ETV Bharat / bharat

ಎನ್‌ಡಿಎ ಮಿತ್ರಪಕ್ಷ ಎಜೆಎಸ್‌ಯು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸೋಂನಲ್ಲಿ ಸ್ಪರ್ಧೆ - Lok Sabha Election - LOK SABHA ELECTION

Lok Sabha Election 2024: ಜಾರ್ಖಂಡ್‌ನಲ್ಲಿ ಎನ್‌ಡಿಎ ಮಿತ್ರಪಕ್ಷ ಎಜೆಎಸ್‌ಯು ಪಕ್ಷ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸೋಂನಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಎಜೆಎಸ್‌ಯು ಗಿರಿದಿಹ್ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.

AJSU CANDIDATE  CANDIDATE FROM GIRIDIH  AJSU IN BENGAL  AJSU IN ODISHA
ಎನ್‌ಡಿಎ ಮಿತ್ರಪಕ್ಷ ಎಜೆಎಸ್‌ಯು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಸ್ಪರ್ಧೆ
author img

By ETV Bharat Karnataka Team

Published : Mar 30, 2024, 9:34 AM IST

ರಾಂಚಿ (ಜಾರ್ಖಂಡ್‌): ಎಜೆಎಸ್‌ಯು ಮತ್ತೊಮ್ಮೆ ಚಂದ್ರಪ್ರಕಾಶ್ ಚೌಧರಿ ಅವರನ್ನು ಗಿರಿದಿಹ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಎಜೆಎಸ್‌ಯು ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಮಾರ್ಚ್ 29 ರಂದು) ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಚಂದ್ರಪ್ರಕಾಶ್ ಚೌಧರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಔಪಚಾರಿಕ ಘೋಷಣೆ ಮಾಡಿದ ಪಕ್ಷದ ಕೇಂದ್ರ ಅಧ್ಯಕ್ಷ ಸುದೇಶ್ ಕುಮಾರ್ ಮಹತೋ ಅವರು, ''ಎಜೆಎಸ್‌ಯು ಪಕ್ಷವು 2019 ರಂತೆಯೇ ಎನ್‌ಡಿಎ ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಲಿದೆ. ಗಿರಿಧಿಯಿಂದ ಮಾತ್ರವಲ್ಲದೆ ಜಾರ್ಖಂಡ್‌ನ ಎಲ್ಲಾ 14 ಲೋಕಸಭೆ ಸ್ಥಾನಗಳನ್ನು ಗೆಲ್ಲಲು ಶ್ರಮಿಸುತ್ತೇನೆ'' ಎಂದು ಹೇಳಿದರು.

ಈ ಚುನಾವಣೆಯಲ್ಲಿ ಪ್ರಾದೇಶಿಕ ಸಮಸ್ಯೆಗಳನ್ನು ರಾಷ್ಟ್ರೀಯ ವೇದಿಕೆಗೆ ತರುವ ಕೆಲಸವನ್ನು ಎಜೆಎಸ್‌ಯು ಮಾಡಲಿದ್ದು, ಇದರಲ್ಲಿ ಗಿರಿದಿಹ್ ಸ್ಥಳಾಂತರ, ಕಲ್ಲಿದ್ದಲು ಕಳ್ಳತನದಂತಹ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ವೇದಿಕೆಗೆ ತರುವ ಕೆಲಸವನ್ನು ಎಜೆಎಸ್‌ಯು ಮಾಡಲಿದೆ ಎಂದರು. ಔಪಚಾರಿಕವಾಗಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಘೋಷಿಸಿದ ಸುದೇಶ್ ಮಹತೋ ಅವರು, 2019ರ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ 13 ಸ್ಥಾನಗಳಲ್ಲಿ ಮತ್ತು ಎಜೆಎಸ್‌ಯು ರಾಜ್ಯದಲ್ಲಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.

''ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸೋಂನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದೊಳಗಿನ ಕಾರ್ಯಕರ್ತರಿಂದ ಒತ್ತಡ ಬಂದಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತಿದೆ'' ಎಂದರು.

ಪಕ್ಷದ ಗಿರಿದಿಹ್ ಅಭ್ಯರ್ಥಿ ಚಂದ್ರಪ್ರಕಾಶ ಚೌಧರಿ ಪಕ್ಷ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿ, ''ಕಳೆದ 5 ವರ್ಷಗಳ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಮತ್ತೊಮ್ಮೆ ಪೂರ್ಣ ಶಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ'' ಹೇಳಿದರು.

ಗಂಡೆ ವಿಧಾನಸಭಾ ಉಪಚುನಾವಣೆ ವಿಚಾರ: ಗಂಡೆ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಜೆಎಸ್‌ಯು ಸಿದ್ಧತೆ ನಡೆಸಿದೆ. ಎಜೆಎಸ್‌ಯು ಸಂಸದೀಯ ಪಕ್ಷದ ಸಭೆಯಲ್ಲೂ ಗಂಡೆ ವಿಧಾನಸಭಾ ಉಪಚುನಾವಣೆ ಕುರಿತು ಭಾರೀ ಚರ್ಚೆ ನಡೆದಿದೆ.

ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ ಮಾತನಾಡಿ, ಗಂಡೆ ಉಪಚುನಾವಣೆಯಲ್ಲಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಇಂದಿನ ಸಭೆಯಲ್ಲಿ ಐದು ಸದಸ್ಯರ ತಂಡವನ್ನು ರಚಿಸಲಾಗಿದೆ. ಇದು ಗ್ರೌಂಡ್​ ಲೆವಲ್​ನ ವಾಸ್ತವತೆಯನ್ನು ಪರಿಶೀಲಿಸಿ ನಂತರ ವರದಿಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.

ಎನ್‌ಡಿಎ ಸಭೆಯಲ್ಲಿ ನಿರ್ಧಾರ: 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಜೆಎಸ್‌ಯು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಈ ವೇಳೆ ನಮ್ಮ ಅಭ್ಯರ್ಥಿ ಮೂರನೇ ಸ್ಥಾನ ಹಾಗೂ ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ. ಸದ್ಯ ಹಿಂದೆಯಿದ್ದ ಬಿಜೆಪಿ ಅಭ್ಯರ್ಥಿ ಬೇರೆ ಪಕ್ಷಕ್ಕೆ ತೆರಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಮ್ಮ ಹಕ್ಕು. ಮುಂಬರುವ ಎನ್‌ಡಿಎ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ ತಿಳಿಸಿದರು.

ಇದನ್ನೂ ಓದಿ: ಬಿಲ್​ ಗೇಟ್ಸ್​ಗೆ 'ವೋಕಲ್​ ಫಾರ್​ ಲೋಕಲ್​' ಗಿಫ್ಟ್​ ಹ್ಯಾಂಪರ್​ ನೀಡಿದ ಪ್ರಧಾನಿ ಮೋದಿ - Modi Gift to Bill Gates

ರಾಂಚಿ (ಜಾರ್ಖಂಡ್‌): ಎಜೆಎಸ್‌ಯು ಮತ್ತೊಮ್ಮೆ ಚಂದ್ರಪ್ರಕಾಶ್ ಚೌಧರಿ ಅವರನ್ನು ಗಿರಿದಿಹ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಎಜೆಎಸ್‌ಯು ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಮಾರ್ಚ್ 29 ರಂದು) ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಚಂದ್ರಪ್ರಕಾಶ್ ಚೌಧರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಔಪಚಾರಿಕ ಘೋಷಣೆ ಮಾಡಿದ ಪಕ್ಷದ ಕೇಂದ್ರ ಅಧ್ಯಕ್ಷ ಸುದೇಶ್ ಕುಮಾರ್ ಮಹತೋ ಅವರು, ''ಎಜೆಎಸ್‌ಯು ಪಕ್ಷವು 2019 ರಂತೆಯೇ ಎನ್‌ಡಿಎ ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಲಿದೆ. ಗಿರಿಧಿಯಿಂದ ಮಾತ್ರವಲ್ಲದೆ ಜಾರ್ಖಂಡ್‌ನ ಎಲ್ಲಾ 14 ಲೋಕಸಭೆ ಸ್ಥಾನಗಳನ್ನು ಗೆಲ್ಲಲು ಶ್ರಮಿಸುತ್ತೇನೆ'' ಎಂದು ಹೇಳಿದರು.

ಈ ಚುನಾವಣೆಯಲ್ಲಿ ಪ್ರಾದೇಶಿಕ ಸಮಸ್ಯೆಗಳನ್ನು ರಾಷ್ಟ್ರೀಯ ವೇದಿಕೆಗೆ ತರುವ ಕೆಲಸವನ್ನು ಎಜೆಎಸ್‌ಯು ಮಾಡಲಿದ್ದು, ಇದರಲ್ಲಿ ಗಿರಿದಿಹ್ ಸ್ಥಳಾಂತರ, ಕಲ್ಲಿದ್ದಲು ಕಳ್ಳತನದಂತಹ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ವೇದಿಕೆಗೆ ತರುವ ಕೆಲಸವನ್ನು ಎಜೆಎಸ್‌ಯು ಮಾಡಲಿದೆ ಎಂದರು. ಔಪಚಾರಿಕವಾಗಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಘೋಷಿಸಿದ ಸುದೇಶ್ ಮಹತೋ ಅವರು, 2019ರ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ 13 ಸ್ಥಾನಗಳಲ್ಲಿ ಮತ್ತು ಎಜೆಎಸ್‌ಯು ರಾಜ್ಯದಲ್ಲಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.

''ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸೋಂನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದೊಳಗಿನ ಕಾರ್ಯಕರ್ತರಿಂದ ಒತ್ತಡ ಬಂದಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತಿದೆ'' ಎಂದರು.

ಪಕ್ಷದ ಗಿರಿದಿಹ್ ಅಭ್ಯರ್ಥಿ ಚಂದ್ರಪ್ರಕಾಶ ಚೌಧರಿ ಪಕ್ಷ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿ, ''ಕಳೆದ 5 ವರ್ಷಗಳ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಮತ್ತೊಮ್ಮೆ ಪೂರ್ಣ ಶಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ'' ಹೇಳಿದರು.

ಗಂಡೆ ವಿಧಾನಸಭಾ ಉಪಚುನಾವಣೆ ವಿಚಾರ: ಗಂಡೆ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಜೆಎಸ್‌ಯು ಸಿದ್ಧತೆ ನಡೆಸಿದೆ. ಎಜೆಎಸ್‌ಯು ಸಂಸದೀಯ ಪಕ್ಷದ ಸಭೆಯಲ್ಲೂ ಗಂಡೆ ವಿಧಾನಸಭಾ ಉಪಚುನಾವಣೆ ಕುರಿತು ಭಾರೀ ಚರ್ಚೆ ನಡೆದಿದೆ.

ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ ಮಾತನಾಡಿ, ಗಂಡೆ ಉಪಚುನಾವಣೆಯಲ್ಲಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಇಂದಿನ ಸಭೆಯಲ್ಲಿ ಐದು ಸದಸ್ಯರ ತಂಡವನ್ನು ರಚಿಸಲಾಗಿದೆ. ಇದು ಗ್ರೌಂಡ್​ ಲೆವಲ್​ನ ವಾಸ್ತವತೆಯನ್ನು ಪರಿಶೀಲಿಸಿ ನಂತರ ವರದಿಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.

ಎನ್‌ಡಿಎ ಸಭೆಯಲ್ಲಿ ನಿರ್ಧಾರ: 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಜೆಎಸ್‌ಯು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಈ ವೇಳೆ ನಮ್ಮ ಅಭ್ಯರ್ಥಿ ಮೂರನೇ ಸ್ಥಾನ ಹಾಗೂ ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ. ಸದ್ಯ ಹಿಂದೆಯಿದ್ದ ಬಿಜೆಪಿ ಅಭ್ಯರ್ಥಿ ಬೇರೆ ಪಕ್ಷಕ್ಕೆ ತೆರಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಮ್ಮ ಹಕ್ಕು. ಮುಂಬರುವ ಎನ್‌ಡಿಎ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ ತಿಳಿಸಿದರು.

ಇದನ್ನೂ ಓದಿ: ಬಿಲ್​ ಗೇಟ್ಸ್​ಗೆ 'ವೋಕಲ್​ ಫಾರ್​ ಲೋಕಲ್​' ಗಿಫ್ಟ್​ ಹ್ಯಾಂಪರ್​ ನೀಡಿದ ಪ್ರಧಾನಿ ಮೋದಿ - Modi Gift to Bill Gates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.