ETV Bharat / bharat

ನಕ್ಸಲರೊಂದಿಗೆ ಗುಂಡಿನ ಚಕಮಕಿ; ಜಾರ್ಖಂಡ್‌ನಲ್ಲಿ ಇಬ್ಬರು ಪೊಲೀಸರು ಹುತಾತ್ಮ

author img

By ETV Bharat Karnataka Team

Published : Feb 7, 2024, 8:13 PM IST

ನಕ್ಸಲರ ಜೊತೆಗಿನ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾದ ಘಟನೆ ಜಾರ್ಖಂಡ್​ ಛತ್ರಾ ಜಿಲ್ಲೆಯಲ್ಲಿ ನಡೆದಿದೆ.

jharkhand-two-cops-martyred-in-encounter-with-naxalites-in-chatra
ನಕ್ಸಲರೊಂದಿಗೆ ಗುಂಡಿನ ಚಕಮಕಿ; ಇಬ್ಬರು ಪೊಲೀಸರು ಹುತಾತ್ಮ

ರಾಂಚಿ(ಜಾರ್ಖಂಡ್​): ಜಾರ್ಖಂಡ್‌ನ​ ಛತ್ರಾ ಜಿಲ್ಲೆಯಲ್ಲಿ ಇಂದು ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸಿಕಿಂದರ್​ ಸಿಂಗ್​ ಮತ್ತು ಶುಕರ್​ ರಾಮ್ ಮೃತಪಟ್ಟಿದ್ದು, ಇತರ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.

ಇಲ್ಲಿನ ಬೇರಿಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಫೀಮು ಬೆಳೆ ನಾಶಗೊಳಿಸಿ ಪೊಲೀಸರು ಮರಳುತ್ತಿದ್ದರು. ಈ ವೇಳೆ, ಟಿಪಿಸಿ ನಕ್ಸಲ್​ ಸಂಘಟನೆಯು ಪೊಲೀಸ್​ ಪಡೆಗಳ ಮೇಲೆ ಹಠಾತ್​ ದಾಳಿ ನಡೆಸಿದೆ. ಆಗ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಸಿಕಿಂದರ್​ ಸಿಂಗ್​, ಶುಕರ್​ ರಾಮ್​ ಹುತಾತ್ಮರಾಗಿದ್ದಾರೆ. ಕೃಷ್ಣ, ಆಕಾಶ್ ಮತ್ತು ಸಂಜಯ್​ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳ ತಿಳಿಸಿವೆ. ಶುಕರ್​ ರಾಮ್​ ಪಾಲಮು ಜಿಲ್ಲೆಯ ನಿವಾಸಿಯಾಗಿದ್ದು, ಸಿಕಿಂದರ್​​ ಸಿಂಗ್​ ಬಿಹಾರದ ಗಾಯಾ ಮೂಲದವರು ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಖಚಿತಪಡಿಸಿರುವ ಎಸ್​ಡಿಪಿಒ ಸಂದೀಪ್​​ ಸುಮನ್​, "ದಾಳಿಯಲ್ಲಿ ಗಾಯಗೊಂಡ ಪೊಲೀಸ್​ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ರಾಜಧಾನಿ ರಾಂಚಿಗೆ ಏರ್​ಲಿಫ್ಟ್​ ಮಾಡಲಾಗುವುದು. ದಾಳಿಕೋರ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಜನವರಿ 30ರಂದು ಛತ್ತೀಸ್​ಗಢದಲ್ಲಿ ನಕ್ಸಲರು ದಾಳಿ ಮಾಡಿದ್ದರು. ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯಲ್ಲಿ ನಡೆಸಿದ್ದ ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ, ಇತರ 14 ಜನ ಸಿಬ್ಬಂದಿ ಗಾಯಗೊಂಡಿದ್ದರು. ಅಂದೂ ಕೂಡ ಎರಡು ಕಡೆಗಳಿಂದ ಗುಂಡಿನ ಚಕಮಕಿ ಉಂಟಾಗಿತ್ತು. ಫೆಬ್ರವರಿ 4ರಂದು ಭದ್ರತಾ ಸಿಬ್ಬಂದಿ ಇಬ್ಬರು ಮಹಿಳಾ ನಕ್ಸಲರನ್ನು ಎನ್​ಕೌಂಟರ್​ ಮಾಡಿದ್ದರು.

ಇದನ್ನೂ ಓದಿ: ಛತ್ತೀಸ್​ಗಢ: ಇಬ್ಬರು ಮಹಿಳಾ ನಕ್ಸಲರ ಹತ್ಯೆ

ರಾಂಚಿ(ಜಾರ್ಖಂಡ್​): ಜಾರ್ಖಂಡ್‌ನ​ ಛತ್ರಾ ಜಿಲ್ಲೆಯಲ್ಲಿ ಇಂದು ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸಿಕಿಂದರ್​ ಸಿಂಗ್​ ಮತ್ತು ಶುಕರ್​ ರಾಮ್ ಮೃತಪಟ್ಟಿದ್ದು, ಇತರ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.

ಇಲ್ಲಿನ ಬೇರಿಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಫೀಮು ಬೆಳೆ ನಾಶಗೊಳಿಸಿ ಪೊಲೀಸರು ಮರಳುತ್ತಿದ್ದರು. ಈ ವೇಳೆ, ಟಿಪಿಸಿ ನಕ್ಸಲ್​ ಸಂಘಟನೆಯು ಪೊಲೀಸ್​ ಪಡೆಗಳ ಮೇಲೆ ಹಠಾತ್​ ದಾಳಿ ನಡೆಸಿದೆ. ಆಗ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಸಿಕಿಂದರ್​ ಸಿಂಗ್​, ಶುಕರ್​ ರಾಮ್​ ಹುತಾತ್ಮರಾಗಿದ್ದಾರೆ. ಕೃಷ್ಣ, ಆಕಾಶ್ ಮತ್ತು ಸಂಜಯ್​ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳ ತಿಳಿಸಿವೆ. ಶುಕರ್​ ರಾಮ್​ ಪಾಲಮು ಜಿಲ್ಲೆಯ ನಿವಾಸಿಯಾಗಿದ್ದು, ಸಿಕಿಂದರ್​​ ಸಿಂಗ್​ ಬಿಹಾರದ ಗಾಯಾ ಮೂಲದವರು ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಖಚಿತಪಡಿಸಿರುವ ಎಸ್​ಡಿಪಿಒ ಸಂದೀಪ್​​ ಸುಮನ್​, "ದಾಳಿಯಲ್ಲಿ ಗಾಯಗೊಂಡ ಪೊಲೀಸ್​ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ರಾಜಧಾನಿ ರಾಂಚಿಗೆ ಏರ್​ಲಿಫ್ಟ್​ ಮಾಡಲಾಗುವುದು. ದಾಳಿಕೋರ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಜನವರಿ 30ರಂದು ಛತ್ತೀಸ್​ಗಢದಲ್ಲಿ ನಕ್ಸಲರು ದಾಳಿ ಮಾಡಿದ್ದರು. ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯಲ್ಲಿ ನಡೆಸಿದ್ದ ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ, ಇತರ 14 ಜನ ಸಿಬ್ಬಂದಿ ಗಾಯಗೊಂಡಿದ್ದರು. ಅಂದೂ ಕೂಡ ಎರಡು ಕಡೆಗಳಿಂದ ಗುಂಡಿನ ಚಕಮಕಿ ಉಂಟಾಗಿತ್ತು. ಫೆಬ್ರವರಿ 4ರಂದು ಭದ್ರತಾ ಸಿಬ್ಬಂದಿ ಇಬ್ಬರು ಮಹಿಳಾ ನಕ್ಸಲರನ್ನು ಎನ್​ಕೌಂಟರ್​ ಮಾಡಿದ್ದರು.

ಇದನ್ನೂ ಓದಿ: ಛತ್ತೀಸ್​ಗಢ: ಇಬ್ಬರು ಮಹಿಳಾ ನಕ್ಸಲರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.