ETV Bharat / entertainment

ಚಿರಂಜೀವಿ ಭೇಟಿಯಾದ ಸಂದೀಪ್ ರೆಡ್ಡಿ ವಂಗಾ, ಶ್ರೀಕಾಂತ್ ಒಡೆಲಾ

author img

By ETV Bharat Karnataka Team

Published : Jan 28, 2024, 2:15 PM IST

ನಟ ಚಿರಂಜೀವಿ ಅವರನ್ನು ನಿರ್ದೇಶಕರುಗಳಾದ ಸಂದೀಪ್ ರೆಡ್ಡಿ ವಂಗಾ ಮತ್ತು ಶ್ರೀಕಾಂತ್ ಒಡೆಲಾ ಭೇಟಿಯಾಗಿದ್ದಾರೆ.

Sandeep Reddy Vanga Meets Chiranjeev
ಚಿರಂಜೀವಿ ಭೇಟಿಯಾದ ಸಂದೀಪ್ ರೆಡ್ಡಿ ವಂಗಾ, ಶ್ರೀಕಾಂತ್ ಒಡೆಲಾ

'ಪದ್ಮವಿಭೂಷಣ' ಪ್ರಶಸ್ತಿಗೆ ಭಾಜನರಾಗಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರನ್ನು ಬ್ಲಾಕ್​ಬಸ್ಟರ್ ಹಿಟ್​ ಸಿನಿಮಾ 'ಅನಿಮಲ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಸೂಪರ್ ಹಿಟ್ 'ದಸರಾ' ನಿರ್ದೇಶಕ ಶ್ರೀಕಾಂತ್ ಒಡೆಲಾ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಚಿರಂಜೀವಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಸೋಷಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೋ ಒಂದರಲ್ಲಿ ಸಂದೀಪ್ ಮತ್ತು ಶ್ರೀಕಾಂತ್ ಅವರು ಚಿರಂಜೀವಿ ಅವರೊಂದಿಗೆ ಅವರ ನಿವಾಸದಲ್ಲಿ ಸಂಭಾಷಣೆಯಲ್ಲಿ ತೊಡಗಿರೋದನ್ನು ಕಾಣಬಹುದು.

ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಮತ್ತು ಸಮಾಜಮುಖಿ ಕೆಲಸಕ್ಕಾಗಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ನಟ ಸೋಷಿಯಲ್​ ಮೀಡಿಯಾಗಳಲ್ಲಿ ವಿಡಿಯೋ ಸಂದೇಶ ಶೇರ್ ಮಾಡುವ ಮುಖೇನ ಸರ್ವರಿಗೂ ಧನ್ಯವಾದ ಅರ್ಪಿಸಿದ್ದರು.

ಅಚಲ ಪ್ರೀತಿ, ಪ್ರೋತ್ಸಾಹಕ್ಕಾಗಿ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು. ನಾಲ್ಕೂವರೆ ದಶಕಗಳ ಸಿನಿ ಪ್ರಯಾಣದಲ್ಲಿ ತಮ್ಮ ಅವಿಭಾಜ್ಯ ಅಂಗದಂತಿರುವ ಪ್ರೇಕ್ಷಕರು, ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದ ನಿರಂತರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ವೃತ್ತಿಜೀವನದ ಮೂಲಕ ಚಿರಂಜೀವಿ ಅವರು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.

🙏🙏🙏 pic.twitter.com/4PDaCV2kzv

— Chiranjeevi Konidela (@KChiruTweets) January 25, 2024 ">

ಇದನ್ನೂ ಓದಿ: ಫೈಟರ್‌: 3 ದಿನದಲ್ಲಿ ₹100 ಕೋಟಿ ಸನಿಹ ತಲುಪಿದ ಹೃತಿಕ್, ದೀಪಿಕಾ ಸಿನಿಮಾ

2023ರ ಕೊನೆಯಲ್ಲಿ ತೆರೆಕಂಡ ಅನಿಮಲ್​​ ಸಿನಿಮಾ ನಿರೀಕ್ಷೆಗೂ ಮೀರಿ ಯಶ ಕಂಡಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಟ್ಟಿದೆ. ಇದೇ ಮೊದಲ ಬಾರಿಗೆ ರಣ್​ಬೀರ್​ ಕಪೂರ್​​, ರಶ್ಮಿಕಾ ಮಂದಣ್ಣ ಸ್ರ್ಕೀನ್​ ಶೇರ್ ಮಾಡಿರೋ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಿಮಲ್ ಡಿಸೆಂಬರ್ 1 ರಂದು ಬಿಡುಗಡೆಯಾದ ಈ ಸಿನಿಮಾ ಮಿಶ್ರ ವಿಮರ್ಶೆ ಸ್ವೀಕರಿಸಿದ್ದರೂ ಬಾಕ್ಸ್ ಆಫೀಸ್​ ಅಂಕಿಅಂಶ ಅದ್ಭುತವಾಗಿದೆ. ವಿಶ್ವಾದ್ಯಂತ ಸುಮಾರು 900 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶಸ್ಸು ಕಂಡಿದೆ.

ಇದನ್ನೂ ಓದಿ: ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್: 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​ ಡೇಟ್ ಅನೌನ್ಸ್

'ಪದ್ಮವಿಭೂಷಣ' ಪ್ರಶಸ್ತಿಗೆ ಭಾಜನರಾಗಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರನ್ನು ಬ್ಲಾಕ್​ಬಸ್ಟರ್ ಹಿಟ್​ ಸಿನಿಮಾ 'ಅನಿಮಲ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಸೂಪರ್ ಹಿಟ್ 'ದಸರಾ' ನಿರ್ದೇಶಕ ಶ್ರೀಕಾಂತ್ ಒಡೆಲಾ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಚಿರಂಜೀವಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಸೋಷಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೋ ಒಂದರಲ್ಲಿ ಸಂದೀಪ್ ಮತ್ತು ಶ್ರೀಕಾಂತ್ ಅವರು ಚಿರಂಜೀವಿ ಅವರೊಂದಿಗೆ ಅವರ ನಿವಾಸದಲ್ಲಿ ಸಂಭಾಷಣೆಯಲ್ಲಿ ತೊಡಗಿರೋದನ್ನು ಕಾಣಬಹುದು.

ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಿದೆ. ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಮತ್ತು ಸಮಾಜಮುಖಿ ಕೆಲಸಕ್ಕಾಗಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ನಟ ಸೋಷಿಯಲ್​ ಮೀಡಿಯಾಗಳಲ್ಲಿ ವಿಡಿಯೋ ಸಂದೇಶ ಶೇರ್ ಮಾಡುವ ಮುಖೇನ ಸರ್ವರಿಗೂ ಧನ್ಯವಾದ ಅರ್ಪಿಸಿದ್ದರು.

ಅಚಲ ಪ್ರೀತಿ, ಪ್ರೋತ್ಸಾಹಕ್ಕಾಗಿ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು. ನಾಲ್ಕೂವರೆ ದಶಕಗಳ ಸಿನಿ ಪ್ರಯಾಣದಲ್ಲಿ ತಮ್ಮ ಅವಿಭಾಜ್ಯ ಅಂಗದಂತಿರುವ ಪ್ರೇಕ್ಷಕರು, ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದ ನಿರಂತರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ವೃತ್ತಿಜೀವನದ ಮೂಲಕ ಚಿರಂಜೀವಿ ಅವರು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.

ಇದನ್ನೂ ಓದಿ: ಫೈಟರ್‌: 3 ದಿನದಲ್ಲಿ ₹100 ಕೋಟಿ ಸನಿಹ ತಲುಪಿದ ಹೃತಿಕ್, ದೀಪಿಕಾ ಸಿನಿಮಾ

2023ರ ಕೊನೆಯಲ್ಲಿ ತೆರೆಕಂಡ ಅನಿಮಲ್​​ ಸಿನಿಮಾ ನಿರೀಕ್ಷೆಗೂ ಮೀರಿ ಯಶ ಕಂಡಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಟ್ಟಿದೆ. ಇದೇ ಮೊದಲ ಬಾರಿಗೆ ರಣ್​ಬೀರ್​ ಕಪೂರ್​​, ರಶ್ಮಿಕಾ ಮಂದಣ್ಣ ಸ್ರ್ಕೀನ್​ ಶೇರ್ ಮಾಡಿರೋ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಿಮಲ್ ಡಿಸೆಂಬರ್ 1 ರಂದು ಬಿಡುಗಡೆಯಾದ ಈ ಸಿನಿಮಾ ಮಿಶ್ರ ವಿಮರ್ಶೆ ಸ್ವೀಕರಿಸಿದ್ದರೂ ಬಾಕ್ಸ್ ಆಫೀಸ್​ ಅಂಕಿಅಂಶ ಅದ್ಭುತವಾಗಿದೆ. ವಿಶ್ವಾದ್ಯಂತ ಸುಮಾರು 900 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶಸ್ಸು ಕಂಡಿದೆ.

ಇದನ್ನೂ ಓದಿ: ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್: 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​ ಡೇಟ್ ಅನೌನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.