ETV Bharat / bharat

ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿ ಜಮ್ಮು ಆಸ್ಪತ್ರೆಯಲ್ಲಿ ಸಾವು - Pulwama terror attack accused died

author img

By ETV Bharat Karnataka Team

Published : 2 hours ago

ಕಳೆದ ರಾತ್ರಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿ ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Pulwama terror attack accused died by Heart Failure in J&K hospital
ಪುಲ್ವಾಮಾ ಉಗ್ರರ ದಾಳಿಯ ಚಿತ್ರ (ಐಎಎನ್​ಎಸ್​​)

ಜಮ್ಮು: 2019ರ ಪುಲ್ವಾಮಾ ಉಗ್ರರ ದಾಳಿಯ ಆರೋಪಿ ಹೃದಯಾಘಾತದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಬಿಲಾಲ್​ ಅಹ್ಮದ್​ ಕುಂಚೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ ಆತ ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯ ಪುಲ್ವಾಮಾದ ಕಾಕಪೊರ್​​ ನಿವಾಸಿಯಾಗಿದ್ದು, 2019ರ ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯ ಲೆಥಪೊರ್​​ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ 40 ಸಿಆರ್​ಪಿಎಫ್​ ಯೋಧರು ಸಾವನ್ನಪ್ಪಿದ್ದರು.

ಸಿಆರ್‌ಪಿಎಫ್ ಯೋಧರು ತುಂಬಿದ್ದ ಟ್ರಕ್ ರಸ್ತೆಯ ಮಧ್ಯದಲ್ಲಿ ಸಾಗುತ್ತಿದ್ದಾಗ ಸ್ಫೋಟಕಗಳನ್ನು ತುಂಬಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಯೋಧರ ವಾಹನಗಳು ಹಾರಿ ಹೋಗಿದ್ದವು. ಇದಾದ ನಂತರ, ಮೊದಲೇ ಸಂಚು ರೂಪಿಸಿದ್ದ ಉಗ್ರರು ಸ್ಥಳದಲ್ಲಿಯೇ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, 35 ಮಂದಿ ಗಾಯಗೊಂಡಿದ್ದರು.

ಈ ಭಯೋತ್ಪಾದನೆ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಇಸ್ಲಾಮಿಕ್​ ಭಯೋತ್ಪಾದಕ ಗುಂಪಾದ ಜೈಶ್​ - ಇ- ಮೊಹಮ್ಮದ್​ (ಜೆಇಎಂ) ಹೊತ್ತಿತ್ತು. ಈ ದಾಳಿಯ ಬಳಿಕ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಬಾಲಾಕೋಟ್​ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು ಈ ಭಯೋತ್ಪಾದಕ ದಾಳಿಯ ಪ್ರಮುಖ ಮೂರು ಆರೋಪಿಗಳಲ್ಲಿ ಕುಚೆ ಕೂಡ ಒಬ್ಬನಾಗಿದ್ದು, ದಾಳಿಕೋರರಿಗೆ ಸಹಾಯ ಮಾಡುತ್ತಿದ್ದ ಈತನನ್ನು 2020ರಂದು ಬಂಧಿಸಲಾಗಿತ್ತು.

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತನಿಖೆಯಲ್ಲಿ 19 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಆಗಸ್ಟ್​ 2021ರಂದು ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ 6 ಮಂದಿಯನ್ನು ಸಾವನ್ನಪ್ಪಿದ್ದು, 7 ಜನರನ್ನು ಬಂಧಿಸಲಾಗಿತ್ತು. ಭಾರತ ಈ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಸಿಬ್ಬಂದಿಗಳಿಗೆ ಪ್ರತಿ ವರ್ಷ ಗೌರವ ನಮನ ಸಲ್ಲಿಸುತ್ತಾ ಬಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಪುಲ್ವಾಮಾ ದಾಳಿ.. ಈಟಿವಿ ಭಾರತ್​ಗೆ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ ಲಭ್ಯ

ಜಮ್ಮು: 2019ರ ಪುಲ್ವಾಮಾ ಉಗ್ರರ ದಾಳಿಯ ಆರೋಪಿ ಹೃದಯಾಘಾತದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಬಿಲಾಲ್​ ಅಹ್ಮದ್​ ಕುಂಚೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ರಾತ್ರಿ ಆತ ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯ ಪುಲ್ವಾಮಾದ ಕಾಕಪೊರ್​​ ನಿವಾಸಿಯಾಗಿದ್ದು, 2019ರ ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯ ಲೆಥಪೊರ್​​ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ 40 ಸಿಆರ್​ಪಿಎಫ್​ ಯೋಧರು ಸಾವನ್ನಪ್ಪಿದ್ದರು.

ಸಿಆರ್‌ಪಿಎಫ್ ಯೋಧರು ತುಂಬಿದ್ದ ಟ್ರಕ್ ರಸ್ತೆಯ ಮಧ್ಯದಲ್ಲಿ ಸಾಗುತ್ತಿದ್ದಾಗ ಸ್ಫೋಟಕಗಳನ್ನು ತುಂಬಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಯೋಧರ ವಾಹನಗಳು ಹಾರಿ ಹೋಗಿದ್ದವು. ಇದಾದ ನಂತರ, ಮೊದಲೇ ಸಂಚು ರೂಪಿಸಿದ್ದ ಉಗ್ರರು ಸ್ಥಳದಲ್ಲಿಯೇ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, 35 ಮಂದಿ ಗಾಯಗೊಂಡಿದ್ದರು.

ಈ ಭಯೋತ್ಪಾದನೆ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಇಸ್ಲಾಮಿಕ್​ ಭಯೋತ್ಪಾದಕ ಗುಂಪಾದ ಜೈಶ್​ - ಇ- ಮೊಹಮ್ಮದ್​ (ಜೆಇಎಂ) ಹೊತ್ತಿತ್ತು. ಈ ದಾಳಿಯ ಬಳಿಕ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಬಾಲಾಕೋಟ್​ನಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು ಈ ಭಯೋತ್ಪಾದಕ ದಾಳಿಯ ಪ್ರಮುಖ ಮೂರು ಆರೋಪಿಗಳಲ್ಲಿ ಕುಚೆ ಕೂಡ ಒಬ್ಬನಾಗಿದ್ದು, ದಾಳಿಕೋರರಿಗೆ ಸಹಾಯ ಮಾಡುತ್ತಿದ್ದ ಈತನನ್ನು 2020ರಂದು ಬಂಧಿಸಲಾಗಿತ್ತು.

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತನಿಖೆಯಲ್ಲಿ 19 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಆಗಸ್ಟ್​ 2021ರಂದು ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ 6 ಮಂದಿಯನ್ನು ಸಾವನ್ನಪ್ಪಿದ್ದು, 7 ಜನರನ್ನು ಬಂಧಿಸಲಾಗಿತ್ತು. ಭಾರತ ಈ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಸಿಬ್ಬಂದಿಗಳಿಗೆ ಪ್ರತಿ ವರ್ಷ ಗೌರವ ನಮನ ಸಲ್ಲಿಸುತ್ತಾ ಬಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಪುಲ್ವಾಮಾ ದಾಳಿ.. ಈಟಿವಿ ಭಾರತ್​ಗೆ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.