ETV Bharat / bharat

ಶ್ರೀ ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ಟ್ರಸ್ಟ್‌ಗೆ ಶಾಕ್​, ಅರ್ಜಿ ತಿರಸ್ಕರಿಸಿದ ಸುಪ್ರೀಂ

author img

By ETV Bharat Karnataka Team

Published : Mar 19, 2024, 6:34 PM IST

Krishna Janmabhoomi Dispute: ಶ್ರೀ ಕೃಷ್ಣ ಜನ್ಮಭೂಮಿ ಈದ್ಗಾ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್ ನಲ್ಲಿ 18 ಪ್ರಕರಣಗಳು ಬಾಕಿ ಇವೆ. ಮುಸ್ಲಿಂ ಕಡೆಯವರು ಮಾರ್ಚ್ 14 ರಂದು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು, ಅದನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

Krishna Janmabhoomi Case  Supreme Court News
ಶ್ರೀ ಕೃಷ್ಣ ಜನ್ಮಭೂಮಿ

ಮಥುರಾ, ಉತ್ತರಪ್ರದೇಶ: ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನೀವು ಅಲಹಾಬಾದ್ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿದೆ. ಶ್ರೀ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮಾತ್ರ ವಿಚಾರಣೆ ಮಾಡಲಾಗುತ್ತದೆ.

ಮನವಿಯಲ್ಲಿ ಒತ್ತಾಯಿಸಿದ್ದೇನು: ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿ ಸಮಿತಿ ನಡುವೆ 1974ರಲ್ಲಿ ಮಾಡಿಕೊಂಡಿರುವ ಸುಗ್ರೀವಾಜ್ಞೆ ಒಪ್ಪಂದ ರದ್ದುಪಡಿಸಬೇಕು. ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕು. ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್ ಅನ್ನು ಕೇಶವ ಕತ್ರ ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿದೆ. ಭೂಮಿಯ ಮಾಲಿಕತ್ವವು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್‌ಗೆ ಇದ್ದರೆ, ಹಕ್ಕುಗಳು ಟ್ರಸ್ಟ್‌ನಲ್ಲಿಯೂ ಇರಬೇಕು. ಯಾವುದೇ ಸಂಸ್ಥೆಗೆ ತೀರ್ಪು ನೀಡುವ ಹಕ್ಕು ಇಲ್ಲ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ವಕೀಲರ ಪ್ರಕಾರ, ವಿವಾದಿತ ಈದ್ಗಾ ಶ್ರೀ ಕೃಷ್ಣನ ಜನ್ಮಸ್ಥಳದ ಒಂದು ಭಾಗವಾಗಿದೆ. ಸಂದರ್ಭದ ಪ್ರಕಾರ ಒಟ್ಟು ಆಸ್ತಿಯ ಖೇವತ್ ಸಂಖ್ಯೆ 255, ಖಾಸ್ರಾ ಸಂಖ್ಯೆ 825, ಇದು ಈದ್ಗಾವನ್ನು ಒಳಗೊಂಡಿದೆ. ಅದರ ವಿಸ್ತೀರ್ಣ 13.37 ಎಕರೆ, ಕಂದಾಯ ದಾಖಲೆಗಳಲ್ಲಿ ಶ್ರೀ ಕೃಷ್ಣನ ಜನ್ಮ ಸ್ಥಳವು ಆಸ್ತಿ ಮಾಲೀಕತ್ವ ಎಂದು ದಾಖಲಾಗಿದೆ. ಮಂದಿರ ಮತ್ತು ಈದ್ಗಾ ಪುರಸಭೆಯ ಮಿತಿಯಲ್ಲಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಟ್ರಸ್ಟ್‌ಗೆ ಸೇರಿದ ಆಸ್ತಿ ಎಂದು ನಮೂದಿಸಲಾಗಿದೆ. ಈದ್ಗಾ ಮಾಲೀಕತ್ವಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಹೊಂದಿಲ್ಲ, ನ್ಯಾಯಾಲಯದಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ.

ಸದ್ಯದ ಸ್ಥಿತಿ ಏನು?: 13.37 ಎಕರೆಯಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸಂಕೀರ್ಣ ನಿರ್ಮಿಸಲಾಗಿದೆ. ಇದರಲ್ಲಿ ಒಂದೂವರೆ ಎಕರೆಯಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಲೀಲಾ ಮಂಚ್, ಭಗವತ್ ಭವನ ಮತ್ತು ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಮೊದಲನೆಯದಾಗಿ, 25 ಸೆಪ್ಟೆಂಬರ್ 2020 ರಂದು, ಶ್ರೀ ಕೃಷ್ಣ ಜನ್ಮಸ್ಥಾನದ ಮಾಲೀಕತ್ವದ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ವಕೀಲರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು, ಇದರಲ್ಲಿ ಶ್ರೀ ಕೃಷ್ಣ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಸಮಿತಿಯನ್ನು ಪ್ರತಿವಾದಿ ಪಕ್ಷಗಳನ್ನಾಗಿ ಮಾಡಲಾಗಿದೆ.

ಶ್ರೀಕೃಷ್ಣನ ಜನ್ಮಸ್ಥಳವನ್ನು ಮಸೀದಿ ಮುಕ್ತ ಮಂದಿರವನ್ನಾಗಿ ಮಾಡಬೇಕು. ಬನಾರಸ್‌ನ ರಾಜ ಪತ್ನಿ 1815 ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಈ ಸ್ಥಳವನ್ನು ಹರಾಜು ಸಮಯದಲ್ಲಿ ಖರೀದಿಸಿದ್ದರು ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪಂಡಿತ್ ಮದನ್ ಮೋಹನ್ ಮಾಳವೀಯ ಅವರು 1940 ರಲ್ಲಿ ಮಥುರಾಗೆ ಬಂದಾಗ ಶ್ರೀ ಕೃಷ್ಣನ ಜನ್ಮಸ್ಥಳದ ದುಃಸ್ಥಿತಿ ಕಂಡು ಬೇಸರಗೊಂಡರು. ಸ್ಥಳೀಯರು ಮದನ್ ಮೋಹನ್ ಮಾಳವೀಯರಿಗೆ ಇಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದರು. ಇಲ್ಲಿ ದೇವಾಲಯ ನಿರ್ಮಿಸುವಂತೆ ಮದನ್ ಮೋಹನ್ ಮಾಳವೀಯ ಮಥುರಾದ ಕೈಗಾರಿಕೋದ್ಯಮಿ ಜುಗಲ್ ಅವರಿಗೆ ಪತ್ರ ಬರೆದರು.

ದೇವಾಲಯ ಸ್ಥಾಪನೆ: ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು 21 ಫೆಬ್ರವರಿ 1951 ರಂದು ಸ್ಥಾಪಿಸಲಾಯಿತು. 12 ಅಕ್ಟೋಬರ್ 1968 ರಂದು, ಶ್ರೀ ಕೃಷ್ಣ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ ಮಸೀದಿ ಸಮಿತಿಯು ಕತ್ರಾ ಕೇಶವ ದೇವ್ ದೇವಸ್ಥಾನದ ಭೂಮಿಗೆ ಒಪ್ಪಂದವನ್ನು ಮಾಡಿತು. 1974ರಲ್ಲಿ ಜಾರಿಯಾದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.

ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕು. ಏಕೆಂದರೆ ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಮಸೀದಿಗೆ ಸ್ಥಳ ನೀಡುವ ಹಕ್ಕು ಇಲ್ಲ. ಮಾಲೀಕತ್ವವು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್‌ನಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅಲಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಮುಸ್ಲಿಂ ಕಡೆಯವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ವಕೀಲ ಸಾರ್ಥಕ್ ಚತುರ್ವೇದಿ ಹೇಳಿದ್ದರು. ಜನವರಿ 11 ರಂದು ಆದೇಶವನ್ನು ನೀಡಲಾಯಿತು. ಎಲ್ಲ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಲಾಗುವುದು. ಈ ಆದೇಶದ ವಿರುದ್ಧ ಮುಸ್ಲಿಂ ಕಡೆಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅದರ ಮೇಲೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀವು ಅಲಹಾಬಾದ್ ಹೈಕೋರ್ಟ್‌ಗೆ ಹಿಂತಿರುಗಿ ಎಂದು ಆದೇಶಿಸಿದೆ. ಅಲ್ಲಿ ಮಾತ್ರ ಎಲ್ಲ ಪ್ರಕರಣಗಳ ವಿಚಾರಣೆ ನಡೆಯಲಿದೆ. ಇದು ಹೈಕೋರ್ಟ್‌ಗೆ ಸಂಬಂಧಿಸಿದ ವಿಷಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶ್ರೀ ಕೃಷ್ಣ ಜನ್ಮಭೂಮಿ ವಿವಾಹಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಸ್ಲಿಂ ಪಕ್ಷಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ.

ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ಮಥುರಾ, ಉತ್ತರಪ್ರದೇಶ: ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನೀವು ಅಲಹಾಬಾದ್ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿದೆ. ಶ್ರೀ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮಾತ್ರ ವಿಚಾರಣೆ ಮಾಡಲಾಗುತ್ತದೆ.

ಮನವಿಯಲ್ಲಿ ಒತ್ತಾಯಿಸಿದ್ದೇನು: ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿ ಸಮಿತಿ ನಡುವೆ 1974ರಲ್ಲಿ ಮಾಡಿಕೊಂಡಿರುವ ಸುಗ್ರೀವಾಜ್ಞೆ ಒಪ್ಪಂದ ರದ್ದುಪಡಿಸಬೇಕು. ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕು. ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್ ಅನ್ನು ಕೇಶವ ಕತ್ರ ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿದೆ. ಭೂಮಿಯ ಮಾಲಿಕತ್ವವು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್‌ಗೆ ಇದ್ದರೆ, ಹಕ್ಕುಗಳು ಟ್ರಸ್ಟ್‌ನಲ್ಲಿಯೂ ಇರಬೇಕು. ಯಾವುದೇ ಸಂಸ್ಥೆಗೆ ತೀರ್ಪು ನೀಡುವ ಹಕ್ಕು ಇಲ್ಲ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ವಕೀಲರ ಪ್ರಕಾರ, ವಿವಾದಿತ ಈದ್ಗಾ ಶ್ರೀ ಕೃಷ್ಣನ ಜನ್ಮಸ್ಥಳದ ಒಂದು ಭಾಗವಾಗಿದೆ. ಸಂದರ್ಭದ ಪ್ರಕಾರ ಒಟ್ಟು ಆಸ್ತಿಯ ಖೇವತ್ ಸಂಖ್ಯೆ 255, ಖಾಸ್ರಾ ಸಂಖ್ಯೆ 825, ಇದು ಈದ್ಗಾವನ್ನು ಒಳಗೊಂಡಿದೆ. ಅದರ ವಿಸ್ತೀರ್ಣ 13.37 ಎಕರೆ, ಕಂದಾಯ ದಾಖಲೆಗಳಲ್ಲಿ ಶ್ರೀ ಕೃಷ್ಣನ ಜನ್ಮ ಸ್ಥಳವು ಆಸ್ತಿ ಮಾಲೀಕತ್ವ ಎಂದು ದಾಖಲಾಗಿದೆ. ಮಂದಿರ ಮತ್ತು ಈದ್ಗಾ ಪುರಸಭೆಯ ಮಿತಿಯಲ್ಲಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಟ್ರಸ್ಟ್‌ಗೆ ಸೇರಿದ ಆಸ್ತಿ ಎಂದು ನಮೂದಿಸಲಾಗಿದೆ. ಈದ್ಗಾ ಮಾಲೀಕತ್ವಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಹೊಂದಿಲ್ಲ, ನ್ಯಾಯಾಲಯದಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ.

ಸದ್ಯದ ಸ್ಥಿತಿ ಏನು?: 13.37 ಎಕರೆಯಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸಂಕೀರ್ಣ ನಿರ್ಮಿಸಲಾಗಿದೆ. ಇದರಲ್ಲಿ ಒಂದೂವರೆ ಎಕರೆಯಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಲೀಲಾ ಮಂಚ್, ಭಗವತ್ ಭವನ ಮತ್ತು ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಮೊದಲನೆಯದಾಗಿ, 25 ಸೆಪ್ಟೆಂಬರ್ 2020 ರಂದು, ಶ್ರೀ ಕೃಷ್ಣ ಜನ್ಮಸ್ಥಾನದ ಮಾಲೀಕತ್ವದ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ವಕೀಲರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು, ಇದರಲ್ಲಿ ಶ್ರೀ ಕೃಷ್ಣ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಸಮಿತಿಯನ್ನು ಪ್ರತಿವಾದಿ ಪಕ್ಷಗಳನ್ನಾಗಿ ಮಾಡಲಾಗಿದೆ.

ಶ್ರೀಕೃಷ್ಣನ ಜನ್ಮಸ್ಥಳವನ್ನು ಮಸೀದಿ ಮುಕ್ತ ಮಂದಿರವನ್ನಾಗಿ ಮಾಡಬೇಕು. ಬನಾರಸ್‌ನ ರಾಜ ಪತ್ನಿ 1815 ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಈ ಸ್ಥಳವನ್ನು ಹರಾಜು ಸಮಯದಲ್ಲಿ ಖರೀದಿಸಿದ್ದರು ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪಂಡಿತ್ ಮದನ್ ಮೋಹನ್ ಮಾಳವೀಯ ಅವರು 1940 ರಲ್ಲಿ ಮಥುರಾಗೆ ಬಂದಾಗ ಶ್ರೀ ಕೃಷ್ಣನ ಜನ್ಮಸ್ಥಳದ ದುಃಸ್ಥಿತಿ ಕಂಡು ಬೇಸರಗೊಂಡರು. ಸ್ಥಳೀಯರು ಮದನ್ ಮೋಹನ್ ಮಾಳವೀಯರಿಗೆ ಇಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದರು. ಇಲ್ಲಿ ದೇವಾಲಯ ನಿರ್ಮಿಸುವಂತೆ ಮದನ್ ಮೋಹನ್ ಮಾಳವೀಯ ಮಥುರಾದ ಕೈಗಾರಿಕೋದ್ಯಮಿ ಜುಗಲ್ ಅವರಿಗೆ ಪತ್ರ ಬರೆದರು.

ದೇವಾಲಯ ಸ್ಥಾಪನೆ: ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು 21 ಫೆಬ್ರವರಿ 1951 ರಂದು ಸ್ಥಾಪಿಸಲಾಯಿತು. 12 ಅಕ್ಟೋಬರ್ 1968 ರಂದು, ಶ್ರೀ ಕೃಷ್ಣ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ ಮಸೀದಿ ಸಮಿತಿಯು ಕತ್ರಾ ಕೇಶವ ದೇವ್ ದೇವಸ್ಥಾನದ ಭೂಮಿಗೆ ಒಪ್ಪಂದವನ್ನು ಮಾಡಿತು. 1974ರಲ್ಲಿ ಜಾರಿಯಾದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.

ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕು. ಏಕೆಂದರೆ ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಮಸೀದಿಗೆ ಸ್ಥಳ ನೀಡುವ ಹಕ್ಕು ಇಲ್ಲ. ಮಾಲೀಕತ್ವವು ಶ್ರೀ ಕೃಷ್ಣ ಜನ್ಮಭೂಮಿ ಸೇವಾ ಟ್ರಸ್ಟ್‌ನಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅಲಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಮುಸ್ಲಿಂ ಕಡೆಯವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ವಕೀಲ ಸಾರ್ಥಕ್ ಚತುರ್ವೇದಿ ಹೇಳಿದ್ದರು. ಜನವರಿ 11 ರಂದು ಆದೇಶವನ್ನು ನೀಡಲಾಯಿತು. ಎಲ್ಲ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಲಾಗುವುದು. ಈ ಆದೇಶದ ವಿರುದ್ಧ ಮುಸ್ಲಿಂ ಕಡೆಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅದರ ಮೇಲೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀವು ಅಲಹಾಬಾದ್ ಹೈಕೋರ್ಟ್‌ಗೆ ಹಿಂತಿರುಗಿ ಎಂದು ಆದೇಶಿಸಿದೆ. ಅಲ್ಲಿ ಮಾತ್ರ ಎಲ್ಲ ಪ್ರಕರಣಗಳ ವಿಚಾರಣೆ ನಡೆಯಲಿದೆ. ಇದು ಹೈಕೋರ್ಟ್‌ಗೆ ಸಂಬಂಧಿಸಿದ ವಿಷಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶ್ರೀ ಕೃಷ್ಣ ಜನ್ಮಭೂಮಿ ವಿವಾಹಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಸ್ಲಿಂ ಪಕ್ಷಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ.

ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.