ETV Bharat / bharat

ರಾವಣನ ಆರಾಧಕ​​; ಲಂಕಾಧಿಪತಿಯನ್ನೇ ಗುರು ಎನ್ನುವ ’ಲಂಕೇಶ್’ - ಏನಿದು ರಾವಣಾಸುರ ಆರಾಧನೆ? ​​

ನಾನು ಅವರನ್ನು ಗುರು ಎಂದು ಭಾವಿಸಿದ್ದೇನೆ ಎಂದು ಮಾತನಾಡುವ ನಾಮ್​ದೇವ್​, ಶ್ರೀರಾಮನು ರಾವಣನನ್ನು ಗೌರವಿಸಿದರೆ, ಲಕ್ಷಣನೂ ಅವರಿಂದ ಸಾಕಷ್ಟು ಕಲಿತಕೊಂಡಿದ್ದ ಅಂತಾ ಹೇಳ್ತಾರೆ.

author img

By ETV Bharat Karnataka Team

Published : 3 hours ago

jabalpur-meet-santosh-namdev-who-worships-ravan-and-considers-him-his-guru
nನಾಮ್​ದೇವ್​ (ಈಟಿವಿ ಭಾರತ್​​)

ಜಬಲ್ಪುರ್,ಮಧ್ಯಪ್ರದೇಶ​: ರಾಕ್ಷಸ ರಾವಣನ ಮೇಲೆ ಅತಿಯಾದ ನಂಬಿಕೆ ಹೊಂದಿರುವ ಜಬಲ್ಪುರ್​​ನ ಟೈಲರ್​ ಸಂತೋಷ್​ ನಾಮದೇವ್​ ಇದೀಗ ಲಂಕೇಶ್​ ಅಥವಾ ಲಂಕಾದ ರಾಜ ಎಂಬ ಉಪನಾಮವನ್ನು ಪಡೆದುಕೊಂಡಿದ್ದಾರೆ.​ ರಾವಣ ತನ್ನ ಗುರು ಮತ್ತು ಕುಲದೇವತೆ ಎಂದು ನಾಮ್​ದೇವ್​ ನಂಬಿದ್ದಾರೆ. ಅಲ್ಲದೇ ಆತನ ಬುದ್ಧಿವಂತಿಕೆ ಮತ್ತು ಶಕ್ತಿಯಂತಹ ಗುಣಗಳೇ ಆತನ ಶಕ್ತಿ ಅಂತಾರೆ ನಾಮದೇವ್​.

ನಾನು ಅವರನ್ನು ಗುರು ಎಂದು ಭಾವಿಸಿದ್ದೇನೆ ಎಂದು ಮಾತನಾಡುವ ನಾಮ್​ದೇವ್​, ಶ್ರೀರಾಮನು ರಾವಣನನ್ನು ಗೌರವಿಸಿದರೆ, ಲಕ್ಷಣನೂ ಅವರಿಂದ ಸಾಕಷ್ಟು ಕಲಿತುಕೊಂಡಿದ್ದಾರೆ ಅಂತಾರೆ. 1975ರಿಂದ ನಾನು ರಾವಣನ ಆರಾಧನೆ ಮಾಡುತ್ತಿದ್ದೇನೆ. ಕಳೆದ 22 ವರ್ಷದ ಹಿಂದೆ ನನ್ನ ಮನೆಯಲ್ಲಿ ರಾವಣನ ಮೂರ್ತಿಯನ್ನು ಸ್ಥಾಪಿಸಿದ್ದು, ಪ್ರತಿನಿತ್ಯ ಪೂಜೆ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಈ ನಾಮದೇವ್​.

ನಾಮದೇವ್​ ಅವರ ಇಡೀ ಕುಟುಂಬವೇ ರಾವಣನ ಆರಾಧನೆ ಮಾಡುತ್ತೆ: ನಾಮ್​ದೇವ್​ ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ರಾವಣನ ಪರಂಪರೆಗೆ ಬದ್ಧವಾಗಿದ್ದಾರೆ. ನಾಮ್​ ದೇವ್​ ಅವರ ಮಕ್ಕಳಿಗೆ ರಾವಣನ ಕುಲದ ಹೆಸರುಗಳನ್ನೇ ಇಟ್ಟಿದ್ದಾರೆ. ಅವರ ಮಗ ಅಕ್ಷಯ್​ ಕುಮಾರ್​ ನಾಮ್​ದೇವ್​ ಮಾತನಾಡಿ, ಕುಟುಂಬದಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ. ರಾವಣನು ಬುದ್ಧಿವಂತ ಮತ್ತು ಉತ್ತಮ ವಿದ್ಯಾಭ್ಯಾಸವನ್ನು ಪಡೆದವನಾಗಿದ್ದು, ಆತ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದರು.

ನೆರೆಹೊರೆಯವರಲ್ಲೂ ಆಸಕ್ತಿ ಕೆರಳಿಸಿದ ನಾಮದೇವ ರಾವಣದ ಭಕ್ತಿ: ನಾಮ್​ದೇವ್​ರ ಈ ಭಕ್ತಿ ಆತನ ಸ್ನೇಹಿತರು ಮತ್ತು ನೆರೆಹೊರೆಯವರ ಮೇಲೂ ಪ್ರಭಾವ ಬೀರಿದೆ. ಕೌನ್ಸಿಲರ್​ ದೀಪಕ್​ ಜೈನ್​ ಮಾತನಾಡಿ. ರಾವಣನಿಗೆ ದೋಷಗಳಿವೆ ಎಂದು ನಾನು ನಂಬುವುದಿಲ್ಲ. ಲಂಕೇಶ್ ಅವರು ರಾವಣನ ಪಾತ್ರದ ಕುರಿತು ಮಾತನಾಡುತ್ತಾರೆ. ಜೈ ಲಂಕೇಶ್ ಹೆಸರಿನ ಹಲವಾರು ಅಂಗಡಿಗಳನ್ನು ನಿರ್ವಹಿಸುತ್ತಾರೆ.

ಸ್ಥಳೀಯ ನಿವಾಸಿ ಧೃವ ನೆಮ್​ ಮಾತನಾಡಿ, ಲಂಕೇಶ್​ ಕೇವಲ ರಾವಣ ಮತ್ತು ಶಿವನ ಪೂಜೆ ಮಾಡುತ್ತಾರೆ. ರಾವಣನನ್ನು ಪೂಜೆ ಮಾಡುವ ಮೂಲಕ ದಿನ ಪ್ರಾರಂಭ ಮಾಡಿ, ಪೂಜೆಯಿಂದಲೇ ದಿನ ಕಳೆಯುತ್ತಾರೆ.

ನವರಾತ್ರಿ ವೇಳೆಯಲ್ಲಿ ಲಂಕೇಶ್​ ತನ್ನ ಅನುಯಾಯಿಗಳ ರಾವಣನಿಗೆ ಭಕ್ತಿ ತೋರಿಸುವ ಶೋಭಾ ಯಾತ್ರೆಯನ್ನು ಅಂತ್ಯಗೊಳಿಸುವ ಆಚರಣೆ ನಡೆಸುತ್ತಿದ್ದು, ಇದಕ್ಕೆ ಸಮುದಾಯಸ್ತರ ಬೆಂಬಲವೂ ಸಿಕ್ಕಿದೆ.

ಇದನ್ನೂ ಓದಿ: ನವರಾತ್ರಿಯ ಒಂಬತ್ತನೇ ದಿನದ ಸಂಭ್ರಮ: ದೇಶದ ವಿವಿಧ ದೇವಾಲಯಗಳಲ್ಲಿ ಬೆಳಗಿದ ಆರತಿ

ಜಬಲ್ಪುರ್,ಮಧ್ಯಪ್ರದೇಶ​: ರಾಕ್ಷಸ ರಾವಣನ ಮೇಲೆ ಅತಿಯಾದ ನಂಬಿಕೆ ಹೊಂದಿರುವ ಜಬಲ್ಪುರ್​​ನ ಟೈಲರ್​ ಸಂತೋಷ್​ ನಾಮದೇವ್​ ಇದೀಗ ಲಂಕೇಶ್​ ಅಥವಾ ಲಂಕಾದ ರಾಜ ಎಂಬ ಉಪನಾಮವನ್ನು ಪಡೆದುಕೊಂಡಿದ್ದಾರೆ.​ ರಾವಣ ತನ್ನ ಗುರು ಮತ್ತು ಕುಲದೇವತೆ ಎಂದು ನಾಮ್​ದೇವ್​ ನಂಬಿದ್ದಾರೆ. ಅಲ್ಲದೇ ಆತನ ಬುದ್ಧಿವಂತಿಕೆ ಮತ್ತು ಶಕ್ತಿಯಂತಹ ಗುಣಗಳೇ ಆತನ ಶಕ್ತಿ ಅಂತಾರೆ ನಾಮದೇವ್​.

ನಾನು ಅವರನ್ನು ಗುರು ಎಂದು ಭಾವಿಸಿದ್ದೇನೆ ಎಂದು ಮಾತನಾಡುವ ನಾಮ್​ದೇವ್​, ಶ್ರೀರಾಮನು ರಾವಣನನ್ನು ಗೌರವಿಸಿದರೆ, ಲಕ್ಷಣನೂ ಅವರಿಂದ ಸಾಕಷ್ಟು ಕಲಿತುಕೊಂಡಿದ್ದಾರೆ ಅಂತಾರೆ. 1975ರಿಂದ ನಾನು ರಾವಣನ ಆರಾಧನೆ ಮಾಡುತ್ತಿದ್ದೇನೆ. ಕಳೆದ 22 ವರ್ಷದ ಹಿಂದೆ ನನ್ನ ಮನೆಯಲ್ಲಿ ರಾವಣನ ಮೂರ್ತಿಯನ್ನು ಸ್ಥಾಪಿಸಿದ್ದು, ಪ್ರತಿನಿತ್ಯ ಪೂಜೆ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಈ ನಾಮದೇವ್​.

ನಾಮದೇವ್​ ಅವರ ಇಡೀ ಕುಟುಂಬವೇ ರಾವಣನ ಆರಾಧನೆ ಮಾಡುತ್ತೆ: ನಾಮ್​ದೇವ್​ ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ರಾವಣನ ಪರಂಪರೆಗೆ ಬದ್ಧವಾಗಿದ್ದಾರೆ. ನಾಮ್​ ದೇವ್​ ಅವರ ಮಕ್ಕಳಿಗೆ ರಾವಣನ ಕುಲದ ಹೆಸರುಗಳನ್ನೇ ಇಟ್ಟಿದ್ದಾರೆ. ಅವರ ಮಗ ಅಕ್ಷಯ್​ ಕುಮಾರ್​ ನಾಮ್​ದೇವ್​ ಮಾತನಾಡಿ, ಕುಟುಂಬದಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ. ರಾವಣನು ಬುದ್ಧಿವಂತ ಮತ್ತು ಉತ್ತಮ ವಿದ್ಯಾಭ್ಯಾಸವನ್ನು ಪಡೆದವನಾಗಿದ್ದು, ಆತ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದರು.

ನೆರೆಹೊರೆಯವರಲ್ಲೂ ಆಸಕ್ತಿ ಕೆರಳಿಸಿದ ನಾಮದೇವ ರಾವಣದ ಭಕ್ತಿ: ನಾಮ್​ದೇವ್​ರ ಈ ಭಕ್ತಿ ಆತನ ಸ್ನೇಹಿತರು ಮತ್ತು ನೆರೆಹೊರೆಯವರ ಮೇಲೂ ಪ್ರಭಾವ ಬೀರಿದೆ. ಕೌನ್ಸಿಲರ್​ ದೀಪಕ್​ ಜೈನ್​ ಮಾತನಾಡಿ. ರಾವಣನಿಗೆ ದೋಷಗಳಿವೆ ಎಂದು ನಾನು ನಂಬುವುದಿಲ್ಲ. ಲಂಕೇಶ್ ಅವರು ರಾವಣನ ಪಾತ್ರದ ಕುರಿತು ಮಾತನಾಡುತ್ತಾರೆ. ಜೈ ಲಂಕೇಶ್ ಹೆಸರಿನ ಹಲವಾರು ಅಂಗಡಿಗಳನ್ನು ನಿರ್ವಹಿಸುತ್ತಾರೆ.

ಸ್ಥಳೀಯ ನಿವಾಸಿ ಧೃವ ನೆಮ್​ ಮಾತನಾಡಿ, ಲಂಕೇಶ್​ ಕೇವಲ ರಾವಣ ಮತ್ತು ಶಿವನ ಪೂಜೆ ಮಾಡುತ್ತಾರೆ. ರಾವಣನನ್ನು ಪೂಜೆ ಮಾಡುವ ಮೂಲಕ ದಿನ ಪ್ರಾರಂಭ ಮಾಡಿ, ಪೂಜೆಯಿಂದಲೇ ದಿನ ಕಳೆಯುತ್ತಾರೆ.

ನವರಾತ್ರಿ ವೇಳೆಯಲ್ಲಿ ಲಂಕೇಶ್​ ತನ್ನ ಅನುಯಾಯಿಗಳ ರಾವಣನಿಗೆ ಭಕ್ತಿ ತೋರಿಸುವ ಶೋಭಾ ಯಾತ್ರೆಯನ್ನು ಅಂತ್ಯಗೊಳಿಸುವ ಆಚರಣೆ ನಡೆಸುತ್ತಿದ್ದು, ಇದಕ್ಕೆ ಸಮುದಾಯಸ್ತರ ಬೆಂಬಲವೂ ಸಿಕ್ಕಿದೆ.

ಇದನ್ನೂ ಓದಿ: ನವರಾತ್ರಿಯ ಒಂಬತ್ತನೇ ದಿನದ ಸಂಭ್ರಮ: ದೇಶದ ವಿವಿಧ ದೇವಾಲಯಗಳಲ್ಲಿ ಬೆಳಗಿದ ಆರತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.