ETV Bharat / bharat

ಶಿವಸೇನೆ ಬಿಕ್ಕಟ್ಟು: ಸಿಎಂ ಏಕನಾಥ್​ ಶಿಂಧೆ ಬಣಕ್ಕೆ ನೋಟಿಸ್​ ನೀಡಿದ ಸುಪ್ರೀಂಕೋರ್ಟ್​ - UBT led Shiv Senas

ಶಿವಸೇನೆ ಪಕ್ಷದ ಬಿಕ್ಕಟ್ಟು ಈಗ ಸುಪ್ರೀಂನಲ್ಲಿದ್ದು, ಠಾಕ್ರೆ ಬಣದ ತಕರಾರನ್ನು ಕೋರ್ಟ್​ ಸ್ವೀಕರಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಶಿಂಧೆ ಬಣಕ್ಕೆ ನೋಟಿಸ್​ ನೀಡಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
author img

By ETV Bharat Karnataka Team

Published : Jan 22, 2024, 8:02 PM IST

ನವದೆಹಲಿ: ಇಬ್ಭಾಗವಾಗಿರುವ ಶಿವಸೇನೆ ಪಕ್ಷ ಯಾರಿಗೆ ಸೇರಬೇಕು ಎಂಬ ವಿವಾದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಸ್ಪೀಕರ್ ರಾಹುಲ್​ ನಾರ್ವೇಕರ್​ ನೀಡಿದ ತೀರ್ಪಿನ ವಿರುದ್ಧ ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣ ತಕರಾರು ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣಕ್ಕೆ ಸುಪ್ರೀಂಕೋರ್ಟ್​ ಸೋಮವಾರ ನೋಟಿಸ್​ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಠಾಕ್ರೆ ಬಣದ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ಅವರು ಠಾಕ್ರೆ ಬಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಇಂದಿನ ವಾದ ಹೀಗಿತ್ತು?: ಸಂವಿಧಾನದ 226 ನೇ ವಿಧಿಯ ಅಡಿ ಸುಪ್ರೀಂಕೋರ್ಟ್​ಗೆ ನ್ಯಾಯ ಕೋರಬಹುದೇ ಅಥವಾ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬೇಕೆ?. ಹಾಗೊಂದು ವೇಳೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರೆ, ವಿಚಾರಣೆಯು ಇನ್ನಷ್ಟು ವಿಳಂಬವಾಗಿ ಮತ್ತೆ ಸುಪ್ರೀಂಕೋರ್ಟ್​ಗೆ ಬರಲಿದೆ ಎಂದು ಕಪಿಲ್​ ಸಿಬಲ್​ ವಾದಿಸಿದರು. ಸ್ಪೀಕರ್ ನಿರ್ಧಾರವು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಸಿಬಲ್ ವಾದವನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಶಿಂಧೆ ಮತ್ತು ಇತರ ಶಾಸಕರಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಲು ಒಪ್ಪಿಕೊಂಡಿತು.

ಪಕ್ಷದ ವಿರುದ್ಧ ಬಂಡೆದ್ದ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಹತ್ತನೇ ಶೆಡ್ಯೂಲ್​ನಲ್ಲಿದೆ. ಕೆಲ ಶಾಸಕರನ್ನೇ ಒಂದು ರಾಜಕೀಯ ಪಕ್ಷ ಎಂದು ಪರಿಗಣಿಸಿದರೆ, ನಿಜವಾದ ರಾಜಕೀಯ ಪಕ್ಷದ ಬಹುಪಾಲು ಶಾಸಕರ ಇಚ್ಛೆಗೆ ವಿರುದ್ಧವಾಗಿರುತ್ತದೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ನೀತಿಯ ವಿರುದ್ಧವಾಗಿದೆ ಎಂದು ಠಾಕ್ರೆ ಬಣ ಮನವಿಯಲ್ಲಿ ಹೇಳಿದೆ.

ಬಂಡೆದ್ದ ಶಾಸಕರ ಪರವಾಗಿ ಸ್ಪೀಕರ್ ತೀರ್ಪು ನೀಡಿದ್ದಾರೆ. ಶಾಸಕಾಂಗ ಪಕ್ಷವನ್ನು ರಾಜಕೀಯ ಪಕ್ಷದೊಂದಿಗೆ ಸಮೀಕರಿಸಿದ್ದಾರೆ. ಇದು ಸುಭಾಷ್ ದೇಸಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನಿನ ವಿರುದ್ಧವಾಗಿದೆ. ಶಾಸಕಾಂಗ ಪಕ್ಷವು ಕಾನೂನು ಘಟಕವಲ್ಲ ಎಂದು ಅರ್ಜಿಯಲ್ಲಿ ವಾದಿಸಿದೆ.

ಸ್ಪೀಕರ್ ನಿರ್ಧಾರವು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿವೆ. ಇದು ಪಕ್ಷಾಂತರವನ್ನು ಅಡೆತಡೆಯಿಲ್ಲದೇ ಮಾಡಲು ಅವಕಾಶ ನೀಡುತ್ತದೆ. ಬಹುಪಾಲು ಶಾಸಕರು ಬಂಡೆದ್ದು ಗುಂಪು ಕಟ್ಟಿಕೊಂಡು ಪಕ್ಷವೇ ತಮ್ಮದು ಎಂದು ಹೇಳುವ ಪರಿಪಾಠ ಬೆಳೆಯಲಿದೆ. ಪಕ್ಷಾಂತರ ಮಾಡಿದ ಶಾಸಕರನ್ನು ಶಿಕ್ಷಿಸುವ ಬದಲು, ಇಂತಹ ತೀರ್ಪು ನೀಡಿದರೆ ಪಕ್ಷಾಂತರಿಗಳಿಗೆ ಇನ್ನಷ್ಟು ಅವಕಾಶಗಳು ನೀಡಿದಂತಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಸ್ಪೀಕರ್​ ತೀರ್ಪೇನು?: ಏಕನಾಥ್​ ಶಿಂಧೆ ನೇತೃತ್ವದ ಬಣ ಶಿವಸೇನೆಯ ನಿಜವಾದ ಗುಂಪಾಗಿದೆ. ಉದ್ಧವ್​ ಠಾಕ್ರೆ ಅವರ ಬಣವು ಸಂಖ್ಯೆಯಲ್ಲಿ ಹಿಂದಿದೆ. ಬಹುಪಾಲು ಶಾಸಕರು ಶಿಂಧೆ ಬಣದಲ್ಲಿದ್ದಾರೆ. ಹೀಗಾಗಿ ಪಕ್ಷದ ನಿಜವಾದ ವಾರಸುದಾರರು ಶಿಂಧೆ ಬಣ ಎಂದು ಸ್ಪೀಕರ್ ರಾಹುಲ್​ ನಾರ್ವೇಕರ್​ ಜನವರಿ 10 ರಂದು ತೀರ್ಪು ನೀಡಿದ್ದರು. ಇದರ ವಿರುದ್ಧ ಠಾಕ್ರೆ ಬಣ ಸುಪ್ರೀಂ ಮೆಟ್ಟಿಲೇರಿದೆ.

ಇದನ್ನೂ ಓದಿ: ಶಿವಸೈನಿಕರ ಕಾದಾಟ: ಸ್ಪೀಕರ್​ಗೆ ಬಾಂಬೆ ಹೈಕೋರ್ಟ್​ ನೋಟಿಸ್ - ಜ.22ಕ್ಕೆ ಸುಪ್ರೀಂನಲ್ಲಿ ಠಾಕ್ರೆ ಬಣದ ಅರ್ಜಿ ವಿಚಾರಣೆ

ನವದೆಹಲಿ: ಇಬ್ಭಾಗವಾಗಿರುವ ಶಿವಸೇನೆ ಪಕ್ಷ ಯಾರಿಗೆ ಸೇರಬೇಕು ಎಂಬ ವಿವಾದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಸ್ಪೀಕರ್ ರಾಹುಲ್​ ನಾರ್ವೇಕರ್​ ನೀಡಿದ ತೀರ್ಪಿನ ವಿರುದ್ಧ ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣ ತಕರಾರು ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣಕ್ಕೆ ಸುಪ್ರೀಂಕೋರ್ಟ್​ ಸೋಮವಾರ ನೋಟಿಸ್​ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಠಾಕ್ರೆ ಬಣದ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ಅವರು ಠಾಕ್ರೆ ಬಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಇಂದಿನ ವಾದ ಹೀಗಿತ್ತು?: ಸಂವಿಧಾನದ 226 ನೇ ವಿಧಿಯ ಅಡಿ ಸುಪ್ರೀಂಕೋರ್ಟ್​ಗೆ ನ್ಯಾಯ ಕೋರಬಹುದೇ ಅಥವಾ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬೇಕೆ?. ಹಾಗೊಂದು ವೇಳೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರೆ, ವಿಚಾರಣೆಯು ಇನ್ನಷ್ಟು ವಿಳಂಬವಾಗಿ ಮತ್ತೆ ಸುಪ್ರೀಂಕೋರ್ಟ್​ಗೆ ಬರಲಿದೆ ಎಂದು ಕಪಿಲ್​ ಸಿಬಲ್​ ವಾದಿಸಿದರು. ಸ್ಪೀಕರ್ ನಿರ್ಧಾರವು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಸಿಬಲ್ ವಾದವನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಶಿಂಧೆ ಮತ್ತು ಇತರ ಶಾಸಕರಿಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಲು ಒಪ್ಪಿಕೊಂಡಿತು.

ಪಕ್ಷದ ವಿರುದ್ಧ ಬಂಡೆದ್ದ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಹತ್ತನೇ ಶೆಡ್ಯೂಲ್​ನಲ್ಲಿದೆ. ಕೆಲ ಶಾಸಕರನ್ನೇ ಒಂದು ರಾಜಕೀಯ ಪಕ್ಷ ಎಂದು ಪರಿಗಣಿಸಿದರೆ, ನಿಜವಾದ ರಾಜಕೀಯ ಪಕ್ಷದ ಬಹುಪಾಲು ಶಾಸಕರ ಇಚ್ಛೆಗೆ ವಿರುದ್ಧವಾಗಿರುತ್ತದೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ನೀತಿಯ ವಿರುದ್ಧವಾಗಿದೆ ಎಂದು ಠಾಕ್ರೆ ಬಣ ಮನವಿಯಲ್ಲಿ ಹೇಳಿದೆ.

ಬಂಡೆದ್ದ ಶಾಸಕರ ಪರವಾಗಿ ಸ್ಪೀಕರ್ ತೀರ್ಪು ನೀಡಿದ್ದಾರೆ. ಶಾಸಕಾಂಗ ಪಕ್ಷವನ್ನು ರಾಜಕೀಯ ಪಕ್ಷದೊಂದಿಗೆ ಸಮೀಕರಿಸಿದ್ದಾರೆ. ಇದು ಸುಭಾಷ್ ದೇಸಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನಿನ ವಿರುದ್ಧವಾಗಿದೆ. ಶಾಸಕಾಂಗ ಪಕ್ಷವು ಕಾನೂನು ಘಟಕವಲ್ಲ ಎಂದು ಅರ್ಜಿಯಲ್ಲಿ ವಾದಿಸಿದೆ.

ಸ್ಪೀಕರ್ ನಿರ್ಧಾರವು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿವೆ. ಇದು ಪಕ್ಷಾಂತರವನ್ನು ಅಡೆತಡೆಯಿಲ್ಲದೇ ಮಾಡಲು ಅವಕಾಶ ನೀಡುತ್ತದೆ. ಬಹುಪಾಲು ಶಾಸಕರು ಬಂಡೆದ್ದು ಗುಂಪು ಕಟ್ಟಿಕೊಂಡು ಪಕ್ಷವೇ ತಮ್ಮದು ಎಂದು ಹೇಳುವ ಪರಿಪಾಠ ಬೆಳೆಯಲಿದೆ. ಪಕ್ಷಾಂತರ ಮಾಡಿದ ಶಾಸಕರನ್ನು ಶಿಕ್ಷಿಸುವ ಬದಲು, ಇಂತಹ ತೀರ್ಪು ನೀಡಿದರೆ ಪಕ್ಷಾಂತರಿಗಳಿಗೆ ಇನ್ನಷ್ಟು ಅವಕಾಶಗಳು ನೀಡಿದಂತಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಸ್ಪೀಕರ್​ ತೀರ್ಪೇನು?: ಏಕನಾಥ್​ ಶಿಂಧೆ ನೇತೃತ್ವದ ಬಣ ಶಿವಸೇನೆಯ ನಿಜವಾದ ಗುಂಪಾಗಿದೆ. ಉದ್ಧವ್​ ಠಾಕ್ರೆ ಅವರ ಬಣವು ಸಂಖ್ಯೆಯಲ್ಲಿ ಹಿಂದಿದೆ. ಬಹುಪಾಲು ಶಾಸಕರು ಶಿಂಧೆ ಬಣದಲ್ಲಿದ್ದಾರೆ. ಹೀಗಾಗಿ ಪಕ್ಷದ ನಿಜವಾದ ವಾರಸುದಾರರು ಶಿಂಧೆ ಬಣ ಎಂದು ಸ್ಪೀಕರ್ ರಾಹುಲ್​ ನಾರ್ವೇಕರ್​ ಜನವರಿ 10 ರಂದು ತೀರ್ಪು ನೀಡಿದ್ದರು. ಇದರ ವಿರುದ್ಧ ಠಾಕ್ರೆ ಬಣ ಸುಪ್ರೀಂ ಮೆಟ್ಟಿಲೇರಿದೆ.

ಇದನ್ನೂ ಓದಿ: ಶಿವಸೈನಿಕರ ಕಾದಾಟ: ಸ್ಪೀಕರ್​ಗೆ ಬಾಂಬೆ ಹೈಕೋರ್ಟ್​ ನೋಟಿಸ್ - ಜ.22ಕ್ಕೆ ಸುಪ್ರೀಂನಲ್ಲಿ ಠಾಕ್ರೆ ಬಣದ ಅರ್ಜಿ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.