ETV Bharat / entertainment

ಘೋಷಿಸಿ ವರ್ಷಗಳುರುಳಿದರೂ ಶುರುವಾಗದ 'ಕಾಲಿಯಾನ್': ಪೃಥ್ವಿರಾಜ್ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಅನಿಲ್​​​ ಕುಮಾರ್ - Prithviraj Sukumaran

author img

By ETV Bharat Karnataka Team

Published : Aug 10, 2024, 5:10 PM IST

2017ರಲ್ಲೇ ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ "ಕಾಲಿಯಾನ್" ಘೋಷಣೆಯಾಗಿದ್ದರೂ ಕೂಡಾ ಸಿನಿಮಾ ಸೆಟ್ಟೇರಿಲ್ಲ. ನಾನಾ ಕಾರಣಗಳಿಂದ ಸಿನಿಮಾ ಸಾಕಷ್ಟು ವಿಳಂಬಗಳನ್ನು ಎದುರಿಸಿದೆ. ಡಾ.ಎಸ್. ಮಹೇಶ್ ನಿರ್ದೇಶಿಸಲಿರುವ ಈ ಪ್ರೊಜೆಕ್ಟ್​ ಬಗ್ಗೆ ಇದೀಗ ಬಿ.ಟಿ ಅನಿಲ್​ ಕುಮಾರ್ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

Prithviraj Sukumaran
ಪೃಥ್ವಿರಾಜ್ ಸುಕುಮಾರನ್ (ANI)

ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ 'ಗೋಟ್​​ ಲೈಫ್'​​ ಎಂದು ಕರೆಯಲ್ಪಡುವ ಮಲಯಾಳಂ ಸಿನಿಮಾ 'ಆಡುಜೀವಿತಂ' ವಿಮರ್ಶೆ ಮತ್ತು ಬಾಕ್ಸ್ ಆಫೀಸ್ ವಿಚಾರದಲ್ಲಿ ಯಶಸ್ಸು ಕಂಡಿದೆ.​ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದಾಗ್ಯೂ, ಬಹುನಿರೀಕ್ಷಿತ ಸಿನಿಮಾವೊಂದರ ಕೆಲಸ ಆರಂಭವಾಗದೇ, ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಪೃಥ್ವಿರಾಜ್ ಅಭಿನಯದ ಬಿಗ್ ಬಜೆಟ್ ಚಿತ್ರ "ಕಾಲಿಯಾನ್". ಇದರ ಸ್ಕ್ರೀನ್​​ಪ್ಲೇಯನ್ನು ಬಿ.ಟಿ ಅನಿಲ್​​​ ಕುಮಾರ್ ಬರೆದಿದ್ದಾರೆ. ಅಲ್ಲದೇ ಲೆಜೆಂಡರಿ ಸ್ಟಾರ್ ಸತ್ಯನ್ ಅವರ ಬಯೋಪಿಕ್​​​​ಗಾಗಿಯೂ ಸ್ಕ್ರೀನ್​​​ಪ್ಲೇ ಬರೆದಿದ್ದು, ಇದರಲ್ಲಿ ಜಯಸೂರ್ಯ ನಟಿಸಲಿದ್ದಾರೆ. ಈ ಎರಡೂ ಚಿತ್ರಗಳು ಘೋಷಣೆಯಾದ ಸಂದರ್ಭ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದ್ರೆ ಸಿನಿಮಾಗಳು ಮಾತ್ರ ಸೆಟ್ಟೇರಿಲ್ಲ.

"ಕಾಲಿಯಾನ್" ಚಿತ್ರವನ್ನು ಭಾರತೀಯ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಹುಶಃ ಮಲಯಾಳಂನಲ್ಲಿ ಇದು ಮೊದಲ ಪ್ಯಾನ್-ಇಂಡಿಯನ್ ಸಿನಿಮಾ. ಆದ್ರೆ, ಚಿತ್ರದ ಚಿತ್ರೀಕರಣವಿನ್ನೂ ಆರಂಭವಾಗಿಲ್ಲ. ಪೃಥ್ವಿರಾಜ್ ಅವರ ಅನೇಕ ಸಂದರ್ಶನಗಳಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಸಿನಿಮಾ ಬರಲಿದೆ ಎಂದು ಕೂಡಾ ಆಗಾಗ್ಗೆ ಹೇಳಿದ್ದರು.

ಕಳೆದ ವರ್ಷ ತಂಡದಿಂದ ಬಂದ ಅಪ್ಡೇಟ್​​​​ಗಳು ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ ಎಂಬುದಾಗಿ ಸೂಚಿಸಿತ್ತು. ಆದ್ರೆ ವರ್ಷ ಕಳೆದರೂ ಪ್ರೀ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಿಲ್ಲ. ಡಾ.ಎಸ್.ಮಹೇಶ್ ನಿರ್ದೇಶನದ ಈ ಚಿತ್ರದ ಕುರಿತು ಬಿ.ಟಿ ಅನಿಲ್​ ಕುಮಾರ್ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಿ.ಟಿ ಅನಿಲ್‌ ಕುಮಾರ್ ಪ್ರಕಾರ, 2017ರಲ್ಲಿ ಈ ಚಿತ್ರವನ್ನು ಘೋಷಿಸಲಾಯಿತು. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದ್ರೆ ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ. ಕೋವಿಡ್​ ಈ ವಿಳಂಬಕ್ಕೆ ಪ್ರಮುಖ ಕಾರಣ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಗತ್ಯವಿರುವ ನಟರನ್ನು ಆಯ್ಕೆ ಮಾಡಲು ಕೇರಳ ಸೇರಿದಂತೆ ಪ್ರಮುಖ ನಗರಗಳಲ್ಲಿ ಆಡಿಷನ್‌ಗಳನ್ನು ಕೂಡ ನಡೆಸಲಾಗಿದೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಹೊಸ ಗೀತೆ ಅನಾವರಣ: ನೋಡಿ ರಾಧೆ ಸಾಂಗ್ - Radhe Song

ಇನ್ನೂ, ಪೃಥ್ವಿರಾಜ್ ಅವರ ಕಾಲಿನ ಗಾಯವೂ ಕೂಡ ಈ ವಿಳಂಬಕ್ಕೆ ಕಾರಣ. ತಮ್ಮ ಪಾತ್ರಕ್ಕೆ ಗಮನಾರ್ಹ ಬಾಡಿ ಟ್ರಾನ್ಸ್​​ಫರ್ಮೇಶನ್​ ಮಾಡಿಕೊಳ್ಳಬೇಕಿದೆ. ತಯಾರಿಗಳು ನಡೆಯುತ್ತಿವೆ. ಆರು ತಿಂಗಳೊಳಗೆ ಚಿತ್ರೀಕರಣ ಆರಂಭವಾಗುವ ಭರವಸೆ ಇದೆ. ದಕ್ಷಿಣ ಕೇರಳದ ವಿಲ್ಲು ಪಟ್ಟು ಆಧಾರಿತ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ತರುಣ್​​ ಸುಧೀರ್​ ​- ಸೋನಾಲ್​​: ಫೋಟೋಗಳನ್ನು ನೋಡಿ - Tharun Sonal Haldi Ceremony

ಅದೇ ರೀತಿ, ಜಯಸೂರ್ಯ ಅವರ ಸಿನಿಮಾ (ನಟ ಸತ್ಯನ್ ಅವರ ಜೀವನಾಧಾರಿತ ಕಥೆ) ಸಿನಿಮಾ ಕೂಡ ತಯಾರಾಗುತ್ತಿದೆ. ನಿರ್ಮಾಪಕರಾದ ವಿಜಯ್ ಬಾಬು ಮತ್ತು ಜಯಸೂರ್ಯ ಈ ಸಿನಿಮಾ ಘೋಷಿಸಿ ಹಲವು ವರ್ಷಗಳಾಗಿದ್ದರು, ಯೋಜನೆಯನ್ನು ಕೈಬಿಟ್ಟಿಲ್ಲ. ಅವರು ಬ್ಯುಸಿ ಶೆಡ್ಯೂಲ್​ಗಳನ್ನು ಹೊಂದಿರುವ ಪರಿಣಾಮ ವಿಳಂಬವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾದ ಬೆಳವಣಿಗೆಗಳಾಗಲಿದೆ ಎಂದು ತಿಳಿಸಿದರು.

ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ 'ಗೋಟ್​​ ಲೈಫ್'​​ ಎಂದು ಕರೆಯಲ್ಪಡುವ ಮಲಯಾಳಂ ಸಿನಿಮಾ 'ಆಡುಜೀವಿತಂ' ವಿಮರ್ಶೆ ಮತ್ತು ಬಾಕ್ಸ್ ಆಫೀಸ್ ವಿಚಾರದಲ್ಲಿ ಯಶಸ್ಸು ಕಂಡಿದೆ.​ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದಾಗ್ಯೂ, ಬಹುನಿರೀಕ್ಷಿತ ಸಿನಿಮಾವೊಂದರ ಕೆಲಸ ಆರಂಭವಾಗದೇ, ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಪೃಥ್ವಿರಾಜ್ ಅಭಿನಯದ ಬಿಗ್ ಬಜೆಟ್ ಚಿತ್ರ "ಕಾಲಿಯಾನ್". ಇದರ ಸ್ಕ್ರೀನ್​​ಪ್ಲೇಯನ್ನು ಬಿ.ಟಿ ಅನಿಲ್​​​ ಕುಮಾರ್ ಬರೆದಿದ್ದಾರೆ. ಅಲ್ಲದೇ ಲೆಜೆಂಡರಿ ಸ್ಟಾರ್ ಸತ್ಯನ್ ಅವರ ಬಯೋಪಿಕ್​​​​ಗಾಗಿಯೂ ಸ್ಕ್ರೀನ್​​​ಪ್ಲೇ ಬರೆದಿದ್ದು, ಇದರಲ್ಲಿ ಜಯಸೂರ್ಯ ನಟಿಸಲಿದ್ದಾರೆ. ಈ ಎರಡೂ ಚಿತ್ರಗಳು ಘೋಷಣೆಯಾದ ಸಂದರ್ಭ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದ್ರೆ ಸಿನಿಮಾಗಳು ಮಾತ್ರ ಸೆಟ್ಟೇರಿಲ್ಲ.

"ಕಾಲಿಯಾನ್" ಚಿತ್ರವನ್ನು ಭಾರತೀಯ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಹುಶಃ ಮಲಯಾಳಂನಲ್ಲಿ ಇದು ಮೊದಲ ಪ್ಯಾನ್-ಇಂಡಿಯನ್ ಸಿನಿಮಾ. ಆದ್ರೆ, ಚಿತ್ರದ ಚಿತ್ರೀಕರಣವಿನ್ನೂ ಆರಂಭವಾಗಿಲ್ಲ. ಪೃಥ್ವಿರಾಜ್ ಅವರ ಅನೇಕ ಸಂದರ್ಶನಗಳಲ್ಲಿ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಸಿನಿಮಾ ಬರಲಿದೆ ಎಂದು ಕೂಡಾ ಆಗಾಗ್ಗೆ ಹೇಳಿದ್ದರು.

ಕಳೆದ ವರ್ಷ ತಂಡದಿಂದ ಬಂದ ಅಪ್ಡೇಟ್​​​​ಗಳು ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ ಎಂಬುದಾಗಿ ಸೂಚಿಸಿತ್ತು. ಆದ್ರೆ ವರ್ಷ ಕಳೆದರೂ ಪ್ರೀ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಿಲ್ಲ. ಡಾ.ಎಸ್.ಮಹೇಶ್ ನಿರ್ದೇಶನದ ಈ ಚಿತ್ರದ ಕುರಿತು ಬಿ.ಟಿ ಅನಿಲ್​ ಕುಮಾರ್ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಿ.ಟಿ ಅನಿಲ್‌ ಕುಮಾರ್ ಪ್ರಕಾರ, 2017ರಲ್ಲಿ ಈ ಚಿತ್ರವನ್ನು ಘೋಷಿಸಲಾಯಿತು. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದ್ರೆ ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ. ಕೋವಿಡ್​ ಈ ವಿಳಂಬಕ್ಕೆ ಪ್ರಮುಖ ಕಾರಣ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಗತ್ಯವಿರುವ ನಟರನ್ನು ಆಯ್ಕೆ ಮಾಡಲು ಕೇರಳ ಸೇರಿದಂತೆ ಪ್ರಮುಖ ನಗರಗಳಲ್ಲಿ ಆಡಿಷನ್‌ಗಳನ್ನು ಕೂಡ ನಡೆಸಲಾಗಿದೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಹೊಸ ಗೀತೆ ಅನಾವರಣ: ನೋಡಿ ರಾಧೆ ಸಾಂಗ್ - Radhe Song

ಇನ್ನೂ, ಪೃಥ್ವಿರಾಜ್ ಅವರ ಕಾಲಿನ ಗಾಯವೂ ಕೂಡ ಈ ವಿಳಂಬಕ್ಕೆ ಕಾರಣ. ತಮ್ಮ ಪಾತ್ರಕ್ಕೆ ಗಮನಾರ್ಹ ಬಾಡಿ ಟ್ರಾನ್ಸ್​​ಫರ್ಮೇಶನ್​ ಮಾಡಿಕೊಳ್ಳಬೇಕಿದೆ. ತಯಾರಿಗಳು ನಡೆಯುತ್ತಿವೆ. ಆರು ತಿಂಗಳೊಳಗೆ ಚಿತ್ರೀಕರಣ ಆರಂಭವಾಗುವ ಭರವಸೆ ಇದೆ. ದಕ್ಷಿಣ ಕೇರಳದ ವಿಲ್ಲು ಪಟ್ಟು ಆಧಾರಿತ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ತರುಣ್​​ ಸುಧೀರ್​ ​- ಸೋನಾಲ್​​: ಫೋಟೋಗಳನ್ನು ನೋಡಿ - Tharun Sonal Haldi Ceremony

ಅದೇ ರೀತಿ, ಜಯಸೂರ್ಯ ಅವರ ಸಿನಿಮಾ (ನಟ ಸತ್ಯನ್ ಅವರ ಜೀವನಾಧಾರಿತ ಕಥೆ) ಸಿನಿಮಾ ಕೂಡ ತಯಾರಾಗುತ್ತಿದೆ. ನಿರ್ಮಾಪಕರಾದ ವಿಜಯ್ ಬಾಬು ಮತ್ತು ಜಯಸೂರ್ಯ ಈ ಸಿನಿಮಾ ಘೋಷಿಸಿ ಹಲವು ವರ್ಷಗಳಾಗಿದ್ದರು, ಯೋಜನೆಯನ್ನು ಕೈಬಿಟ್ಟಿಲ್ಲ. ಅವರು ಬ್ಯುಸಿ ಶೆಡ್ಯೂಲ್​ಗಳನ್ನು ಹೊಂದಿರುವ ಪರಿಣಾಮ ವಿಳಂಬವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾದ ಬೆಳವಣಿಗೆಗಳಾಗಲಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.