ETV Bharat / bharat

ನೇಪಾಳ ಬಸ್​ ದುರಂತ: 27 ಕ್ಕೇರಿದ ಸಾವಿನ ಸಂಖ್ಯೆ, 16 ಮಂದಿಗೆ ತೀವ್ರ ಗಾಯ - NEPAL BUS ACCIDENT

author img

By ETV Bharat Karnataka Team

Published : Aug 24, 2024, 5:39 PM IST

ನೇಪಾಳದಲ್ಲಿ ನಡೆದ ಬಸ್​ ದುರಂತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಹಲವು ಪ್ರಯಾಣಿಕರ ಮೃತದೇಹ ಪತ್ತೆ ಮಾಡಲಾಗಿದ್ದು, ಸಾವಿನ ಸಂಖ್ಯೆ 27ಕ್ಕೆ ಏರಿದೆ.

ನೇಪಾಳ ಬಸ್​ ದುರಂತ
ನೇಪಾಳ ಬಸ್​ ದುರಂತ (ETV Bharat)

ಗೋರಖ್‌ಪುರ/ ಮುಂಬೈ: ನೇಪಾಳದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಭಾರತೀಯರ ಸಂಖ್ಯೆ 27ಕ್ಕೆ ಏರಿದೆ. ಈ ಪೈಕಿ 25 ಮಂದಿ ಮಹಾರಾಷ್ಟ್ರದವರಾಗಿದ್ದರೆ, ಇಬ್ಬರು ಉತ್ತರಪ್ರದೇಶವರಾಗಿದ್ದಾರೆ. 16 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉಳಿದವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

ಅಪಘಾತದ ವೇಳೆ ಬಸ್​​ನಲ್ಲಿ 51 ಪ್ರಯಾಣಿಕರಿದ್ದರು. ಎಲ್ಲರೂ ಮಹಾರಾಷ್ಟ್ರದವರಾಗಿದ್ದಾರೆ. ಪ್ರಯಾಣಿಕರನ್ನು ಹೊತ್ತ ಬಸ್​ ನೇಪಾಳದ ಪೋಖಾರಾ ಪ್ರವಾಸಿ ರೆಸಾರ್ಟ್​ನಿಂದ ರಾಜಧಾನಿ ಕಠ್ಮಂಡುವಿನ ಕಡೆ ಬರುತ್ತಿದ್ದಾಗ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಆಯತಪ್ಪಿ ಶುಕ್ರವಾರ ಉರುಳಿ ಬಿದ್ದಿದೆ.

ನಿನ್ನೆಯೇ 14 ಭಾರತೀಯರ ಮೃತದೇಹಗಳು ಸಿಕ್ಕಿದ್ದವು. 16 ಮಂದಿ ಗಾಯಗೊಂಡಿದ್ದರು. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಪಘಾತದಲ್ಲಿ ಬಸ್ಸಿನ ಚಾಲಕ ಮತ್ತು ಸಹಾಯಕ ಕೂಡ ಮೃತಪಟ್ಟಿದ್ದಾರೆ. ಇಬ್ಬರೂ ಉತ್ತರಪ್ರದೇಶದವರಾಗಿದ್ದಾರೆ. ಚಾಲಕ ಗೋರಖ್‌ಪುರ ಜಿಲ್ಲೆಯ ಪಿಪ್ರೈಚ್ ನಿವಾಸಿಯಾಗಿದ್ದರೆ, ಸಹಾಯಕ ಕುಶಿನಗರ ಜಿಲ್ಲೆಯವರು. ಇಂದು ಚಾಲಕ ಮತ್ತು ಸಹಾಯಕ ಸೇರಿ 27 ಶವಗಳನ್ನು ಪತ್ತೆ ಮಾಡಲಾಗಿದೆ.

ನೇಪಾಳಕ್ಕೆ ತೆರಳಿದ ಅಧಿಕಾರಿಗಳ ತಂಡ: ದುರಂತ ವಿಷಯ ತಿಳಿದ ಬಳಿಕ ಭಾರತದ ಅಧಿಕಾರಿಗಳ ತಂಡ ನೇಪಾಳಕ್ಕೆ ತೆರಳಿದೆ. ಗಾಯಾಳುಗಳಿಗೆ ಕಠ್ಮಂಡುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಮತ್ತು ಸಹಾಯಕನ ಮೃತದೇಹಗಳನ್ನು ಗ್ರೀನ್​ ಕಾರಿಡಾರ್​ ಮೂಲಕ ಉತ್ತರಪ್ರದೇಶಕ್ಕೆ ತರಲಾಗುತ್ತಿದೆ. ಉಳಿದ ಶವಗಳನ್ನು ಮಹಾರಾಷ್ಟ್ರಕ್ಕೆ ವಿಶೇಷ ವಿಮಾನದಲ್ಲಿ ಸಾಗಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ಗಡಿಯಲ್ಲಿ ವೈದ್ಯಕೀಯ ವ್ಯವಸ್ಥೆ ಸಿದ್ಧವಾಗಿಡಲಾಗಿದೆ. 11 ಆಂಬ್ಯುಲೆನ್ಸ್‌ಗಳು ಮತ್ತು 42 ಆಸನಗಳ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ತಂಡವನ್ನೂ ನಿಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರ ಸಾವು ಶಂಕೆ - Nepal Bus Accident

ಗೋರಖ್‌ಪುರ/ ಮುಂಬೈ: ನೇಪಾಳದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಭಾರತೀಯರ ಸಂಖ್ಯೆ 27ಕ್ಕೆ ಏರಿದೆ. ಈ ಪೈಕಿ 25 ಮಂದಿ ಮಹಾರಾಷ್ಟ್ರದವರಾಗಿದ್ದರೆ, ಇಬ್ಬರು ಉತ್ತರಪ್ರದೇಶವರಾಗಿದ್ದಾರೆ. 16 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉಳಿದವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

ಅಪಘಾತದ ವೇಳೆ ಬಸ್​​ನಲ್ಲಿ 51 ಪ್ರಯಾಣಿಕರಿದ್ದರು. ಎಲ್ಲರೂ ಮಹಾರಾಷ್ಟ್ರದವರಾಗಿದ್ದಾರೆ. ಪ್ರಯಾಣಿಕರನ್ನು ಹೊತ್ತ ಬಸ್​ ನೇಪಾಳದ ಪೋಖಾರಾ ಪ್ರವಾಸಿ ರೆಸಾರ್ಟ್​ನಿಂದ ರಾಜಧಾನಿ ಕಠ್ಮಂಡುವಿನ ಕಡೆ ಬರುತ್ತಿದ್ದಾಗ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಆಯತಪ್ಪಿ ಶುಕ್ರವಾರ ಉರುಳಿ ಬಿದ್ದಿದೆ.

ನಿನ್ನೆಯೇ 14 ಭಾರತೀಯರ ಮೃತದೇಹಗಳು ಸಿಕ್ಕಿದ್ದವು. 16 ಮಂದಿ ಗಾಯಗೊಂಡಿದ್ದರು. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಪಘಾತದಲ್ಲಿ ಬಸ್ಸಿನ ಚಾಲಕ ಮತ್ತು ಸಹಾಯಕ ಕೂಡ ಮೃತಪಟ್ಟಿದ್ದಾರೆ. ಇಬ್ಬರೂ ಉತ್ತರಪ್ರದೇಶದವರಾಗಿದ್ದಾರೆ. ಚಾಲಕ ಗೋರಖ್‌ಪುರ ಜಿಲ್ಲೆಯ ಪಿಪ್ರೈಚ್ ನಿವಾಸಿಯಾಗಿದ್ದರೆ, ಸಹಾಯಕ ಕುಶಿನಗರ ಜಿಲ್ಲೆಯವರು. ಇಂದು ಚಾಲಕ ಮತ್ತು ಸಹಾಯಕ ಸೇರಿ 27 ಶವಗಳನ್ನು ಪತ್ತೆ ಮಾಡಲಾಗಿದೆ.

ನೇಪಾಳಕ್ಕೆ ತೆರಳಿದ ಅಧಿಕಾರಿಗಳ ತಂಡ: ದುರಂತ ವಿಷಯ ತಿಳಿದ ಬಳಿಕ ಭಾರತದ ಅಧಿಕಾರಿಗಳ ತಂಡ ನೇಪಾಳಕ್ಕೆ ತೆರಳಿದೆ. ಗಾಯಾಳುಗಳಿಗೆ ಕಠ್ಮಂಡುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಮತ್ತು ಸಹಾಯಕನ ಮೃತದೇಹಗಳನ್ನು ಗ್ರೀನ್​ ಕಾರಿಡಾರ್​ ಮೂಲಕ ಉತ್ತರಪ್ರದೇಶಕ್ಕೆ ತರಲಾಗುತ್ತಿದೆ. ಉಳಿದ ಶವಗಳನ್ನು ಮಹಾರಾಷ್ಟ್ರಕ್ಕೆ ವಿಶೇಷ ವಿಮಾನದಲ್ಲಿ ಸಾಗಿಸಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ಗಡಿಯಲ್ಲಿ ವೈದ್ಯಕೀಯ ವ್ಯವಸ್ಥೆ ಸಿದ್ಧವಾಗಿಡಲಾಗಿದೆ. 11 ಆಂಬ್ಯುಲೆನ್ಸ್‌ಗಳು ಮತ್ತು 42 ಆಸನಗಳ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ತಂಡವನ್ನೂ ನಿಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರ ಸಾವು ಶಂಕೆ - Nepal Bus Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.