ETV Bharat / entertainment

ಆಧಾರ್ ಕೇಂದ್ರದಲ್ಲಿನ ಸ್ಥಿತಿಗತಿಯನ್ನು ಖಂಡಿಸಿದ ನಿರ್ದೇಶಕ ಹನ್ಸಲ್ ಮೆಹ್ತಾ - Hansal Mehta

author img

By ETV Bharat Entertainment Team

Published : Jul 31, 2024, 5:53 PM IST

ಅಂಧೇರಿ ಪೂರ್ವದಲ್ಲಿರುವ ಆಧಾರ್ ಕೇಂದ್ರದಲ್ಲಿನ ಅಧಿಕಾರಿಗಳ ವರ್ತನೆಯನ್ನು ಉಲ್ಲೇಖಿಸಿ, ಜನಪ್ರಿಯ ನಿರ್ದೇಶಕ ಹನ್ಸಲ್ ಮೆಹ್ತಾ ಅಸಮಧಾನ ಹೊರಹಾಕಿದ್ದಾರೆ. ಆಧಾರ್ ಕಾರ್ಡ್ ಪಡೆಯುವಲ್ಲಿ ಮಗಳು ಎದುರಿಸಿದ ತೊಂದರೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಿರ್ದೇಶಕರ ಟ್ವೀಟ್​ಗೆ, ಎಕ್ಸ್​​ ವೇದಿಕೆಯಲ್ಲಿ ಯುಐಡಿಎಐ ಪ್ರತಿಕ್ರಿಯಿಸಿದ್ದು, ಶೀಘ್ರ ನೆರವಿನ ಭರವಸೆ ನೀಡಿದೆ.

Filmmaker Hansal Mehta
ಫಿಲ್ಮ್​​​​ಮೇಕರ್​​ ಹನ್ಸಲ್ ಮೆಹ್ತಾ (IANS photo)

ನವದೆಹಲಿ: ಮೂರು ವಾರಗಳಿಂದ ಆಧಾರ್ ಕಾರ್ಡ್ ಪಡೆಯಲು ಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಫಿಲ್ಮ್​​​​ಮೇಕರ್​​ ಹನ್ಸಲ್ ಮೆಹ್ತಾ ಅಸಮಧಾನ ಹೊರಹಾಕಿದ್ದಾರೆ. ಇಂದು ತಮ್ಮ ಅಧಿಕೃತ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿ, ಅದನ್ನು ಯೂನಿಕ್​​ ಐಡೆಂಟಿಫಿಕೇಶನ್​​​ ಅಥಾರಿಟಿ ಆಫ್​ ಇಂಡಿಯಾ (UIDAI)ಗೆ ಟ್ಯಾಗ್ ಮಾಡಿದ್ದಾರೆ. ಮಗಳು ಎದುರಿಸಿದ ಸವಾಲುಗಳನ್ನು ಎತ್ತಿ ಹಿಡಿದಿದ್ದಾರೆ. ಆಧಾರ್ ಕೇಂದ್ರದಲ್ಲಿ ಮಗಳಿಗೆ ಸಿಕ್ಕ ಟ್ರೀಟ್​ಮೆಂಟ್​ (ಅಧಿಕಾರಿಗಳ ವರ್ತನೆ) 'ಕಿರುಕುಳ'ದಂತಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ಆರೋಪಿಸಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಹನ್ಸಲ್​​ ಮೆಹ್ತಾ ಅವರು ತಮ್ಮ ಮಗಳ ಅನುಭವವನ್ನು ವಿವರಿಸಿದ್ದಾರೆ. "ನನ್ನ ಮಗಳು ಕಳೆದ 3 ವಾರಗಳಿಂದ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾಳೆ. ಅವಳು ಅಂಧೇರಿ ಪೂರ್ವದಲ್ಲಿರುವ ಆಧಾರ್ ಕೇಂದ್ರಕ್ಕೆ ಹೋಗಿ ಬರುತ್ತಿದ್ದಾಳೆ. ಭಾರಿ ಮಳೆಯ ನಡುವೆಯೂ ಕೇಂದ್ರಕ್ಕೆ ಬೇಗನೆ ತಲುಪುತ್ತಾಳೆ. ಆದ್ರೆ ಸೀನಿಯರ್​​ ಮ್ಯಾನೇಜರ್​​ ಯಾವುದಾದರೊಂದು ನೆಪದಲ್ಲಿ ಆಕೆಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಸಹಿ ಮಾಡಿ, ಈ ಡಾಕ್ಯುಮೆಂಟ್ ಪಡೆಯಿರಿ, ಸ್ಟಾಂಪ್ ಸರಿಯಾಗಿಲ್ಲ, ನಿಮಗೆ ಇಂದು ಅಪಾಯಿಂಟ್‌ಮೆಂಟ್ ಇಲ್ಲ, ನಾನು ಒಂದು ವಾರ ರಜೆಯಲ್ಲಿದ್ದೇನೆ - ಹೀಗೆ ನಾನಾ ಕಾರಣಗಳನ್ನು ಕೊಡುತ್ತಿದ್ದಾರೆ. ಫ್ರಸ್ಟ್ರೇಶನ್​​ ಮಾತ್ರವಲ್ಲ, ಇದು ಯಾವುದೇ 'ಕಿರುಕುಳ'ಕ್ಕಿಂತ ಕಡಿಮೆ ಇಲ್ಲ" ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದು @ceo_uidai ಮತ್ತು @UIDAI ಖಾತೆಗಳಿಗೆ ಟ್ಯಾಗ್​​​ ಮಾಡಿದ್ದಾರೆ.

ಕೆಲ ಹೊತ್ತಿನಲ್ಲೇ 'UIDAI'ನ ಅಧಿಕೃತ ಎಕ್ಸ್​​​ ಖಾತೆ ಹನ್ಸಲ್​​ ಮೆಹ್ತಾರಿಗೆ ಪ್ರತಿಕ್ರಿಯಿಸಿದೆ. "ಆತ್ಮೀಯ ಆಧಾರ್ ನಂಬರ್​ ಹೋಲ್ಡರ್, ದಯವಿಟ್ಟು ಈ ಸಮಸ್ಯೆಯನ್ನು ಎದುರಿಸುತ್ತಿರುವ ಆಧಾರ್ ಕೇಂದ್ರದ ಸಂಪೂರ್ಣ ವಿಳಾಸವನ್ನು ನಿಮ್ಮ ಸಂಪರ್ಕ ವಿವರಗಳೊಂದಿಗೆ ನೇರ ಸಂದೇಶದ ಮೂಲಕ ಹಂಚಿಕೊಳ್ಳಿ. ನಾವು ನಿಮಗೆ ಹೆಚ್ಚಿನ ಸಹಾಯ ಮಾಡುತ್ತೇವೆ. @ceo_uidai @UIDAI" ಎಂದು ಬರೆದುಕೊಂಡಿದೆ.

ಚಿತ್ರರಂಗದ ಖ್ಯಾತನಾಮರ ಈ ಟ್ವೀಟ್ ಆನ್‌ಲೈನ್‌ನಲ್ಲಿ ಸದ್ದು ಮಾಡಿದೆ. ಸೋಷಿಯಲ್​​ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯ ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೋರ್ವರು ಮೆಹ್ತಾ ಅವರ ಸೀರಿಸ್​​ 'ಸ್ಕ್ಯಾಮ್​​ 1992' ಅನ್ನು ಉಲ್ಲೇಖಿಸಿ, "ಅವರು ದಾಖಲೆಗಳನ್ನು ಅನುಸರಿಸುವ ಅಗತ್ಯವಿದೆ. ಇಲ್ಲಿ ಯಾವುದೇ ಹಗರಣವಿಲ್ಲ, ಮೆಹ್ತಾ ಜೀ" ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು, "ನಿಜವಾಗಿಯೂ? ಈ ಬುಲ್ಶಿಟ್​ ಅನ್ನು ನಿಲ್ಲಿಸಿ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಮಮತಾ ಮಧ್ಯಪ್ರವೇಶ: ನಿರ್ದೇಶಕ ರಾಹುಲ್ ಮುಖರ್ಜಿ ಮೇಲಿನ ನಿಷೇಧ ತೆಗೆದುಹಾಕಿದ ಎಫ್‌ಸಿಟಿಡಬ್ಲ್ಯುಇಐ - Rahool Mukherjee

ಮತ್ತೋರ್ವ ಸೋಷಿಯಲ್​ ಮೀಡಿಯಾ ಬಳಕೆದಾರ ಪ್ರತಿಕ್ರಿಯಿಸಿ, "ಭ್ರಷ್ಟ ವ್ಯವಸ್ಥೆಯಿಂದಾಗಿ ಜನಸಾಮಾನ್ಯರ ಜೀವನ ಯಾವಾಗಲೂ ತೊಡಕಾಗಿರುತ್ತದೆ. ಆದರೆ ನೀವು ಇಲ್ಲಿನ ಸಮಸ್ಯೆ ಅರಿಯದ ಪವರ್​​ಫುಲ್ ವ್ಯಕ್ತಿ​​'' ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹನ್ಸಲ್, "ನಾನು ಪ್ರಬಲ ವ್ಯಕ್ತಿಯಲ್ಲ. ನಾನು ಈ ದೇಶದ ಸಾಮಾನ್ಯ ಮಧ್ಯಮ ವರ್ಗದ ನಾಗರಿಕ. ಉತ್ತಮವಾಗಿ ಟ್ರೀಟ್​ ಮಾಡೋ ಪ್ರಕ್ರಿಯೆಗೆ ನಾನು ಅರ್ಹನಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 'ದರ್ಶನ್​ಗೆ ಹೀಗಾಗಬಾರದಿತ್ತು': ಪ್ರಕರಣದ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದಿಷ್ಟು - Kumar Bangarappa on Darshan

ಇನ್ನು ನಿರ್ದೇಶಕರ ಸಿನಿಮಾ ವಿಚಾರ ಗಮನಿಸುವುದಾದರೆ, ಕರೀನಾ ಕಪೂರ್ ಖಾನ್ ಅವರು ಜಸ್ಸ್ ಭಾಮ್ರಾ ಎಂಬ ಪತ್ತೇದಾರಿ ಪಾತ್ರದಲ್ಲಿ ನಟಿಸಿರುವ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಸೆಪ್ಟೆಂಬರ್ 13ರಂದು ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಹನ್ಸಲ್​​ ಮೆಹ್ತಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ನವದೆಹಲಿ: ಮೂರು ವಾರಗಳಿಂದ ಆಧಾರ್ ಕಾರ್ಡ್ ಪಡೆಯಲು ಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಫಿಲ್ಮ್​​​​ಮೇಕರ್​​ ಹನ್ಸಲ್ ಮೆಹ್ತಾ ಅಸಮಧಾನ ಹೊರಹಾಕಿದ್ದಾರೆ. ಇಂದು ತಮ್ಮ ಅಧಿಕೃತ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿ, ಅದನ್ನು ಯೂನಿಕ್​​ ಐಡೆಂಟಿಫಿಕೇಶನ್​​​ ಅಥಾರಿಟಿ ಆಫ್​ ಇಂಡಿಯಾ (UIDAI)ಗೆ ಟ್ಯಾಗ್ ಮಾಡಿದ್ದಾರೆ. ಮಗಳು ಎದುರಿಸಿದ ಸವಾಲುಗಳನ್ನು ಎತ್ತಿ ಹಿಡಿದಿದ್ದಾರೆ. ಆಧಾರ್ ಕೇಂದ್ರದಲ್ಲಿ ಮಗಳಿಗೆ ಸಿಕ್ಕ ಟ್ರೀಟ್​ಮೆಂಟ್​ (ಅಧಿಕಾರಿಗಳ ವರ್ತನೆ) 'ಕಿರುಕುಳ'ದಂತಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ಆರೋಪಿಸಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಹನ್ಸಲ್​​ ಮೆಹ್ತಾ ಅವರು ತಮ್ಮ ಮಗಳ ಅನುಭವವನ್ನು ವಿವರಿಸಿದ್ದಾರೆ. "ನನ್ನ ಮಗಳು ಕಳೆದ 3 ವಾರಗಳಿಂದ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾಳೆ. ಅವಳು ಅಂಧೇರಿ ಪೂರ್ವದಲ್ಲಿರುವ ಆಧಾರ್ ಕೇಂದ್ರಕ್ಕೆ ಹೋಗಿ ಬರುತ್ತಿದ್ದಾಳೆ. ಭಾರಿ ಮಳೆಯ ನಡುವೆಯೂ ಕೇಂದ್ರಕ್ಕೆ ಬೇಗನೆ ತಲುಪುತ್ತಾಳೆ. ಆದ್ರೆ ಸೀನಿಯರ್​​ ಮ್ಯಾನೇಜರ್​​ ಯಾವುದಾದರೊಂದು ನೆಪದಲ್ಲಿ ಆಕೆಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಸಹಿ ಮಾಡಿ, ಈ ಡಾಕ್ಯುಮೆಂಟ್ ಪಡೆಯಿರಿ, ಸ್ಟಾಂಪ್ ಸರಿಯಾಗಿಲ್ಲ, ನಿಮಗೆ ಇಂದು ಅಪಾಯಿಂಟ್‌ಮೆಂಟ್ ಇಲ್ಲ, ನಾನು ಒಂದು ವಾರ ರಜೆಯಲ್ಲಿದ್ದೇನೆ - ಹೀಗೆ ನಾನಾ ಕಾರಣಗಳನ್ನು ಕೊಡುತ್ತಿದ್ದಾರೆ. ಫ್ರಸ್ಟ್ರೇಶನ್​​ ಮಾತ್ರವಲ್ಲ, ಇದು ಯಾವುದೇ 'ಕಿರುಕುಳ'ಕ್ಕಿಂತ ಕಡಿಮೆ ಇಲ್ಲ" ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದು @ceo_uidai ಮತ್ತು @UIDAI ಖಾತೆಗಳಿಗೆ ಟ್ಯಾಗ್​​​ ಮಾಡಿದ್ದಾರೆ.

ಕೆಲ ಹೊತ್ತಿನಲ್ಲೇ 'UIDAI'ನ ಅಧಿಕೃತ ಎಕ್ಸ್​​​ ಖಾತೆ ಹನ್ಸಲ್​​ ಮೆಹ್ತಾರಿಗೆ ಪ್ರತಿಕ್ರಿಯಿಸಿದೆ. "ಆತ್ಮೀಯ ಆಧಾರ್ ನಂಬರ್​ ಹೋಲ್ಡರ್, ದಯವಿಟ್ಟು ಈ ಸಮಸ್ಯೆಯನ್ನು ಎದುರಿಸುತ್ತಿರುವ ಆಧಾರ್ ಕೇಂದ್ರದ ಸಂಪೂರ್ಣ ವಿಳಾಸವನ್ನು ನಿಮ್ಮ ಸಂಪರ್ಕ ವಿವರಗಳೊಂದಿಗೆ ನೇರ ಸಂದೇಶದ ಮೂಲಕ ಹಂಚಿಕೊಳ್ಳಿ. ನಾವು ನಿಮಗೆ ಹೆಚ್ಚಿನ ಸಹಾಯ ಮಾಡುತ್ತೇವೆ. @ceo_uidai @UIDAI" ಎಂದು ಬರೆದುಕೊಂಡಿದೆ.

ಚಿತ್ರರಂಗದ ಖ್ಯಾತನಾಮರ ಈ ಟ್ವೀಟ್ ಆನ್‌ಲೈನ್‌ನಲ್ಲಿ ಸದ್ದು ಮಾಡಿದೆ. ಸೋಷಿಯಲ್​​ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯ ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೋರ್ವರು ಮೆಹ್ತಾ ಅವರ ಸೀರಿಸ್​​ 'ಸ್ಕ್ಯಾಮ್​​ 1992' ಅನ್ನು ಉಲ್ಲೇಖಿಸಿ, "ಅವರು ದಾಖಲೆಗಳನ್ನು ಅನುಸರಿಸುವ ಅಗತ್ಯವಿದೆ. ಇಲ್ಲಿ ಯಾವುದೇ ಹಗರಣವಿಲ್ಲ, ಮೆಹ್ತಾ ಜೀ" ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು, "ನಿಜವಾಗಿಯೂ? ಈ ಬುಲ್ಶಿಟ್​ ಅನ್ನು ನಿಲ್ಲಿಸಿ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಮಮತಾ ಮಧ್ಯಪ್ರವೇಶ: ನಿರ್ದೇಶಕ ರಾಹುಲ್ ಮುಖರ್ಜಿ ಮೇಲಿನ ನಿಷೇಧ ತೆಗೆದುಹಾಕಿದ ಎಫ್‌ಸಿಟಿಡಬ್ಲ್ಯುಇಐ - Rahool Mukherjee

ಮತ್ತೋರ್ವ ಸೋಷಿಯಲ್​ ಮೀಡಿಯಾ ಬಳಕೆದಾರ ಪ್ರತಿಕ್ರಿಯಿಸಿ, "ಭ್ರಷ್ಟ ವ್ಯವಸ್ಥೆಯಿಂದಾಗಿ ಜನಸಾಮಾನ್ಯರ ಜೀವನ ಯಾವಾಗಲೂ ತೊಡಕಾಗಿರುತ್ತದೆ. ಆದರೆ ನೀವು ಇಲ್ಲಿನ ಸಮಸ್ಯೆ ಅರಿಯದ ಪವರ್​​ಫುಲ್ ವ್ಯಕ್ತಿ​​'' ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹನ್ಸಲ್, "ನಾನು ಪ್ರಬಲ ವ್ಯಕ್ತಿಯಲ್ಲ. ನಾನು ಈ ದೇಶದ ಸಾಮಾನ್ಯ ಮಧ್ಯಮ ವರ್ಗದ ನಾಗರಿಕ. ಉತ್ತಮವಾಗಿ ಟ್ರೀಟ್​ ಮಾಡೋ ಪ್ರಕ್ರಿಯೆಗೆ ನಾನು ಅರ್ಹನಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 'ದರ್ಶನ್​ಗೆ ಹೀಗಾಗಬಾರದಿತ್ತು': ಪ್ರಕರಣದ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದಿಷ್ಟು - Kumar Bangarappa on Darshan

ಇನ್ನು ನಿರ್ದೇಶಕರ ಸಿನಿಮಾ ವಿಚಾರ ಗಮನಿಸುವುದಾದರೆ, ಕರೀನಾ ಕಪೂರ್ ಖಾನ್ ಅವರು ಜಸ್ಸ್ ಭಾಮ್ರಾ ಎಂಬ ಪತ್ತೇದಾರಿ ಪಾತ್ರದಲ್ಲಿ ನಟಿಸಿರುವ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಸೆಪ್ಟೆಂಬರ್ 13ರಂದು ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಹನ್ಸಲ್​​ ಮೆಹ್ತಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.