ETV Bharat / bharat

ಕೌಶಲ್ಯ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ ಹೆಸರು: ಮಹಾರಾಷ್ಟ್ರ ಸರ್ಕಾರದ ನಿರ್ಧಾರ

ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಹೆಸರಿಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

author img

By ETV Bharat Karnataka Team

Published : 2 hours ago

ಮುಖ್ಯಮಂತ್ರಿ ಏಕನಾಥ್ ಶಿಂಧೆ, ರತನ್ ಟಾಟಾ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಏಕನಾಥ್ ಶಿಂಧೆ, ರತನ್ ಟಾಟಾ (ಸಂಗ್ರಹ ಚಿತ್ರ) (IANS)

ಮುಂಬೈ: ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಹೆಸರಿಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದೆ. ಸರ್ಕಾರದ ನಿರ್ಧಾರಕ್ಕೆ ವಿಶ್ವವಿದ್ಯಾಲಯದ ಉಪಕುಲಪತಿ ಅಪೂರ್ವ ಪಾಲ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯವು ಅತ್ಯಂತ ನುರಿತ ಮತ್ತು ಉದ್ಯೋಗಾರ್ಹ ಯುವ ಪ್ರತಿಭೆಗಳನ್ನು ಸೃಷ್ಟಿಸಲು, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ಉತ್ತಮ ಗುಣಮಟ್ಟದ ಕೌಶಲ್ಯ ಶಿಕ್ಷಣ, ಸ್ಟಾರ್ಟ್ಅಪ್​ಗಳು, ಇನ್ ಕ್ಯುಬೇಷನ್, ಉದ್ಯೋಗಾರ್ಹತೆ, ತರಬೇತಿ, ಸಮಾಲೋಚನೆ, ಅಪ್ರೆಂಟಿಸ್ ಶಿಪ್, ಉದ್ಯೋಗ ತರಬೇತಿ ಮತ್ತು ಉದ್ಯಮ ಪಾಲುದಾರಿಕೆಯೊಂದಿಗೆ ಸಮಗ್ರ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಸ್ಥಾಪಿಸಲಾದ ವಿಶೇಷ ವಿಶ್ವವಿದ್ಯಾಲಯವಾಗಿದೆ.

ಯುವಕರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಉದ್ಯೋಗವನ್ನು ಸುಗಮಗೊಳಿಸುವ ಮೂಲಕ ಮತ್ತು ಸ್ವಯಂ ಉದ್ಯೋಗ ಮಾರ್ಗದರ್ಶನವನ್ನು ಒದಗಿಸುವ ಮೂಲಕ ಅಂತರ್ಗತ ಬೆಳವಣಿಗೆ ಉತ್ತೇಜಿಸುವುದು, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ವಿಷಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಉದ್ಯಮಕ್ಕೆ ಉದ್ಯೋಗ-ಸಿದ್ಧ ಕಾರ್ಯಪಡೆ ಒದಗಿಸುವುದು ಇದರ ಉದ್ದೇಶವಾಗಿದೆ.

ಕ್ಯಾಬಿನೆಟ್​ನ ಇತರ ನಿರ್ಧಾರಗಳು: ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಮೀನುಗಾರಿಕೆ, ಉಪ್ಪು ತಯಾರಿಕೆ ಮತ್ತು ಭತ್ತದ ಕೃಷಿಯಲ್ಲಿ ತೊಡಗಿರುವ ಕೃಷಿ ಸಮುದಾಯಕ್ಕಾಗಿ ನಿಗಮವನ್ನು ಸ್ಥಾಪಿಸಲು ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಸಮಾಜ ಕಾರ್ಯ ಕಾಲೇಜುಗಳ ಶಿಕ್ಷಕರಿಗೆ ವೃತ್ತಿ ಪ್ರಗತಿ ಯೋಜನೆ, ದಮನ ಗಂಗಾ ಏಕಮುಖ ಗೋದಾವರಿ ನದಿ ಜೋಡಣೆ ಯೋಜನೆ, ಅಷ್ಟಿ ಏತ ನೀರಾವರಿ ಯೋಜನೆಗೆ ಪರಿಷ್ಕೃತ ಅನುಮೋದನೆ, ವೈಜಾಪುರದ ಶನಿದೇವಗಾಂವ್ ಬ್ಯಾರೇಜ್ ಗೆ ಆಡಳಿತಾತ್ಮಕ ಅನುಮೋದನೆ, ರಾಜ್ಯ ಕೃಷಿ ನಿಗಮದ ಭೂಮಿಯನ್ನು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸುವುದು, ಥಾಣೆ ಮಹಾನಗರ ಪಾಲಿಕೆಯ ಆಡಳಿತಾತ್ಮಕ ಕಟ್ಟಡಕ್ಕಾಗಿ ಪಂಚಪಖಾಡಿ ಪ್ರದೇಶದಲ್ಲಿ ಭೂಮಿ ಮತ್ತು ಕಿಡ್ಕಾಲಿಯಲ್ಲಿ ಹೈಬ್ರಿಡ್ ಸ್ಕಿಲ್ ಯೂನಿವರ್ಸಿಟಿಗೆ ಉಚಿತವಾಗಿ ಭೂಮಿ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯನ್ನು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದಿಸಲಾಗಿದೆ. ಪುಣೆ ಮೆಟ್ರೋ ರೈಲು ಎರಡನೇ ಹಂತದ ರೈಲು ಮಾರ್ಗದ ಕಾಮಗಾರಿಗಳು, ಲಾತೂರ್ ಜಿಲ್ಲೆಯ ಕಿಲ್ಲಾರಿಯ ರೈತರ ಸಹಕಾರಿ ಅಂಶದ ಬಡ್ಡಿಯೊಂದಿಗೆ ಸಾಲ ಮನ್ನಾ ಮತ್ತು ತೊಂದರೆಗೀಡಾದ ಸಹಕಾರಿ ಜೀವನಾಧಾರ ನೀರಾವರಿ ಯೋಜನೆಗಳ ಬಾಕಿಯನ್ನು ಮನ್ನಾ ಮಾಡಲು ಅದು ಅನುಮೋದನೆ ನೀಡಿತು.

ಇದನ್ನೂ ಓದಿ : ಹೂಡಾ ಹಟಮಾರಿತನದಿಂದ ಹರಿಯಾಣದಲ್ಲಿ ಕಾಂಗ್ರೆಸ್​ ಸೋಲು: ರೈತ ಮುಖಂಡ ಟಿಕಾಯತ್

ಮುಂಬೈ: ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಹೆಸರಿಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದೆ. ಸರ್ಕಾರದ ನಿರ್ಧಾರಕ್ಕೆ ವಿಶ್ವವಿದ್ಯಾಲಯದ ಉಪಕುಲಪತಿ ಅಪೂರ್ವ ಪಾಲ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯವು ಅತ್ಯಂತ ನುರಿತ ಮತ್ತು ಉದ್ಯೋಗಾರ್ಹ ಯುವ ಪ್ರತಿಭೆಗಳನ್ನು ಸೃಷ್ಟಿಸಲು, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ಉತ್ತಮ ಗುಣಮಟ್ಟದ ಕೌಶಲ್ಯ ಶಿಕ್ಷಣ, ಸ್ಟಾರ್ಟ್ಅಪ್​ಗಳು, ಇನ್ ಕ್ಯುಬೇಷನ್, ಉದ್ಯೋಗಾರ್ಹತೆ, ತರಬೇತಿ, ಸಮಾಲೋಚನೆ, ಅಪ್ರೆಂಟಿಸ್ ಶಿಪ್, ಉದ್ಯೋಗ ತರಬೇತಿ ಮತ್ತು ಉದ್ಯಮ ಪಾಲುದಾರಿಕೆಯೊಂದಿಗೆ ಸಮಗ್ರ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಸ್ಥಾಪಿಸಲಾದ ವಿಶೇಷ ವಿಶ್ವವಿದ್ಯಾಲಯವಾಗಿದೆ.

ಯುವಕರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಉದ್ಯೋಗವನ್ನು ಸುಗಮಗೊಳಿಸುವ ಮೂಲಕ ಮತ್ತು ಸ್ವಯಂ ಉದ್ಯೋಗ ಮಾರ್ಗದರ್ಶನವನ್ನು ಒದಗಿಸುವ ಮೂಲಕ ಅಂತರ್ಗತ ಬೆಳವಣಿಗೆ ಉತ್ತೇಜಿಸುವುದು, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವ ವಿಷಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಉದ್ಯಮಕ್ಕೆ ಉದ್ಯೋಗ-ಸಿದ್ಧ ಕಾರ್ಯಪಡೆ ಒದಗಿಸುವುದು ಇದರ ಉದ್ದೇಶವಾಗಿದೆ.

ಕ್ಯಾಬಿನೆಟ್​ನ ಇತರ ನಿರ್ಧಾರಗಳು: ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಮೀನುಗಾರಿಕೆ, ಉಪ್ಪು ತಯಾರಿಕೆ ಮತ್ತು ಭತ್ತದ ಕೃಷಿಯಲ್ಲಿ ತೊಡಗಿರುವ ಕೃಷಿ ಸಮುದಾಯಕ್ಕಾಗಿ ನಿಗಮವನ್ನು ಸ್ಥಾಪಿಸಲು ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಸಮಾಜ ಕಾರ್ಯ ಕಾಲೇಜುಗಳ ಶಿಕ್ಷಕರಿಗೆ ವೃತ್ತಿ ಪ್ರಗತಿ ಯೋಜನೆ, ದಮನ ಗಂಗಾ ಏಕಮುಖ ಗೋದಾವರಿ ನದಿ ಜೋಡಣೆ ಯೋಜನೆ, ಅಷ್ಟಿ ಏತ ನೀರಾವರಿ ಯೋಜನೆಗೆ ಪರಿಷ್ಕೃತ ಅನುಮೋದನೆ, ವೈಜಾಪುರದ ಶನಿದೇವಗಾಂವ್ ಬ್ಯಾರೇಜ್ ಗೆ ಆಡಳಿತಾತ್ಮಕ ಅನುಮೋದನೆ, ರಾಜ್ಯ ಕೃಷಿ ನಿಗಮದ ಭೂಮಿಯನ್ನು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸುವುದು, ಥಾಣೆ ಮಹಾನಗರ ಪಾಲಿಕೆಯ ಆಡಳಿತಾತ್ಮಕ ಕಟ್ಟಡಕ್ಕಾಗಿ ಪಂಚಪಖಾಡಿ ಪ್ರದೇಶದಲ್ಲಿ ಭೂಮಿ ಮತ್ತು ಕಿಡ್ಕಾಲಿಯಲ್ಲಿ ಹೈಬ್ರಿಡ್ ಸ್ಕಿಲ್ ಯೂನಿವರ್ಸಿಟಿಗೆ ಉಚಿತವಾಗಿ ಭೂಮಿ ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯನ್ನು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದಿಸಲಾಗಿದೆ. ಪುಣೆ ಮೆಟ್ರೋ ರೈಲು ಎರಡನೇ ಹಂತದ ರೈಲು ಮಾರ್ಗದ ಕಾಮಗಾರಿಗಳು, ಲಾತೂರ್ ಜಿಲ್ಲೆಯ ಕಿಲ್ಲಾರಿಯ ರೈತರ ಸಹಕಾರಿ ಅಂಶದ ಬಡ್ಡಿಯೊಂದಿಗೆ ಸಾಲ ಮನ್ನಾ ಮತ್ತು ತೊಂದರೆಗೀಡಾದ ಸಹಕಾರಿ ಜೀವನಾಧಾರ ನೀರಾವರಿ ಯೋಜನೆಗಳ ಬಾಕಿಯನ್ನು ಮನ್ನಾ ಮಾಡಲು ಅದು ಅನುಮೋದನೆ ನೀಡಿತು.

ಇದನ್ನೂ ಓದಿ : ಹೂಡಾ ಹಟಮಾರಿತನದಿಂದ ಹರಿಯಾಣದಲ್ಲಿ ಕಾಂಗ್ರೆಸ್​ ಸೋಲು: ರೈತ ಮುಖಂಡ ಟಿಕಾಯತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.