ETV Bharat / bharat

ತಿರುಮಲದಲ್ಲಿ ಭಕ್ತರು ಕಳೆದುಕೊಂಡ ವಸ್ತುಗಳ ದುರುಪಯೋಗ: ಅಧಿಕಾರಿ ವಿರುದ್ಧ ಆರೋಪ - TIRUMALA VIGILANCE OFFICER

2023ರಲ್ಲಿ ಕಮಾಂಡ್​ ಕಂಟ್ರೋಲ್ ವಿಭಾಗದ ವಿಚಕ್ಷಣಾ ಅಧಿಕಾರಿಯಾಗಿದ್ದ ಶಿವಶಂಕರ್​ ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Tirumala Vigilance Officer Under Fire For Misusing Lost Valuables Of Devotees
ತಿರುಮಲ ವೆಂಕಟೇಶ್ವರ ದೇಗುಲ (ಐಎಎನ್​ಎಸ್​)
author img

By ETV Bharat Karnataka Team

Published : Jan 2, 2025, 5:27 PM IST

ತಿರುಮಲ, ಆಂಧ್ರಪ್ರದೇಶ: ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರು ಅನೇಕ ಬಾರಿ ನಗದು, ಮೊಬೈಲ್​, ಚಿನ್ನಾಭರಣ ಸೇರಿದಂತೆ ಅಗತ್ಯ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವುದು ಸಹಜ. ಈ ರೀತಿ ಕಳೆದು ಹೋದ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಬಂಧ ಪಟ್ಟ ಭಕ್ತರಿಗೆ ವಾಪಸ್​​ ಮಾಡಲು ತಿರುಮಲದಲ್ಲಿ ವಿಜಿಲೆನ್ಸ್​ (ವಿಚಕ್ಷಣಾ) ಅಧಿಕಾರಿಗಳು ಇರುತ್ತಾರೆ. ಆದರೆ, ಆ ವಿಚಕ್ಷಣಾಧಿಕಾರಿಯೇ ಅವುಗಳ ದುರುಪಯೋಗಪಡಿಸಿಕೊಂಡಿರುವ ಘಟನೆ ವೈಎಸ್​ಆರ್​ಸಿಪಿ ಆಡಳಿತದಲ್ಲಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

2023ರಲ್ಲಿ ಕಮಾಂಡ್​ ಕಂಟ್ರೋಲ್ ವಿಭಾಗದ ವಿಚಕ್ಷಣಾಧಿಕಾರಿಯಾಗಿದ್ದ ಶಿವಶಂಕರ್​ ಈ ರೀತಿ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಕ್ತರಿಗೆ ಸಂಬಂಧಿಸಿದ ಕಳೆದು ಹೋದ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸುವಲ್ಲಿ ಈ ಕಮಾಂಡ್​ ಕಂಟ್ರೋಲ್​ ವಿಭಾಗ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್​​, ಸಂಗ್ರಹಿಸಿದ ವಸ್ತುಗಳನ್ನು ದುರ್ಬಳಕೆ ಮಾಡಿರುವುದಾಗಿ ವಿಚಕ್ಷಣಾ ಭದ್ರತಾ ಅಧಿಕಾರಿ ಪದ್ಮನಾಭನ್​ ವರದಿಯಲ್ಲಿ ಬೆಳಕಿಗೆ ಬಂದಿದೆ.

ವರದಿ ಸಲ್ಲಿಸಿರುವ ಪದ್ಮನಾಭನ್​; ಈ ಸಂಬಂಧ ಸಲ್ಲಿಸಿರುವ ವರದಿಯಲ್ಲಿ ಶಿವಶಂಕರ್​ ಮರು ಪಡೆದ ವಸ್ತುಗಳನ್ನು ಸರಿಯಾದ ದಾಖಲೆಯೊಂದಿಗೆ ನಿರ್ವಹಣೆ ಮಾಡಿಲ್ಲ. ಶಿವಶಂಕರ್​ ಸೂಚನೆ ಮೆರೆಗೆ ಭಕ್ತರು ಬಳಕೆ ಮಾಡುತ್ತಿದ್ದ ಸೆಲ್​ ಫೋನ್​ ಮತ್ತು ಬ್ಲೂಟೂತ್​ ಸಾಧನಗಳನ್ನು ಸಿಬ್ಬಂದಿ ಬಳಕೆ ಮಾಡುತ್ತಿದ್ದರು. ಇನ್ನು ಸಿಕ್ಕ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಸರಿಯಾದ ದಾಖಲೆ ಇಲ್ಲದೇ ಶ್ರೀವಾರಿ ಹುಂಡಿಗೆ ಹಾಕಲಾಗಿದೆ. ಇವುಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ವಸ್ತುಗಳು ದುರ್ಬಳಕೆಯಾಗಿವೆ. ದೇಗುಲದಲ್ಲಿ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಶಿವಶಂಕರ್​ ಕುರುಡಾಗಿದ್ದರು. ಅಲ್ಲದೇ ದುರ್ಬಳಕೆಗೆ ಅವರನ್ನು ಪ್ರೋತ್ಸಾಹಿಸಿದ್ದರು. ಕಳ್ಳರಿಂದ ಪಡೆದ ಹಣವನ್ನು ಆಹಾರ ಮತ್ತು ಲಡ್ಡು ಪ್ರಸಾದದ ಖರ್ಚಿಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸೆಕ್ಟರ್​ 4ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಶಂಕರ್, ಕಳ್ಳರಿಂದ ಪಡೆದ ಹಣವನ್ನು​ ಅನೇಕ ಬಾರಿ ಕಚೇರಿಯಲ್ಲಿನ ಟೀ ಮತ್ತು ಟಿಕೆಟ್​ಗೆ ಬಳಕೆ ಮಾಡುತ್ತಿದ್ದರು. ಇಲ್ಲಿನ ಅನೇಕ ಸೆಕ್ಟರ್​ನಲ್ಲಿ ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನಾಗರಾಜು ಹೇಳುವಂತೆ, ಅನೇಕ ಸಿಬ್ಬಂದಿ ರಿಜಿಸ್ಟರ್​ನಲ್ಲಿ ದಾಖಲಿಸದೇ, ಸಿಕ್ಕ ಫೋನ್​ಗಳನ್ನು ಬಳಕೆ ಮಾಡುತ್ತಿದ್ದರು. ನನಗೆ ಸಿಕ್ಕ ಒಂದು ಐ ಫೋನ್ ಶಿವಶಂಕರ್ ಅವರಿಗೆ ನೀಡಿದ್ದೆ. ಆದರೆ, ಅವರು ನೋಂದಣಿ ಮಾಡುವ ಬದಲಿಗೆ ತಮ್ಮ ಸಹೋದ್ಯೋಗಿಗೆ ನೀಡಿದರು. ಸಿಸಿಟಿ ಆಪರೇಟರ್​ ರಮೇಶ್​ ಬಾಬು ಹೇಳುವಂತೆ ಅನೇಕ ಬಾರಿ ಈ ರೀತಿ ಸಿಕ್ಕ ಭಕ್ತರ ವಸ್ತುಗಳು ಅಧಿಕೃತ ದಾಖಲೆಯಿಂದ ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.

ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಕೇವಲ ನಾಮಮಾತ್ರ ಕ್ರಮಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಶಿವಶಂಕರ್​ ಅವರನ್ನು ಅಮಾನತು ಅಥವಾ ಔಪಚಾರಿಕ ತನಿಖೆಗೆ ಒಳಪಡಿಸುವ ಕಾರ್ಯವೂ ನಡೆದಿಲ್ಲ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು?

ತಿರುಮಲ, ಆಂಧ್ರಪ್ರದೇಶ: ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರು ಅನೇಕ ಬಾರಿ ನಗದು, ಮೊಬೈಲ್​, ಚಿನ್ನಾಭರಣ ಸೇರಿದಂತೆ ಅಗತ್ಯ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವುದು ಸಹಜ. ಈ ರೀತಿ ಕಳೆದು ಹೋದ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಬಂಧ ಪಟ್ಟ ಭಕ್ತರಿಗೆ ವಾಪಸ್​​ ಮಾಡಲು ತಿರುಮಲದಲ್ಲಿ ವಿಜಿಲೆನ್ಸ್​ (ವಿಚಕ್ಷಣಾ) ಅಧಿಕಾರಿಗಳು ಇರುತ್ತಾರೆ. ಆದರೆ, ಆ ವಿಚಕ್ಷಣಾಧಿಕಾರಿಯೇ ಅವುಗಳ ದುರುಪಯೋಗಪಡಿಸಿಕೊಂಡಿರುವ ಘಟನೆ ವೈಎಸ್​ಆರ್​ಸಿಪಿ ಆಡಳಿತದಲ್ಲಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

2023ರಲ್ಲಿ ಕಮಾಂಡ್​ ಕಂಟ್ರೋಲ್ ವಿಭಾಗದ ವಿಚಕ್ಷಣಾಧಿಕಾರಿಯಾಗಿದ್ದ ಶಿವಶಂಕರ್​ ಈ ರೀತಿ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಕ್ತರಿಗೆ ಸಂಬಂಧಿಸಿದ ಕಳೆದು ಹೋದ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸುವಲ್ಲಿ ಈ ಕಮಾಂಡ್​ ಕಂಟ್ರೋಲ್​ ವಿಭಾಗ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್​​, ಸಂಗ್ರಹಿಸಿದ ವಸ್ತುಗಳನ್ನು ದುರ್ಬಳಕೆ ಮಾಡಿರುವುದಾಗಿ ವಿಚಕ್ಷಣಾ ಭದ್ರತಾ ಅಧಿಕಾರಿ ಪದ್ಮನಾಭನ್​ ವರದಿಯಲ್ಲಿ ಬೆಳಕಿಗೆ ಬಂದಿದೆ.

ವರದಿ ಸಲ್ಲಿಸಿರುವ ಪದ್ಮನಾಭನ್​; ಈ ಸಂಬಂಧ ಸಲ್ಲಿಸಿರುವ ವರದಿಯಲ್ಲಿ ಶಿವಶಂಕರ್​ ಮರು ಪಡೆದ ವಸ್ತುಗಳನ್ನು ಸರಿಯಾದ ದಾಖಲೆಯೊಂದಿಗೆ ನಿರ್ವಹಣೆ ಮಾಡಿಲ್ಲ. ಶಿವಶಂಕರ್​ ಸೂಚನೆ ಮೆರೆಗೆ ಭಕ್ತರು ಬಳಕೆ ಮಾಡುತ್ತಿದ್ದ ಸೆಲ್​ ಫೋನ್​ ಮತ್ತು ಬ್ಲೂಟೂತ್​ ಸಾಧನಗಳನ್ನು ಸಿಬ್ಬಂದಿ ಬಳಕೆ ಮಾಡುತ್ತಿದ್ದರು. ಇನ್ನು ಸಿಕ್ಕ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಸರಿಯಾದ ದಾಖಲೆ ಇಲ್ಲದೇ ಶ್ರೀವಾರಿ ಹುಂಡಿಗೆ ಹಾಕಲಾಗಿದೆ. ಇವುಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ವಸ್ತುಗಳು ದುರ್ಬಳಕೆಯಾಗಿವೆ. ದೇಗುಲದಲ್ಲಿ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಶಿವಶಂಕರ್​ ಕುರುಡಾಗಿದ್ದರು. ಅಲ್ಲದೇ ದುರ್ಬಳಕೆಗೆ ಅವರನ್ನು ಪ್ರೋತ್ಸಾಹಿಸಿದ್ದರು. ಕಳ್ಳರಿಂದ ಪಡೆದ ಹಣವನ್ನು ಆಹಾರ ಮತ್ತು ಲಡ್ಡು ಪ್ರಸಾದದ ಖರ್ಚಿಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸೆಕ್ಟರ್​ 4ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಶಂಕರ್, ಕಳ್ಳರಿಂದ ಪಡೆದ ಹಣವನ್ನು​ ಅನೇಕ ಬಾರಿ ಕಚೇರಿಯಲ್ಲಿನ ಟೀ ಮತ್ತು ಟಿಕೆಟ್​ಗೆ ಬಳಕೆ ಮಾಡುತ್ತಿದ್ದರು. ಇಲ್ಲಿನ ಅನೇಕ ಸೆಕ್ಟರ್​ನಲ್ಲಿ ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನಾಗರಾಜು ಹೇಳುವಂತೆ, ಅನೇಕ ಸಿಬ್ಬಂದಿ ರಿಜಿಸ್ಟರ್​ನಲ್ಲಿ ದಾಖಲಿಸದೇ, ಸಿಕ್ಕ ಫೋನ್​ಗಳನ್ನು ಬಳಕೆ ಮಾಡುತ್ತಿದ್ದರು. ನನಗೆ ಸಿಕ್ಕ ಒಂದು ಐ ಫೋನ್ ಶಿವಶಂಕರ್ ಅವರಿಗೆ ನೀಡಿದ್ದೆ. ಆದರೆ, ಅವರು ನೋಂದಣಿ ಮಾಡುವ ಬದಲಿಗೆ ತಮ್ಮ ಸಹೋದ್ಯೋಗಿಗೆ ನೀಡಿದರು. ಸಿಸಿಟಿ ಆಪರೇಟರ್​ ರಮೇಶ್​ ಬಾಬು ಹೇಳುವಂತೆ ಅನೇಕ ಬಾರಿ ಈ ರೀತಿ ಸಿಕ್ಕ ಭಕ್ತರ ವಸ್ತುಗಳು ಅಧಿಕೃತ ದಾಖಲೆಯಿಂದ ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.

ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಕೇವಲ ನಾಮಮಾತ್ರ ಕ್ರಮಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಶಿವಶಂಕರ್​ ಅವರನ್ನು ಅಮಾನತು ಅಥವಾ ಔಪಚಾರಿಕ ತನಿಖೆಗೆ ಒಳಪಡಿಸುವ ಕಾರ್ಯವೂ ನಡೆದಿಲ್ಲ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.