆನಿಸುತ್ತದೆ.

ಆದರೆ, ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರವಿದೆ ಎನ್ನುತ್ತಾರೆ ಪ್ರಮುಖ ಆಯುರ್ವೇದ ವೈದ್ಯೆ ಗಾಯತ್ರಿ ದೇವಿ. ಆಹಾರ ಸೇವನೆಯ ಬಳಿಕ ಆಗುವ ಅಜೀರ್ಣದಿಂದ ಮುಕ್ತಿ ಪಡೆಯಬಹುದು ಎಂದು ಅವರು ಹೇಳುತ್ತಾರೆ. ಈ ಔಷಧಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.

ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • 250 ಗ್ರಾಂ ಹಸಿ ಶುಂಠಿ ಪೇಸ್ಟ್
  • 275 ಗ್ರಾಂ ಕಲ್ಲು ಸಕ್ಕರೆ ಪುಡಿ
  • 5 ಗ್ರಾಂ ಒಣ ಶುಂಠಿ ಪುಡಿ
  • 10 ಗ್ರಾಂ ಕಡಲೆ ಪುಡಿ
  • 10 ಗ್ರಾಂ ಕಾಳು ಮೆಣಸಿನ ಪುಡಿ
  • 5 ಗ್ರಾಂ ಏಲಕ್ಕಿ ಪುಡಿ
  • ಜೇನು

ಔಷಧ ಸಿದ್ಧಪಡಿಸುವುದು ಹೇಗೆ?:

  • ಸ್ಟವ್ ಹೊತ್ತಿಸಿ ಒಂದು ಪಾತ್ರೆಯಲ್ಲಿ ಹಸಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬೇಯಿಸಿ.
  • ನಂತರ ಕಲ್ಲು ಸಕ್ಕರೆ ಪುಡಿ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿ.
  • ಒಣ ಶುಂಠಿ ಪುಡಿ, ಮೆಣಸು, ಏಲಕ್ಕಿ ಪುಡಿ ಮತ್ತು ಪಿಪ್ಪಲ್ ಪುಡಿ ಸೇರಿಸಿ.
  • ಈ ಎಲ್ಲಾ ಪುಡಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಸ್ಟೌವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಪಕ್ಕಕ್ಕಿರಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ.
  • ಅಜೀರ್ಣದಿಂದ ಬಳಲುತ್ತಿರುವವರು ಹಾಗೂ ಮಲಬದ್ಧತೆ ಇರುವವರು ಈ ಔಷಧಿಯನ್ನು ಸೇವಿಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
  • ಅಜೀರ್ಣ ಸಮಸ್ಯೆಯನ್ನು ತೊಡೆದುಹಾಕಲು ಆಹಾರಕ್ಕೆ 10 ನಿಮಿಷಗಳ ಮೊದಲು ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಸೇವಿಸಲು ಸೂಚಿಸಲಾಗುತ್ತದೆ.

ಔಷಧಕ್ಕೆ ಬಳಸಲಾಗಿರುವ ಪದಾರ್ಥಗಳಿಂದ ದೊರೆಯುವ ಲಾಭಗಳೇನು?:

ಶುಂಠಿ: ನಮ್ಮ ಹಿರಿಯರು ಸಾಮಾನ್ಯವಾಗಿ ಅಜೀರ್ಣವಾದಾಗ ಶುಂಠಿ ತಿನ್ನಲು ಹೇಳುತ್ತಾರೆ. ಏಕೆಂದರೆ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಕಡಲೆ: ಕಡಲೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.

ಕಾಳುಮೆಣಸು: ಕಾಳುಮೆಣಸನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸೋಂಕುಗಳನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಅವುಗಳನ್ನು ಬಳಸಲಾಗುತ್ತದೆ. ಇದು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಏಲಕ್ಕಿ: ಆಯುರ್ವೇದ ತಜ್ಞರು ಹೇಳುವಂತೆ ಮಸಾಲೆ ಏಲಕ್ಕಿ ಅಜೀರ್ಣ ಚಿಕಿತ್ಸೆಗೆ ಒಳ್ಳೆಯದು.

ಇದನ್ನೂ ಓದಿ:

ಡಯಾಬಿಟಿಸ್​ಗೆ ದಾಲ್ಚಿನ್ನಿಯೇ ರಾಮಬಾಣ; ನಿಮಗೆ ಕಾಡುತ್ತಿರುವ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಿ! - Cinnamon Control Sugar Level

ಡಾರ್ಕ್​ ಸರ್ಕಲ್​ ಸಮಸ್ಯೆ; ಉತ್ತಮ ಫಲಿತಾಂಶಕ್ಕೆ ಇಲ್ಲಿದೆ ವೈದ್ಯರ ಸಲಹೆ - Dark Circles Causes and Treatment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.