ETV Bharat / bharat

ಹೇಮಾ ಕಮಿಟಿ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ ಎಸ್​ಐಟಿ: 10 ದಿನಗಳಲ್ಲಿ ಪ್ರಕ್ರಿಯೆ ಪೂರ್ಣ - Hema Committee Report

author img

By ETV Bharat Karnataka Team

Published : Sep 13, 2024, 2:24 PM IST

ಹೇಮಾ ಕಮಿಟಿ ವರದಿಯ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿರುವ ಎಸ್​ಐಟಿ ಮೊದಲ ಹಂತದಲ್ಲಿ 50 ಸಾಕ್ಷ್ಯಗಳನ್ನು ಭೇಟಿ ಮಾಡಲು ನಿರ್ಧರಿಸಿದೆ.

ಕೇರಳ ಹೈಕೋರ್ಟ್​
ಕೇರಳ ಹೈಕೋರ್ಟ್​ (IANS)

ಕೊಚ್ಚಿ: ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಮೂಡಿಸಿರುವ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿಯ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಮಿಟಿಯ ವರದಿಯ ಬಗ್ಗೆ ತನಿಖೆ ನಡೆಸಲು ಕೇರಳ ಹೈಕೋರ್ಟ್​ ನೇಮಿಸಿರುವ ವಿಶೇಷ ತನಿಖಾ ತಂಡವು (ಎಸ್​ಐಟಿ) ತನ್ನ ಕೆಲಸವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಕಮಿಟಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿರುವ 50 ಜನರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿದೆ.

ಕೇರಳ ಚಲನಚಿತ್ರ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ವ್ಯಾಪಕ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿಯು 2019ರಲ್ಲಿ ಸಿಎಂ ಪಿಣರಾಯಿ ವಿಜಯನ್ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಬಗ್ಗೆ ತನ್ನ ನೇರ ನಿಗಾದಲ್ಲಿ ತನಿಖೆ ನಡೆಸಲು ಕೇರಳ ಹೈಕೋರ್ಟ್​ ಎಸ್​ಐಟಿಯನ್ನು ರಚಿಸಿದೆ.

ಎಸ್ಐಟಿ ನಾಲ್ಕು ಮಹಿಳಾ ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದ್ದು, ಅವರನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ಹೇಮಾ ಸಮಿತಿಯ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ. ಈ ಪ್ರಕ್ರಿಯೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲು ಎಸ್ ಐಟಿ ಯೋಜಿಸಿದೆ. ಗುರುವಾರ ನ್ಯಾಯಾಲಯದ ವಿಶೇಷ ಪೀಠವು ಹೇಮಾ ಕಮಿಟಿಯ ವರದಿಯ ಸೆನ್ಸಾರ್ ಮಾಡದ ಆವೃತ್ತಿಯನ್ನು ಎಸ್ಐಟಿಗೆ ಹಸ್ತಾಂತರಿಸಿದೆ.

ಹೇಮಾ ಕಮಿಟಿ ವರದಿಯನ್ನು 5 ವರ್ಷಗಳ ಕಾಲ ಬಹಿರಂಗಪಡಿಸದೆ ಇಟ್ಟುಕೊಂಡಿದ್ದಕ್ಕಾಗಿ ಪಿಣರಾಯಿ ವಿಜಯನ್ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ. ಕೇರಳ ಹೈಕೋರ್ಟ್​ ವಿಶೇಷ ಪೀಠವು ಮಂಗಳವಾರ ಮೊದಲ ಬಾರಿಗೆ ಈ ಬಗ್ಗೆ ವಿಚಾರಣೆ ನಡೆಸಿ, ವಿಜಯನ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ವರದಿಯು 2020ರಲ್ಲಿಯೇ ಕೇರಳ ಪೊಲೀಸರ ಕೈಸೇರಿದ್ದರೂ ಒಂದೇ ಒಂದು ಎಫ್​ಐಆರ್​ ದಾಖಲಿಸದಿರುವ ಸರ್ಕಾರದ ನಿಷ್ಕ್ರಿಯತೆಯನ್ನು ಕೋರ್ಟ್​ ಎತ್ತಿ ತೋರಿಸಿತು.

ತಮ್ಮ ಮೇಲೆ ನಡೆದ ದೌರ್ಜನ್ಯಗಳನ್ನು ಮಾಜಿ ನಟಿಯರು ಮಾಧ್ಯಮಗಳಿಗೆ ಬಹಿರಂಗಪಡಿಸಿದ ನಂತರ ಚಲನಚಿತ್ರ ರಂಗದಲ್ಲಿನ ಹಲವಾರು ವ್ಯಕ್ತಿಗಳ ವಿರುದ್ಧ 11 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ.

ವರದಿಯಲ್ಲಿ ಬಹಿರಂಗವಾದ ಅಪರಾಧಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯವು ಎಸ್ಐಟಿಗೆ ಮುಕ್ತ ಅವಕಾಶ ನೀಡಿದೆ. ಸಂತ್ರಸ್ತೆ ಅಥವಾ ದೌರ್ಜನ್ಯಕ್ಕೆ ಬಲಿಯಾದವರು ವಿಚಾರಣೆಯನ್ನು ಮುಂದುವರಿಸಲು ಆಸಕ್ತಿ ವಹಿಸದಿದ್ದರೆ ಅಂಥ ಪ್ರಕರಣಗಳನ್ನು ಕೈಬಿಡಬಹುದು. ಆದರೆ ಕಿಂಚಿತ್ತಾದರೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ನಟ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಮಾಧವನ್, ನಿವಿನ್ ಪೌಲಿ, ಸಿದ್ದಿಕ್, ಜಯಸೂರ್ಯ, ಎಡವೇಲಾ ಬಾಬು, ಮಣಿಯನ್ ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ಪ್ರಕಾಶ್ ಮತ್ತು ಪ್ರೊಡಕ್ಷನ್ ಎಕ್ಸಿಕ್ಯೂಟಿವ್​ಗಳಾದ ವಿಚು ಮತ್ತು ನೋಬಲ್ ಅವರ ವಿರುದ್ಧ ದೌರ್ಜನ್ಯದ ಆರೋಪಗಳು ಕೇಳಿಬಂದಿವೆ. ಮುಕೇಶ್, ರಂಜಿತ್ ಮತ್ತು ರಾಜು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಮೀಸಲಾತಿ ಬಗೆಗಿನ ಹೇಳಿಕೆಯ ಗೊಂದಲವನ್ನು ರಾಹುಲ್ ಗಾಂಧಿ ಮೊದಲು ನಿವಾರಿಸಲಿ: ಪ್ರಶಾಂತ್ ಕಿಶೋರ್ - Rahul Gandhi on Reservations

ಕೊಚ್ಚಿ: ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಮೂಡಿಸಿರುವ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿಯ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಮಿಟಿಯ ವರದಿಯ ಬಗ್ಗೆ ತನಿಖೆ ನಡೆಸಲು ಕೇರಳ ಹೈಕೋರ್ಟ್​ ನೇಮಿಸಿರುವ ವಿಶೇಷ ತನಿಖಾ ತಂಡವು (ಎಸ್​ಐಟಿ) ತನ್ನ ಕೆಲಸವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಕಮಿಟಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿರುವ 50 ಜನರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿದೆ.

ಕೇರಳ ಚಲನಚಿತ್ರ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ವ್ಯಾಪಕ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿಯು 2019ರಲ್ಲಿ ಸಿಎಂ ಪಿಣರಾಯಿ ವಿಜಯನ್ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಬಗ್ಗೆ ತನ್ನ ನೇರ ನಿಗಾದಲ್ಲಿ ತನಿಖೆ ನಡೆಸಲು ಕೇರಳ ಹೈಕೋರ್ಟ್​ ಎಸ್​ಐಟಿಯನ್ನು ರಚಿಸಿದೆ.

ಎಸ್ಐಟಿ ನಾಲ್ಕು ಮಹಿಳಾ ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದ್ದು, ಅವರನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ಹೇಮಾ ಸಮಿತಿಯ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ. ಈ ಪ್ರಕ್ರಿಯೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲು ಎಸ್ ಐಟಿ ಯೋಜಿಸಿದೆ. ಗುರುವಾರ ನ್ಯಾಯಾಲಯದ ವಿಶೇಷ ಪೀಠವು ಹೇಮಾ ಕಮಿಟಿಯ ವರದಿಯ ಸೆನ್ಸಾರ್ ಮಾಡದ ಆವೃತ್ತಿಯನ್ನು ಎಸ್ಐಟಿಗೆ ಹಸ್ತಾಂತರಿಸಿದೆ.

ಹೇಮಾ ಕಮಿಟಿ ವರದಿಯನ್ನು 5 ವರ್ಷಗಳ ಕಾಲ ಬಹಿರಂಗಪಡಿಸದೆ ಇಟ್ಟುಕೊಂಡಿದ್ದಕ್ಕಾಗಿ ಪಿಣರಾಯಿ ವಿಜಯನ್ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ. ಕೇರಳ ಹೈಕೋರ್ಟ್​ ವಿಶೇಷ ಪೀಠವು ಮಂಗಳವಾರ ಮೊದಲ ಬಾರಿಗೆ ಈ ಬಗ್ಗೆ ವಿಚಾರಣೆ ನಡೆಸಿ, ವಿಜಯನ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ವರದಿಯು 2020ರಲ್ಲಿಯೇ ಕೇರಳ ಪೊಲೀಸರ ಕೈಸೇರಿದ್ದರೂ ಒಂದೇ ಒಂದು ಎಫ್​ಐಆರ್​ ದಾಖಲಿಸದಿರುವ ಸರ್ಕಾರದ ನಿಷ್ಕ್ರಿಯತೆಯನ್ನು ಕೋರ್ಟ್​ ಎತ್ತಿ ತೋರಿಸಿತು.

ತಮ್ಮ ಮೇಲೆ ನಡೆದ ದೌರ್ಜನ್ಯಗಳನ್ನು ಮಾಜಿ ನಟಿಯರು ಮಾಧ್ಯಮಗಳಿಗೆ ಬಹಿರಂಗಪಡಿಸಿದ ನಂತರ ಚಲನಚಿತ್ರ ರಂಗದಲ್ಲಿನ ಹಲವಾರು ವ್ಯಕ್ತಿಗಳ ವಿರುದ್ಧ 11 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ.

ವರದಿಯಲ್ಲಿ ಬಹಿರಂಗವಾದ ಅಪರಾಧಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯವು ಎಸ್ಐಟಿಗೆ ಮುಕ್ತ ಅವಕಾಶ ನೀಡಿದೆ. ಸಂತ್ರಸ್ತೆ ಅಥವಾ ದೌರ್ಜನ್ಯಕ್ಕೆ ಬಲಿಯಾದವರು ವಿಚಾರಣೆಯನ್ನು ಮುಂದುವರಿಸಲು ಆಸಕ್ತಿ ವಹಿಸದಿದ್ದರೆ ಅಂಥ ಪ್ರಕರಣಗಳನ್ನು ಕೈಬಿಡಬಹುದು. ಆದರೆ ಕಿಂಚಿತ್ತಾದರೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ನಟ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಮಾಧವನ್, ನಿವಿನ್ ಪೌಲಿ, ಸಿದ್ದಿಕ್, ಜಯಸೂರ್ಯ, ಎಡವೇಲಾ ಬಾಬು, ಮಣಿಯನ್ ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ಪ್ರಕಾಶ್ ಮತ್ತು ಪ್ರೊಡಕ್ಷನ್ ಎಕ್ಸಿಕ್ಯೂಟಿವ್​ಗಳಾದ ವಿಚು ಮತ್ತು ನೋಬಲ್ ಅವರ ವಿರುದ್ಧ ದೌರ್ಜನ್ಯದ ಆರೋಪಗಳು ಕೇಳಿಬಂದಿವೆ. ಮುಕೇಶ್, ರಂಜಿತ್ ಮತ್ತು ರಾಜು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಮೀಸಲಾತಿ ಬಗೆಗಿನ ಹೇಳಿಕೆಯ ಗೊಂದಲವನ್ನು ರಾಹುಲ್ ಗಾಂಧಿ ಮೊದಲು ನಿವಾರಿಸಲಿ: ಪ್ರಶಾಂತ್ ಕಿಶೋರ್ - Rahul Gandhi on Reservations

ETV Bharat Logo

Copyright © 2024 Ushodaya Enterprises Pvt. Ltd., All Rights Reserved.