ETV Bharat / bharat

ನಿರಪರಾಧಿ ಆಗಿದ್ದರೆ ಜೈಲಿನಿಂದ ಹೊರ ಬರ್ತಾರೆ ಬಿಡಿ: ಪಂಜಾಬ್​ ಸರ್ಕಾರದ ವಿರುದ್ಧ ಖಲಿ ವಾಗ್ದಾಳಿ - Wrestler Great Khali

author img

By ETV Bharat Karnataka Team

Published : Mar 29, 2024, 6:27 PM IST

ಪಂಜಾಬ್​ನಲ್ಲಿರುವ ಹೀರೋ ಸೈಕಲ್​ ತಯಾರಿ ಘಟಕಕ್ಕೆ ಭೇಟಿ ನೀಡಿದ್ದ ಪ್ರಸಿದ್ಧ ಕುಸ್ತಿ ದಿ ಗ್ರೇಟ್​ ಖಲಿ ಅವರು ಪಂಜಾಬ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ARREST OF ARVIND KEJRIWAL  KHALI COMMENT ON BHAGWANT MANN  PUNJAB CM MANN
ಪಂಜಾಬ್​ ಸರ್ಕಾರ ವಿರುದ್ಧ ಖಲಿ ವಾಗ್ದಾಳಿ

ಲುಧಿಯಾನ, ಪಂಜಾಬ್​: ಪ್ರಸಿದ್ಧ ಕುಸ್ತಿಪಟು ದಿ ಗ್ರೇಟ್ ಖಲಿ ಅವರು ಇಂದು ಲುಧಿಯಾನ ಸೈಕಲ್ ವ್ಯಾಲಿಯಲ್ಲಿರುವ ಹೀರೋ ಸೈಕಲ್‌ನ ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಘಟಕವನ್ನು ಪರಿಶೀಲಿಸಿದರು ಮತ್ತು ರೋಕಾಟ್ ಸಹಯೋಗದೊಂದಿಗೆ ಹೀರೋ ಸೈಕಲ್ ತಯಾರಿಸುತ್ತಿರುವ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಈ ವೇಳೆ ಖಲಿ ಅವರು ಪಂಜಾಬ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೊದಲನೆಯದಾಗಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ಉತ್ತಮ ಪರಿಸ್ಥಿತಿಗಳಿಲ್ಲ. ಮೊದಲ ಸ್ಥಾನದಲ್ಲಿದ್ದ ಪಂಜಾಬ್ ರಾಜ್ಯ ಸರಕಾರಗಳ ನೀತಿಗಳಿಂದ ಅಧೋಗತಿಗೆ ಇಳಿದಿದೆ. ಪಂಜಾಬ್‌ಗಿಂತ ಹರಿಯಾಣ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಪಂಜಾಬ್‌ನಲ್ಲಿ ಯಾವುದೇ ಉದ್ಯಮ ಬರುತ್ತಿಲ್ಲ ಮತ್ತು ಯಾವುದೇ ದೊಡ್ಡ ಹೂಡಿಕೆ ಆಗುತ್ತಿಲ್ಲ. ಇದರಿಂದ ಪಂಜಾಬ್‌ನ ಯುವಕರಿಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಮತ್ತು ಪಂಜಾಬ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಅವರು ಹೇಳಿದರು.

ಬಿಜೆಪಿಗೆ ಇತರ ಪಕ್ಷದ ನಾಯಕರು ಸೇರುತ್ತಿದ್ದಾರೆ : ಈ ಸಂದರ್ಭದಲ್ಲಿ ಖಲಿ ಮಾತನಾಡಿ, ಪಂಜಾಬ್​ನಲ್ಲಿ ಸರ್ಕಾರದಿಂದ ಹೆಚ್ಚಿನ ಕೆಲಸ ಆಗಿಲ್ಲ. ಎಲ್ಲೋ ಒಂದು ಕಡೆ ಸಮನ್ವಯದ ಕೊರತೆ ಇದ್ದಿರಬೇಕು. ಭಗವಂತ ಮಾನ್ ಸಾಹಿಬ್ ಮಾತ್ರ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಖಲಿ ಹೇಳಿದರು.

ಬಿಜೆಪಿಗೆ ನಿರಂತರವಾಗಿ ಸೇರ್ಪಡೆಗೊಳ್ಳುತ್ತಿರುವ ನಾಯಕರ ಕುರಿತು ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇತರ ಪಕ್ಷದ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿದ ಅವರು, 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಈ ಹಿಂದೆ ಕೈಯಲ್ಲಿ ಕಲ್ಲು, ಬಂದೂಕುಗಳ ಬದಲು ಲ್ಯಾಪ್‌ಟಾಪ್‌ಗಳನ್ನು ನಿರ್ವಹಿಸುತ್ತಿದ್ದಾರೆ. ನಿನ್ನೆ ಜಮ್ಮುವಿಗೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಜಮ್ಮು- ಕಾಶ್ಮೀರದ ಅಭಿವೃದ್ಧಿಗೆ ಸತತವಾಗಿ ಬಂದ ಸರ್ಕಾರಗಳು ಮತ್ತಷ್ಟು ಯೋಜನೆಗಳನ್ನು ರೂಪಿಸುತ್ತಿವೆ ಎಂದರು.

ನಿರಪರಾಧಿಯಾಗಿದ್ದರೆ ಜೈಲಿನಿಂದ ಹೊರಗೆ ಬರುತ್ತಾರೆ: ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಬಗ್ಗೆ ಗ್ರೇಟ್ ಖಲಿ ಅವರನ್ನು ಪ್ರಶ್ನಿಸಿದಾಗ, ಅವರು ನಿರಪರಾಧಿಯಾಗಿದ್ದರೆ ಜೈಲಿನಿಂದ ಹೊರಗೆ ಬರುತ್ತಾರೆ. ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಸ್ವಯಂಚಾಲಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಗ್ರೇಟ್ ಖಲಿಯನ್ನು ಹೀರೋ ಸೈಕಲ್‌ಗಳ ಸಹಯೋಗದೊಂದಿಗೆ ರಾಕೆಟ್ ಎಲೆಕ್ಟ್ರಾನಿಕ್ ವಾಹನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಅದರ ಅಡಿ ಅವರು ಲುಧಿಯಾನಾದ ಸೈಕಲ್ ವ್ಯಾಲಿಯನ್ನು ತಲುಪಿದರು. ತಂತ್ರಜ್ಞಾನದೊಂದಿಗೆ ಯುವಕರನ್ನು ಸಂಪರ್ಕಿಸಲಾಗುತ್ತಿದೆ. ಇದರೊಂದಿಗೆ ಪಂಜಾಬ್‌ನಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ನಿರುದ್ಯೋಗಿ ಯುವಕರಿಗೂ ಉದ್ಯೋಗ ದೊರೆಯಲಿದೆ ಎಂದರು.

ಓದಿ: ಕಾಂಗ್ರೆಸ್​ಗೆ ಮತ್ತೊಂದು ಬಿಗ್​ ಶಾಕ್: 1,823 ಕೋಟಿ ರೂ ತೆರಿಗೆ ಪಾವತಿಗೆ ನೋಟಿಸ್ ಜಾರಿ - IT Notice

ಲುಧಿಯಾನ, ಪಂಜಾಬ್​: ಪ್ರಸಿದ್ಧ ಕುಸ್ತಿಪಟು ದಿ ಗ್ರೇಟ್ ಖಲಿ ಅವರು ಇಂದು ಲುಧಿಯಾನ ಸೈಕಲ್ ವ್ಯಾಲಿಯಲ್ಲಿರುವ ಹೀರೋ ಸೈಕಲ್‌ನ ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಘಟಕವನ್ನು ಪರಿಶೀಲಿಸಿದರು ಮತ್ತು ರೋಕಾಟ್ ಸಹಯೋಗದೊಂದಿಗೆ ಹೀರೋ ಸೈಕಲ್ ತಯಾರಿಸುತ್ತಿರುವ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಈ ವೇಳೆ ಖಲಿ ಅವರು ಪಂಜಾಬ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೊದಲನೆಯದಾಗಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದು, ಉತ್ತಮ ಪರಿಸ್ಥಿತಿಗಳಿಲ್ಲ. ಮೊದಲ ಸ್ಥಾನದಲ್ಲಿದ್ದ ಪಂಜಾಬ್ ರಾಜ್ಯ ಸರಕಾರಗಳ ನೀತಿಗಳಿಂದ ಅಧೋಗತಿಗೆ ಇಳಿದಿದೆ. ಪಂಜಾಬ್‌ಗಿಂತ ಹರಿಯಾಣ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಪಂಜಾಬ್‌ನಲ್ಲಿ ಯಾವುದೇ ಉದ್ಯಮ ಬರುತ್ತಿಲ್ಲ ಮತ್ತು ಯಾವುದೇ ದೊಡ್ಡ ಹೂಡಿಕೆ ಆಗುತ್ತಿಲ್ಲ. ಇದರಿಂದ ಪಂಜಾಬ್‌ನ ಯುವಕರಿಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಮತ್ತು ಪಂಜಾಬ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಅವರು ಹೇಳಿದರು.

ಬಿಜೆಪಿಗೆ ಇತರ ಪಕ್ಷದ ನಾಯಕರು ಸೇರುತ್ತಿದ್ದಾರೆ : ಈ ಸಂದರ್ಭದಲ್ಲಿ ಖಲಿ ಮಾತನಾಡಿ, ಪಂಜಾಬ್​ನಲ್ಲಿ ಸರ್ಕಾರದಿಂದ ಹೆಚ್ಚಿನ ಕೆಲಸ ಆಗಿಲ್ಲ. ಎಲ್ಲೋ ಒಂದು ಕಡೆ ಸಮನ್ವಯದ ಕೊರತೆ ಇದ್ದಿರಬೇಕು. ಭಗವಂತ ಮಾನ್ ಸಾಹಿಬ್ ಮಾತ್ರ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಖಲಿ ಹೇಳಿದರು.

ಬಿಜೆಪಿಗೆ ನಿರಂತರವಾಗಿ ಸೇರ್ಪಡೆಗೊಳ್ಳುತ್ತಿರುವ ನಾಯಕರ ಕುರಿತು ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇತರ ಪಕ್ಷದ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿದ ಅವರು, 370 ನೇ ವಿಧಿಯನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಈ ಹಿಂದೆ ಕೈಯಲ್ಲಿ ಕಲ್ಲು, ಬಂದೂಕುಗಳ ಬದಲು ಲ್ಯಾಪ್‌ಟಾಪ್‌ಗಳನ್ನು ನಿರ್ವಹಿಸುತ್ತಿದ್ದಾರೆ. ನಿನ್ನೆ ಜಮ್ಮುವಿಗೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಜಮ್ಮು- ಕಾಶ್ಮೀರದ ಅಭಿವೃದ್ಧಿಗೆ ಸತತವಾಗಿ ಬಂದ ಸರ್ಕಾರಗಳು ಮತ್ತಷ್ಟು ಯೋಜನೆಗಳನ್ನು ರೂಪಿಸುತ್ತಿವೆ ಎಂದರು.

ನಿರಪರಾಧಿಯಾಗಿದ್ದರೆ ಜೈಲಿನಿಂದ ಹೊರಗೆ ಬರುತ್ತಾರೆ: ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಬಗ್ಗೆ ಗ್ರೇಟ್ ಖಲಿ ಅವರನ್ನು ಪ್ರಶ್ನಿಸಿದಾಗ, ಅವರು ನಿರಪರಾಧಿಯಾಗಿದ್ದರೆ ಜೈಲಿನಿಂದ ಹೊರಗೆ ಬರುತ್ತಾರೆ. ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಸ್ವಯಂಚಾಲಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಗ್ರೇಟ್ ಖಲಿಯನ್ನು ಹೀರೋ ಸೈಕಲ್‌ಗಳ ಸಹಯೋಗದೊಂದಿಗೆ ರಾಕೆಟ್ ಎಲೆಕ್ಟ್ರಾನಿಕ್ ವಾಹನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಅದರ ಅಡಿ ಅವರು ಲುಧಿಯಾನಾದ ಸೈಕಲ್ ವ್ಯಾಲಿಯನ್ನು ತಲುಪಿದರು. ತಂತ್ರಜ್ಞಾನದೊಂದಿಗೆ ಯುವಕರನ್ನು ಸಂಪರ್ಕಿಸಲಾಗುತ್ತಿದೆ. ಇದರೊಂದಿಗೆ ಪಂಜಾಬ್‌ನಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ನಿರುದ್ಯೋಗಿ ಯುವಕರಿಗೂ ಉದ್ಯೋಗ ದೊರೆಯಲಿದೆ ಎಂದರು.

ಓದಿ: ಕಾಂಗ್ರೆಸ್​ಗೆ ಮತ್ತೊಂದು ಬಿಗ್​ ಶಾಕ್: 1,823 ಕೋಟಿ ರೂ ತೆರಿಗೆ ಪಾವತಿಗೆ ನೋಟಿಸ್ ಜಾರಿ - IT Notice

ETV Bharat Logo

Copyright © 2024 Ushodaya Enterprises Pvt. Ltd., All Rights Reserved.