ETV Bharat / bharat

'ಅಜಿತ್​ ಪವಾರ್​ ಬಣ ನಿಜವಾದ ಎನ್​ಸಿಪಿ': ಇಸಿ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋದ ಶರದ್​ ಪವಾರ್​

author img

By ETV Bharat Karnataka Team

Published : Feb 13, 2024, 3:28 PM IST

ಅಜಿತ್​ ಪವಾರ್​ ಬಣಕ್ಕೆ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ, ಎನ್​ಸಿಪಿ ಸಂಸ್ಥಾಪಕ ಶರದ್​ ಪವಾರ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

Sharad Pawar
ಶರದ್​ ಪವಾರ್​

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಅವರ ಬಣವೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ (ಎನ್​ಸಿಪಿ) ಎಂದು ಅಧಿಕೃತವಾಗಿ ಗುರುತಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಶರದ್​ ಪವಾರ್​ ಬಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

ಫೆಬ್ರವರಿ 6ರಂದು ಚುನಾವಣಾ ಆಯೋಗವು ಅಜಿತ್​ ಪವಾರ್​ ನೇತೃತ್ವದ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷವೆಂದು ಘೋಷಿಸಿತ್ತು. ಅಲ್ಲದೆ ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ' ವನ್ನೂ ನೀಡಿತ್ತು. ಇದರಿಂದ ಪಕ್ಷದ ಸಂಸ್ಥಾಪಕ ಶರದ್​ ಪವಾರ್​ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಇದೀಗ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ, ಶರದ್​ ಪವಾರ್​ ಬಣ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗುವುದಾಗಿ ಶರದ್​ ಪವಾರ್​ ಬಣ ಕಳೆದ ವಾರವೇ ಹೇಳಿತ್ತು.

ಸೋಮವಾರ ಸಂಜೆ ವಕೀಲ ಅಭಿಷೇಕ್​ ಜೆಬರಾಜ್​ ಅವರ ಮೂಲಕ ಹಿರಿಯ ನಾಯಕ ಶರದ್​ ಪವಾರ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿರುವ ಅಜಿತ್​ ಪವಾರ್​ ಅವರ ಬಣ, ವಕೀಲ ಅಬಿಕಲ್ಪ್​ ಪ್ರತಾಪ್​ ಸಿಂಗ್​ ಅವರ ಮೂಲಕ ಕೇವಿಯಟ್​ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರದ ಸಂಬಂಧ ಶರದ್​ ಪವಾರ್​ ಅವರ ಬಣ ಯಾವುದೇ ಅರ್ಜಿ ಸಲ್ಲಿಸಿದರೂ, ಆ ಅರ್ಜಿಯ ವಿಚಾರಣೆಗೂ ಮುನ್ನ ನಮ್ಮ ವಾದವನ್ನು ಆಲಿಸಬೇಕು ಎಂದು ಕೇವಿಯಟ್​ನಲ್ಲಿ ಕೋರಿದೆ.

ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಶರದ್​ ಪವಾರ್​ ಗುಂಪಿಗೆ, ಮೂರು ಹೆಸರುಗಳನ್ನು ಸೂಚಿಸುವಂತೆ ಫೆಬ್ರವರಿ 7 ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಿತ್ತು. ನಂತರ ಕಳೆದ ವಾರ ಶರದ್​ ಪವಾರ್​ ನೇತೃತ್ವದ ಎನ್​ಸಿಪಿ ಬಣಕ್ಕೆ 'ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಶರದ್​​ಚಂದ್ರ ಪವಾರ್' ಎಂದು ಹೊಸ ಹೆಸರನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿತ್ತು.

ಕಳೆದ ವರ್ಷ ಜುಲೈನಲ್ಲಿ ಎನ್​ಸಿಪಿ ಎರಡು ಭಾಗವಾಗಿ, ಅಜಿತ್​ ಪವಾರ್​ ನೇತೃತ್ವದಲ್ಲಿ ಬಹುತೇಕ ಶಾಸಕರು ಏಕನಾಥ ಶಿಂಧೆ ನೇತೃತ್ವದ ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಅಜಿತ್​ ಪವಾರ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಹುಪಾಲು ಎನ್​ಸಿಪಿ ಶಾಸಕರೊಂದಿಗೆ ವಿಧಾನಸಭೆಯಿಂದ ಹೊರನಡೆದಿದ್ದ ಅಜಿತ್​ ನೇತೃತ್ವದ ಗುಂಪಿಗೆ ಚುನಾವಣಾ ಆಯೋಗ​ ಪಕ್ಷದ ಹೆಸರು ಹಾಗೂ ಗೋಡೆ ಗಡಿಯಾರದ ಚಿಹ್ನೆಯನ್ನು ನೀಡಿದೆ.

ಇದನ್ನೂ ಓದಿ: ಅಜಿತ್ ಪವಾರ್​ ಬಣವೇ ನಿಜವಾದ ಎನ್​ಸಿಪಿ-ಚುನಾವಣಾ ಆಯೋಗ; ಶರದ್​ ಪವಾರ್‌ಗೆ ಹಿನ್ನಡೆ

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಅವರ ಬಣವೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ (ಎನ್​ಸಿಪಿ) ಎಂದು ಅಧಿಕೃತವಾಗಿ ಗುರುತಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಶರದ್​ ಪವಾರ್​ ಬಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

ಫೆಬ್ರವರಿ 6ರಂದು ಚುನಾವಣಾ ಆಯೋಗವು ಅಜಿತ್​ ಪವಾರ್​ ನೇತೃತ್ವದ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷವೆಂದು ಘೋಷಿಸಿತ್ತು. ಅಲ್ಲದೆ ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ' ವನ್ನೂ ನೀಡಿತ್ತು. ಇದರಿಂದ ಪಕ್ಷದ ಸಂಸ್ಥಾಪಕ ಶರದ್​ ಪವಾರ್​ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಇದೀಗ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ, ಶರದ್​ ಪವಾರ್​ ಬಣ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗುವುದಾಗಿ ಶರದ್​ ಪವಾರ್​ ಬಣ ಕಳೆದ ವಾರವೇ ಹೇಳಿತ್ತು.

ಸೋಮವಾರ ಸಂಜೆ ವಕೀಲ ಅಭಿಷೇಕ್​ ಜೆಬರಾಜ್​ ಅವರ ಮೂಲಕ ಹಿರಿಯ ನಾಯಕ ಶರದ್​ ಪವಾರ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿರುವ ಅಜಿತ್​ ಪವಾರ್​ ಅವರ ಬಣ, ವಕೀಲ ಅಬಿಕಲ್ಪ್​ ಪ್ರತಾಪ್​ ಸಿಂಗ್​ ಅವರ ಮೂಲಕ ಕೇವಿಯಟ್​ ಸಲ್ಲಿಸಿದೆ. ಚುನಾವಣಾ ಆಯೋಗದ ನಿರ್ಧಾರದ ಸಂಬಂಧ ಶರದ್​ ಪವಾರ್​ ಅವರ ಬಣ ಯಾವುದೇ ಅರ್ಜಿ ಸಲ್ಲಿಸಿದರೂ, ಆ ಅರ್ಜಿಯ ವಿಚಾರಣೆಗೂ ಮುನ್ನ ನಮ್ಮ ವಾದವನ್ನು ಆಲಿಸಬೇಕು ಎಂದು ಕೇವಿಯಟ್​ನಲ್ಲಿ ಕೋರಿದೆ.

ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಶರದ್​ ಪವಾರ್​ ಗುಂಪಿಗೆ, ಮೂರು ಹೆಸರುಗಳನ್ನು ಸೂಚಿಸುವಂತೆ ಫೆಬ್ರವರಿ 7 ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಿತ್ತು. ನಂತರ ಕಳೆದ ವಾರ ಶರದ್​ ಪವಾರ್​ ನೇತೃತ್ವದ ಎನ್​ಸಿಪಿ ಬಣಕ್ಕೆ 'ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಶರದ್​​ಚಂದ್ರ ಪವಾರ್' ಎಂದು ಹೊಸ ಹೆಸರನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿತ್ತು.

ಕಳೆದ ವರ್ಷ ಜುಲೈನಲ್ಲಿ ಎನ್​ಸಿಪಿ ಎರಡು ಭಾಗವಾಗಿ, ಅಜಿತ್​ ಪವಾರ್​ ನೇತೃತ್ವದಲ್ಲಿ ಬಹುತೇಕ ಶಾಸಕರು ಏಕನಾಥ ಶಿಂಧೆ ನೇತೃತ್ವದ ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಅಜಿತ್​ ಪವಾರ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಹುಪಾಲು ಎನ್​ಸಿಪಿ ಶಾಸಕರೊಂದಿಗೆ ವಿಧಾನಸಭೆಯಿಂದ ಹೊರನಡೆದಿದ್ದ ಅಜಿತ್​ ನೇತೃತ್ವದ ಗುಂಪಿಗೆ ಚುನಾವಣಾ ಆಯೋಗ​ ಪಕ್ಷದ ಹೆಸರು ಹಾಗೂ ಗೋಡೆ ಗಡಿಯಾರದ ಚಿಹ್ನೆಯನ್ನು ನೀಡಿದೆ.

ಇದನ್ನೂ ಓದಿ: ಅಜಿತ್ ಪವಾರ್​ ಬಣವೇ ನಿಜವಾದ ಎನ್​ಸಿಪಿ-ಚುನಾವಣಾ ಆಯೋಗ; ಶರದ್​ ಪವಾರ್‌ಗೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.