ETV Bharat / bharat

ವಿವಾದಾತ್ಮಕ ಹೇಳಿಕೆ: ಗುಜರಾತ್​ ಎಟಿಎಸ್​ನಿಂದ ಮುಂಬೈನ ಮುಫ್ತಿ ಸಲ್ಮಾನ್​ ಬಂಧನ

author img

By ETV Bharat Karnataka Team

Published : Feb 5, 2024, 7:18 AM IST

Updated : Feb 5, 2024, 8:19 AM IST

ಕಾರ್ಯಕ್ರಮದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಫ್ತಿ ಸಲ್ಮಾನ್​ರನ್ನು ಜುನಾಗಢ ಪೊಲೀಸರು ಬಂಧಿಸಿದ್ದಾರೆ.

Gujarat ATS  Maulana Mufti Salman Azhari arrest  Ghatkopar in case of hate speech  ಗುಜರಾತ್​ ಎಟಿಎಸ್  ಮುಂಬೈನ ಮುಫ್ತಿ ಸಲ್ಮಾನ್​ ಬಂಧನ
ವಿವಾದಾತ್ಮಕ ಹೇಳಿಕೆ: ಗುಜರಾತ್​ ಎಟಿಎಸ್​ನಿಂದ ಮುಂಬೈನ ಮುಫ್ತಿ ಸಲ್ಮಾನ್​ ಬಂಧನ

ಮುಂಬೈ, ಮಹಾರಾಷ್ಟ್ರ: ಮುಫ್ತಿ ಸಲ್ಮಾನ್ ಅವರನ್ನು ಗುಜರಾತ್ ಪೊಲೀಸರು ಘಾಟ್‌ಕೋಪರ್‌ನಲ್ಲಿ ಬಂಧಿಸಿದ್ದಾರೆ. ಗುಜರಾತ್‌ನ ಜುನಾಗಢ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ, ಜುನಾಗಢ ಪೊಲೀಸರು ಮಫ್ತಿ ಸಲ್ಮಾನ್ ಮತ್ತು ಇತರ ಇಬ್ಬರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆ ಗುಜರಾತ್ ಎಟಿಎಸ್ ಪೊಲೀಸರು ಮೊದಲು ಇಬ್ಬರು ಸಂಘಟಕರನ್ನು ಬಂಧಿಸಿದ್ದರು. ಆದರೆ, ಈ ವೇಳೆ ಮುಫ್ತಿ ಸಲ್ಮಾನ್ ತಲೆಮರೆಸಿಕೊಂಡಿದ್ದರು. ಇವರನ್ನು ಗುಜರಾತ್ ಎಟಿಎಸ್ ವಿಕ್ರೋಲಿ ಪ್ರದೇಶದಿಂದ ಹಿಡಿದು ಘಾಟ್‌ಕೋಪರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇನ್ನು ಮುಫ್ತಿ ಸಲ್ಮಾನ್​ ಬಂಧನವಾಗುತ್ತಿದ್ದಂತೆ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಗುಂಪು ಜಮಾಯಿಸಲು ಪ್ರಾರಂಭಿಸಿತು. ನಂತರ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಗೊಂಡಿತು. ಘಾಟ್‌ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಜನರು ಜಮಾಯಿಸಿದ್ದು, ಪೊಲೀಸರು ಗುಂಪು ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. ಇನ್ನು ಸಲ್ಮಾನ್ ಮುಂಬೈನಲ್ಲಿರುವುದು ಗುಜರಾತ್ ಪೊಲೀಸರಿಗೆ ಗೊತ್ತಾದ ತಕ್ಷಣ ಗುಜರಾತ್ ಎಟಿಎಸ್ ಮತ್ತು ಮುಂಬೈ ಎಟಿಎಸ್ ನೆರವಿನಿಂದ ಸಲ್ಮಾನ್​ನನ್ನು ಬಂಧಿಸಲಾಗಿತ್ತು.

ಬಂಧನಕ್ಕೆ ವಿರೋಧ: ಬಂಧನದ ಕುರಿತಂತೆ ಮಾತನಾಡಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರ ವಕೀಲರಾದ ವಕೀಲ ಆರಿಫ್ ಸಿದ್ದಿಕಿ, " ಪೊಲೀಸರು ಟ್ರಾನ್ಸಿಟ್ ರಿಮಾಂಡ್‌ಗೆ ಅರ್ಜಿ ಸಲ್ಲಿಸಿದ್ದರು, ನಾವು ಅದನ್ನು ವಿರೋಧಿಸಿದ್ದೇವೆ ಮತ್ತು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ನಾವು ಹೇಳಿದ್ದೇವೆ. ಅವರನ್ನು 2 ದಿನಗಳ ಟ್ರಾನ್ಸಿಟ್ ರಿಮಾಂಡ್‌ಗೆ ಕಳುಹಿಸಲಾಗಿದೆ. ಅವರನ್ನು ಜುನಾಗಢ (ಗುಜರಾತ್) ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಯಾರೂ ಪ್ರತಿಭಟನೆ ಮಾಡಬೇಡಿ: ದ್ವೇಷ ಭಾಷಣ ಪ್ರಕರಣದಲ್ಲಿ ಬಂಧಿತರಾಗಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರು ತಮ್ಮ ಬೆಂಬಲಿಗರಿಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ. ನಾನೇನೂ ಕ್ರಿಮಿನಲ್ ಅಲ್ಲ ಅಥವಾ ಅಪರಾಧ ಎಸಗಿದ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆತರಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ತನಿಖೆಯನ್ನು ಮಾಡುತ್ತಿದ್ದಾರೆ. ಮತ್ತು ನಾನು ಸಹ ಅವರಿಗೆ ಸಹಕಾರ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ

ಮುಂಬೈ ಶಾಂತವಾಗಿದೆ; "ಮುಂಬೈನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಘಾಟ್‌ಕೋಪರ್ ಪ್ರದೇಶದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ. ಮುಂಬೈನ ಜನರಿಗೆ ನಾನು ಹೇಳಲು ಬಯಸುತ್ತೇನೆ.. ಯಾವುದೇ ಪರಿಸ್ಥಿಯನ್ನು ನಿಯಂತ್ರಿಸಲು ಪೊಲೀಸರು ಸನ್ನದ್ಧವಾಗಿದ್ದು, ಎಲ್ಲ ರಸ್ತೆಗಳಲ್ಲೂ ಜನರ ನೆರವಿಗಾಗಿ ಪೊಲೀಸರು ರಸ್ತೆ ರಸ್ತೆಯಲ್ಲಿದ್ದಾರೆ ಎಂದು ಡಿಸಿಪಿ ಹೇಮರಾಜ್‌ಸಿಂಗ್ ರಜಪೂತ್ ಹೇಳಿದ್ದಾರೆ.

ಓದಿ: ಚಿಲಿ ಕಾಡ್ಗಿಚ್ಚು: 46ಕ್ಕೂ ಹೆಚ್ಚು ಜನ ಸಾವು, ಬದುಕು ನರಕಸದೃಶ್ಯ- ಮನಕಲಕುವ ಫೋಟೋಗಳು

ಮುಂಬೈ, ಮಹಾರಾಷ್ಟ್ರ: ಮುಫ್ತಿ ಸಲ್ಮಾನ್ ಅವರನ್ನು ಗುಜರಾತ್ ಪೊಲೀಸರು ಘಾಟ್‌ಕೋಪರ್‌ನಲ್ಲಿ ಬಂಧಿಸಿದ್ದಾರೆ. ಗುಜರಾತ್‌ನ ಜುನಾಗಢ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ, ಜುನಾಗಢ ಪೊಲೀಸರು ಮಫ್ತಿ ಸಲ್ಮಾನ್ ಮತ್ತು ಇತರ ಇಬ್ಬರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆ ಗುಜರಾತ್ ಎಟಿಎಸ್ ಪೊಲೀಸರು ಮೊದಲು ಇಬ್ಬರು ಸಂಘಟಕರನ್ನು ಬಂಧಿಸಿದ್ದರು. ಆದರೆ, ಈ ವೇಳೆ ಮುಫ್ತಿ ಸಲ್ಮಾನ್ ತಲೆಮರೆಸಿಕೊಂಡಿದ್ದರು. ಇವರನ್ನು ಗುಜರಾತ್ ಎಟಿಎಸ್ ವಿಕ್ರೋಲಿ ಪ್ರದೇಶದಿಂದ ಹಿಡಿದು ಘಾಟ್‌ಕೋಪರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇನ್ನು ಮುಫ್ತಿ ಸಲ್ಮಾನ್​ ಬಂಧನವಾಗುತ್ತಿದ್ದಂತೆ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಗುಂಪು ಜಮಾಯಿಸಲು ಪ್ರಾರಂಭಿಸಿತು. ನಂತರ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಗೊಂಡಿತು. ಘಾಟ್‌ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಜನರು ಜಮಾಯಿಸಿದ್ದು, ಪೊಲೀಸರು ಗುಂಪು ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. ಇನ್ನು ಸಲ್ಮಾನ್ ಮುಂಬೈನಲ್ಲಿರುವುದು ಗುಜರಾತ್ ಪೊಲೀಸರಿಗೆ ಗೊತ್ತಾದ ತಕ್ಷಣ ಗುಜರಾತ್ ಎಟಿಎಸ್ ಮತ್ತು ಮುಂಬೈ ಎಟಿಎಸ್ ನೆರವಿನಿಂದ ಸಲ್ಮಾನ್​ನನ್ನು ಬಂಧಿಸಲಾಗಿತ್ತು.

ಬಂಧನಕ್ಕೆ ವಿರೋಧ: ಬಂಧನದ ಕುರಿತಂತೆ ಮಾತನಾಡಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರ ವಕೀಲರಾದ ವಕೀಲ ಆರಿಫ್ ಸಿದ್ದಿಕಿ, " ಪೊಲೀಸರು ಟ್ರಾನ್ಸಿಟ್ ರಿಮಾಂಡ್‌ಗೆ ಅರ್ಜಿ ಸಲ್ಲಿಸಿದ್ದರು, ನಾವು ಅದನ್ನು ವಿರೋಧಿಸಿದ್ದೇವೆ ಮತ್ತು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ನಾವು ಹೇಳಿದ್ದೇವೆ. ಅವರನ್ನು 2 ದಿನಗಳ ಟ್ರಾನ್ಸಿಟ್ ರಿಮಾಂಡ್‌ಗೆ ಕಳುಹಿಸಲಾಗಿದೆ. ಅವರನ್ನು ಜುನಾಗಢ (ಗುಜರಾತ್) ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಯಾರೂ ಪ್ರತಿಭಟನೆ ಮಾಡಬೇಡಿ: ದ್ವೇಷ ಭಾಷಣ ಪ್ರಕರಣದಲ್ಲಿ ಬಂಧಿತರಾಗಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರು ತಮ್ಮ ಬೆಂಬಲಿಗರಿಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ. ನಾನೇನೂ ಕ್ರಿಮಿನಲ್ ಅಲ್ಲ ಅಥವಾ ಅಪರಾಧ ಎಸಗಿದ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆತರಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ತನಿಖೆಯನ್ನು ಮಾಡುತ್ತಿದ್ದಾರೆ. ಮತ್ತು ನಾನು ಸಹ ಅವರಿಗೆ ಸಹಕಾರ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ

ಮುಂಬೈ ಶಾಂತವಾಗಿದೆ; "ಮುಂಬೈನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಘಾಟ್‌ಕೋಪರ್ ಪ್ರದೇಶದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ. ಮುಂಬೈನ ಜನರಿಗೆ ನಾನು ಹೇಳಲು ಬಯಸುತ್ತೇನೆ.. ಯಾವುದೇ ಪರಿಸ್ಥಿಯನ್ನು ನಿಯಂತ್ರಿಸಲು ಪೊಲೀಸರು ಸನ್ನದ್ಧವಾಗಿದ್ದು, ಎಲ್ಲ ರಸ್ತೆಗಳಲ್ಲೂ ಜನರ ನೆರವಿಗಾಗಿ ಪೊಲೀಸರು ರಸ್ತೆ ರಸ್ತೆಯಲ್ಲಿದ್ದಾರೆ ಎಂದು ಡಿಸಿಪಿ ಹೇಮರಾಜ್‌ಸಿಂಗ್ ರಜಪೂತ್ ಹೇಳಿದ್ದಾರೆ.

ಓದಿ: ಚಿಲಿ ಕಾಡ್ಗಿಚ್ಚು: 46ಕ್ಕೂ ಹೆಚ್ಚು ಜನ ಸಾವು, ಬದುಕು ನರಕಸದೃಶ್ಯ- ಮನಕಲಕುವ ಫೋಟೋಗಳು

Last Updated : Feb 5, 2024, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.