ETV Bharat / bharat

25ನೇ ಕಾರ್ಗಿಲ್​ ದಿವಸ್​ ಆಚರಣೆ; ಲಡಾಖ್​ಗೆ ಪ್ರಧಾನಿ ಭೇಟಿ - Kargil Vijay Diwas

author img

By ETV Bharat Karnataka Team

Published : Jul 22, 2024, 1:37 PM IST

ಜು 24ರಿಂದ 26ರವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆಗೆ ಲಡಾಖ್​ನಲ್ಲಿ ಸಿದ್ಧತೆ ನಡೆಸಲಾಗಿದೆ.

PM Modi will visit Ladakh on July 26 on the 25th anniversary of Kargil Vijay Diwas
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಶ್ರೀನಗರ: 25ನೇ ವರ್ಷದ ಕಾರ್ಗಿಲ್​ ವಿಜಯ್​ ದಿವಸ್​ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ಲಡಾಖ್​ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 25 ವರ್ಷಗಳಾಗಿದ್ದು, ಈ ಬಾರಿ ರಜತ ಜಯಂತಿ (ಬೆಳ್ಳಿ ಮಹೋತ್ಸವ)ಮಹೋತ್ಸವವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜು 24ರಿಂದ 26ರ ವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆ ಆಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಲಡಾಖ್​ ಪ್ರಾಂತ್ಯಕ್ಕೆ ಆಗಮಿಸುವ ಕುರಿತು ಮಾಹಿತಿ ನೀಡಿರುವ ಹಿರಿಯ ಸೇನಾ ಅಧಿಕಾರಿ, ಜುಲೈ 26ರಂದು ಪ್ರಧಾನಿ ಬೆಳಗ್ಗೆ ಡ್ರಾಸ್​ ಬ್ರಿಗೇಡ್​ ಹೆಲಿಪ್ಯಾಡ್​ಗೆ ಬಂದಿಳಿಯಲಿದ್ದಾರೆ. ಸೇನಾ ಅಧಿಕಾರಿಗಳು ಅವರನ್ನು ಸ್ವಾಗತಿಸಲಿದ್ದು, ಅವರು ಕಾರ್ಗಿಲ್​ ವಾರ್​ ಮೆಮೋರಿಯಲ್​ಗೂ ಮುನ್ನ ಕೊಂಚ ವಿಶ್ರಾಂತಿ ಪಡೆಯಲಿದ್ದಾರೆ ಎಂದರು.

ಈ ಭೇಟಿ ವೇಳೆ ಅವರು, ವೀರ ಯೋಧರಿಗೆ ಪುಷ್ಪಾರ್ಚನೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, 'ಶಾಹೀದ್​​ ಮಾರ್ಗ್'​ಗೆ ಭೇಟಿ ನೀಡಲಿದ್ದಾರೆ. ಕಾರ್ಗಿಲ್​ ಯುದ್ಧ ಕುರಿತು ಮಾಹಿತಿ ಪಡೆಯಲಿದ್ದಾರೆ. ಬಳಿಕ ಗ್ರೂಪ್​ ಫೋಟೋಗ್ರಾಫ್​​ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು 'ವೀರ್​ ನಾರಿ' (ಯುದ್ಧದಲ್ಲಿ ಮಡಿದ ಯೋಧರ ವಿಧವಾ ಪತ್ನಿಯರು) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 'ವೀರ್​ ಭೂಮಿ'ಗೆ ಭೇಟಿ ನೀಡಲಿದ್ದಾರೆ. ಜೊತೆಗೆ 'ಶಿನ್ಕುಲ್​ ಲಾ ಟನಲ್'​ ಅನ್ನು ವರ್ಚುವಲ್​ ಆಗಿ ಉದ್ಘಾಟಿಸಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸಿದ್ಧತೆ ಕುರಿತು ಭಾನುವಾರ ಲೆ ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿಡಿ ಮಿಶ್ರಾ, ಸೆಕ್ರೆಟರಿಯಟ್​ಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಡ್ರಾಸ್​ ಹೆಲಿಪ್ಯಾಡ್, ಮೋಟರ್​ಕೇಡ್​ ಸಿದ್ಧತೆ ಮತ್ತು ಪುಷ್ಪಾರ್ಚನೆ ಸೇರಿದಂತೆ ಹಲವು ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಕಾಲ ಮಿತಿಯೊಳಗೆ ಮುಗಿಸುವಂತೆ ಎಲ್​ಜಿ ಮಿಶ್ರಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಸಿದ್ಧತೆ ಕುರಿತು ಜೂನ್​ 24ರಂದು ಅವರು ಪರಿಶೀಲನೆ ನಡೆಸಲಿದ್ದಾರೆ. ಜುಲೈ 23ರಂದು ಸೇನಾ, ಪೊಲೀಸ್​ ಮತ್ತು ನಾಗರಿಕ ಆಡಳಿತ ಜೊತೆಗೆ ಸಮನ್ವಯಗೊಳಿಸಲು ಎಸ್​ಪಿಜಿ ನಾಳೆ (ಜುಲೈ 23) ಕಣಿವೆ ರಾಜ್ಯಕ್ಕೆ ಬಂದಿಳಿಯಲಿದೆ.

ಇದನ್ನೂ ಓದಿ: ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿಯ 7 ವೀರಯೋಧರು ಹುತಾತ್ಮ: ಕುಟುಂಬಸ್ಥರಿಗೆ ಕೊಟ್ಟ ಮಾತು ಮರೆತಿವೆಯಾ ಸರ್ಕಾರಗಳು?

ಶ್ರೀನಗರ: 25ನೇ ವರ್ಷದ ಕಾರ್ಗಿಲ್​ ವಿಜಯ್​ ದಿವಸ್​ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ಲಡಾಖ್​ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 25 ವರ್ಷಗಳಾಗಿದ್ದು, ಈ ಬಾರಿ ರಜತ ಜಯಂತಿ (ಬೆಳ್ಳಿ ಮಹೋತ್ಸವ)ಮಹೋತ್ಸವವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜು 24ರಿಂದ 26ರ ವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆ ಆಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಲಡಾಖ್​ ಪ್ರಾಂತ್ಯಕ್ಕೆ ಆಗಮಿಸುವ ಕುರಿತು ಮಾಹಿತಿ ನೀಡಿರುವ ಹಿರಿಯ ಸೇನಾ ಅಧಿಕಾರಿ, ಜುಲೈ 26ರಂದು ಪ್ರಧಾನಿ ಬೆಳಗ್ಗೆ ಡ್ರಾಸ್​ ಬ್ರಿಗೇಡ್​ ಹೆಲಿಪ್ಯಾಡ್​ಗೆ ಬಂದಿಳಿಯಲಿದ್ದಾರೆ. ಸೇನಾ ಅಧಿಕಾರಿಗಳು ಅವರನ್ನು ಸ್ವಾಗತಿಸಲಿದ್ದು, ಅವರು ಕಾರ್ಗಿಲ್​ ವಾರ್​ ಮೆಮೋರಿಯಲ್​ಗೂ ಮುನ್ನ ಕೊಂಚ ವಿಶ್ರಾಂತಿ ಪಡೆಯಲಿದ್ದಾರೆ ಎಂದರು.

ಈ ಭೇಟಿ ವೇಳೆ ಅವರು, ವೀರ ಯೋಧರಿಗೆ ಪುಷ್ಪಾರ್ಚನೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, 'ಶಾಹೀದ್​​ ಮಾರ್ಗ್'​ಗೆ ಭೇಟಿ ನೀಡಲಿದ್ದಾರೆ. ಕಾರ್ಗಿಲ್​ ಯುದ್ಧ ಕುರಿತು ಮಾಹಿತಿ ಪಡೆಯಲಿದ್ದಾರೆ. ಬಳಿಕ ಗ್ರೂಪ್​ ಫೋಟೋಗ್ರಾಫ್​​ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು 'ವೀರ್​ ನಾರಿ' (ಯುದ್ಧದಲ್ಲಿ ಮಡಿದ ಯೋಧರ ವಿಧವಾ ಪತ್ನಿಯರು) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 'ವೀರ್​ ಭೂಮಿ'ಗೆ ಭೇಟಿ ನೀಡಲಿದ್ದಾರೆ. ಜೊತೆಗೆ 'ಶಿನ್ಕುಲ್​ ಲಾ ಟನಲ್'​ ಅನ್ನು ವರ್ಚುವಲ್​ ಆಗಿ ಉದ್ಘಾಟಿಸಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸಿದ್ಧತೆ ಕುರಿತು ಭಾನುವಾರ ಲೆ ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿಡಿ ಮಿಶ್ರಾ, ಸೆಕ್ರೆಟರಿಯಟ್​ಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಡ್ರಾಸ್​ ಹೆಲಿಪ್ಯಾಡ್, ಮೋಟರ್​ಕೇಡ್​ ಸಿದ್ಧತೆ ಮತ್ತು ಪುಷ್ಪಾರ್ಚನೆ ಸೇರಿದಂತೆ ಹಲವು ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಕಾಲ ಮಿತಿಯೊಳಗೆ ಮುಗಿಸುವಂತೆ ಎಲ್​ಜಿ ಮಿಶ್ರಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಸಿದ್ಧತೆ ಕುರಿತು ಜೂನ್​ 24ರಂದು ಅವರು ಪರಿಶೀಲನೆ ನಡೆಸಲಿದ್ದಾರೆ. ಜುಲೈ 23ರಂದು ಸೇನಾ, ಪೊಲೀಸ್​ ಮತ್ತು ನಾಗರಿಕ ಆಡಳಿತ ಜೊತೆಗೆ ಸಮನ್ವಯಗೊಳಿಸಲು ಎಸ್​ಪಿಜಿ ನಾಳೆ (ಜುಲೈ 23) ಕಣಿವೆ ರಾಜ್ಯಕ್ಕೆ ಬಂದಿಳಿಯಲಿದೆ.

ಇದನ್ನೂ ಓದಿ: ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿಯ 7 ವೀರಯೋಧರು ಹುತಾತ್ಮ: ಕುಟುಂಬಸ್ಥರಿಗೆ ಕೊಟ್ಟ ಮಾತು ಮರೆತಿವೆಯಾ ಸರ್ಕಾರಗಳು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.