ETV Bharat / bharat

ಪಂಜಾಬ್ ಬಿಜೆಪಿ​​ ಅಧ್ಯಕ್ಷ ಸ್ಥಾನಕ್ಕೆ ಸುನಿಲ್ ಜಾಖರ್ ರಾಜೀನಾಮೆ - Sunil Jakhar

author img

By ETV Bharat Karnataka Team

Published : 3 hours ago

ರಾಜ್ಯ ಬಿಜೆಪಿ ನಾಯಕರೊಂದಿಗೆ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ಸುನಿಲ್ ಜಾಖರ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Punjab BJP President Sunil Jakhar Resigned his post
ಸುನಿಲ್​ ಜಾಖರ್​​ (ANI)

ಚಂಡೀಗಢ: ಪಂಚಾಯತ್​ ಚುನಾವಣೆಯ ಹೊತ್ತಿನಲ್ಲಿ ಪಂಜಾಬ್​ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುನಿಲ್​ ಜಾಖರ್​ ರಾಜೀನಾಮೆ ನೀಡಿದ್ದಾರೆ. ಆದರೆ, ಹೈಕಮಾಂಡ್​ ಇನ್ನೂ ಅವರ ರಾಜೀನಾಮೆ ಅಂಗೀಕರಿಸಿಲ್ಲ.

ನಾಯಕತ್ವದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದ ಅವರು ರಾಜ್ಯ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆ ಮತ್ತು ಪ್ರಮುಖ ಸಭೆಗಳಿಗೆ ಜಾಖರ್​ ಗೈರಾಗಿದ್ದರು. ಈ ಬೆಳವಣಿಗೆ ಅವರು ಹುದ್ದೆ ತೊರೆಯುವ ಮುನ್ಸೂಚನೆ ನೀಡಿತ್ತು.

ಗುರುವಾರ ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೂ ಜಾಖರ್​ ಗೈರಾಗಿದ್ದರು. ಸೆಪ್ಟಂಬರ್​ 3ರಂದು ಕಡೇಯದಾಗಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಲೂಧಿಯಾನ ಬಿಜೆಪಿ ನಾಯಕ ರಣವೀತ್​ ಬಿಟ್ಟು ಅವರಿಗೆ ನೀಡುತ್ತಿರುವ ಪ್ರಾಮುಖ್ಯತೆ ಜಾಖರ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ಕಳೆದ ಜುಲೈನಿಂದಲೇ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ.

ಈ ನಡುವೆ ಡಿಸೆಂಬರ್​ನಲ್ಲಿ ನಡೆಯಲಿರುವ ಚುನಾವಣೆಯವರೆಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಜಾಖರ್​ಗೆ ಬಿಜೆಪಿ ಸಲಹೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುನಿಲ್​ ಜಾಖರ್​ ಅವರ ತಂದೆ ಬಲ್ರಾಮ್​ ಜಾಖರ್​ ಕಾಂಗ್ರೆಸ್​ ನಾಯಕರಾಗಿದ್ದರು. ಲೋಕಸಭಾ ಸ್ಪೀಕರ್​ ಮತ್ತು ಮಧ್ಯ ಪ್ರದೇಶ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಲೋಕಸಭೆಯಲ್ಲಿ ದೀರ್ಘಾವಧಿ ಸ್ಪೀಕರ್​ ಆಗಿ ಕಾರ್ಯ ನಿರ್ವಹಿಸಿದ ಕೀರ್ತಿಯೂ ಇವರಿಗಿದೆ.

ಸುನಿಲ್​ ಜಾಖರ್​ 2022ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಟಿಕೆಟ್​​ ಪಡೆದು ಅದೊಹರ್​ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಗುರುದಾಸ್​ಪುರ್​ ಉಪಚುನಾವಣೆಯಲ್ಲಿ ಗೆದ್ದು 2022ರಲ್ಲಿ ಸಂಸತ್​​ ಪ್ರವೇಶಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಕಾಂಗ್ರೆಸ್​ ಹೈಕಮಾಂಡ್​ನಿಂದ ನೋಟಿಸ್​ ಪಡೆದ ಅವರು ಅದೇ ವರ್ಷ ಕಾಂಗ್ರೆಸ್​​ಗೆ ವಿದಾಯ ಹೇಳಿದ್ದರು. 2022ರಲ್ಲಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಸೇರಿದ ಅವರು, 2024 ಜುಲೈ 4ರಂದು ಪಂಜಾಬ್​ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: ಸಂಸದೀಯ ಸ್ಥಾಯಿ ಸಮಿತಿಗಳ ರಚನೆ: ರಕ್ಷಣಾ ಸಮಿತಿಯಲ್ಲಿ ರಾಹುಲ್​ ಗಾಂಧಿ

ಚಂಡೀಗಢ: ಪಂಚಾಯತ್​ ಚುನಾವಣೆಯ ಹೊತ್ತಿನಲ್ಲಿ ಪಂಜಾಬ್​ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುನಿಲ್​ ಜಾಖರ್​ ರಾಜೀನಾಮೆ ನೀಡಿದ್ದಾರೆ. ಆದರೆ, ಹೈಕಮಾಂಡ್​ ಇನ್ನೂ ಅವರ ರಾಜೀನಾಮೆ ಅಂಗೀಕರಿಸಿಲ್ಲ.

ನಾಯಕತ್ವದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದ ಅವರು ರಾಜ್ಯ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆ ಮತ್ತು ಪ್ರಮುಖ ಸಭೆಗಳಿಗೆ ಜಾಖರ್​ ಗೈರಾಗಿದ್ದರು. ಈ ಬೆಳವಣಿಗೆ ಅವರು ಹುದ್ದೆ ತೊರೆಯುವ ಮುನ್ಸೂಚನೆ ನೀಡಿತ್ತು.

ಗುರುವಾರ ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೂ ಜಾಖರ್​ ಗೈರಾಗಿದ್ದರು. ಸೆಪ್ಟಂಬರ್​ 3ರಂದು ಕಡೇಯದಾಗಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಲೂಧಿಯಾನ ಬಿಜೆಪಿ ನಾಯಕ ರಣವೀತ್​ ಬಿಟ್ಟು ಅವರಿಗೆ ನೀಡುತ್ತಿರುವ ಪ್ರಾಮುಖ್ಯತೆ ಜಾಖರ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ಕಳೆದ ಜುಲೈನಿಂದಲೇ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ.

ಈ ನಡುವೆ ಡಿಸೆಂಬರ್​ನಲ್ಲಿ ನಡೆಯಲಿರುವ ಚುನಾವಣೆಯವರೆಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಜಾಖರ್​ಗೆ ಬಿಜೆಪಿ ಸಲಹೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುನಿಲ್​ ಜಾಖರ್​ ಅವರ ತಂದೆ ಬಲ್ರಾಮ್​ ಜಾಖರ್​ ಕಾಂಗ್ರೆಸ್​ ನಾಯಕರಾಗಿದ್ದರು. ಲೋಕಸಭಾ ಸ್ಪೀಕರ್​ ಮತ್ತು ಮಧ್ಯ ಪ್ರದೇಶ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಲೋಕಸಭೆಯಲ್ಲಿ ದೀರ್ಘಾವಧಿ ಸ್ಪೀಕರ್​ ಆಗಿ ಕಾರ್ಯ ನಿರ್ವಹಿಸಿದ ಕೀರ್ತಿಯೂ ಇವರಿಗಿದೆ.

ಸುನಿಲ್​ ಜಾಖರ್​ 2022ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಟಿಕೆಟ್​​ ಪಡೆದು ಅದೊಹರ್​ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಗುರುದಾಸ್​ಪುರ್​ ಉಪಚುನಾವಣೆಯಲ್ಲಿ ಗೆದ್ದು 2022ರಲ್ಲಿ ಸಂಸತ್​​ ಪ್ರವೇಶಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಕಾಂಗ್ರೆಸ್​ ಹೈಕಮಾಂಡ್​ನಿಂದ ನೋಟಿಸ್​ ಪಡೆದ ಅವರು ಅದೇ ವರ್ಷ ಕಾಂಗ್ರೆಸ್​​ಗೆ ವಿದಾಯ ಹೇಳಿದ್ದರು. 2022ರಲ್ಲಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಸೇರಿದ ಅವರು, 2024 ಜುಲೈ 4ರಂದು ಪಂಜಾಬ್​ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: ಸಂಸದೀಯ ಸ್ಥಾಯಿ ಸಮಿತಿಗಳ ರಚನೆ: ರಕ್ಷಣಾ ಸಮಿತಿಯಲ್ಲಿ ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.