ETV Bharat / business

ಸಚಿವೆ ಸೀತಾರಾಮನ್ ಉಜ್ಬೇಕಿಸ್ತಾನ ಭೇಟಿ ಇಂದಿನಿಂದ: ಹೂಡಿಕೆ ಒಪ್ಪಂದಗಳಿಗೆ ಅಂಕಿತ ಸಾಧ್ಯತೆ - Nirmala Sitharaman Uzbekistan Visit

author img

By ETV Bharat Karnataka Team

Published : 3 hours ago

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 24ರಿಂದ 28ರವರೆಗೆ ಉಜ್ಬೇಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (IANS)

ನವದೆಹಲಿ: ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಎಐಐಬಿ) ಆಡಳಿತ ಮಂಡಳಿಯ ಒಂಬತ್ತನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 24ರಿಂದ 28ರವರೆಗೆ ಉಜ್ಬೇಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಐಐಬಿ ಅಧ್ಯಕ್ಷ ಸೇರಿದಂತೆ ಉಜ್ಬೇಕಿಸ್ತಾನ್, ಕತಾರ್ ಮತ್ತು ಚೀನಾದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹಣಕಾಸು ಸಚಿವರು ಎಐಐಬಿಯ ಭಾರತೀಯ ಗವರ್ನರ್ ಆಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತವು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕಿನ ಎರಡನೇ ಅತಿದೊಡ್ಡ ಷೇರುದಾರ ರಾಷ್ಟ್ರವಾಗಿದೆ. ಅಭಿವೃದ್ಧಿ ಕಾರ್ಯಸೂಚಿಗೆ ಸಂಬಂಧಿಸಿದ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಸಭೆಯಲ್ಲಿ ಬಹುಪಕ್ಷೀಯ ಚರ್ಚೆಗಳು ನಡೆಯಲಿವೆ.

ಅಧಿಕೃತ ಭೇಟಿಯ ಭಾಗವಾಗಿ, ಹಣಕಾಸು ಸಚಿವರು ಉಜ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇಬ್ಬರೂ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈ ಒಪ್ಪಂದವು ದೀರ್ಘಕಾಲದಲ್ಲಿ ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ಹೆಚ್ಚು ವ್ಯಾಪಕವಾದ ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಜಂಟಿಯಾಗಿ ಆಯೋಜಿಸಲಾದ ಮತ್ತು ಉಭಯ ದೇಶಗಳ ಉದ್ಯಮದ ನಾಯಕರು ಪ್ರತಿನಿಧಿಸುವ ಭಾರತ-ಉಜ್ಬೇಕಿಸ್ತಾನ್ ವ್ಯಾಪಾರ ವೇದಿಕೆ ಚರ್ಚೆಗಳಲ್ಲಿಯೂ ಸಚಿವೆ ಭಾಗವಹಿಸಲಿದ್ದಾರೆ. ಇದಲ್ಲದೆ, ಸಮರ್ ಖಂಡ್ ಸ್ಟೇಟ್ ಯೂನಿವರ್ಸಿಟಿ ಮತ್ತು ತಾಷ್ಕೆಂಟ್​ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ಹಣಕಾಸು ಸಚಿವರು ಅನೇಕ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರಮುಖ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಎಐಐಬಿ ವಾರ್ಷಿಕ ಸಭೆಯಲ್ಲಿ ಸುಮಾರು 80 ದೇಶಗಳ ನಿಯೋಗಗಳು ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸುತ್ತಿವೆ.

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿರುವ ಎಐಐಬಿ ಏಷ್ಯಾದಲ್ಲಿ ಸುಸ್ಥಿರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು, ಸಂಪತ್ತನ್ನು ಸೃಷ್ಟಿಸಲು ಮತ್ತು ಮೂಲಸೌಕರ್ಯ ಸಂಪರ್ಕವನ್ನು ಸುಧಾರಿಸುವ ದೃಷ್ಟಿಯಿಂದ ಮೂಲಸೌಕರ್ಯ ಮತ್ತು ಇತರ ಉತ್ಪಾದಕ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವತ್ತ ಗಮನ ಹರಿಸಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಹಿಜ್ಬುಲ್ಲಾ ಉಗ್ರರ 300 ಸ್ಥಳಗಳ ಮೇಲೆ ಇಸ್ರೇಲ್​​ ಭೀಕರ ವೈಮಾನಿಕ ದಾಳಿ: 21 ಮಕ್ಕಳು ಸೇರಿ 274 ಮಂದಿ ಸಾವು - Israeli Airstrikes In Lebanon

ನವದೆಹಲಿ: ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಎಐಐಬಿ) ಆಡಳಿತ ಮಂಡಳಿಯ ಒಂಬತ್ತನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 24ರಿಂದ 28ರವರೆಗೆ ಉಜ್ಬೇಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಐಐಬಿ ಅಧ್ಯಕ್ಷ ಸೇರಿದಂತೆ ಉಜ್ಬೇಕಿಸ್ತಾನ್, ಕತಾರ್ ಮತ್ತು ಚೀನಾದ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹಣಕಾಸು ಸಚಿವರು ಎಐಐಬಿಯ ಭಾರತೀಯ ಗವರ್ನರ್ ಆಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತವು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕಿನ ಎರಡನೇ ಅತಿದೊಡ್ಡ ಷೇರುದಾರ ರಾಷ್ಟ್ರವಾಗಿದೆ. ಅಭಿವೃದ್ಧಿ ಕಾರ್ಯಸೂಚಿಗೆ ಸಂಬಂಧಿಸಿದ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಸಭೆಯಲ್ಲಿ ಬಹುಪಕ್ಷೀಯ ಚರ್ಚೆಗಳು ನಡೆಯಲಿವೆ.

ಅಧಿಕೃತ ಭೇಟಿಯ ಭಾಗವಾಗಿ, ಹಣಕಾಸು ಸಚಿವರು ಉಜ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇಬ್ಬರೂ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈ ಒಪ್ಪಂದವು ದೀರ್ಘಕಾಲದಲ್ಲಿ ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ಹೆಚ್ಚು ವ್ಯಾಪಕವಾದ ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಜಂಟಿಯಾಗಿ ಆಯೋಜಿಸಲಾದ ಮತ್ತು ಉಭಯ ದೇಶಗಳ ಉದ್ಯಮದ ನಾಯಕರು ಪ್ರತಿನಿಧಿಸುವ ಭಾರತ-ಉಜ್ಬೇಕಿಸ್ತಾನ್ ವ್ಯಾಪಾರ ವೇದಿಕೆ ಚರ್ಚೆಗಳಲ್ಲಿಯೂ ಸಚಿವೆ ಭಾಗವಹಿಸಲಿದ್ದಾರೆ. ಇದಲ್ಲದೆ, ಸಮರ್ ಖಂಡ್ ಸ್ಟೇಟ್ ಯೂನಿವರ್ಸಿಟಿ ಮತ್ತು ತಾಷ್ಕೆಂಟ್​ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ಹಣಕಾಸು ಸಚಿವರು ಅನೇಕ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರಮುಖ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಎಐಐಬಿ ವಾರ್ಷಿಕ ಸಭೆಯಲ್ಲಿ ಸುಮಾರು 80 ದೇಶಗಳ ನಿಯೋಗಗಳು ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸುತ್ತಿವೆ.

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿರುವ ಎಐಐಬಿ ಏಷ್ಯಾದಲ್ಲಿ ಸುಸ್ಥಿರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು, ಸಂಪತ್ತನ್ನು ಸೃಷ್ಟಿಸಲು ಮತ್ತು ಮೂಲಸೌಕರ್ಯ ಸಂಪರ್ಕವನ್ನು ಸುಧಾರಿಸುವ ದೃಷ್ಟಿಯಿಂದ ಮೂಲಸೌಕರ್ಯ ಮತ್ತು ಇತರ ಉತ್ಪಾದಕ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವತ್ತ ಗಮನ ಹರಿಸಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಹಿಜ್ಬುಲ್ಲಾ ಉಗ್ರರ 300 ಸ್ಥಳಗಳ ಮೇಲೆ ಇಸ್ರೇಲ್​​ ಭೀಕರ ವೈಮಾನಿಕ ದಾಳಿ: 21 ಮಕ್ಕಳು ಸೇರಿ 274 ಮಂದಿ ಸಾವು - Israeli Airstrikes In Lebanon

ETV Bharat Logo

Copyright © 2024 Ushodaya Enterprises Pvt. Ltd., All Rights Reserved.