ETV Bharat / bharat

ತೆಲಂಗಾಣ ಸಿಎಂ ನಿಧಿಗೆ ₹1 ಕೋಟಿ ನೀಡಿದ ಪವನ್​ ಕಲ್ಯಾಣ್‌; ಪ್ರವಾಹ ಪರಿಶೀಲನೆಗೆ ಇಂದು ಕೇಂದ್ರ ತಂಡ ಆಗಮನ - Pawan Kalyan

author img

By PTI

Published : Sep 11, 2024, 1:15 PM IST

ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್​, ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡಿದ್ದಾರೆ.

telangana-flood-pawan-kalyan-donates-one-crore-centre-team-to-visit
ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್​ (ANI)

ಹೈದರಾಬಾದ್​: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ಜನರ ನೆರವಿಗೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ​​ ಪವನ್​ ಕಲ್ಯಾಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಇಂದು ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.

ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ 6 ​​ಕೋಟಿ ರೂ. ನೀಡುತ್ತಿದ್ದೇನೆ. ಇದರಲ್ಲಿ ಆಂಧ್ರ, ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 1 ಕೋಟಿ ರೂಪಾಯಿ ಮತ್ತು ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಿಗೆ 4 ಕೋಟಿ ರೂ. ನೀಡುವುದಾಗಿ ಈ ಹಿಂದೆ ಪವನ್ ಘೋಷಿಸಿದ್ದರು.

ರಾಜ್ಯದ ಖಮ್ಮಂ, ಮೆಹಬೂಬ್​ ನಗರ, ಸೂರ್ಯಪೇಟ್​ ಮತ್ತು ಇತರೆ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 26 ಜನರು ಸಾವನ್ನಪ್ಪಿದ್ದು, ಅನೇಕರು ನಿರಾಶ್ರಿತರಾಗಿದ್ದರು. ಮನೆ, ಕೃಷಿ, ನೀರಾವರಿ ಟ್ಯಾಂಕ್​ ಮತ್ತು ವಿದ್ಯುತ್​ ಕಂಬಗಳು ಸೇರಿದಂತೆ ಅಪಾರ ಆಸ್ತಿ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 5,438 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರವಾಹ ಪರಿಶೀಲನೆಗೆ ಇಂದು ಕೇಂದ್ರ ತಂಡ: ತೆಲಂಗಾಣದಲ್ಲಿ ಹಾನಿ ಪರಿಶೀಲನೆಗೆ ಇಂದು ಆರು ಸದಸ್ಯರ ಕೇಂದ್ರ ತಂಡ ಆಗಮಿಸಲಿದೆ. ಕರ್ನಲ್​​ ಕೀರ್ತಿ ಪ್ರತಾಪ್​ ಸಿಂಗ್​ ನೇತೃತ್ವದ ಈ ತಂಡ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರನ್ನು ಭೇಟಿಯಾಗಲಿದೆ.

ಪ್ರವಾಹದಿಂದಾಗ ಹಾನಿ ಕುರಿತು ಮನದಟ್ಟು ಮಾಡುವ ಉದ್ದೇಶದಿಂದ ತೆಲಂಗಾಣ ಸರ್ಕಾರ ಫೋಟೋ ಎಕ್ಸಿಬಿಷನ್​ಗೆ ವ್ಯವಸ್ಥೆ ಮಾಡಿದ್ದು, ಇದನ್ನು ಕೇಂದ್ರ ತಂಡ ವೀಕ್ಷಿಸಲಿದೆ. ಬಳಿಕ ತಂಡ ಎರಡು ಗುಂಪಾಗಿ ವಿಂಗಡನೆಯಾಗಿ ಸೂರ್ಯಪೆಟ್​​, ಖಮ್ಮಂ, ಮೆಹಬೂಬ್​ನಗರ್​ ಮತ್ತು ಇತರೆ ಜಿಲ್ಲೆಗಳಿಗೆ ತೆರಳಿ ಹಾನಿಯ ಮೌಲ್ಯಮಾಪನ ಮಾಡಲಿದ್ದಾರೆ.

ಕೇಂದ್ರ ತಂಡದಲ್ಲಿ ಆರ್ಥಿಕ, ಕೃಷಿ, ರಸ್ತೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನ್ಯಾಷನಲ್​ ರಿಮೋಟ್​ ಸೆನ್ಸಿಂಗ್​ ಏಜೆನ್ಸಿಯ ತಲಾ ಒಬ್ಬರು ಅಧಿಕಾರಿಗಳಿದ್ದಾರೆ.

ಇತ್ತೀಚಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​ ಕುಮಾರ್​ ಕೂಡ ಮಳೆ ಹಾನಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಕೃಷಿಕರ ಜೊತೆಗೆ ಮಾತುಕತೆ ನಡೆಸಿದ್ದರು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ತಕ್ಷಣಕ್ಕೆ 2,000 ಕೋಟಿ ರೂ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. (ಪಿಟಿಐ/ಐಎಎನ್​ಎಸ್​)

ಇದನ್ನೂ ಓದಿ: ಕೆಲಸ ಕಳೆದುಕೊಂಡವ ಈಗ 13,000 ಕೋಟಿ ರೂ.ಕಂಪನಿ ಒಡೆಯ - 3 ಲಕ್ಷ ಜನರ ಉದ್ಯೋಗದಾತ

ಹೈದರಾಬಾದ್​: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ಜನರ ನೆರವಿಗೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ​​ ಪವನ್​ ಕಲ್ಯಾಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಇಂದು ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.

ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ 6 ​​ಕೋಟಿ ರೂ. ನೀಡುತ್ತಿದ್ದೇನೆ. ಇದರಲ್ಲಿ ಆಂಧ್ರ, ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 1 ಕೋಟಿ ರೂಪಾಯಿ ಮತ್ತು ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಿಗೆ 4 ಕೋಟಿ ರೂ. ನೀಡುವುದಾಗಿ ಈ ಹಿಂದೆ ಪವನ್ ಘೋಷಿಸಿದ್ದರು.

ರಾಜ್ಯದ ಖಮ್ಮಂ, ಮೆಹಬೂಬ್​ ನಗರ, ಸೂರ್ಯಪೇಟ್​ ಮತ್ತು ಇತರೆ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 26 ಜನರು ಸಾವನ್ನಪ್ಪಿದ್ದು, ಅನೇಕರು ನಿರಾಶ್ರಿತರಾಗಿದ್ದರು. ಮನೆ, ಕೃಷಿ, ನೀರಾವರಿ ಟ್ಯಾಂಕ್​ ಮತ್ತು ವಿದ್ಯುತ್​ ಕಂಬಗಳು ಸೇರಿದಂತೆ ಅಪಾರ ಆಸ್ತಿ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 5,438 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರವಾಹ ಪರಿಶೀಲನೆಗೆ ಇಂದು ಕೇಂದ್ರ ತಂಡ: ತೆಲಂಗಾಣದಲ್ಲಿ ಹಾನಿ ಪರಿಶೀಲನೆಗೆ ಇಂದು ಆರು ಸದಸ್ಯರ ಕೇಂದ್ರ ತಂಡ ಆಗಮಿಸಲಿದೆ. ಕರ್ನಲ್​​ ಕೀರ್ತಿ ಪ್ರತಾಪ್​ ಸಿಂಗ್​ ನೇತೃತ್ವದ ಈ ತಂಡ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರನ್ನು ಭೇಟಿಯಾಗಲಿದೆ.

ಪ್ರವಾಹದಿಂದಾಗ ಹಾನಿ ಕುರಿತು ಮನದಟ್ಟು ಮಾಡುವ ಉದ್ದೇಶದಿಂದ ತೆಲಂಗಾಣ ಸರ್ಕಾರ ಫೋಟೋ ಎಕ್ಸಿಬಿಷನ್​ಗೆ ವ್ಯವಸ್ಥೆ ಮಾಡಿದ್ದು, ಇದನ್ನು ಕೇಂದ್ರ ತಂಡ ವೀಕ್ಷಿಸಲಿದೆ. ಬಳಿಕ ತಂಡ ಎರಡು ಗುಂಪಾಗಿ ವಿಂಗಡನೆಯಾಗಿ ಸೂರ್ಯಪೆಟ್​​, ಖಮ್ಮಂ, ಮೆಹಬೂಬ್​ನಗರ್​ ಮತ್ತು ಇತರೆ ಜಿಲ್ಲೆಗಳಿಗೆ ತೆರಳಿ ಹಾನಿಯ ಮೌಲ್ಯಮಾಪನ ಮಾಡಲಿದ್ದಾರೆ.

ಕೇಂದ್ರ ತಂಡದಲ್ಲಿ ಆರ್ಥಿಕ, ಕೃಷಿ, ರಸ್ತೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನ್ಯಾಷನಲ್​ ರಿಮೋಟ್​ ಸೆನ್ಸಿಂಗ್​ ಏಜೆನ್ಸಿಯ ತಲಾ ಒಬ್ಬರು ಅಧಿಕಾರಿಗಳಿದ್ದಾರೆ.

ಇತ್ತೀಚಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​ ಕುಮಾರ್​ ಕೂಡ ಮಳೆ ಹಾನಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಕೃಷಿಕರ ಜೊತೆಗೆ ಮಾತುಕತೆ ನಡೆಸಿದ್ದರು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ತಕ್ಷಣಕ್ಕೆ 2,000 ಕೋಟಿ ರೂ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. (ಪಿಟಿಐ/ಐಎಎನ್​ಎಸ್​)

ಇದನ್ನೂ ಓದಿ: ಕೆಲಸ ಕಳೆದುಕೊಂಡವ ಈಗ 13,000 ಕೋಟಿ ರೂ.ಕಂಪನಿ ಒಡೆಯ - 3 ಲಕ್ಷ ಜನರ ಉದ್ಯೋಗದಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.