ETV Bharat / entertainment

ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಕೊಂಡಾ ಸುರೇಖಾ ಹೇಳಿಕೆಗೆ ಸಮಂತಾ ಪ್ರತಿಕ್ರಿಯೆ - Samantha Reacts To Konda Comments

author img

By ETV Bharat Karnataka Team

Published : 3 hours ago

ನಾಗ ಚೈತನ್ಯ ವಿಚ್ಛೇದನಕ್ಕೂ ಕೆಟಿಆರ್‌ಗೂ ಸಂಬಂಧ ಕಲ್ಪಿಸಿರುವ ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಯನ್ನು ಸಮಂತಾ ಖಂಡಿಸಿದ್ದಾರೆ. ನಾಗಾರ್ಜುನ ಕೂಡ ಸುರೇಖಾ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

keep-my-name-out-of-political-battles-samantha-reacts-to-konda-surekhas-comments-linking-ktr-to-her-divorce-nagarjuna-too-reacts
ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಕೊಂಡಾ ಸುರೇಖಾ ಹೇಳಿಕೆಗೆ ಸಮಂತಾ ಪ್ರತಿಕ್ರಿಯೆ (IANS)

ಹೈದರಾಬಾದ್: ನಾಗ ಚೈತನ್ಯ ವಿಚ್ಛೇದನದ ಕುರಿತು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನೀಡಿದ ಹೇಳಿಕೆಗೆ ನಟಿ ಸಮಂತಾ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರ ಇಂತಹ ಹೇಳಿಕೆ ಬಗ್ಗೆ ಸಮಂತಾ ಮಾತ್ರವಲ್ಲ, ನಟ ನಾಗಾರ್ಜುನ ಸಹ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ ಮದುವೆ ಮುರಿದು ಬೀಳುವಲ್ಲಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ಪಾತ್ರವಿದೆ ಎಂದು ಕೊಂಡ ಸುರೇಖಾ ಅವರು ಆಡಿತ ಮಾತು ತೆಲಂಗಾಣ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ, ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು ಎಂದು ತಳ್ಳಿ ಹಾಕಿದ್ದಾರೆ. ಜನರ ಖಾಸಗಿತನದ ವಿಚಾರವನ್ನು ಗೌರವಿಸಿ ಎಂದು ತೆಲುಗಿನಲ್ಲಿ ಟ್ವೀಟ್ ಮಾಡಿರುವ ಅವರು, ಸಚಿವರಾದ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರವಿರುವ ಚಲನಚಿತ್ರ ತಾರೆಯರ ಬದುಕನ್ನು ದಾಳವಾಗಿ ಬಳಕೆ ಮಾಡಿಕೊಂಡು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಬೇಡಿ. ದಯವಿಟ್ಟು ಇತರರನ್ನು ಗೌರವಿಸಿ ಎಂದು ಮನವಿ ಕೂಡಾ ಮಾಡಿದ್ದಾರೆ.

keep-my-name-out-of-political-battles-samantha
ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಕೊಂಡಾ ಸುರೇಖಾ ಹೇಳಿಕೆಗೆ ಸಮಂತಾ ಪ್ರತಿಕ್ರಿಯೆ (Samantha Ruth Prabhu post on social media (ETV Bharat))

ನಟಿ ಸಮಂತಾ ಬೇಸರ: ನಾಗ ಚೈತನ್ಯ ಅವರಿಂದ ಡಿವೋರ್ಸ್​​ ಪಡೆದುಕೊಳ್ಳಲು ಕೆಟಿಆರ್​​ ಕಾರಣ ಎಂಬ ಹೇಳಿಕೆ ಬಗ್ಗೆ ನಟಿ ಸಮಂತಾ ತೀವ್ರ ಬೇಸರ ಹೊರ ಹಾಕಿದ್ದಾರೆ. ಬೇರ್ಪಡುವಲ್ಲಿ ಕೆಟಿಆರ್ ಅವರ ಪ್ರಭಾವದ ಬಗ್ಗೆ ಸುರೇಖಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿರುವ ಅವರು, ಮಹಿಳೆ ಹೊರಗೆ ಬಂದು ಕೆಲಸ ಮಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ ಎಂದಿದ್ದಾರೆ

ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ತನ್ನ ಹೆಸರನ್ನು ರಾಜಕೀಯ ಚರ್ಚೆಗಳಿಂದ ಹೊರಗಿಡಬೇಕೆಂದು ಇದೇ ವೇಳೆ ವಿನಂತಿ ಕೂಡಾ ಮಾಡಿಕೊಂಡಿದ್ದಾರೆ. ವ್ಯಕ್ತಿಗಳ ಗೌಪ್ಯತೆ ಕಾಪಾಡಿ ಮತ್ತು ಗೌರವಾನ್ವಿತವಾಗಿರಲು ಬಿಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನನ್ನ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ ಆ ಬಗ್ಗೆ ಊಹಾಪೋಹ ಹರಡಿಸುವುದನ್ನು ನಿಲ್ಲಿಸಿ, ಹಾಗೂ ಈ ವಿಷಯದಿಂದ ದೂರವಿರಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಮಂತ ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲಿ ಕೆಟಿಆರ್ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಕೊಂಡ ಸುರೇಖಾ ಆರೋಪ ಮಾಡಿದ ತಕ್ಷಣ, ಈ ವಿಚಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತು. ನಾಗಾರ್ಜುನ ಅವರು ಸಚಿವರ ಹೇಳಿಕೆಗಳನ್ನು ಖಂಡಿಸಿದರು, ಅವರ ಈ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದರು.

ಇದನ್ನು ಓದಿ: ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮಾಜಿ ಸಿಎಂ ಪುತ್ರ ಕೆಟಿಆರ್​​ ಕಾರಣ: ತೆಲಂಗಾಣ ಸಚಿವೆ ವಿವಾದಿತ ಹೇಳಿಕೆ - surekha controversial statement

ಹೈದರಾಬಾದ್: ನಾಗ ಚೈತನ್ಯ ವಿಚ್ಛೇದನದ ಕುರಿತು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನೀಡಿದ ಹೇಳಿಕೆಗೆ ನಟಿ ಸಮಂತಾ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರ ಇಂತಹ ಹೇಳಿಕೆ ಬಗ್ಗೆ ಸಮಂತಾ ಮಾತ್ರವಲ್ಲ, ನಟ ನಾಗಾರ್ಜುನ ಸಹ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ ಮದುವೆ ಮುರಿದು ಬೀಳುವಲ್ಲಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ಪಾತ್ರವಿದೆ ಎಂದು ಕೊಂಡ ಸುರೇಖಾ ಅವರು ಆಡಿತ ಮಾತು ತೆಲಂಗಾಣ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ, ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು ಎಂದು ತಳ್ಳಿ ಹಾಕಿದ್ದಾರೆ. ಜನರ ಖಾಸಗಿತನದ ವಿಚಾರವನ್ನು ಗೌರವಿಸಿ ಎಂದು ತೆಲುಗಿನಲ್ಲಿ ಟ್ವೀಟ್ ಮಾಡಿರುವ ಅವರು, ಸಚಿವರಾದ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರವಿರುವ ಚಲನಚಿತ್ರ ತಾರೆಯರ ಬದುಕನ್ನು ದಾಳವಾಗಿ ಬಳಕೆ ಮಾಡಿಕೊಂಡು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಬೇಡಿ. ದಯವಿಟ್ಟು ಇತರರನ್ನು ಗೌರವಿಸಿ ಎಂದು ಮನವಿ ಕೂಡಾ ಮಾಡಿದ್ದಾರೆ.

keep-my-name-out-of-political-battles-samantha
ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಕೊಂಡಾ ಸುರೇಖಾ ಹೇಳಿಕೆಗೆ ಸಮಂತಾ ಪ್ರತಿಕ್ರಿಯೆ (Samantha Ruth Prabhu post on social media (ETV Bharat))

ನಟಿ ಸಮಂತಾ ಬೇಸರ: ನಾಗ ಚೈತನ್ಯ ಅವರಿಂದ ಡಿವೋರ್ಸ್​​ ಪಡೆದುಕೊಳ್ಳಲು ಕೆಟಿಆರ್​​ ಕಾರಣ ಎಂಬ ಹೇಳಿಕೆ ಬಗ್ಗೆ ನಟಿ ಸಮಂತಾ ತೀವ್ರ ಬೇಸರ ಹೊರ ಹಾಕಿದ್ದಾರೆ. ಬೇರ್ಪಡುವಲ್ಲಿ ಕೆಟಿಆರ್ ಅವರ ಪ್ರಭಾವದ ಬಗ್ಗೆ ಸುರೇಖಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿರುವ ಅವರು, ಮಹಿಳೆ ಹೊರಗೆ ಬಂದು ಕೆಲಸ ಮಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ ಎಂದಿದ್ದಾರೆ

ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ತನ್ನ ಹೆಸರನ್ನು ರಾಜಕೀಯ ಚರ್ಚೆಗಳಿಂದ ಹೊರಗಿಡಬೇಕೆಂದು ಇದೇ ವೇಳೆ ವಿನಂತಿ ಕೂಡಾ ಮಾಡಿಕೊಂಡಿದ್ದಾರೆ. ವ್ಯಕ್ತಿಗಳ ಗೌಪ್ಯತೆ ಕಾಪಾಡಿ ಮತ್ತು ಗೌರವಾನ್ವಿತವಾಗಿರಲು ಬಿಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನನ್ನ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ ಆ ಬಗ್ಗೆ ಊಹಾಪೋಹ ಹರಡಿಸುವುದನ್ನು ನಿಲ್ಲಿಸಿ, ಹಾಗೂ ಈ ವಿಷಯದಿಂದ ದೂರವಿರಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಮಂತ ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲಿ ಕೆಟಿಆರ್ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಕೊಂಡ ಸುರೇಖಾ ಆರೋಪ ಮಾಡಿದ ತಕ್ಷಣ, ಈ ವಿಚಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತು. ನಾಗಾರ್ಜುನ ಅವರು ಸಚಿವರ ಹೇಳಿಕೆಗಳನ್ನು ಖಂಡಿಸಿದರು, ಅವರ ಈ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದರು.

ಇದನ್ನು ಓದಿ: ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮಾಜಿ ಸಿಎಂ ಪುತ್ರ ಕೆಟಿಆರ್​​ ಕಾರಣ: ತೆಲಂಗಾಣ ಸಚಿವೆ ವಿವಾದಿತ ಹೇಳಿಕೆ - surekha controversial statement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.