ETV Bharat / entertainment

'ಸೋತ ಹಾಡುಗಳು ನನ್ನನ್ನು ಕಾಡುತ್ತವೆ': ಗೀತೆ ರಚನೆಕಾರ ಕೆ.ಕಲ್ಯಾಣ್ - K Kalyan Interview

author img

By ETV Bharat Entertainment Team

Published : Aug 13, 2024, 5:12 PM IST

Updated : Aug 13, 2024, 5:27 PM IST

ಸಿನಿಮಾ ಸಾಂಗ್ಸ್, ಮ್ಯೂಸಿಕ್​ ಆಲ್ಬಂ ಎಂದು 3,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಗೀತರಚನೆಕಾರ ಕೆ.ಕಲ್ಯಾಣ್ ಅವರು ತಮ್ಮ ಹಾಡುಗಳ ಬಗ್ಗೆ 'ಈಟಿವಿ ಭಾರತ'ದ ಜೊತೆ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

songwriter K Kalyan Interview
ಗೀತೆರಚನೆಕಾರ ಕೆ.ಕಲ್ಯಾಣ್ (ETV Bharat)
ಗೀತೆರಚನೆಕಾರ ಕೆ.ಕಲ್ಯಾಣ್ ಸಂದರ್ಶನ (ETV Bharat)

ಕೆ.ಕಲ್ಯಾಣ್. ಕನ್ನಡ ಚಿತ್ರರಂಗದಲ್ಲಿ ಪ್ರೇಮಕವಿ ಎಂದೇ ಫೇಮಸ್​​. ತಮ್ಮ 17ನೇ ವಯಸ್ಸಿನಲ್ಲೇ ಕನ್ನಡ ಚಿತ್ರಗಳಿಗೆ ಹಾಡುಗಳನ್ನು ಬರೆಯಲು ಶುರುಮಾಡಿದ ಇವರು ವಿಷ್ಣವರ್ಧನ್, ಶಿವರಾಜ್​ಕುಮಾರ್, ಪುನೀತ್ ರಾಜ್​​ಕುಮಾರ್, ಸುದೀಪ್, ಯಶ್ ಸೇರಿದಂತೆ ಸ್ಟಾರ್ ನಟರುಗಳ ಸಿನಿಮಾಗೆ ತಮ್ಮ ಹಾಡು ಒದಗಿಸಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ 'ಗೌರಿ' ಸಿನಿಮಾಗೂ ಹಾಡುಗಳನ್ನು ಬರೆದಿದ್ದು, ತಮ್ಮ ವೃತ್ತಿಜೀವನದ ಮೆಲುಕು ಹಾಕಿದ್ದಾರೆ.

ಸಿನಿಮಾ ಸಾಂಗ್ಸ್, ಮ್ಯೂಸಿಕ್​ ಆಲ್ಬಂಗಳು, ಭಕ್ತಿ ಪ್ರಧಾನ ಸೇರಿದಂತೆ 3,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಕೆ.ಕಲ್ಯಾಣ್ ತಮ್ಮ ಹಾಡುಗಳ ಬಗ್ಗೆ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಹಂಸಲೇಖ, ಎ.ಆರ್.ರೆಹಮಾನ್, ವಿಜಯ್ ಭಾಸ್ಕರ್, ರಾಜನ್ ನಾಗೇಂದ್ರ, ಉಪೇಂದ್ರ ಕುಮಾರ್ ಹಾಗೂ ಬಾಲಸುಬ್ರಹ್ಮಣ್ಯಂ ಸೇರಿದಂತೆ ಸಾಕಷ್ಟು ದಿಗ್ಗಜ ಸಂಗೀತ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುವ ಅನುಭವ ಇವರಿಗಿದ್ದು, ಪ್ರೇಮಕವಿ ಎಂದೇ ಜನಪ್ರಿಯರು.

ನಮ್ಮೂರ ಮಂದಾರ ಹೂವೆ ಸಿನಿಮಾದಿಂದ ಬೇಡಿಕೆ ಹೆಚ್ಚಿಸಿಕೊಂಡ ಕೆ.ಕಲ್ಯಾಣ್ ಬರವಣಿಗೆಗೆ ಸ್ಫೂರ್ತಿ ಆ ಸಿನಿಮಾದ ಕಥೆ. ಕಲ್ಯಾಣ್ ಚಿತ್ರದ ಎಲ್ಲಾ ದೃಶ್ಯಗಳನ್ನು ಬಹಳ ಪ್ರೀತಿಯಿಂದ ನೋಡುತ್ತಾರೆ. ನನಗೆ ಕಷ್ಟ ಅಂತಾ ಅನಿಸಿದಾಗ ನನಗೆ ಒಂದೇ ಒಂದು ಪದ ಬರೆಯಲೂ ಸಹ ಆಗಲ್ಲ. ಹಾಡು ಬರೆಯಲು ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಪ್ರೇರೇಪಿಸುತ್ತಾರೆ. ಆಗ ನಾನಗೆ ಬಹಳ ಅದ್ಭುತವಾದ ಹಾಡನ್ನು ಬರೆಯಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಬರೆದಿರುವ ಅಮೃತವರ್ಷಿಣಿ, ಚಂದ್ರಮುಖಿ ಪ್ರಾಣಸಖಿ, ಕೋಟಿಗೊಬ್ಬ, ಅಪ್ಪು, ಮಾಣಿಕ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳ ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಜನರು ಹಿಟ್ ಆದ ಹಾಡುಗಳ ಬಗ್ಗೆ ಮಾತನಾಡುವಾಗ ನಮಗೆ ಖುಷಿ ಯಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗೀತೆರಚನೆಕಾರ ಕೆ.ಕಲ್ಯಾಣ್ ಸಂದರ್ಶನ (ETV Bharat)

ನಾನು ಬರೆದಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿಲ್ಲ. ನಿಮಗೆ ಗೊತ್ತೇ, ನಾನು ಬರೆದಿರೋ ಕೆಲ ಹಾಡುಗಳು ಹಿಟ್ ಆಗಿಲ್ಲ. ಆಗ ನನಗೆ ಏಕೆ ಆ ಹಾಡು ಜನರಿಗೆ ಇಷ್ಟ ಆಗಲಿಲ್ಲ ಅನ್ನೋದು ಕಾಡಲು ಶುರುವಾಗುತ್ತದೆ. ಆ ರೀತಿ ನನಗೆ ಸಾಕಷ್ಟು ಬಾರಿ ಆಗಿದೆ. ಕಲ್ಯಾಣಿ ಚಿತ್ರದಲ್ಲಿ ನಾನು 9 ಹಾಡುಗಳನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದೆ. ಆ ಸಿನಿಮಾದ ಹಾಡುಗಳು ಚೆನ್ನಾಗಿ ಬರಲೆಂದು ನನಗಿಂತ ಹಿರಿಯ ಸಂಗೀತ ವಿದ್ವಾಂಸರ ಜೊತೆ ಕೆಲಸ ಮಾಡಿದ್ದೆ. ಆ ಸಿನಿಮಾ ಮೇಲೆ ನನಗೆ ವಿಶ್ವಾಸ ಕೂಡಾ ಬಹಳಾನೇ ಇತ್ತು. ಆದ್ರೆ ಆ ಸಿನಿಮಾ ಜನರಿಗೆ ಇಷ್ಟ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಎಂಥಾ ಚೆಂದಾನೆ ಇವಳು': ಮುದ್ದು ಮಗಳ ವಿಡಿಯೋ ಹಂಚಿಕೊಂಡ ಕಾಂತಾರ ಸ್ಟಾರ್​​; ರಿಷಬ್​ ಹೇಳಿದ್ದಿಷ್ಟು - Rishab Shetty Daughter Video

ನಾನು ಒಂದು ಹಾಡು ಬರೆಯಲು ಕುಳಿತಾಗ ಹೊಸ ನಿರ್ದೇಶಕರು, ಹಿರಿಯ ನಿರ್ದೇಶಕರು ಎಂಬುದನ್ನು ನೋಡುವುದಿಲ್ಲ. ಸಿನಿಮಾದ ಕಥೆ ಇಷ್ಟವಾದ್ರೆ ಆ ಸಿನಿಮಾಗೆ ಹಾಡು ಬರೆಯುತ್ತೇನೆ. ಅಲ್ಲಿ ನನ್ನ ಶ್ರಮ ಹಾಕಿರುತ್ತೇನೆ, ಅದು ನನಗೆ ತೃಪ್ತಿ ಕೊಡುತ್ತದೆ. ಹೀಗಾಗಿ ಚಿತ್ರರಂಗದಲ್ಲಿ ಹಾಡುಗಳನ್ನು ಬರೆಯೋದನ್ನು ಮುಂದುವರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ನೂರು ಜನ್ಮಕೂ ನೀವೇ ನನ್ನ ಆಯ್ಕೆ': ಯಶ್​ ರಾಧಿಕಾ ನಿರ್ಶ್ಚಿತಾರ್ಥಕ್ಕೆ 8 ವರ್ಷಗಳ ಸಂಭ್ರಮ - Yash Radhika Pandit

ನಮ್ಮ ತಾಯಿ, ತಂದೆ ಜೊತೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ಅವರಿಗೆ ನಾನು ದಿವಂಗತ ಪದ ಬಳಸುವುದಿಲ್ಲ. ಯಾಕಂದ್ರೆ ಅವರು ಸದಾ ನಮ್ಮ ಜೊತೆ ಇದ್ದಾರೆ ಎಂಬುದು ನನ್ನ ನಂಬಿಕೆ ಎಂದು ತಿಳಿಸಿದರು.

ಗೀತೆರಚನೆಕಾರ ಕೆ.ಕಲ್ಯಾಣ್ ಸಂದರ್ಶನ (ETV Bharat)

ಕೆ.ಕಲ್ಯಾಣ್. ಕನ್ನಡ ಚಿತ್ರರಂಗದಲ್ಲಿ ಪ್ರೇಮಕವಿ ಎಂದೇ ಫೇಮಸ್​​. ತಮ್ಮ 17ನೇ ವಯಸ್ಸಿನಲ್ಲೇ ಕನ್ನಡ ಚಿತ್ರಗಳಿಗೆ ಹಾಡುಗಳನ್ನು ಬರೆಯಲು ಶುರುಮಾಡಿದ ಇವರು ವಿಷ್ಣವರ್ಧನ್, ಶಿವರಾಜ್​ಕುಮಾರ್, ಪುನೀತ್ ರಾಜ್​​ಕುಮಾರ್, ಸುದೀಪ್, ಯಶ್ ಸೇರಿದಂತೆ ಸ್ಟಾರ್ ನಟರುಗಳ ಸಿನಿಮಾಗೆ ತಮ್ಮ ಹಾಡು ಒದಗಿಸಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ 'ಗೌರಿ' ಸಿನಿಮಾಗೂ ಹಾಡುಗಳನ್ನು ಬರೆದಿದ್ದು, ತಮ್ಮ ವೃತ್ತಿಜೀವನದ ಮೆಲುಕು ಹಾಕಿದ್ದಾರೆ.

ಸಿನಿಮಾ ಸಾಂಗ್ಸ್, ಮ್ಯೂಸಿಕ್​ ಆಲ್ಬಂಗಳು, ಭಕ್ತಿ ಪ್ರಧಾನ ಸೇರಿದಂತೆ 3,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಕೆ.ಕಲ್ಯಾಣ್ ತಮ್ಮ ಹಾಡುಗಳ ಬಗ್ಗೆ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಹಂಸಲೇಖ, ಎ.ಆರ್.ರೆಹಮಾನ್, ವಿಜಯ್ ಭಾಸ್ಕರ್, ರಾಜನ್ ನಾಗೇಂದ್ರ, ಉಪೇಂದ್ರ ಕುಮಾರ್ ಹಾಗೂ ಬಾಲಸುಬ್ರಹ್ಮಣ್ಯಂ ಸೇರಿದಂತೆ ಸಾಕಷ್ಟು ದಿಗ್ಗಜ ಸಂಗೀತ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುವ ಅನುಭವ ಇವರಿಗಿದ್ದು, ಪ್ರೇಮಕವಿ ಎಂದೇ ಜನಪ್ರಿಯರು.

ನಮ್ಮೂರ ಮಂದಾರ ಹೂವೆ ಸಿನಿಮಾದಿಂದ ಬೇಡಿಕೆ ಹೆಚ್ಚಿಸಿಕೊಂಡ ಕೆ.ಕಲ್ಯಾಣ್ ಬರವಣಿಗೆಗೆ ಸ್ಫೂರ್ತಿ ಆ ಸಿನಿಮಾದ ಕಥೆ. ಕಲ್ಯಾಣ್ ಚಿತ್ರದ ಎಲ್ಲಾ ದೃಶ್ಯಗಳನ್ನು ಬಹಳ ಪ್ರೀತಿಯಿಂದ ನೋಡುತ್ತಾರೆ. ನನಗೆ ಕಷ್ಟ ಅಂತಾ ಅನಿಸಿದಾಗ ನನಗೆ ಒಂದೇ ಒಂದು ಪದ ಬರೆಯಲೂ ಸಹ ಆಗಲ್ಲ. ಹಾಡು ಬರೆಯಲು ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಪ್ರೇರೇಪಿಸುತ್ತಾರೆ. ಆಗ ನಾನಗೆ ಬಹಳ ಅದ್ಭುತವಾದ ಹಾಡನ್ನು ಬರೆಯಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಬರೆದಿರುವ ಅಮೃತವರ್ಷಿಣಿ, ಚಂದ್ರಮುಖಿ ಪ್ರಾಣಸಖಿ, ಕೋಟಿಗೊಬ್ಬ, ಅಪ್ಪು, ಮಾಣಿಕ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳ ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಜನರು ಹಿಟ್ ಆದ ಹಾಡುಗಳ ಬಗ್ಗೆ ಮಾತನಾಡುವಾಗ ನಮಗೆ ಖುಷಿ ಯಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗೀತೆರಚನೆಕಾರ ಕೆ.ಕಲ್ಯಾಣ್ ಸಂದರ್ಶನ (ETV Bharat)

ನಾನು ಬರೆದಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿಲ್ಲ. ನಿಮಗೆ ಗೊತ್ತೇ, ನಾನು ಬರೆದಿರೋ ಕೆಲ ಹಾಡುಗಳು ಹಿಟ್ ಆಗಿಲ್ಲ. ಆಗ ನನಗೆ ಏಕೆ ಆ ಹಾಡು ಜನರಿಗೆ ಇಷ್ಟ ಆಗಲಿಲ್ಲ ಅನ್ನೋದು ಕಾಡಲು ಶುರುವಾಗುತ್ತದೆ. ಆ ರೀತಿ ನನಗೆ ಸಾಕಷ್ಟು ಬಾರಿ ಆಗಿದೆ. ಕಲ್ಯಾಣಿ ಚಿತ್ರದಲ್ಲಿ ನಾನು 9 ಹಾಡುಗಳನ್ನು ಬರೆದು, ಸಂಗೀತ ನಿರ್ದೇಶನ ಮಾಡಿದ್ದೆ. ಆ ಸಿನಿಮಾದ ಹಾಡುಗಳು ಚೆನ್ನಾಗಿ ಬರಲೆಂದು ನನಗಿಂತ ಹಿರಿಯ ಸಂಗೀತ ವಿದ್ವಾಂಸರ ಜೊತೆ ಕೆಲಸ ಮಾಡಿದ್ದೆ. ಆ ಸಿನಿಮಾ ಮೇಲೆ ನನಗೆ ವಿಶ್ವಾಸ ಕೂಡಾ ಬಹಳಾನೇ ಇತ್ತು. ಆದ್ರೆ ಆ ಸಿನಿಮಾ ಜನರಿಗೆ ಇಷ್ಟ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಎಂಥಾ ಚೆಂದಾನೆ ಇವಳು': ಮುದ್ದು ಮಗಳ ವಿಡಿಯೋ ಹಂಚಿಕೊಂಡ ಕಾಂತಾರ ಸ್ಟಾರ್​​; ರಿಷಬ್​ ಹೇಳಿದ್ದಿಷ್ಟು - Rishab Shetty Daughter Video

ನಾನು ಒಂದು ಹಾಡು ಬರೆಯಲು ಕುಳಿತಾಗ ಹೊಸ ನಿರ್ದೇಶಕರು, ಹಿರಿಯ ನಿರ್ದೇಶಕರು ಎಂಬುದನ್ನು ನೋಡುವುದಿಲ್ಲ. ಸಿನಿಮಾದ ಕಥೆ ಇಷ್ಟವಾದ್ರೆ ಆ ಸಿನಿಮಾಗೆ ಹಾಡು ಬರೆಯುತ್ತೇನೆ. ಅಲ್ಲಿ ನನ್ನ ಶ್ರಮ ಹಾಕಿರುತ್ತೇನೆ, ಅದು ನನಗೆ ತೃಪ್ತಿ ಕೊಡುತ್ತದೆ. ಹೀಗಾಗಿ ಚಿತ್ರರಂಗದಲ್ಲಿ ಹಾಡುಗಳನ್ನು ಬರೆಯೋದನ್ನು ಮುಂದುವರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ನೂರು ಜನ್ಮಕೂ ನೀವೇ ನನ್ನ ಆಯ್ಕೆ': ಯಶ್​ ರಾಧಿಕಾ ನಿರ್ಶ್ಚಿತಾರ್ಥಕ್ಕೆ 8 ವರ್ಷಗಳ ಸಂಭ್ರಮ - Yash Radhika Pandit

ನಮ್ಮ ತಾಯಿ, ತಂದೆ ಜೊತೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ಅವರಿಗೆ ನಾನು ದಿವಂಗತ ಪದ ಬಳಸುವುದಿಲ್ಲ. ಯಾಕಂದ್ರೆ ಅವರು ಸದಾ ನಮ್ಮ ಜೊತೆ ಇದ್ದಾರೆ ಎಂಬುದು ನನ್ನ ನಂಬಿಕೆ ಎಂದು ತಿಳಿಸಿದರು.

Last Updated : Aug 13, 2024, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.