ETV Bharat / bharat

ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಒಗ್ಗೂಡಿದ ಫುಟ್ಬಾಲ್​​ನ 'ಶತ್ರು ಕ್ಲಬ್​​ಗಳು' - Kolkata Doctor Case

author img

By ETV Bharat Karnataka Team

Published : Aug 19, 2024, 10:59 PM IST

ಬಂಗಾಳ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್​​ ವಿರುದ್ಧ ಎರಡು ಜನಪ್ರಿಯ ಫುಟ್ಬಾಲ್​ ತಂಡಗಳ ಅಭಿಮಾನಿಗಳು ಒಟ್ಟುಗೂಡಿ ಪ್ರತಿಭಟನೆ ನಡೆಸಿದ್ದಾರೆ.

ಫುಟ್ಬಾಲ್​​ನ 'ಶತ್ರು ಕ್ಲಬ್​​ಗಳು'
ಫುಟ್ಬಾಲ್​​ನ 'ಶತ್ರು ಕ್ಲಬ್​​ಗಳು' (ETV Bharat)

ಕೋಲ್ಕತ್ತಾ: ಬಂಗಾಳದಲ್ಲಿ ನಡೆದ ವೈದ್ಯೆ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ, ಕೊಲೆ ಕೇಸ್​ ವಿರುದ್ಧ ದೇಶಾದ್ಯಂತ ವೈದ್ಯ ಸಮುದಾಯ ಸೇರಿದಂತೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಮಧ್ಯೆ ಕೋಲ್ಕತ್ತಾದಲ್ಲಿ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಫುಟ್‌ಬಾಲ್‌ನಲ್ಲಿ ಬಹುಕಾಲದ ಪ್ರತಿಸ್ಪರ್ಧಿಗಳಾದ ಎರಡು ಗುಂಪುಗಳು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿವೆ.

ಫುಟ್‌ಬಾಲ್‌ನಲ್ಲಿ ಶತ್ರುಗಳೆಂದು ಕರೆಯಲ್ಪಡುವ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಕ್ಲಬ್‌ಗಳು ಭಾನುವಾರ ನಡೆದ ಹೋರಾಟದಲ್ಲಿ ಕೈಜೋಡಿಸಿವೆ. ಈ ತಂಡಗಳು ದೇಶದ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್‌ಗಳಾಗಿವೆ. ಈ ಗುಂಪುಗಳ ನೂರಾರು ಬೆಂಬಲಿಗರು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂಗೆ ಆಗಮಿಸಿ, ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಸರ್ಕಾರದ ವಿರುದ್ಧ ಭಿತ್ತಿಪತ್ರ ಹಾಗೂ ಘೋಷಣೆ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಆಂದೋಲನದಲ್ಲಿ ಮತ್ತೊಂದು ಫುಟ್ಬಾಲ್ ಕ್ಲಬ್‌ನ ಬೆಂಬಲಿಗರೂ ಸೇರಿಕೊಂಡಿದ್ದರು. ಮೂರು ಕ್ಲಬ್‌ಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಎಚ್ಚೆತ್ತ ಪೊಲೀಸರು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಕ್ಲಬ್​​ಗಳ ಅಭಿಮಾನಿಗಳು ಒಂದೆಡೆ ಸೇರಿದಲ್ಲಿ ಏನಾದರೂ ಅವಘಡಗಳು ಸಂಭವಿಸಲಿವೆ ಎಂದು ಆತಂಕಗೊಂಡಿದ್ದ ಪೊಲೀಸರು ಅವರನ್ನು ತಡೆಯಲು ಮುಂದಾದರೂ, ಅಭಿಮಾನಿಗಳು ಮಾತ್ರ ಎದೆಗುಂದಲಿಲ್ಲ. ವಿಶೇಷವೆಂದರೆ, ಹೋರಾಟದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಭಾಗವಹಿಸಿದ್ದರು.

ಕೋಲ್ಕತ್ತಾದ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಕ್ಲಬ್‌ಗಳ ನಡುವಿನ ಪಂದ್ಯಗಳು ರೋಚಕವಾಗಿರುತ್ತವೆ. ಇವರೆಡೂ ತಂಡಗಳು ನೂರು ವರ್ಷಗಳ ಇತಿಹಾಸವನ್ನು ಹೊಂದಿವೆ. ಅವುಗಳ ನಡುವಿನ ಸ್ಪರ್ಧಾತ್ಮಕ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಇವೆರಡು ಕ್ಲಬ್​ಗಳ ನಡುವಿನ ಪಂದ್ಯವನ್ನು ಏಷ್ಯಾದ ಅತಿದೊಡ್ಡ ಫುಟ್ಬಾಲ್ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮಮತಾ ಬ್ಯಾನರ್ಜಿ ಮೇಲೆ ನಂಬಿಕೆಯಿಲ್ಲ: ಪ್ರಕರಣದ ತನಿಖೆಯಲ್ಲಿ ಬಂಗಾಳ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಘಟನೆಯಿಂದ ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಂಬಿಕೆ ಕಳೆದು ಹೋಗಿದೆ ಎಂದು ಮೃತ ವೈದ್ಯೆ ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಬಂಗಾಳದ ಮುಖ್ಯಮಂತ್ರಿ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಆದರೆ ಕೆಲ ಘಟನೆಯ ನಂತರ ಆ ನಂಬಿಕೆ ಇಲ್ಲವಾಗಿದೆ. ಮಮತಾ ಅವರು ಮಾತಿನಲ್ಲಿ ನ್ಯಾಯ ಸಿಗಬೇಕು ಎಂದು ಹೇಳುತ್ತಾರೆ. ಆದರೆ, ಅದಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಪುತ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರಿಯ ಪುಟವನ್ನು ಸಿಬಿಐಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಕೊಲೆ ಪ್ರಕರಣ: ಆಗಸ್ಟ್ 20ರಂದು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ - Kolkata Medic Rape Murder Case

ಕೋಲ್ಕತ್ತಾ: ಬಂಗಾಳದಲ್ಲಿ ನಡೆದ ವೈದ್ಯೆ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ, ಕೊಲೆ ಕೇಸ್​ ವಿರುದ್ಧ ದೇಶಾದ್ಯಂತ ವೈದ್ಯ ಸಮುದಾಯ ಸೇರಿದಂತೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಮಧ್ಯೆ ಕೋಲ್ಕತ್ತಾದಲ್ಲಿ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಫುಟ್‌ಬಾಲ್‌ನಲ್ಲಿ ಬಹುಕಾಲದ ಪ್ರತಿಸ್ಪರ್ಧಿಗಳಾದ ಎರಡು ಗುಂಪುಗಳು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿವೆ.

ಫುಟ್‌ಬಾಲ್‌ನಲ್ಲಿ ಶತ್ರುಗಳೆಂದು ಕರೆಯಲ್ಪಡುವ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಕ್ಲಬ್‌ಗಳು ಭಾನುವಾರ ನಡೆದ ಹೋರಾಟದಲ್ಲಿ ಕೈಜೋಡಿಸಿವೆ. ಈ ತಂಡಗಳು ದೇಶದ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್‌ಗಳಾಗಿವೆ. ಈ ಗುಂಪುಗಳ ನೂರಾರು ಬೆಂಬಲಿಗರು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂಗೆ ಆಗಮಿಸಿ, ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಸರ್ಕಾರದ ವಿರುದ್ಧ ಭಿತ್ತಿಪತ್ರ ಹಾಗೂ ಘೋಷಣೆ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಆಂದೋಲನದಲ್ಲಿ ಮತ್ತೊಂದು ಫುಟ್ಬಾಲ್ ಕ್ಲಬ್‌ನ ಬೆಂಬಲಿಗರೂ ಸೇರಿಕೊಂಡಿದ್ದರು. ಮೂರು ಕ್ಲಬ್‌ಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಎಚ್ಚೆತ್ತ ಪೊಲೀಸರು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಕ್ಲಬ್​​ಗಳ ಅಭಿಮಾನಿಗಳು ಒಂದೆಡೆ ಸೇರಿದಲ್ಲಿ ಏನಾದರೂ ಅವಘಡಗಳು ಸಂಭವಿಸಲಿವೆ ಎಂದು ಆತಂಕಗೊಂಡಿದ್ದ ಪೊಲೀಸರು ಅವರನ್ನು ತಡೆಯಲು ಮುಂದಾದರೂ, ಅಭಿಮಾನಿಗಳು ಮಾತ್ರ ಎದೆಗುಂದಲಿಲ್ಲ. ವಿಶೇಷವೆಂದರೆ, ಹೋರಾಟದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಭಾಗವಹಿಸಿದ್ದರು.

ಕೋಲ್ಕತ್ತಾದ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಕ್ಲಬ್‌ಗಳ ನಡುವಿನ ಪಂದ್ಯಗಳು ರೋಚಕವಾಗಿರುತ್ತವೆ. ಇವರೆಡೂ ತಂಡಗಳು ನೂರು ವರ್ಷಗಳ ಇತಿಹಾಸವನ್ನು ಹೊಂದಿವೆ. ಅವುಗಳ ನಡುವಿನ ಸ್ಪರ್ಧಾತ್ಮಕ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಇವೆರಡು ಕ್ಲಬ್​ಗಳ ನಡುವಿನ ಪಂದ್ಯವನ್ನು ಏಷ್ಯಾದ ಅತಿದೊಡ್ಡ ಫುಟ್ಬಾಲ್ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮಮತಾ ಬ್ಯಾನರ್ಜಿ ಮೇಲೆ ನಂಬಿಕೆಯಿಲ್ಲ: ಪ್ರಕರಣದ ತನಿಖೆಯಲ್ಲಿ ಬಂಗಾಳ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಘಟನೆಯಿಂದ ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಂಬಿಕೆ ಕಳೆದು ಹೋಗಿದೆ ಎಂದು ಮೃತ ವೈದ್ಯೆ ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಬಂಗಾಳದ ಮುಖ್ಯಮಂತ್ರಿ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಆದರೆ ಕೆಲ ಘಟನೆಯ ನಂತರ ಆ ನಂಬಿಕೆ ಇಲ್ಲವಾಗಿದೆ. ಮಮತಾ ಅವರು ಮಾತಿನಲ್ಲಿ ನ್ಯಾಯ ಸಿಗಬೇಕು ಎಂದು ಹೇಳುತ್ತಾರೆ. ಆದರೆ, ಅದಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಪುತ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರಿಯ ಪುಟವನ್ನು ಸಿಬಿಐಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಕೊಲೆ ಪ್ರಕರಣ: ಆಗಸ್ಟ್ 20ರಂದು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ - Kolkata Medic Rape Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.