ETV Bharat / entertainment

ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮಾತಿನ ಮಲ್ಲ ಸೃಜನ್​ ಲೋಕೇಶ್​​: ಯಾರು ಎಲಿಮಿನೇಟ್​ ಆಗ್ಬೇಕು?

ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಮತ್ತು ಖ್ಯಾತ ನಿರ್ದೇಶಕ ಯೋಗರಾಜ್​ ಭಟ್ ಅವರ ಬೆನ್ನಲ್ಲೇ ಬಿಗ್​ ಬಾಸ್​ ಮನೆಗೆ ಜನಪ್ರಿಯ ನಿರೂಪಕ ಸೃಜನ್​ ಲೋಕೇಶ್​​ ಎಂಟ್ರಿ ಕೊಟ್ಟಿದ್ದಾರೆ.

Bigg Boss kannada 11
'ಬಿಗ್​ ಬಾಸ್​​ ಕನ್ನಡ ಸೀಸನ್​ 11' (ETV Bharat)
author img

By ETV Bharat Entertainment Team

Published : 9 hours ago

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಸೀಸನ್​ 11'ರ ನಾಲ್ಕನೇ ವಾರಾಂತ್ಯದ ಎಲಿಮಿನೇಷನ್​ ಬಿಸಿ ಏರಿದೆ. ಕಳೆದ ವಾರದ ನಡುವೆ ನಡೆದ ಮಹತ್ತರ ಘಟನೆಯಲ್ಲಿ ರಂಜಿತ್​ ಮತ್ತು ಜಗದೀಶ್ ಅವರನ್ನು ಬಿಗ್​ ಬಾಸೇ ಮನೆಯಿಂದ ಹೊರಕಳುಹಿಸಿದ್ದಾರೆ. ವಾರಾಂತ್ಯದಲ್ಲಿ ಮನೆಮಂದಿಯ ತಪ್ಪು ಸರಿಪಡಿಸುವ ಕೆಲಸವನ್ನು ಕಿಚ್ಚ ಸುದೀಪ್​​ ಮಾಡಿದ್ದರು. ಆದ್ರೆ ಎಲಿಮಿನೇಶನ್​ ಪ್ರೊಸೆಸ್​​ ನಡೆದಿರಲಿಲ್ಲ. ಈ ವಾರ ಕಿಚ್ಚನ ಕಾರ್ಯಕ್ರಮಗಳಿಲ್ಲ. ಬದಲಾಗಿ, ಮೂವರು ಅತಿಥಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ​​ಇಂದಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್​ ಆಗಿ ಹೊರನಡೆಯಲಿದ್ದಾರೆ.

''ಯಾರ ದೊಡ್ಮನೆ ಪ್ರಯಾಣಕ್ಕೆ ಬ್ರೇಕ್ ಬೀಳಲಿದೆ?'' ಬಿಗ್ ಬಾಸ್ ಕನ್ನಡ ಸೀಸನ್ 11. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಳಿಸಿದೆ. ಮಾತಿನ ಮಲ್ಲ ಸೃಜನ್​ ಲೋಕೇಶ್​​ ಮನೆ ಪ್ರವೇಶಿಸಿದ್ದು, ಈ ಎಲಿಮಿನೇಷನ್​ ನಡೆಸಿಕೊಡಲಿದ್ದಾರೆ. ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಬಿಗ್​​ ಬಾಸ್​​ ಮನೆಯಲ್ಲಿ ಮಾತಿನ ಮಲ್ಲ, ಟಾಕಿಂಗ್​ ಸ್ಟಾರ್​​ ಸೃಜನ್​ ಲೋಕೇಶ್​​ ಎಂಬ ದನಿಯೊಂದಿಗೆ ಪ್ರೋಮೋ ಆರಂಭಗೊಂಡಿದೆ. ಎಲಿಮಿನೇಶಷನ್​ ಪ್ರೊಸೆಸ್​​ ಅನ್ನು ಅವರೇ ನಡೆಸಿಕೊಡುವಂತೆ ತೋರಿದೆ. ಕೈ ಹಿಂದೆ ಕಟ್ಟಿ, ಉಪಹಾರ ಸೇವಿಸಬೇಕೆಂದು ಸ್ಪರ್ಧಿಗಳಿಗೆ ಸೂಚಿಸಲಾಗಿದೆ. ಯಾರ್ಯಾರಿಗೆ ಮನೆಯಲ್ಲಿ ಉಳಿಯುತ್ತೀರಾ ಎಂಬ ಕಾನ್ಫಿಡೆನ್ಸ್ ಇದೆ? ಎಂದು ಸೃಜನ್​ ಲೋಕೇಶ್​​ ಪ್ರಶ್ನಿಸಿದ್ದಾರೆ. ಸೇಫ್​ ಆಗಬೇಕೆಂಬ ಆಸೆ ಎಷ್ಟಿದೆಯೋ ಅಷ್ಟೇ ನಂಬಿಕೆಯೂ ಇದೆ ಎಂದು ಗೌತಮಿ ಉತ್ತರಿಸಿದ್ದಾರೆ. ಇವರು ಮಾತನಾಡೋದು ನೋಡಿದ್ರೆ ಏನು ಮಾಡಿಲ್ಲವೇನೋ ಅನಿಸುತ್ತಿದೆ ಎಂದು ಮಾನಸಾ ಅವರು ಕಣ್ಣೀರಿಟ್ಟಿದ್ದಾರೆ. ಮೋಕ್ಷಿತಾ ಮಾತನಾಡಿ, ಯಾರನ್ನೆಲ್ಲ ನಾಮಿನೇಟ್​ ಮಾಡಬೇಕೆಂಬುದರ ಬಗ್ಗೆ ತ್ರಿವಿಕ್ರಮ್ ಅವರ ಪ್ಲ್ಯಾನಿಂಗ್​ ಇದೆ. ಅವರ ಜೊತೆ ಇನ್ನೂ ಮೂರ್ನಾಲ್ಕು ಜನ ಕೈ ಜೋಡಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅದಕ್ಕೆ ಜಾಗ ಇರಕೂಡದು ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: 'ಈ ಅವಕಾಶ ದುರ್ಬಳಕೆಯಾಗುತ್ತಿದೆ ಎಂದನಿಸುತ್ತದೆಯೇ?' ಬಿಗ್​ ಬಾಸ್​ ಮನೆಯಲ್ಲಿ ಯೋಗರಾಜ್​ ಭಟ್​ ಈ ಪ್ರಶ್ನೆ ಎತ್ತಿದ್ಯಾಕೆ?

ನಂತರ, ಈ ಮನೆ ಒಬ್ಬರಿಗೆ ವಿದಾಯ ಹೇಳಲಿದೆ ಎಂದು ಬಿಗ್​ ಬಾಸ್​​ ಇಬ್ಬರನ್ನು ಕಾರಲ್ಲಿ ಕೂರಿಸಿಕೊಂಡು ಹೋಗಿದೆ. ಅದ್ಯಾರು ಅನ್ನೋ ಕುತೂಹಲ ಮನೆಮಂದಿ ಜೊತೆಗೆ ನೋಡುಗರಲ್ಲಿಯೂ ಇದೆ. ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದು ಯಾರು ಮನೆಯಿಂದ ಹೊರನಡೆಯುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್​ ಜೊತೆಗೆ ಅದ್ಭುತ ಪ್ರೇಮ್​ಕಹಾನಿ: ಸೆನ್ಸಾರ್​ನಲ್ಲೂ ಪಾಸ್​​ 'ಬಘೀರ'; ಶ್ರೀಮುರಳಿ, ರುಕ್ಮಿಣಿ ವಸಂತ್ ಕೆಮಿಸ್ಟ್ರಿ ನೋಡಲು ಕಾತರ

ಸುದೀಪ್​ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಹಾಗಾಗಿ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ್​ ಸಂಚಿಕೆಗಳನ್ನು ಅವರು ನಡೆಸಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಈ ವಾರ ಮೂವರು ಅತಿಥಿಗಳು ಮನೆ ಪ್ರವೇಶಿಸಿದ್ದಾರೆ. ಮೊನ್ನೆಯ ಸಂಚಿಕೆಯಲ್ಲಿ ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಮತ್ತು ನಿನ್ನೆಯ ಸಂಚಿಯಲ್ಲಿ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್ ಕಾಣಿಸಿಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಸೃಜನ್​ ಲೋಕೇಶ್​​ ಕಾಣಿಸಿಕೊಳ್ಳಲಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಮತ್ತು ಯಾರು ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ಅರಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​​ ಸೀಸನ್​ 11'ರ ನಾಲ್ಕನೇ ವಾರಾಂತ್ಯದ ಎಲಿಮಿನೇಷನ್​ ಬಿಸಿ ಏರಿದೆ. ಕಳೆದ ವಾರದ ನಡುವೆ ನಡೆದ ಮಹತ್ತರ ಘಟನೆಯಲ್ಲಿ ರಂಜಿತ್​ ಮತ್ತು ಜಗದೀಶ್ ಅವರನ್ನು ಬಿಗ್​ ಬಾಸೇ ಮನೆಯಿಂದ ಹೊರಕಳುಹಿಸಿದ್ದಾರೆ. ವಾರಾಂತ್ಯದಲ್ಲಿ ಮನೆಮಂದಿಯ ತಪ್ಪು ಸರಿಪಡಿಸುವ ಕೆಲಸವನ್ನು ಕಿಚ್ಚ ಸುದೀಪ್​​ ಮಾಡಿದ್ದರು. ಆದ್ರೆ ಎಲಿಮಿನೇಶನ್​ ಪ್ರೊಸೆಸ್​​ ನಡೆದಿರಲಿಲ್ಲ. ಈ ವಾರ ಕಿಚ್ಚನ ಕಾರ್ಯಕ್ರಮಗಳಿಲ್ಲ. ಬದಲಾಗಿ, ಮೂವರು ಅತಿಥಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ​​ಇಂದಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್​ ಆಗಿ ಹೊರನಡೆಯಲಿದ್ದಾರೆ.

''ಯಾರ ದೊಡ್ಮನೆ ಪ್ರಯಾಣಕ್ಕೆ ಬ್ರೇಕ್ ಬೀಳಲಿದೆ?'' ಬಿಗ್ ಬಾಸ್ ಕನ್ನಡ ಸೀಸನ್ 11. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಪ್ರೋಮೋ ಅನಾವರಣಗೊಳಿಸಿದೆ. ಮಾತಿನ ಮಲ್ಲ ಸೃಜನ್​ ಲೋಕೇಶ್​​ ಮನೆ ಪ್ರವೇಶಿಸಿದ್ದು, ಈ ಎಲಿಮಿನೇಷನ್​ ನಡೆಸಿಕೊಡಲಿದ್ದಾರೆ. ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಬಿಗ್​​ ಬಾಸ್​​ ಮನೆಯಲ್ಲಿ ಮಾತಿನ ಮಲ್ಲ, ಟಾಕಿಂಗ್​ ಸ್ಟಾರ್​​ ಸೃಜನ್​ ಲೋಕೇಶ್​​ ಎಂಬ ದನಿಯೊಂದಿಗೆ ಪ್ರೋಮೋ ಆರಂಭಗೊಂಡಿದೆ. ಎಲಿಮಿನೇಶಷನ್​ ಪ್ರೊಸೆಸ್​​ ಅನ್ನು ಅವರೇ ನಡೆಸಿಕೊಡುವಂತೆ ತೋರಿದೆ. ಕೈ ಹಿಂದೆ ಕಟ್ಟಿ, ಉಪಹಾರ ಸೇವಿಸಬೇಕೆಂದು ಸ್ಪರ್ಧಿಗಳಿಗೆ ಸೂಚಿಸಲಾಗಿದೆ. ಯಾರ್ಯಾರಿಗೆ ಮನೆಯಲ್ಲಿ ಉಳಿಯುತ್ತೀರಾ ಎಂಬ ಕಾನ್ಫಿಡೆನ್ಸ್ ಇದೆ? ಎಂದು ಸೃಜನ್​ ಲೋಕೇಶ್​​ ಪ್ರಶ್ನಿಸಿದ್ದಾರೆ. ಸೇಫ್​ ಆಗಬೇಕೆಂಬ ಆಸೆ ಎಷ್ಟಿದೆಯೋ ಅಷ್ಟೇ ನಂಬಿಕೆಯೂ ಇದೆ ಎಂದು ಗೌತಮಿ ಉತ್ತರಿಸಿದ್ದಾರೆ. ಇವರು ಮಾತನಾಡೋದು ನೋಡಿದ್ರೆ ಏನು ಮಾಡಿಲ್ಲವೇನೋ ಅನಿಸುತ್ತಿದೆ ಎಂದು ಮಾನಸಾ ಅವರು ಕಣ್ಣೀರಿಟ್ಟಿದ್ದಾರೆ. ಮೋಕ್ಷಿತಾ ಮಾತನಾಡಿ, ಯಾರನ್ನೆಲ್ಲ ನಾಮಿನೇಟ್​ ಮಾಡಬೇಕೆಂಬುದರ ಬಗ್ಗೆ ತ್ರಿವಿಕ್ರಮ್ ಅವರ ಪ್ಲ್ಯಾನಿಂಗ್​ ಇದೆ. ಅವರ ಜೊತೆ ಇನ್ನೂ ಮೂರ್ನಾಲ್ಕು ಜನ ಕೈ ಜೋಡಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅದಕ್ಕೆ ಜಾಗ ಇರಕೂಡದು ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: 'ಈ ಅವಕಾಶ ದುರ್ಬಳಕೆಯಾಗುತ್ತಿದೆ ಎಂದನಿಸುತ್ತದೆಯೇ?' ಬಿಗ್​ ಬಾಸ್​ ಮನೆಯಲ್ಲಿ ಯೋಗರಾಜ್​ ಭಟ್​ ಈ ಪ್ರಶ್ನೆ ಎತ್ತಿದ್ಯಾಕೆ?

ನಂತರ, ಈ ಮನೆ ಒಬ್ಬರಿಗೆ ವಿದಾಯ ಹೇಳಲಿದೆ ಎಂದು ಬಿಗ್​ ಬಾಸ್​​ ಇಬ್ಬರನ್ನು ಕಾರಲ್ಲಿ ಕೂರಿಸಿಕೊಂಡು ಹೋಗಿದೆ. ಅದ್ಯಾರು ಅನ್ನೋ ಕುತೂಹಲ ಮನೆಮಂದಿ ಜೊತೆಗೆ ನೋಡುಗರಲ್ಲಿಯೂ ಇದೆ. ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದು ಯಾರು ಮನೆಯಿಂದ ಹೊರನಡೆಯುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್​ ಜೊತೆಗೆ ಅದ್ಭುತ ಪ್ರೇಮ್​ಕಹಾನಿ: ಸೆನ್ಸಾರ್​ನಲ್ಲೂ ಪಾಸ್​​ 'ಬಘೀರ'; ಶ್ರೀಮುರಳಿ, ರುಕ್ಮಿಣಿ ವಸಂತ್ ಕೆಮಿಸ್ಟ್ರಿ ನೋಡಲು ಕಾತರ

ಸುದೀಪ್​ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಹಾಗಾಗಿ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್​ ಸುದೀಪ್​ ಸಂಚಿಕೆಗಳನ್ನು ಅವರು ನಡೆಸಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಈ ವಾರ ಮೂವರು ಅತಿಥಿಗಳು ಮನೆ ಪ್ರವೇಶಿಸಿದ್ದಾರೆ. ಮೊನ್ನೆಯ ಸಂಚಿಕೆಯಲ್ಲಿ ನ್ಯೂಸ್​ ಆ್ಯಂಕರ್​ ರಾಧಾ ಹಿರೇಗೌಡರ್​ ಮತ್ತು ನಿನ್ನೆಯ ಸಂಚಿಯಲ್ಲಿ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್ ಕಾಣಿಸಿಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಸೃಜನ್​ ಲೋಕೇಶ್​​ ಕಾಣಿಸಿಕೊಳ್ಳಲಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಮತ್ತು ಯಾರು ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ಅರಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.