ETV Bharat / entertainment

ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media

author img

By ETV Bharat Entertainment Team

Published : Aug 30, 2024, 2:10 PM IST

ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಂದು ನಟ ದರ್ಶನ್ ಮುಖ್ಯಭೂಮಿಕೆಯ 2003ರ ಸೂಪರ್ ಹಿಟ್​ 'ಕರಿಯ' ಸಿನಿಮಾ ರೀ ರಿಲೀಸ್ ಆಗಿದೆ. ಚಿತ್ರ ವೀಕ್ಷಣೆಗೆ ಬಂದ ಕೆಲವರು ಮಾಧ್ಯಮದವರ ವಿರುದ್ಧ ಘೊಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದಾರೆ.​ ಮದ್ಯ ಸೇವಿಸಿ ಥಿಯೇಟರ್ ಎದುರು ದಾಂಧಲೆಗೆ ಮುಂದಾಗಿದ್ದ ಅಭಿಮಾನಿಯೋರ್ವರು ಕ್ಷಮೆಯಾಚಿಸಿದ್ದಾರೆ.

Darshan fans objectionable statement about media
ಪ್ರಸನ್ನ ಚಿತ್ರಮಂದಿರದ ಬಳಿ ಲಾಠಿ ಏಟು ತಿಂದ ಅಭಿಮಾನಿಗಳು (ETV Bharat)
ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್​ ಅಭಿಮಾನಿಗಳು (ETV Bharat)

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನಲಾದ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಶರವೇಗದಲ್ಲಿ ವೈರಲ್​ ಆದ ಬೆನ್ನಲ್ಲೇ ದರ್ಶನ್​​​ ಅವರನ್ನು ಬಳ್ಳಾರಿ​ ಜೈಲಿಗೆ ಸ್ಥಳಾಂತರಗೊಳಿಸಲಾಗಿದೆ. ಇಂದು ನಟನ 2003ರ ಸಿನಿಮಾ 'ಕರಿಯ' ಮರು ಬಿಡುಗಡೆ ಆಗಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಜೊತೆಗೆ ಕೆಲವರು ಒಂದಿಷ್ಟು ಅವಾಂತರವನ್ನೂ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಂದು ನಟ ದರ್ಶನ್ ಮುಖ್ಯಭೂಮಿಕೆಯ ಸೂಪರ್ ಹಿಟ್​ 'ಕರಿಯ' ಸಿನಿಮಾ ರೀ ರಿಲೀಸ್ ಆಗಿದೆ. ಮರು ಬಿಡುಗಡೆಯಾಗಿರುವ 'ಕರಿಯ' ಸಿನಿಮಾ ವೀಕ್ಷಣೆಗೆ ಬಂದ ಕೆಲ ಅಭಿಮಾನಿಗಳು ಮಾಧ್ಯಮದವರ ವಿರುದ್ಧ ಘೊಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸ್​ ಅಧಿಕಾರಿ ಫ್ಯಾನ್ಸ್​​​ಗೆ ಕಿವಿಮಾತು ಹೇಳಿದ್ದಾರೆ.

ಮೊದಲು ಮಾಗಡಿ ಪೊಲೀಸರು ಚಿತ್ರಮಂದಿರದ ಬಳಿ ಬೀಡು ಬಿಟ್ಟಿದ್ದರು. ಮಾಧ್ಯಮದವರ ವಿರುದ್ಧ ಘೋಷಣೆ ಕೂಗಿದ ಕೆಲವರನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್​​ ಅಧಿಕಾರಿ, ''ನಿಮ್ಮಂಥ ಕೆಲ ಕೆಟ್ಟ ಅಭಿಮಾನಿಗಳಿಂದಲೇ ದರ್ಶನ್​ ಅವರಿಗೆ ಕೆಟ್ಟ ಹೆಸರು. ಸಿನಿಮಾ ವೀಕ್ಷಿಸಿ ಎಂಜಾಯ್​​ ಮಾಡಿ. ಅದನ್ನು ಬಿಟ್ಟು ಯಾರ್ಯಾರಿಗೋ ಬೈಯುವ ಕೆಲಸ ಮಾಡಬೇಡಿ. ಇಂಥ ಕೆಲವರಿಂದಲೇ ನಟನ ಹೆಸರು ಹಾಳಾಗುತ್ತಿರೋದು'' ಎಂದು ತಿಳಿಸಿದ್ದಾರೆ. ಮೀಡಿಯಾ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಧಿಕ್ಕಾರ ಕೂಗುವುದನ್ನು ನಿಲ್ಲಿಸಿ ಎಂದು ಗದರಿದ ಪೊಲೀಸ್, ಹೀಗೆ ಮಾಡದಂತೆ ಕಿವಿಮಾತು ಹೇಳಿದ್ದಾರೆ.

ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್​ ಅಭಿಮಾನಿಗಳು (ETV Bharat)

ಪ್ರಸನ್ನ ಥಿಯೇಟರ್ ಬಳಿ ಸುಮಾರು ಹತ್ತು ಪೊಲೀಸರು ನಿಯೋಜನೆಗೊಂಡಿದ್ದಾರೆ. ಬಾಡಿ ವೋರ್ನ್​​ ಕ್ಯಾಮರಾ ಹಾಕಿಕೊಂಡು ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದ ಬಳಿ ಇರುವ ಅಭಿಮಾನಿಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ.

ದರ್ಶನ್ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸಿಗರೇಟ್ ಹಾಗೂ ಕಾಫಿ ಮಗ್ ಹಿಡಿದು ಕುಳಿತಿರುವ ಫೋಟೋ ಬಳಸಿ ಮಾಡಿದ್ದ ಪೋಸ್ಟರ್ ಅನ್ನು ಚಿತ್ರಮಂದಿರದ ಬಳಿ ಹಾಕಲಾಗಿತ್ತು. ''ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511, ಖೈದಿ ನಂಬರ್ 6016'' ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರಸನ್ನ ಥಿಯೇಟರ್ ಮೇಲೆ ಹಾಕಲಾಗಿತ್ತು.

''ಏನ್ರಿ ಮೀಡಿಯಾ'' ಎಂದು ದರ್ಶನ್ ಫ್ಯಾನ್ಸ್ ಹಾಕಿದ್ದ ಬ್ಯಾನರ್ ಅನ್ನು ಪೊಲೀಸರು ತೆಗೆಸಿದ್ದಾರೆ. ಅಭಿಮಾನಿಗಳು ಒಳಗಡೆ ಹೋಗುತ್ತಿದ್ದಂತೆ ಖೈದಿ ನಂಬರ್​ ಒಳಗೊಂಡ ಬ್ಯಾನರ್ ಅನ್ನು ಮಾಗಡಿ ರಸ್ತೆ ಪೊಲೀಸರು ತೆಗೆಸಿದ್ದಾರೆ.

Darshan poster by fans
ಅಭಿಮಾನಿಗಳ ದರ್ಶನ್​ ಪೋಸ್ಟರ್ (ETV Bharat)

ಇದನ್ನೂ ಓದಿ: ವಿದೇಶದಲ್ಲಿ ಉಪೇಂದ್ರ ಸಾರಥ್ಯದ 'ಯುಐ' ಚಿತ್ರತಂಡ: ಸ್ಪೆಷಲ್​​ ವಿಡಿಯೋ ಹಂಚಿಕೊಂಡ ಅಜನೀಶ್​​ ಲೋಕನಾಥ್ - Upendra UI Film Team

ಪರಿಸ್ಥಿತಿ ಅತಿರೇಖಕ್ಕೆ ಹೋದ ಬಳಿಕ ಕೆ.ಪಿ.ಅಗ್ರಹಾರ ಪೊಲೀಸರು ಆಗಮಿಸಿ ಲಾಠಿ ರುಚಿ ತೋರಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಲಾಯಿತು. ಪೊಲೀಸರ ಮನವಿಗೂ ಸ್ಪಂದಿಸದೇ ಕೆಲವರು ಹುಚ್ಚಾಟ ನಡೆಸಿದ ಹಿನ್ನೆಲೆ, ಕೆಲವರಿಗೆ ಲಾಠಿ ಏಟು ಕೂಡಾ ಸಿಕ್ಕಿದೆ. ಲಾಠಿ ಹಿಡಿದು ಅಭಿಮಾನಿಗಳನ್ನು ಚದುರಿಸಿದರು.

ಇದನ್ನೂ ಓದಿ: ನಟ ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ - Darshan in Ballari Jail

ಮದ್ಯ ಸೇವಿಸಿ ಥಿಯೇಟರ್ ಎದುರು ದಾಂಧಲೆಗೆ ಮುಂದಾಗಿದ್ದ ದರ್ಶನ್ ಅಭಿಮಾನಿಯೋರ್ವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಾರ್ನಿಂಗ್ ಕೊಡಲಾಯಿತು. ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅಭಿಮಾನಿ ಕ್ಷಮೆಯಾಚಿಸಿದ್ದು, ಪೊಲೀಸರು ಆತನನ್ನು ಬಿಟ್ಟಿದ್ದಾರೆ.

ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್​ ಅಭಿಮಾನಿಗಳು (ETV Bharat)

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನಲಾದ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಶರವೇಗದಲ್ಲಿ ವೈರಲ್​ ಆದ ಬೆನ್ನಲ್ಲೇ ದರ್ಶನ್​​​ ಅವರನ್ನು ಬಳ್ಳಾರಿ​ ಜೈಲಿಗೆ ಸ್ಥಳಾಂತರಗೊಳಿಸಲಾಗಿದೆ. ಇಂದು ನಟನ 2003ರ ಸಿನಿಮಾ 'ಕರಿಯ' ಮರು ಬಿಡುಗಡೆ ಆಗಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಜೊತೆಗೆ ಕೆಲವರು ಒಂದಿಷ್ಟು ಅವಾಂತರವನ್ನೂ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಂದು ನಟ ದರ್ಶನ್ ಮುಖ್ಯಭೂಮಿಕೆಯ ಸೂಪರ್ ಹಿಟ್​ 'ಕರಿಯ' ಸಿನಿಮಾ ರೀ ರಿಲೀಸ್ ಆಗಿದೆ. ಮರು ಬಿಡುಗಡೆಯಾಗಿರುವ 'ಕರಿಯ' ಸಿನಿಮಾ ವೀಕ್ಷಣೆಗೆ ಬಂದ ಕೆಲ ಅಭಿಮಾನಿಗಳು ಮಾಧ್ಯಮದವರ ವಿರುದ್ಧ ಘೊಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸ್​ ಅಧಿಕಾರಿ ಫ್ಯಾನ್ಸ್​​​ಗೆ ಕಿವಿಮಾತು ಹೇಳಿದ್ದಾರೆ.

ಮೊದಲು ಮಾಗಡಿ ಪೊಲೀಸರು ಚಿತ್ರಮಂದಿರದ ಬಳಿ ಬೀಡು ಬಿಟ್ಟಿದ್ದರು. ಮಾಧ್ಯಮದವರ ವಿರುದ್ಧ ಘೋಷಣೆ ಕೂಗಿದ ಕೆಲವರನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್​​ ಅಧಿಕಾರಿ, ''ನಿಮ್ಮಂಥ ಕೆಲ ಕೆಟ್ಟ ಅಭಿಮಾನಿಗಳಿಂದಲೇ ದರ್ಶನ್​ ಅವರಿಗೆ ಕೆಟ್ಟ ಹೆಸರು. ಸಿನಿಮಾ ವೀಕ್ಷಿಸಿ ಎಂಜಾಯ್​​ ಮಾಡಿ. ಅದನ್ನು ಬಿಟ್ಟು ಯಾರ್ಯಾರಿಗೋ ಬೈಯುವ ಕೆಲಸ ಮಾಡಬೇಡಿ. ಇಂಥ ಕೆಲವರಿಂದಲೇ ನಟನ ಹೆಸರು ಹಾಳಾಗುತ್ತಿರೋದು'' ಎಂದು ತಿಳಿಸಿದ್ದಾರೆ. ಮೀಡಿಯಾ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಧಿಕ್ಕಾರ ಕೂಗುವುದನ್ನು ನಿಲ್ಲಿಸಿ ಎಂದು ಗದರಿದ ಪೊಲೀಸ್, ಹೀಗೆ ಮಾಡದಂತೆ ಕಿವಿಮಾತು ಹೇಳಿದ್ದಾರೆ.

ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್​ ಅಭಿಮಾನಿಗಳು (ETV Bharat)

ಪ್ರಸನ್ನ ಥಿಯೇಟರ್ ಬಳಿ ಸುಮಾರು ಹತ್ತು ಪೊಲೀಸರು ನಿಯೋಜನೆಗೊಂಡಿದ್ದಾರೆ. ಬಾಡಿ ವೋರ್ನ್​​ ಕ್ಯಾಮರಾ ಹಾಕಿಕೊಂಡು ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದ ಬಳಿ ಇರುವ ಅಭಿಮಾನಿಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ.

ದರ್ಶನ್ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸಿಗರೇಟ್ ಹಾಗೂ ಕಾಫಿ ಮಗ್ ಹಿಡಿದು ಕುಳಿತಿರುವ ಫೋಟೋ ಬಳಸಿ ಮಾಡಿದ್ದ ಪೋಸ್ಟರ್ ಅನ್ನು ಚಿತ್ರಮಂದಿರದ ಬಳಿ ಹಾಕಲಾಗಿತ್ತು. ''ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511, ಖೈದಿ ನಂಬರ್ 6016'' ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರಸನ್ನ ಥಿಯೇಟರ್ ಮೇಲೆ ಹಾಕಲಾಗಿತ್ತು.

''ಏನ್ರಿ ಮೀಡಿಯಾ'' ಎಂದು ದರ್ಶನ್ ಫ್ಯಾನ್ಸ್ ಹಾಕಿದ್ದ ಬ್ಯಾನರ್ ಅನ್ನು ಪೊಲೀಸರು ತೆಗೆಸಿದ್ದಾರೆ. ಅಭಿಮಾನಿಗಳು ಒಳಗಡೆ ಹೋಗುತ್ತಿದ್ದಂತೆ ಖೈದಿ ನಂಬರ್​ ಒಳಗೊಂಡ ಬ್ಯಾನರ್ ಅನ್ನು ಮಾಗಡಿ ರಸ್ತೆ ಪೊಲೀಸರು ತೆಗೆಸಿದ್ದಾರೆ.

Darshan poster by fans
ಅಭಿಮಾನಿಗಳ ದರ್ಶನ್​ ಪೋಸ್ಟರ್ (ETV Bharat)

ಇದನ್ನೂ ಓದಿ: ವಿದೇಶದಲ್ಲಿ ಉಪೇಂದ್ರ ಸಾರಥ್ಯದ 'ಯುಐ' ಚಿತ್ರತಂಡ: ಸ್ಪೆಷಲ್​​ ವಿಡಿಯೋ ಹಂಚಿಕೊಂಡ ಅಜನೀಶ್​​ ಲೋಕನಾಥ್ - Upendra UI Film Team

ಪರಿಸ್ಥಿತಿ ಅತಿರೇಖಕ್ಕೆ ಹೋದ ಬಳಿಕ ಕೆ.ಪಿ.ಅಗ್ರಹಾರ ಪೊಲೀಸರು ಆಗಮಿಸಿ ಲಾಠಿ ರುಚಿ ತೋರಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಲಾಯಿತು. ಪೊಲೀಸರ ಮನವಿಗೂ ಸ್ಪಂದಿಸದೇ ಕೆಲವರು ಹುಚ್ಚಾಟ ನಡೆಸಿದ ಹಿನ್ನೆಲೆ, ಕೆಲವರಿಗೆ ಲಾಠಿ ಏಟು ಕೂಡಾ ಸಿಕ್ಕಿದೆ. ಲಾಠಿ ಹಿಡಿದು ಅಭಿಮಾನಿಗಳನ್ನು ಚದುರಿಸಿದರು.

ಇದನ್ನೂ ಓದಿ: ನಟ ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ - Darshan in Ballari Jail

ಮದ್ಯ ಸೇವಿಸಿ ಥಿಯೇಟರ್ ಎದುರು ದಾಂಧಲೆಗೆ ಮುಂದಾಗಿದ್ದ ದರ್ಶನ್ ಅಭಿಮಾನಿಯೋರ್ವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಾರ್ನಿಂಗ್ ಕೊಡಲಾಯಿತು. ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅಭಿಮಾನಿ ಕ್ಷಮೆಯಾಚಿಸಿದ್ದು, ಪೊಲೀಸರು ಆತನನ್ನು ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.