ETV Bharat / business

ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್​ - Indian Food in Karachi

author img

By PTI

Published : Aug 11, 2024, 7:03 PM IST

ಪಾಕಿಸ್ತಾನದ ಕರಾಚಿಯಲ್ಲಿ ಭಾರತೀಯ ಶಾಕಾಹಾರಿ ಊಟದ ಜನಪ್ರಿಯತೆ ಹೆಚ್ಚಾಗುತ್ತಿದೆ.

ಮಸಾಲಾ ದೋಸೆ (ಸಂಗ್ರಹ ಚಿತ್ರ)
ಮಸಾಲಾ ದೋಸೆ (ಸಂಗ್ರಹ ಚಿತ್ರ) (IANS)

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿರುವ, ಕಾಸ್ಮೋಪಾಲಿಟನ್ ಮಹಾನಗರ ಕರಾಚಿಯು ಆಹಾರ ರಾಜಧಾನಿಯೂ ಹೌದು. ತಿನಿಸು ಪ್ರಿಯರಿಗೆ ಇಲ್ಲಿ ಬಗೆಬಗೆಯ ಆಹಾರ, ತಿಂಡಿಗಳು ಸಿಗುತ್ತವೆ. ಆದರೆ ಈಗ ಈ ನಗರದಲ್ಲಿ ಭಾರತೀಯ ಶಾಕಾಹಾರಿ ಆಹಾರ ಪದಾರ್ಥಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅಪ್ಪಟ ಭಾರತೀಯ ರುಚಿಯನ್ನು ಹೊಂದಿರುವ ಸಸ್ಯಾಹಾರಿ ಭಕ್ಷ್ಯಗಳಾದ 'ಸೋಯಾಬೀನ್ ಆಲೂ ಬಿರಿಯಾನಿ', 'ಆಲೂ ಟಿಕ್ಕಿಸ್', 'ವಡಾ ಪಾವ್', 'ಮಸಾಲಾ ದೋಸೆ' ಮತ್ತು 'ಧೋಕ್ಲಾ' ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಹೊಸ ಟ್ರೆಂಡ್ ಆಗಿದೆ.

ಸಿಂಧ್ ಪ್ರಾಂತ್ಯದ ರಾಜಧಾನಿಯಾಗಿರುವ ಕರಾಚಿಯಲ್ಲಿ ಅತ್ಯಂತ ದುಬಾರಿ ಯುರೋಪಿಯನ್ ಮತ್ತು ಇಟಾಲಿಯನ್ ಡಿಶ್​ಗಳಿಂದ ಹಿಡಿದು ಕೈಗೆಟುಕುವ ಚೈನೀಸ್ ಆಹಾರ ಅಥವಾ ಇನ್ನೂ ಅಗ್ಗದ ಬನ್ ಕಬಾಬ್​ವರೆಗೆ ಸಾಕಷ್ಟು ವೆರೈಟಿಯ ಆಹಾರ ಪದಾರ್ಥಗಳು ಲಭ್ಯವಿವೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆಹಾರ ಪ್ರಿಯರು ಶುದ್ಧ ಸಸ್ಯಾಹಾರಿ ಭಕ್ಷ್ಯಗಳ ರುಚಿಗೆ ಮಾರು ಹೋಗಿರುವುದು ವಿಶಿಷ್ಟವಾಗಿದೆ.

ಕರಾಚಿಯ ಹೊಸ ಸಸ್ಯಾಹಾರಿ ಟ್ರೆಂಡ್​ ಬಗ್ಗೆ ಕರಾಚಿಯಲ್ಲಿ ಹೊಟೇಲ್​ ನಡೆಸುತ್ತಿರುವ ಮಹೇಶ್ ಕುಮಾರ್ ಎಂಬುವರು ಮಾತನಾಡಿ, ಕರಾಚಿಯಲ್ಲಿ "ಶುದ್ಧ ಸಸ್ಯಾಹಾರಿ ಭಾರತೀಯ ಭಕ್ಷ್ಯಗಳು" ಎಂದು ಕರೆಯಲ್ಪಡುವ ಸಸ್ಯಾಹಾರಿ ಊಟದ ಬಗ್ಗೆ ಜನರಲ್ಲಿ ಒಲವು ಹೆಚ್ಚಾಗಿರುವುದರಿಂದ ತಮ್ಮ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ಮಹೇಶ್​ ಕುಮಾರ್​ ಅವರು ಎಂ.ಎ. ಜಿನ್ನಾ ರಸ್ತೆಯ ಐತಿಹಾಸಿಕ ಓಲ್ಡ್​ ಕಾಂಪೌಂಡ್ ಒಳಗೆ ಸಣ್ಣ 'ಮಹಾರಾಜ್ ಕರಮ್ ಚಂದ್ ಸಸ್ಯಾಹಾರಿ ಫುಡ್ಸ್ ಇನ್' ಹೆಸರಿನ ಹೊಟೇಲ್ ನಡೆಸುತ್ತಾರೆ.

ವಿಭಜನೆಯ ಮೊದಲು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿ ಮತ್ತು ಸಾಮರಸ್ಯದಿಂದ ವಾಸಿಸುತ್ತಿದ್ದ ನಾರಾಯಣ್ ಕಾಂಪೌಂಡ್ ಅಥವಾ ಓಲ್ಡ್​ ಕಾಂಪೌಂಡ್​ ಪ್ರದೇಶದಲ್ಲಿ ಈ ರೆಸ್ಟೋರೆಂಟ್ ಮಾತ್ರವಲ್ಲದೆ ಶತಮಾನಗಳಷ್ಟು ಹಳೆಯದಾದ ಸ್ವಾಮಿನಾರಾಯಣ ದೇವಾಲಯ ಮತ್ತು ಗುರುದ್ವಾರಗಳು ಸಹ ಇವೆ.

ಆರಂಭದಲ್ಲಿ ಕಾಂಪೌಂಡ್ ನಿವಾಸಿಗಳಿಗಾಗಿ ಆರಂಭಿಸಲಾದ ಮಹಾರಾಜ್ ಕರಮ್ ಚಂದ್ ಇನ್ ಹೊಟೇಲ್​ ಈಗ ಇದರ ಎದುರಿನಲ್ಲಿಯೇ ಇರುವ ನ್ಯಾಯಾಲಯಕ್ಕೆ ಬರುವ ವಕೀಲರು ಮತ್ತು ಇತರ ಜನತೆಗೆ ಜನಪ್ರಿಯ ಊಟದ ತಾಣವಾಗಿ ಮಾರ್ಪಟ್ಟಿದೆ.

"ನಮ್ಮ ಸೋಯಾಬೀನ್ ಆಲೂ ಬಿರಿಯಾನಿ, ಆಲೂ ಟಿಕ್ಕಿಸ್, ಪನೀರ್ ಕಡಾಯಿ ಮತ್ತು ಮಿಕ್ಸ್​ ವೆಜಿಟೆಬಲ್​ ನಂಥ ತಿಂಡಿಗಳನ್ನು ಜನ ಹೆಚ್ಚು ಇಷ್ಟ ಪಟ್ಟಿದ್ದಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ ಸಾಕಷ್ಟು ಜನ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ ಮತ್ತು ಆ ಸಮಯದಲ್ಲಿ ತುಂಬಾ ರಷ್ ಇರುತ್ತದೆ " ಎಂದು ಕುಮಾರ್ ಹೇಳಿದರು.

ಹಿಂದೂಗಳು ತಯಾರಿಸಿದ ಆಹಾರವನ್ನು ಮುಸ್ಲಿಮರು ತಿನ್ನಬಾರದು ಎಂಬ ಧಾರ್ಮಿಕ ನಂಬಿಕೆಯನ್ನು ಹೊಂದಿರುವ ಕೆಲ ಮುಸ್ಲಿಂ ಸಂಪ್ರದಾಯವಾದಿಗಳು ಇನ್ನೂ ಇರುವುದರಿಂದ ತಮ್ಮ ರೆಸ್ಟೋರೆಂಟ್​ ಬಗ್ಗೆ ತಾವಾಗಿಯೇ ಪ್ರಚಾರ ಮಾಡುವುದಿಲ್ಲ ಎಂದು ಕುಮಾರ್ ಹೇಳಿದರು.

ಹಿಂದೂಗಳು ಮಾತ್ರವಲ್ಲದೆ ಕರಾಚಿಯ ಕೆಲ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಮಹಿಳೆಯರು ಕೂಡ ನವೋದ್ಯಮಿಗಳ ಮಾದರಿಯಲ್ಲಿ ಭಾರತೀಯ ಶಾಕಾಹಾರಿ ಫುಡ್​ ಸ್ಟಾಲ್​ಗಳನ್ನು ಆರಂಭಿಸಿದ್ದಾರೆ. ಪಾವ್ ಭಾಜಿ, ವಡಾ ಪಾವ್, ಮಸಾಲಾ ದೋಸೆ ಮತ್ತು ಢೋಕ್ಲಾ ಮುಂತಾದ ತಿನಿಸುಗಳನ್ನು ಇವರು ಭರ್ಜರಿಯಾಗಿ ಮಾರಾಟ ಮಾಡುತ್ತಿದ್ದಾರೆ.

ಎಂಟು ತಿಂಗಳ ಹಿಂದೆ ಕಂಟೋನ್ಮೆಂಟ್ ಪ್ರದೇಶದ ಒಂದು ಬೀದಿ ಬದಿಯಲ್ಲಿ ಕವಿತಾ ಎಂಬುವರು ಆಹಾರ ಮಳಿಗೆಯನ್ನು ಪ್ರಾರಂಭಿಸಿದ್ದು, ಭಾರತೀಯ ಸಸ್ಯಾಹಾರಿ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ. ಸದ್ಯ ಅವರ ಸ್ಟಾಲ್​ಗೆ ನಿಯಂತ್ರಿಸಲಾಗದಷ್ಟು ಜನ ಬರುತ್ತಿದ್ದಾರೆ.

ಕವಿತಾ ಮಾತ್ರವಲ್ಲದೆ ಅವರ ಅತ್ತಿಗೆ ಚಂದ್ರಿಕಾ ದೀಕ್ಷಿತ್, ಸಹೋದರ ಜೀತಂದ್ರ ಮತ್ತು ಅವರ ತಾಯಿ ನೊಮಿತಾ ಅವರು ಕೂಡ ಅಲ್ಲಿಯೇ ಅಕ್ಕಪಕ್ಕದಲ್ಲಿ ಮೂರು ಸ್ಟಾಲ್​ಗಳನ್ನು ಹಾಕಿದ್ದಾರೆ. ಅಲ್ಲದೆ ಇದರ ಪಕ್ಕದಲ್ಲಿಯೇ ಮೇರಿ ರಿಚರ್ಡ್ಸ್ ಹೆಸರಿನ ಕ್ರಿಶ್ಚಿಯನ್ ಮಹಿಳೆ ಸ್ಟಾಲ್ ಹಾಕಿದ್ದು, ಇವರು ಢೋಕ್ಲಾ, ಆಮ್ ಪನ್ನಾ ಮತ್ತು ದಾಲ್ ಸಮೋಸಾಗಳನ್ನು ಮಾರುತ್ತಿದ್ದಾರೆ.

ಕವಿತಾ ಅವರ ಆಹಾರ ಮಳಿಗೆಯ ಬಗ್ಗೆ ಈಗಾಗಲೇ ಪಾಕಿಸ್ತಾನದ ದೊಡ್ಡ ಮಾಧ್ಯಮಗಳು ವರದಿ ಮಾಡಿವೆ ಮತ್ತು ಬಿಬಿಸಿ ಕೂಡ ಹಿಂದೂ ಹುಡುಗಿಯ ಆಹಾರವು ಕರಾಚಿಯಲ್ಲಿ ಹಾಟ್ ಕೇಕ್ ಗಳಂತೆ ಹೇಗೆ ಮಾರಾಟವಾಗುತ್ತಿದೆ ಎಂಬ ಹೆಸರಿನ ವರದಿಯನ್ನು ಪ್ರಸಾರ ಮಾಡಿದೆ.

ಕಾಸ್ಮೋಪಾಲಿಟನ್ ನಗರದ ಇನ್ನೊಂದು ಬದಿಯಲ್ಲಿ, ಇಬ್ಬರು ಸಹೋದರಿಯರಾದ ಮಹ್ರೀನ್ ಮತ್ತು ಲುಬ್ನಾ ಎಂಬುವರು ಜನನಿಬಿಡ ಹುಸೈನಾಬಾದ್ ಪ್ರದೇಶದ ಪ್ರಸಿದ್ಧ ಫುಡ್​ ಸ್ಟ್ರೀಟ್​ನಲ್ಲಿ ಭಾರತೀಯ ಆಹಾರ ಮಳಿಗೆ ಆರಂಭಿಸಿದ್ದು ಉತ್ತಮವಾಗಿ ವ್ಯಾಪಾರ ಮಾಡುತ್ತಿದ್ದಾರೆ.

ಸೂರ್ಯಾಸ್ತವಾದರೆ ಸಾಕು ನಮ್ಮ ವ್ಯಾಪಾರ ಆರಂಭ ಎನ್ನುತ್ತಾರೆ ಮತ್ತೋರ್ವ ಹೊಟೇಲ್ ಉದ್ಯಮಿ ಜಾಫರ್. ಇವರ ತಂದೆಯು ಗುಜರಿ ಸುಜುಕಿ ವ್ಯಾನ್​ನಲ್ಲಿ ಮಸಾಲಾ ದೋಸಾ ಸ್ಟಾಲ್ ಆರಂಭಿಸಿದ್ದರಂತೆ. ಹೀಗಾಗಿ ತಮ್ಮದು ಭಾರತೀಯ ಆಹಾರದ ಅತ್ಯಂತ ಹಳೆಯ ಸ್ಟಾಲ್​ ಎಂದು ಜಾಫರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಾಫರ್ ಮತ್ತು ಅಡುಗೆ ತಂಡವು ಮುಖ್ಯವಾಗಿ ವಿವಿಧ ರೀತಿಯ ಮಸಾಲೆ ದೋಸೆಗಳನ್ನು ಮಾರಾಟ ಮಾಡುತ್ತದೆ. ಒಂದು ಪ್ಲೇಟ್​ಗೆ 500 ರೂಪಾಯಿ ದರ ನಿಗದಿ ಪಡಿಸಿದ್ದರೂ ಇವರ ಆಲೂ ಮಸಾಲಾ ದೋಸಾ ಅತ್ಯಧಿಕವಾಗಿ ಮಾರಾಟವಾಗುತ್ತಿದೆ. ಕರಾಚಿಗರು ತಿಂಗಳಿಗೆ ಎರಡರಿಂದ ಮೂರು ಬಾರಿ ಹೊರಗಡೆ ಊಟ ಮಾಡಲು ಇಷ್ಟಪಡುತ್ತಾರೆ ಎನ್ನುತ್ತಾರೆ ಆಹಾರ ವಿಮರ್ಶಕಿ ಹುಮಾ ಶೇಖ್.

ಇದನ್ನೂ ಓದಿ : ಮತ್ತೆ ಸ್ಥಳಾಂತರಕ್ಕೆ ಆದೇಶಿಸಿದ ಇಸ್ರೇಲ್: ಎಲ್ಲಿ ಹೋಗಬೇಕೆಂದು ತೋಚದೆ ಅಲೆದಾಡುತ್ತಿರುವ ಪ್ಯಾಲೆಸ್ಟೈನಿಯರು - Israel Gaza War

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿರುವ, ಕಾಸ್ಮೋಪಾಲಿಟನ್ ಮಹಾನಗರ ಕರಾಚಿಯು ಆಹಾರ ರಾಜಧಾನಿಯೂ ಹೌದು. ತಿನಿಸು ಪ್ರಿಯರಿಗೆ ಇಲ್ಲಿ ಬಗೆಬಗೆಯ ಆಹಾರ, ತಿಂಡಿಗಳು ಸಿಗುತ್ತವೆ. ಆದರೆ ಈಗ ಈ ನಗರದಲ್ಲಿ ಭಾರತೀಯ ಶಾಕಾಹಾರಿ ಆಹಾರ ಪದಾರ್ಥಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅಪ್ಪಟ ಭಾರತೀಯ ರುಚಿಯನ್ನು ಹೊಂದಿರುವ ಸಸ್ಯಾಹಾರಿ ಭಕ್ಷ್ಯಗಳಾದ 'ಸೋಯಾಬೀನ್ ಆಲೂ ಬಿರಿಯಾನಿ', 'ಆಲೂ ಟಿಕ್ಕಿಸ್', 'ವಡಾ ಪಾವ್', 'ಮಸಾಲಾ ದೋಸೆ' ಮತ್ತು 'ಧೋಕ್ಲಾ' ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಹೊಸ ಟ್ರೆಂಡ್ ಆಗಿದೆ.

ಸಿಂಧ್ ಪ್ರಾಂತ್ಯದ ರಾಜಧಾನಿಯಾಗಿರುವ ಕರಾಚಿಯಲ್ಲಿ ಅತ್ಯಂತ ದುಬಾರಿ ಯುರೋಪಿಯನ್ ಮತ್ತು ಇಟಾಲಿಯನ್ ಡಿಶ್​ಗಳಿಂದ ಹಿಡಿದು ಕೈಗೆಟುಕುವ ಚೈನೀಸ್ ಆಹಾರ ಅಥವಾ ಇನ್ನೂ ಅಗ್ಗದ ಬನ್ ಕಬಾಬ್​ವರೆಗೆ ಸಾಕಷ್ಟು ವೆರೈಟಿಯ ಆಹಾರ ಪದಾರ್ಥಗಳು ಲಭ್ಯವಿವೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆಹಾರ ಪ್ರಿಯರು ಶುದ್ಧ ಸಸ್ಯಾಹಾರಿ ಭಕ್ಷ್ಯಗಳ ರುಚಿಗೆ ಮಾರು ಹೋಗಿರುವುದು ವಿಶಿಷ್ಟವಾಗಿದೆ.

ಕರಾಚಿಯ ಹೊಸ ಸಸ್ಯಾಹಾರಿ ಟ್ರೆಂಡ್​ ಬಗ್ಗೆ ಕರಾಚಿಯಲ್ಲಿ ಹೊಟೇಲ್​ ನಡೆಸುತ್ತಿರುವ ಮಹೇಶ್ ಕುಮಾರ್ ಎಂಬುವರು ಮಾತನಾಡಿ, ಕರಾಚಿಯಲ್ಲಿ "ಶುದ್ಧ ಸಸ್ಯಾಹಾರಿ ಭಾರತೀಯ ಭಕ್ಷ್ಯಗಳು" ಎಂದು ಕರೆಯಲ್ಪಡುವ ಸಸ್ಯಾಹಾರಿ ಊಟದ ಬಗ್ಗೆ ಜನರಲ್ಲಿ ಒಲವು ಹೆಚ್ಚಾಗಿರುವುದರಿಂದ ತಮ್ಮ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ಮಹೇಶ್​ ಕುಮಾರ್​ ಅವರು ಎಂ.ಎ. ಜಿನ್ನಾ ರಸ್ತೆಯ ಐತಿಹಾಸಿಕ ಓಲ್ಡ್​ ಕಾಂಪೌಂಡ್ ಒಳಗೆ ಸಣ್ಣ 'ಮಹಾರಾಜ್ ಕರಮ್ ಚಂದ್ ಸಸ್ಯಾಹಾರಿ ಫುಡ್ಸ್ ಇನ್' ಹೆಸರಿನ ಹೊಟೇಲ್ ನಡೆಸುತ್ತಾರೆ.

ವಿಭಜನೆಯ ಮೊದಲು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿ ಮತ್ತು ಸಾಮರಸ್ಯದಿಂದ ವಾಸಿಸುತ್ತಿದ್ದ ನಾರಾಯಣ್ ಕಾಂಪೌಂಡ್ ಅಥವಾ ಓಲ್ಡ್​ ಕಾಂಪೌಂಡ್​ ಪ್ರದೇಶದಲ್ಲಿ ಈ ರೆಸ್ಟೋರೆಂಟ್ ಮಾತ್ರವಲ್ಲದೆ ಶತಮಾನಗಳಷ್ಟು ಹಳೆಯದಾದ ಸ್ವಾಮಿನಾರಾಯಣ ದೇವಾಲಯ ಮತ್ತು ಗುರುದ್ವಾರಗಳು ಸಹ ಇವೆ.

ಆರಂಭದಲ್ಲಿ ಕಾಂಪೌಂಡ್ ನಿವಾಸಿಗಳಿಗಾಗಿ ಆರಂಭಿಸಲಾದ ಮಹಾರಾಜ್ ಕರಮ್ ಚಂದ್ ಇನ್ ಹೊಟೇಲ್​ ಈಗ ಇದರ ಎದುರಿನಲ್ಲಿಯೇ ಇರುವ ನ್ಯಾಯಾಲಯಕ್ಕೆ ಬರುವ ವಕೀಲರು ಮತ್ತು ಇತರ ಜನತೆಗೆ ಜನಪ್ರಿಯ ಊಟದ ತಾಣವಾಗಿ ಮಾರ್ಪಟ್ಟಿದೆ.

"ನಮ್ಮ ಸೋಯಾಬೀನ್ ಆಲೂ ಬಿರಿಯಾನಿ, ಆಲೂ ಟಿಕ್ಕಿಸ್, ಪನೀರ್ ಕಡಾಯಿ ಮತ್ತು ಮಿಕ್ಸ್​ ವೆಜಿಟೆಬಲ್​ ನಂಥ ತಿಂಡಿಗಳನ್ನು ಜನ ಹೆಚ್ಚು ಇಷ್ಟ ಪಟ್ಟಿದ್ದಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ ಸಾಕಷ್ಟು ಜನ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ ಮತ್ತು ಆ ಸಮಯದಲ್ಲಿ ತುಂಬಾ ರಷ್ ಇರುತ್ತದೆ " ಎಂದು ಕುಮಾರ್ ಹೇಳಿದರು.

ಹಿಂದೂಗಳು ತಯಾರಿಸಿದ ಆಹಾರವನ್ನು ಮುಸ್ಲಿಮರು ತಿನ್ನಬಾರದು ಎಂಬ ಧಾರ್ಮಿಕ ನಂಬಿಕೆಯನ್ನು ಹೊಂದಿರುವ ಕೆಲ ಮುಸ್ಲಿಂ ಸಂಪ್ರದಾಯವಾದಿಗಳು ಇನ್ನೂ ಇರುವುದರಿಂದ ತಮ್ಮ ರೆಸ್ಟೋರೆಂಟ್​ ಬಗ್ಗೆ ತಾವಾಗಿಯೇ ಪ್ರಚಾರ ಮಾಡುವುದಿಲ್ಲ ಎಂದು ಕುಮಾರ್ ಹೇಳಿದರು.

ಹಿಂದೂಗಳು ಮಾತ್ರವಲ್ಲದೆ ಕರಾಚಿಯ ಕೆಲ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಮಹಿಳೆಯರು ಕೂಡ ನವೋದ್ಯಮಿಗಳ ಮಾದರಿಯಲ್ಲಿ ಭಾರತೀಯ ಶಾಕಾಹಾರಿ ಫುಡ್​ ಸ್ಟಾಲ್​ಗಳನ್ನು ಆರಂಭಿಸಿದ್ದಾರೆ. ಪಾವ್ ಭಾಜಿ, ವಡಾ ಪಾವ್, ಮಸಾಲಾ ದೋಸೆ ಮತ್ತು ಢೋಕ್ಲಾ ಮುಂತಾದ ತಿನಿಸುಗಳನ್ನು ಇವರು ಭರ್ಜರಿಯಾಗಿ ಮಾರಾಟ ಮಾಡುತ್ತಿದ್ದಾರೆ.

ಎಂಟು ತಿಂಗಳ ಹಿಂದೆ ಕಂಟೋನ್ಮೆಂಟ್ ಪ್ರದೇಶದ ಒಂದು ಬೀದಿ ಬದಿಯಲ್ಲಿ ಕವಿತಾ ಎಂಬುವರು ಆಹಾರ ಮಳಿಗೆಯನ್ನು ಪ್ರಾರಂಭಿಸಿದ್ದು, ಭಾರತೀಯ ಸಸ್ಯಾಹಾರಿ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ. ಸದ್ಯ ಅವರ ಸ್ಟಾಲ್​ಗೆ ನಿಯಂತ್ರಿಸಲಾಗದಷ್ಟು ಜನ ಬರುತ್ತಿದ್ದಾರೆ.

ಕವಿತಾ ಮಾತ್ರವಲ್ಲದೆ ಅವರ ಅತ್ತಿಗೆ ಚಂದ್ರಿಕಾ ದೀಕ್ಷಿತ್, ಸಹೋದರ ಜೀತಂದ್ರ ಮತ್ತು ಅವರ ತಾಯಿ ನೊಮಿತಾ ಅವರು ಕೂಡ ಅಲ್ಲಿಯೇ ಅಕ್ಕಪಕ್ಕದಲ್ಲಿ ಮೂರು ಸ್ಟಾಲ್​ಗಳನ್ನು ಹಾಕಿದ್ದಾರೆ. ಅಲ್ಲದೆ ಇದರ ಪಕ್ಕದಲ್ಲಿಯೇ ಮೇರಿ ರಿಚರ್ಡ್ಸ್ ಹೆಸರಿನ ಕ್ರಿಶ್ಚಿಯನ್ ಮಹಿಳೆ ಸ್ಟಾಲ್ ಹಾಕಿದ್ದು, ಇವರು ಢೋಕ್ಲಾ, ಆಮ್ ಪನ್ನಾ ಮತ್ತು ದಾಲ್ ಸಮೋಸಾಗಳನ್ನು ಮಾರುತ್ತಿದ್ದಾರೆ.

ಕವಿತಾ ಅವರ ಆಹಾರ ಮಳಿಗೆಯ ಬಗ್ಗೆ ಈಗಾಗಲೇ ಪಾಕಿಸ್ತಾನದ ದೊಡ್ಡ ಮಾಧ್ಯಮಗಳು ವರದಿ ಮಾಡಿವೆ ಮತ್ತು ಬಿಬಿಸಿ ಕೂಡ ಹಿಂದೂ ಹುಡುಗಿಯ ಆಹಾರವು ಕರಾಚಿಯಲ್ಲಿ ಹಾಟ್ ಕೇಕ್ ಗಳಂತೆ ಹೇಗೆ ಮಾರಾಟವಾಗುತ್ತಿದೆ ಎಂಬ ಹೆಸರಿನ ವರದಿಯನ್ನು ಪ್ರಸಾರ ಮಾಡಿದೆ.

ಕಾಸ್ಮೋಪಾಲಿಟನ್ ನಗರದ ಇನ್ನೊಂದು ಬದಿಯಲ್ಲಿ, ಇಬ್ಬರು ಸಹೋದರಿಯರಾದ ಮಹ್ರೀನ್ ಮತ್ತು ಲುಬ್ನಾ ಎಂಬುವರು ಜನನಿಬಿಡ ಹುಸೈನಾಬಾದ್ ಪ್ರದೇಶದ ಪ್ರಸಿದ್ಧ ಫುಡ್​ ಸ್ಟ್ರೀಟ್​ನಲ್ಲಿ ಭಾರತೀಯ ಆಹಾರ ಮಳಿಗೆ ಆರಂಭಿಸಿದ್ದು ಉತ್ತಮವಾಗಿ ವ್ಯಾಪಾರ ಮಾಡುತ್ತಿದ್ದಾರೆ.

ಸೂರ್ಯಾಸ್ತವಾದರೆ ಸಾಕು ನಮ್ಮ ವ್ಯಾಪಾರ ಆರಂಭ ಎನ್ನುತ್ತಾರೆ ಮತ್ತೋರ್ವ ಹೊಟೇಲ್ ಉದ್ಯಮಿ ಜಾಫರ್. ಇವರ ತಂದೆಯು ಗುಜರಿ ಸುಜುಕಿ ವ್ಯಾನ್​ನಲ್ಲಿ ಮಸಾಲಾ ದೋಸಾ ಸ್ಟಾಲ್ ಆರಂಭಿಸಿದ್ದರಂತೆ. ಹೀಗಾಗಿ ತಮ್ಮದು ಭಾರತೀಯ ಆಹಾರದ ಅತ್ಯಂತ ಹಳೆಯ ಸ್ಟಾಲ್​ ಎಂದು ಜಾಫರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಾಫರ್ ಮತ್ತು ಅಡುಗೆ ತಂಡವು ಮುಖ್ಯವಾಗಿ ವಿವಿಧ ರೀತಿಯ ಮಸಾಲೆ ದೋಸೆಗಳನ್ನು ಮಾರಾಟ ಮಾಡುತ್ತದೆ. ಒಂದು ಪ್ಲೇಟ್​ಗೆ 500 ರೂಪಾಯಿ ದರ ನಿಗದಿ ಪಡಿಸಿದ್ದರೂ ಇವರ ಆಲೂ ಮಸಾಲಾ ದೋಸಾ ಅತ್ಯಧಿಕವಾಗಿ ಮಾರಾಟವಾಗುತ್ತಿದೆ. ಕರಾಚಿಗರು ತಿಂಗಳಿಗೆ ಎರಡರಿಂದ ಮೂರು ಬಾರಿ ಹೊರಗಡೆ ಊಟ ಮಾಡಲು ಇಷ್ಟಪಡುತ್ತಾರೆ ಎನ್ನುತ್ತಾರೆ ಆಹಾರ ವಿಮರ್ಶಕಿ ಹುಮಾ ಶೇಖ್.

ಇದನ್ನೂ ಓದಿ : ಮತ್ತೆ ಸ್ಥಳಾಂತರಕ್ಕೆ ಆದೇಶಿಸಿದ ಇಸ್ರೇಲ್: ಎಲ್ಲಿ ಹೋಗಬೇಕೆಂದು ತೋಚದೆ ಅಲೆದಾಡುತ್ತಿರುವ ಪ್ಯಾಲೆಸ್ಟೈನಿಯರು - Israel Gaza War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.