ETV Bharat / bharat

ಭಾರತದ ವಾಯು ಗುಣಮಟ್ಟ ಮಾನದಂಡಗಳ ಪರಿಷ್ಕರಣೆ ಅಗತ್ಯ: ವಿಜ್ಞಾನಿ ಭಾರ್ಗವ್ ಕೃಷ್ಣ - Air Pollution In India

ಭಾರತದಲ್ಲಿ ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ವಿಜ್ಞಾನಿ ಭಾರ್ಗವ್ ಕೃಷ್ಣ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಸಂದರ್ಶನ ಇಲ್ಲಿದೆ.

author img

By ETV Bharat Karnataka Team

Published : Jul 7, 2024, 7:54 PM IST

ಭಾರತದ ವಾಯು ಗುಣಮಟ್ಟ ಮಾನದಂಡಗಳ ಪರಿಷ್ಕರಣೆ ಅಗತ್ಯ: ವಿಜ್ಞಾನಿ ಭಾರ್ಗವ್ ಕೃಷ್ಣ ಅಭಿಪ್ರಾಯ
ವಾಯುಮಾಲಿನ್ಯ (ಸಂಗ್ರಹ ಚಿತ್ರ)

ಭಾರತದಲ್ಲಿ ವಾಯುಮಾಲಿನ್ಯ ಸಂಬಂಧಿತ ಸಮಸ್ಯೆಗಳಿಂದ ವಾರ್ಷಿಕವಾಗಿ 33 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗವಾಗಿದೆ. ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಸಂಸ್ಥೆ ನಡೆಸಿದ 'ಭಾರತದ ಹತ್ತು ನಗರಗಳಲ್ಲಿ ಪರಿಸರ ವಾಯುಮಾಲಿನ್ಯ ಮತ್ತು ದೈನಂದಿನ ಸಾವು' (Ambient air pollution and daily mortality in ten cities of India) ಹೆಸರಿನ ಅಧ್ಯಯನ ವರದಿಯಲ್ಲಿ ಇಂಥ ಕೆಲ ಆತಂಕಕಾರಿ ಸಂಗತಿಗಳು ತಿಳಿದು ಬಂದಿವೆ.

ಅಧ್ಯಯನ ವರದಿಯ ಲೇಖಕರಾಗಿರುವ ಭಾರ್ಗವ್ ಕೃಷ್ಣ ಅವರು ಈ ಬಗ್ಗೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, ಅಧ್ಯಯನವು ಯಾವ ವಿಷಯದ ಮೇಲೆ ಕೇಂದ್ರಿತವಾಗಿತ್ತು ಹಾಗೂ ವಾಯು ಮಾಲಿನ್ಯ, ಅದರಲ್ಲೂ ವಿಶೇಷವಾಗಿ ಪಾರ್ಟಿಕ್ಯುಲೇಟ್ ಮ್ಯಾಟರ್ 2.5 (PM 2.5) ಕಣಗಳು ವ್ಯಕ್ತಿಯ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸಿದ್ದಾರೆ.

ಭಾರ್ಗವ್ ಅವರು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನಿಂದ ಸಮುದಾಯ ಆರೋಗ್ಯ ವಿಷಯದಲ್ಲಿ ಡಾಕ್ಟರೇಟ್, ಲಂಡನ್​ನ ಕಿಂಗ್ಸ್ ಕಾಲೇಜಿನಿಂದ ಜಾಗತಿಕ ಪರಿಸರ ಬದಲಾವಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಅವರು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್ಎಫ್ಐ) ನಲ್ಲಿ ಸಹಾಯಕ ಬೋಧಕರಾಗಿದ್ದಾರೆ.

ಭಾರ್ಗವ್ ಕೃಷ್ಣ ಅವರು ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದ ಪಾಠ ಇಲ್ಲಿದೆ:

ಈಟಿವಿ ಭಾರತ್ : ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್​ನಲ್ಲಿ ಪ್ರಕಟವಾದ ನಿಮ್ಮ ಅಧ್ಯಯನದ ಬಗ್ಗೆ ನೀವು ಹೇಳುವುದೇನು? ಇದು ಈ ರೀತಿಯ ಮೊದಲ ಸಂಶೋಧನೆಯೇ?

ಭಾರ್ಗವ್ ಕೃಷ್ಣ: ಹೌದು. ಖಂಡಿತವಾಗಿಯೂ ಇದು ಈ ರೀತಿಯ ಮೊದಲ ಸಂಶೋಧನೆಯಾಗಿದೆ. ಈ ಅಧ್ಯಯನ ಪೂರ್ಣಗೊಳ್ಳಲು ಒಂದೂವರೆ ವರ್ಷ ಸಮಯ ಹಿಡಿದಿದೆ. 10 ನಗರಗಳಲ್ಲಿ ಅಲ್ಪಾವಧಿಯ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಾವುಗಳನ್ನು ಅಧ್ಯಯನ ಮಾಡಲಾಗಿದೆ. ಅಂದರೆ ಅಧ್ಯಯನದ ದಿನ ಮತ್ತು ಹಿಂದಿನ ದಿನ ಆ ನಗರಗಳಲ್ಲಿ ಇದ್ದ ವಾಯುಮಾಲಿನ್ಯವನ್ನು ಗಣನೆಗೆ ತೆಗದುಕೊಳ್ಳಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಪುಣೆ ಮತ್ತು ಮುಂಬೈನಂತಹ ಸ್ಥಳಗಳಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಸಾವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ನಾವು ಇದೇ ಮೊದಲ ಬಾರಿಗೆ ಹೊಸ ಅಂಶಗಳನ್ನು ಪತ್ತೆ ಮಾಡಿದ್ದೇವೆ.

ಈಟಿವಿ ಭಾರತ್ : ವರದಿಯಲ್ಲಿ ಪಿಎಂ 2.5 ಎಂಬ ಪದವನ್ನು ಬಹಳಷ್ಟು ಬಾರಿ ಬಳಸಲಾಗಿದೆ. ಏನಿದು? ಇದನ್ನು ಹೇಗೆ ಅಳೆಯಲಾಗುತ್ತದೆ?

ಭಾರ್ಗವ್ ಕೃಷ್ಣ : ಸರಳವಾಗಿ ಹೇಳುವುದಾದರೆ, ಯಾವುದೇ ರೀತಿಯ ಇಂಧನವನ್ನು ಸುಟ್ಟಾಗ ಎರಡು ರೀತಿಯ ಮಾಲಿನ್ಯಗಳು ಉಂಟಾಗುತ್ತವೆ. ಅವು- ವಾಹನ ಮತ್ತು ಕೈಗಾರಿಕಾ ಅಥವಾ ಅಡುಗೆ ಒಲೆ ಹೊರಸೂಸುವಿಕೆಯ ಮಾಲಿನ್ಯಗಳು. ಪಾರ್ಟಿಕ್ಯುಲೇಟ್​ ಮ್ಯಾಟರ್​ಗಳು ಅನಿಲ ಮಾಲಿನ್ಯಕಾರಕಗಳಾದ ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಸಾರಜನಕ ಆಕ್ಸೈಡ್ ಗಳು ಇತ್ಯಾದಿಗಳ ದಹನದಿಂದ ಉಪ-ಉತ್ಪನ್ನವಾಗಿ ಪರಿಸರಕ್ಕೆ ಬಿಡುಗಡೆಯಾಗುವ ಸಣ್ಣ ಸೂಕ್ಷ್ಮ ಕಣಗಳಾಗಿವೆ. ಪಿಎಂ 2.5 ಇವು ಎರಡೂವರೆ ಮೈಕ್ರಾನ್​ಗಿಂತ ಚಿಕ್ಕ ಮಾಲಿನ್ಯಕಾರಕ ಕಣಗಳಾಗಿದ್ದು, ನಾವು ಇವುಗಳ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸಿದ್ದೇವೆ. ಪಿಎಂ ಕಣಗಳು ಮಾನವ ಕೂದಲಿನ ದಪ್ಪಕ್ಕೆ ಹೋಲಿಸಿದರೆ ತುಂಬಾ ಚಿಕ್ಕದಾಗಿರುತ್ತವೆ.

ಪಿಎಂ 2.5 ಏಕೆ ಪ್ರಮುಖವಾಗಿದೆ ಎಂಬುದಕ್ಕೆ ಎರಡು ಕಾರಣಗಳಿವೆ. ಒಂದು, ಪಿಎಂ 2.5 ಶ್ವಾಸಕೋಶದೊಳಗೆ ಮತ್ತು ರಕ್ತಪ್ರವಾಹದೊಳಗೆ ಆಳವಾಗಿ ಇಳಿಯಬಹುದು ಮತ್ತು ಶ್ವಾಸಕೋಶಗಳಿಗೆ ಹಾಗೂ ಹೃದಯದಲ್ಲಿನ ರಕ್ತ ಪರಿಚಲನಾ ವ್ಯವಸ್ಥೆಗೆ ಎಲ್ಲಾ ರೀತಿಯ ಹಾನಿಯನ್ನುಂಟು ಮಾಡಬಲ್ಲದು. ಎರಡನೆಯದಾಗಿ, ಪಿಎಂ 2.5 ನಿಂದ ಮಾಡಲ್ಪಟ್ಟ ಕಣಗಳು ಬಹುತೇಕ ಹೆಚ್ಚು ವಿಷಕಾರಿ ಘಟಕಗಳಾಗಿವೆ. ಆದ್ದರಿಂದ ಇದು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಈಟಿವಿ ಭಾರತ್: ಪಾರ್ಟಿಕ್ಯುಲೇಟ್ ಮ್ಯಾಟರ್​ಗಳಿಂದ ರಕ್ಷಣೆ ಪಡೆಯುವುದು ಹೇಗೆ?

ಭಾರ್ಗವ್ ಕೃಷ್ಣ: ಕೋವಿಡ್ ಅಲೆ ಕಾಣಿಸಿಕೊಳ್ಳುವುದಕ್ಕಿಂತಲೂ ಮೊದಲೇ ಚಳಿಗಾಲದಲ್ಲಿ ಉಂಟಾಗುವ ಹೆಚ್ಚಿನ ಮಾಲಿನ್ಯದಿಂದ ರಕ್ಷಣೆ ಪಡೆಯಲು ಉತ್ತರ ಭಾರತದಲ್ಲಿ ಮತ್ತು ವಿಶೇಷವಾಗಿ ದೆಹಲಿಯಲ್ಲಿ ಜನ ಮಾಸ್ಕ್​ಗಳನ್ನು ಧರಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಪ್ರಮುಖವಾಗಿ ಬಳಸಲಾದ ಎನ್ 95 ಅಥವಾ ಅದೇ ದರ್ಜೆಯ ಮಾಸ್ಕ್​ಗಳನ್ನು ಧರಿಸುವುದರಿಂದ ಪಾರ್ಟಿಕ್ಯುಲೇಟ್ ಮ್ಯಾಟರ್​ ಕಣಗಳು ದೇಹಕ್ಕೆ ಸೇರದಂತೆ ತಡೆಗಟ್ಟಬಹುದು.

ಈಟಿವಿ ಭಾರತ್: ವರದಿಯ ಪ್ರಕಾರ, ಭಾರತವು ಡಬ್ಲ್ಯುಎಚ್ಒ ದ ಪ್ರತಿ ಘನ ಮೀಟರ್​ಗೆ 15 ಮೈಕ್ರೋ ಗ್ರಾಂ ಮಾರ್ಗಸೂಚಿ ಮೌಲ್ಯವನ್ನು ಅನುಸರಿಸುತ್ತಿಲ್ಲ. ನಾವು ನಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದೇವೆ. ಹೀಗಾಗಿ ನಾವು ಆತಂಕ ಪಡಲು ಕಾರಣಗಳಿವೆಯೆ?

ಭಾರ್ಗವ್ ಕೃಷ್ಣ: ಡಬ್ಲ್ಯುಎಚ್ಒ ಮಾರ್ಗಸೂಚಿಯು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒದಗಿಸಿದ ಜಾಗತಿಕ ಆರೋಗ್ಯ ದಾಖಲೆಗಳನ್ನು ಆಧರಿಸಿ ಮಾಡಲಾದ ಶಿಫಾರಸಾಗಿದೆ. ಆದ್ದರಿಂದ ಪ್ರಪಂಚದಾದ್ಯಂತ ಪ್ರಕಟವಾದ ಎಲ್ಲಾ ಪುರಾವೆಗಳ ವ್ಯವಸ್ಥಿತ ವಿಮರ್ಶೆಯ ಆಧಾರದ ಮೇಲೆ, ಅದು (ಡಬ್ಲ್ಯುಎಚ್ಒ) ತನಗೆ ಸರಿ ಎನಿಸಿದ ಸ್ವೀಕಾರಾರ್ಹ ಮಟ್ಟದ ಮಾನ್ಯತೆಗೆ ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಿದೆ.

ಆದ್ದರಿಂದ ಒಂದು ದಿನದ ಅವಧಿಯಲ್ಲಿ 15 ಮೈಕ್ರೋಗ್ರಾಂಗಳನ್ನು ವರ್ಷಕ್ಕೆ ಕೆಲ ಬಾರಿಗಿಂತ ಹೆಚ್ಚು ಮೀರಬಾರದು ಮತ್ತು ಇಡೀ ವರ್ಷದ ಅವಧಿಯಲ್ಲಿ ಅದು 5 ಮೈಕ್ರೋಗ್ರಾಂಗಳನ್ನು ಮೀರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ತಿಳಿಸಿದೆ. ಈಗ ನೀವು ಅದನ್ನು ದೆಹಲಿಯಂತಹ ನಗರದಲ್ಲಿ ವಾರ್ಷಿಕ ಆಧಾರದ ಮೇಲೆ ಹೋಲಿಸಿದರೆ ಈ ಸಂಖ್ಯೆ ಆತಂಕಕಾರಿಯಾಗಿದೆ. ನಮ್ಮ ಅಧ್ಯಯನದಲ್ಲಿ, ದೆಹಲಿಯಲ್ಲಿ ಸರಾಸರಿ ಪಿಎಂ 2.5 ಮಟ್ಟವು 110 ಮೈಕ್ರೋಗ್ರಾಂಗಳಿಗಿಂತ ಹೆಚ್ಚಾಗಿದೆ ಎಂಬುದು ಕಂಡು ಬಂದಿದೆ. ಇದು ವಾರ್ಷಿಕ ಸರಾಸರಿ ಮಾನ್ಯತೆಗಿಂತ 20 ಪಟ್ಟು ಹೆಚ್ಚಾಗಿದೆ. ಈ ಹಿಂದೆ 2009 ರಲ್ಲಿ ಕೊನೆಯ ಬಾರಿಗೆ ಬದಲಾವಣೆ ಮಾಡಲಾದ ನಮ್ಮ ರಾಷ್ಟ್ರೀಯ ಪರಿಸರ ವಾಯು ಗುಣಮಟ್ಟದ ಮಾನದಂಡಗಳು ಬಹಳ ದುರ್ಬಲವಾಗಿವೆ.

ಭಾರತೀಯ ಮಾನದಂಡಕ್ಕಿಂತ ಕಡಿಮೆ ಮತ್ತು ಡಬ್ಲ್ಯುಎಚ್ಒ ಮಾನದಂಡಕ್ಕಿಂತ ಹೆಚ್ಚಿನ ಮಟ್ಟಗಳಲ್ಲಿಯೂ ಮಾನವರ ಸಾವಿನ ಮೇಲೆ ಗಮನಾರ್ಹ ಪರಿಣಾಮಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದಿವೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ವಿಷಯದಲ್ಲಿ ನಮ್ಮ ಮಾನದಂಡಗಳು ಅಗತ್ಯವಿರುವಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಗಾಳಿಯ ಗುಣಮಟ್ಟದ ಮಾನದಂಡವನ್ನು ಏಕೆ ಪರಿಷ್ಕರಿಸಬೇಕು ಎಂಬುದಕ್ಕೆ ಕಾರಣವೆಂದರೆ- ನಾವು ಉತ್ತಮ ಅಥವಾ ಕೆಟ್ಟ ಗಾಳಿಯ ಗುಣಮಟ್ಟವನ್ನು ವರ್ಗೀಕರಿಸುವ ವಿಧಾನವು ನಮ್ಮ ಪ್ರಸ್ತುತ ಮಾನದಂಡವನ್ನು ಅವಲಂಬಿಸಿರುತ್ತದೆ. ಆದ್ದರಿಂದ 60 ಕ್ಕಿಂತ ಕಡಿಮೆ ಏನನ್ನಾದರೂ ಉತ್ತಮ ಗಾಳಿಯ ಗುಣಮಟ್ಟದ ದಿನವೆಂದು ಪರಿಗಣಿಸಲಾಗುತ್ತದೆ ಮತ್ತು ವಾಯುಮಾಲಿನ್ಯದ ಹಾನಿಗಳನ್ನು ಸಂವಹನ ಮಾಡಲು ಬಳಸುವ ನಮ್ಮ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 60 ಕ್ಕಿಂತ ಮೇಲ್ಪಟ್ಟ ಯಾವುದನ್ನಾದರೂ ಕಳಪೆ ಅಥವಾ ತೀವ್ರ ಅಥವಾ ತೀವ್ರವಾದ ಪ್ಲಸ್ ಇತ್ಯಾದಿ ಎಂದು ಪರಿಗಣಿಸಲಾಗುತ್ತದೆ.

ಈಟಿವಿ ಭಾರತ್ : ಕಡಿಮೆ ಮಾಲಿನ್ಯ ಹೊಂದಿರುವ ಭಾರತದ ಕೆಲ ನಗರಗಳಲ್ಲಿ ಕೂಡ ವಾಯುಮಾಲಿನ್ಯದಿಂದಾಗಿ ಸಾವು ಸಂಭವಿಸುತ್ತಿವೆ ಎಂದು ನಿಮ್ಮ ಅಧ್ಯಯನ ಹೇಳಿರುವುದು ಏಕೆ?

ಭಾರ್ಗವ್ ಕೃಷ್ಣ: ಭಾರತ ನಿಗದಿಪಡಿಸಿದ ಪರಿಸರ ವಾಯು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತಿರುವ ಬೆಂಗಳೂರು ಮತ್ತು ಹೈದರಾಬಾದ್ ನಂತಹ ನಗರಗಳಲ್ಲಿಯೂ ಗಮನಾರ್ಹ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ವಾಯು ಮಾಲಿನ್ಯದ ಕಾರಣದಿಂದ ಈ ಪ್ರತಿಯೊಂದು ನಗರಗಳಲ್ಲಿ ಪ್ರತಿವರ್ಷ 2,000 ರಿಂದ 4000 ಸಾವು ಸಂಭವಿಸುತ್ತಿವೆ. ಅಂದರೆ ಪರಿಸರ ಮಾಲಿನ್ಯ ನಿಯಂತ್ರಿಸುವ ಮಾನದಂಡಗಳೇ ಪರಿಣಾಮಕಾರಿಯಾಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ಈಟಿವಿ ಭಾರತ್ : ಅಂದರೆ ಕಡಿಮೆ ಮಾಲಿನ್ಯಕಾರಿ ಎಂದು ವರ್ಗೀಕರಿಸಲಾದ ನಗರಗಳು ವಾಸ್ತವದಲ್ಲಿ ಕಡಿಮೆ ಮಾಲಿನ್ಯ ಹೊಂದಿಲ್ಲವೇ?

ಭಾರ್ಗವ್ ಕೃಷ್ಣ: ಹೌದು. ಬದಲಿಗೆ, ದೆಹಲಿಯಂಥ ಇತರ ನಗರಗಳಿಗೆ ಹೋಲಿಸಿದರೆ ಅವು ಕಡಿಮೆ ಕಲುಷಿತವಾಗಿವೆ ಅಷ್ಟೇ.

ಈಟಿವಿ ಭಾರತ್: ಹಾಗಾದರೆ ವಾಯುಮಾಲಿನ್ಯದಿಂದಲೇ ಸಾವೊಂದು ಸಂಭವಿಸಿದೆ ಎಂದು ಅಧ್ಯಯನ ಹೇಗೆ ಹೇಳುತ್ತದೆ? ಮಾನದಂಡ ಏನು?

ಭಾರ್ಗವ್ ಕೃಷ್ಣ: ಈ ಅಧ್ಯಯನವು ಜನಸಂಖ್ಯೆಯ ಮಟ್ಟದಲ್ಲಿದೆಯೇ ಹೊರತು ವೈಯಕ್ತಿಕ ಮಟ್ಟದಲ್ಲಿ ಇಲ್ಲ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವಲ್ಲಿನ ದೈನಂದಿನ ವ್ಯತ್ಯಾಸಗಳು ಪ್ರತಿದಿನ ಸಂಭವಿಸುವ ಸಾವುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆಯೇ ಎಂಬುದನ್ನು ನಾವು ಪರಿಶೀಲಿಸಿದ್ದೇವೆ. ಇತರ ಯಾವುದೇ ಗಮನಾರ್ಹ ಅಂಶಗಳು (ಹೃದ್ರೋಗದ ಮಟ್ಟಗಳು, ಧೂಮಪಾನದ ಪ್ರಮಾಣ, ವಯಸ್ಸಾಗುವಿಕೆ, ಶ್ವಾಸಕೋಶದ ಪರಿಸ್ಥಿತಿಗಳು, ಆಹಾರ, ಬೊಜ್ಜು) ಇತ್ಯಾದಿಗಳು ದಿನದಿಂದ ದಿನಕ್ಕೆ ಬದಲಾಗುವುದಿಲ್ಲವಾದ್ದರಿಂದ, ಇದು ವಾಯುಮಾಲಿನ್ಯದ ಪರಿಣಾಮವನ್ನು ಮಾತ್ರ ಪರಿಣಾಮಕಾರಿಯಾಗಿ ಪ್ರತ್ಯೇಕಿಸುತ್ತದೆ. ವಾಯುಮಾಲಿನ್ಯ ಮತ್ತು ಸಾವುಗಳ ನಡುವಿನ ಸಂಬಂಧವನ್ನು ದೈನಂದಿನ ಆಧಾರದ ಮೇಲೆ (ಹವಾಮಾನ, ಕಾಲೋಚಿತತೆ, ತಾಪಮಾನ, ಆರ್ದ್ರತೆ) ಪ್ರಭಾವಿಸುವ ಅಂಶಗಳಿಗೆ ನಾವು ಹೊಂದಿಸುತ್ತೇವೆ ಮತ್ತು ಸಾರಾಂಶದಲ್ಲಿ ನಾವು ಕಾರಣಗಳ ಸಂಬಂಧವನ್ನು ಕಂಡುಕೊಂಡಿದ್ದೇವೆ.

ಈಟಿವಿ ಭಾರತ್: ನಿಮ್ಮ ಅಧ್ಯಯನದಲ್ಲಿ ಹಲವಾರು ಬಾರಿ ಅಲ್ಪಾವಧಿಯ ಒಡ್ಡಿಕೊಳ್ಳುವಿಕೆಯನ್ನು ಪ್ರಸ್ತಾಪಿಸಲಾಗಿದೆ. ನೀವು ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಭಾರ್ಗವ್ ಕೃಷ್ಣ: ನಾವು ಅಲ್ಪಾವಧಿಯ ಒಡ್ಡುವಿಕೆಯನ್ನು ಕಳೆದ 48 ಗಂಟೆಗಳಲ್ಲಿನ ಒಡ್ಡಿಕೊಳ್ಳುವಿಕೆ ಎಂದು ವ್ಯಾಖ್ಯಾನಿಸುತ್ತೇವೆ.

ಈಟಿವಿ ಭಾರತ್: ಉದಾಹರಣೆಗೆ ನಾನು ಭಾರತದ ಒಂದು ನಗರದಲ್ಲಿ ವಾಸಿಸುತ್ತಿದ್ದೇನೆ ಎಂದುಕೊಳ್ಳೋಣ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಪ್ರತಿದಿನ ಪ್ರಯಾಣಿಸುತ್ತೇನೆ ಎಂದುಕೊಳ್ಳೋಣ. ಇಂಥ ಪರಿಸ್ಥಿತಿಗಳಲ್ಲಿ ನನ್ನನ್ನು ನಾನು ಮಾಲಿನ್ಯದಿಂದ ಹೇಗೆ ರಕ್ಷಿಸಿಕೊಳ್ಳುವುದು?

ಭಾರ್ಗವ್ ಕೃಷ್ಣ: ನೀವು ಯಾವ ವಿಧಾನದ ಸಾರಿಗೆ ಬಳಸುತ್ತೀರಿ ಎಂಬುದನ್ನು ಅವಲಂಬಿಸಿ ಅಲ್ಪಾವಧಿಯ ಒಡ್ಡಿಕೊಳ್ಳುವಿಕೆಗಳು ಸಾಕಷ್ಟು ಹೆಚ್ಚಾಗಿರಬಹುದು. ಉದಾಹರಣೆಗೆ, ದೆಹಲಿಗೆ ಸಂಬಂಧಿಸಿದಂತೆ ಒಂದು ಅಧ್ಯಯನ ವರದಿ ಪ್ರಕಟವಾಗಿದೆ. ಅದರ ಪ್ರಕಾರ ನೀವು ದೀರ್ಘಕಾಲದವರೆಗೆ ಟ್ರಾಫಿಕ್​ನಲ್ಲಿ ಇದ್ದರೆ ಆ ಅವಧಿಯಲ್ಲಿ ನಿಮ್ಮ ಒಡ್ಡಿಕೊಳ್ಳುವಿಕೆಯು ಪ್ರತಿ ಘನ ಮೀಟರ್​ಗೆ 800 ಅಥವಾ 1000 ಮೈಕ್ರೋಗ್ರಾಂಗಳಿಗಿಂತ ಹೆಚ್ಚಾಗಬಹುದು. ಇದು ನೀವು ಒಡ್ಡಿಕೊಳ್ಳಬಹುದಾದ ಸುರಕ್ಷಿತ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ ನೀವು ತೆರೆದ ವಾಹನದಲ್ಲಿ, ಆಟೋ ರಿಕ್ಷಾ ಅಥವಾ ಬಸ್ ಅಥವಾ ಸೈಕಲ್ ಅಥವಾ ಮೋಟಾರ್ ಸೈಕಲ್​ ಮೂಲಕ ಪ್ರಯಾಣಿಸುವಾಗ ಈ ಮಟ್ಟದ ಒಡ್ಡಿಕೊಳ್ಳುವಿಕೆಯನ್ನು ಗಮನಿಸಲಾಗಿದೆ. ಇಂಥ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವ ಮೂಲಕ ಜನ ಮಾಲಿನ್ಯದಿಂದ ರಕ್ಷಣೆ ಪಡೆಯಬಹುದು.

ಈಟಿವಿ ಭಾರತ್: ವಾಹನಗಳಿಂದ ಹೊರಸೂಸುವ ಮಾಲಿನ್ಯವೇ ಹೆಚ್ಚು ಅಪಾಯಕಾರಿ ಎಂಬುದು ನಿಮ್ಮ ಅಭಿಪ್ರಾಯವೇ?

ಭಾರ್ಗವ್ ಕೃಷ್ಣ: ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲಿನಂತಹ ಯಾವುದೇ ರೀತಿಯ ದಹನದಿಂದ ಉಂಟಾಗುವ ಮಾಲಿನ್ಯವಿರಬಹುದು, ಕಾರು ಅಥವಾ ಬಸ್ ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಸುಡುವುದರಿಂದ ಉಂಟಾಗುವ ಮಾಲಿನ್ಯವಾಗಿರಬಹುದು, ಅಡುಗೆ ಮಾಡಲು ನಿಮ್ಮ ಮನೆಯಲ್ಲಿ ಕಟ್ಟಿಗೆ ಅಥವಾ ಸಗಣಿಯನ್ನು ಸುಡುವುದಾಗಿರಬಹುದು.. ಹೀಗೆ ಏನನ್ನಾದರೂ ಸುಡುವ ಪರಿಣಾಮವಾಗಿ ಉತ್ಪತ್ತಿಯಾಗುವ ಎಲ್ಲಾ ಹೊರಸೂಸುವಿಕೆಗಳು ವಿಶೇಷವಾಗಿ ಹಾನಿಕಾರಕವಾಗಿವೆ.

ಈಟಿವಿ ಭಾರತ್: ಸಾಮಾನ್ಯವಾಗಿ ನಗರಗಳಲ್ಲಿ ಯಾರೂ ಉರುವಲು ಬಳಸಿ ಅಡುಗೆ ಮಾಡುವುದಿಲ್ಲ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರು ಒಲೆಗಳನ್ನು ಬಳಸಿ ಅಡುಗೆ ಮಾಡುತ್ತಾರೆ.

ಭಾರ್ಗವ್ ಕೃಷ್ಣ: ಇದು ನಿಜವಾಗಿರಬಹುದು. ಆದರೆ ಅನೇಕ ನಗರ ಕೇಂದ್ರಗಳಲ್ಲಿ ಇನ್ನೂ ಅನೌಪಚಾರಿಕ ವಸಾಹತುಗಳು ಅಥವಾ ಕೊಳೆಗೇರಿಗಳಿವೆ. ಅಲ್ಲಿನ ಜನ ಅಡುಗೆಗಾಗಿ ಉರುವಲು ಅಥವಾ ಸಗಣಿಯನ್ನು ಅವಲಂಬಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಹೀಗಾಗಿ ಬಹುತೇಕ ನಗರಗಳಲ್ಲಿ ಕೂಡ 8 ರಿಂದ 10 ಪ್ರತಿಶತದಷ್ಟು ಜನ ಸಾಂಪ್ರದಾಯಿಕ ಇಂಧನಗಳನ್ನೇ ಅವಲಂಬಿಸಿದ್ದಾರೆ.

ಇದನ್ನೂ ಓದಿ: ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮಾನವರಿಗೆ ಸಾಂಕ್ರಾಮಿಕವಲ್ಲ: ಪಶುಸಂಗೋಪನೆ ಇಲಾಖೆ ಮಾಹಿತಿ - World Zoonoses Day

ಭಾರತದಲ್ಲಿ ವಾಯುಮಾಲಿನ್ಯ ಸಂಬಂಧಿತ ಸಮಸ್ಯೆಗಳಿಂದ ವಾರ್ಷಿಕವಾಗಿ 33 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗವಾಗಿದೆ. ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಸಂಸ್ಥೆ ನಡೆಸಿದ 'ಭಾರತದ ಹತ್ತು ನಗರಗಳಲ್ಲಿ ಪರಿಸರ ವಾಯುಮಾಲಿನ್ಯ ಮತ್ತು ದೈನಂದಿನ ಸಾವು' (Ambient air pollution and daily mortality in ten cities of India) ಹೆಸರಿನ ಅಧ್ಯಯನ ವರದಿಯಲ್ಲಿ ಇಂಥ ಕೆಲ ಆತಂಕಕಾರಿ ಸಂಗತಿಗಳು ತಿಳಿದು ಬಂದಿವೆ.

ಅಧ್ಯಯನ ವರದಿಯ ಲೇಖಕರಾಗಿರುವ ಭಾರ್ಗವ್ ಕೃಷ್ಣ ಅವರು ಈ ಬಗ್ಗೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, ಅಧ್ಯಯನವು ಯಾವ ವಿಷಯದ ಮೇಲೆ ಕೇಂದ್ರಿತವಾಗಿತ್ತು ಹಾಗೂ ವಾಯು ಮಾಲಿನ್ಯ, ಅದರಲ್ಲೂ ವಿಶೇಷವಾಗಿ ಪಾರ್ಟಿಕ್ಯುಲೇಟ್ ಮ್ಯಾಟರ್ 2.5 (PM 2.5) ಕಣಗಳು ವ್ಯಕ್ತಿಯ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸಿದ್ದಾರೆ.

ಭಾರ್ಗವ್ ಅವರು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನಿಂದ ಸಮುದಾಯ ಆರೋಗ್ಯ ವಿಷಯದಲ್ಲಿ ಡಾಕ್ಟರೇಟ್, ಲಂಡನ್​ನ ಕಿಂಗ್ಸ್ ಕಾಲೇಜಿನಿಂದ ಜಾಗತಿಕ ಪರಿಸರ ಬದಲಾವಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಅವರು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್ಎಫ್ಐ) ನಲ್ಲಿ ಸಹಾಯಕ ಬೋಧಕರಾಗಿದ್ದಾರೆ.

ಭಾರ್ಗವ್ ಕೃಷ್ಣ ಅವರು ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದ ಪಾಠ ಇಲ್ಲಿದೆ:

ಈಟಿವಿ ಭಾರತ್ : ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್​ನಲ್ಲಿ ಪ್ರಕಟವಾದ ನಿಮ್ಮ ಅಧ್ಯಯನದ ಬಗ್ಗೆ ನೀವು ಹೇಳುವುದೇನು? ಇದು ಈ ರೀತಿಯ ಮೊದಲ ಸಂಶೋಧನೆಯೇ?

ಭಾರ್ಗವ್ ಕೃಷ್ಣ: ಹೌದು. ಖಂಡಿತವಾಗಿಯೂ ಇದು ಈ ರೀತಿಯ ಮೊದಲ ಸಂಶೋಧನೆಯಾಗಿದೆ. ಈ ಅಧ್ಯಯನ ಪೂರ್ಣಗೊಳ್ಳಲು ಒಂದೂವರೆ ವರ್ಷ ಸಮಯ ಹಿಡಿದಿದೆ. 10 ನಗರಗಳಲ್ಲಿ ಅಲ್ಪಾವಧಿಯ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಾವುಗಳನ್ನು ಅಧ್ಯಯನ ಮಾಡಲಾಗಿದೆ. ಅಂದರೆ ಅಧ್ಯಯನದ ದಿನ ಮತ್ತು ಹಿಂದಿನ ದಿನ ಆ ನಗರಗಳಲ್ಲಿ ಇದ್ದ ವಾಯುಮಾಲಿನ್ಯವನ್ನು ಗಣನೆಗೆ ತೆಗದುಕೊಳ್ಳಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಪುಣೆ ಮತ್ತು ಮುಂಬೈನಂತಹ ಸ್ಥಳಗಳಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಸಾವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ನಾವು ಇದೇ ಮೊದಲ ಬಾರಿಗೆ ಹೊಸ ಅಂಶಗಳನ್ನು ಪತ್ತೆ ಮಾಡಿದ್ದೇವೆ.

ಈಟಿವಿ ಭಾರತ್ : ವರದಿಯಲ್ಲಿ ಪಿಎಂ 2.5 ಎಂಬ ಪದವನ್ನು ಬಹಳಷ್ಟು ಬಾರಿ ಬಳಸಲಾಗಿದೆ. ಏನಿದು? ಇದನ್ನು ಹೇಗೆ ಅಳೆಯಲಾಗುತ್ತದೆ?

ಭಾರ್ಗವ್ ಕೃಷ್ಣ : ಸರಳವಾಗಿ ಹೇಳುವುದಾದರೆ, ಯಾವುದೇ ರೀತಿಯ ಇಂಧನವನ್ನು ಸುಟ್ಟಾಗ ಎರಡು ರೀತಿಯ ಮಾಲಿನ್ಯಗಳು ಉಂಟಾಗುತ್ತವೆ. ಅವು- ವಾಹನ ಮತ್ತು ಕೈಗಾರಿಕಾ ಅಥವಾ ಅಡುಗೆ ಒಲೆ ಹೊರಸೂಸುವಿಕೆಯ ಮಾಲಿನ್ಯಗಳು. ಪಾರ್ಟಿಕ್ಯುಲೇಟ್​ ಮ್ಯಾಟರ್​ಗಳು ಅನಿಲ ಮಾಲಿನ್ಯಕಾರಕಗಳಾದ ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಸಾರಜನಕ ಆಕ್ಸೈಡ್ ಗಳು ಇತ್ಯಾದಿಗಳ ದಹನದಿಂದ ಉಪ-ಉತ್ಪನ್ನವಾಗಿ ಪರಿಸರಕ್ಕೆ ಬಿಡುಗಡೆಯಾಗುವ ಸಣ್ಣ ಸೂಕ್ಷ್ಮ ಕಣಗಳಾಗಿವೆ. ಪಿಎಂ 2.5 ಇವು ಎರಡೂವರೆ ಮೈಕ್ರಾನ್​ಗಿಂತ ಚಿಕ್ಕ ಮಾಲಿನ್ಯಕಾರಕ ಕಣಗಳಾಗಿದ್ದು, ನಾವು ಇವುಗಳ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸಿದ್ದೇವೆ. ಪಿಎಂ ಕಣಗಳು ಮಾನವ ಕೂದಲಿನ ದಪ್ಪಕ್ಕೆ ಹೋಲಿಸಿದರೆ ತುಂಬಾ ಚಿಕ್ಕದಾಗಿರುತ್ತವೆ.

ಪಿಎಂ 2.5 ಏಕೆ ಪ್ರಮುಖವಾಗಿದೆ ಎಂಬುದಕ್ಕೆ ಎರಡು ಕಾರಣಗಳಿವೆ. ಒಂದು, ಪಿಎಂ 2.5 ಶ್ವಾಸಕೋಶದೊಳಗೆ ಮತ್ತು ರಕ್ತಪ್ರವಾಹದೊಳಗೆ ಆಳವಾಗಿ ಇಳಿಯಬಹುದು ಮತ್ತು ಶ್ವಾಸಕೋಶಗಳಿಗೆ ಹಾಗೂ ಹೃದಯದಲ್ಲಿನ ರಕ್ತ ಪರಿಚಲನಾ ವ್ಯವಸ್ಥೆಗೆ ಎಲ್ಲಾ ರೀತಿಯ ಹಾನಿಯನ್ನುಂಟು ಮಾಡಬಲ್ಲದು. ಎರಡನೆಯದಾಗಿ, ಪಿಎಂ 2.5 ನಿಂದ ಮಾಡಲ್ಪಟ್ಟ ಕಣಗಳು ಬಹುತೇಕ ಹೆಚ್ಚು ವಿಷಕಾರಿ ಘಟಕಗಳಾಗಿವೆ. ಆದ್ದರಿಂದ ಇದು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಈಟಿವಿ ಭಾರತ್: ಪಾರ್ಟಿಕ್ಯುಲೇಟ್ ಮ್ಯಾಟರ್​ಗಳಿಂದ ರಕ್ಷಣೆ ಪಡೆಯುವುದು ಹೇಗೆ?

ಭಾರ್ಗವ್ ಕೃಷ್ಣ: ಕೋವಿಡ್ ಅಲೆ ಕಾಣಿಸಿಕೊಳ್ಳುವುದಕ್ಕಿಂತಲೂ ಮೊದಲೇ ಚಳಿಗಾಲದಲ್ಲಿ ಉಂಟಾಗುವ ಹೆಚ್ಚಿನ ಮಾಲಿನ್ಯದಿಂದ ರಕ್ಷಣೆ ಪಡೆಯಲು ಉತ್ತರ ಭಾರತದಲ್ಲಿ ಮತ್ತು ವಿಶೇಷವಾಗಿ ದೆಹಲಿಯಲ್ಲಿ ಜನ ಮಾಸ್ಕ್​ಗಳನ್ನು ಧರಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಪ್ರಮುಖವಾಗಿ ಬಳಸಲಾದ ಎನ್ 95 ಅಥವಾ ಅದೇ ದರ್ಜೆಯ ಮಾಸ್ಕ್​ಗಳನ್ನು ಧರಿಸುವುದರಿಂದ ಪಾರ್ಟಿಕ್ಯುಲೇಟ್ ಮ್ಯಾಟರ್​ ಕಣಗಳು ದೇಹಕ್ಕೆ ಸೇರದಂತೆ ತಡೆಗಟ್ಟಬಹುದು.

ಈಟಿವಿ ಭಾರತ್: ವರದಿಯ ಪ್ರಕಾರ, ಭಾರತವು ಡಬ್ಲ್ಯುಎಚ್ಒ ದ ಪ್ರತಿ ಘನ ಮೀಟರ್​ಗೆ 15 ಮೈಕ್ರೋ ಗ್ರಾಂ ಮಾರ್ಗಸೂಚಿ ಮೌಲ್ಯವನ್ನು ಅನುಸರಿಸುತ್ತಿಲ್ಲ. ನಾವು ನಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದೇವೆ. ಹೀಗಾಗಿ ನಾವು ಆತಂಕ ಪಡಲು ಕಾರಣಗಳಿವೆಯೆ?

ಭಾರ್ಗವ್ ಕೃಷ್ಣ: ಡಬ್ಲ್ಯುಎಚ್ಒ ಮಾರ್ಗಸೂಚಿಯು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒದಗಿಸಿದ ಜಾಗತಿಕ ಆರೋಗ್ಯ ದಾಖಲೆಗಳನ್ನು ಆಧರಿಸಿ ಮಾಡಲಾದ ಶಿಫಾರಸಾಗಿದೆ. ಆದ್ದರಿಂದ ಪ್ರಪಂಚದಾದ್ಯಂತ ಪ್ರಕಟವಾದ ಎಲ್ಲಾ ಪುರಾವೆಗಳ ವ್ಯವಸ್ಥಿತ ವಿಮರ್ಶೆಯ ಆಧಾರದ ಮೇಲೆ, ಅದು (ಡಬ್ಲ್ಯುಎಚ್ಒ) ತನಗೆ ಸರಿ ಎನಿಸಿದ ಸ್ವೀಕಾರಾರ್ಹ ಮಟ್ಟದ ಮಾನ್ಯತೆಗೆ ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಿದೆ.

ಆದ್ದರಿಂದ ಒಂದು ದಿನದ ಅವಧಿಯಲ್ಲಿ 15 ಮೈಕ್ರೋಗ್ರಾಂಗಳನ್ನು ವರ್ಷಕ್ಕೆ ಕೆಲ ಬಾರಿಗಿಂತ ಹೆಚ್ಚು ಮೀರಬಾರದು ಮತ್ತು ಇಡೀ ವರ್ಷದ ಅವಧಿಯಲ್ಲಿ ಅದು 5 ಮೈಕ್ರೋಗ್ರಾಂಗಳನ್ನು ಮೀರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ತಿಳಿಸಿದೆ. ಈಗ ನೀವು ಅದನ್ನು ದೆಹಲಿಯಂತಹ ನಗರದಲ್ಲಿ ವಾರ್ಷಿಕ ಆಧಾರದ ಮೇಲೆ ಹೋಲಿಸಿದರೆ ಈ ಸಂಖ್ಯೆ ಆತಂಕಕಾರಿಯಾಗಿದೆ. ನಮ್ಮ ಅಧ್ಯಯನದಲ್ಲಿ, ದೆಹಲಿಯಲ್ಲಿ ಸರಾಸರಿ ಪಿಎಂ 2.5 ಮಟ್ಟವು 110 ಮೈಕ್ರೋಗ್ರಾಂಗಳಿಗಿಂತ ಹೆಚ್ಚಾಗಿದೆ ಎಂಬುದು ಕಂಡು ಬಂದಿದೆ. ಇದು ವಾರ್ಷಿಕ ಸರಾಸರಿ ಮಾನ್ಯತೆಗಿಂತ 20 ಪಟ್ಟು ಹೆಚ್ಚಾಗಿದೆ. ಈ ಹಿಂದೆ 2009 ರಲ್ಲಿ ಕೊನೆಯ ಬಾರಿಗೆ ಬದಲಾವಣೆ ಮಾಡಲಾದ ನಮ್ಮ ರಾಷ್ಟ್ರೀಯ ಪರಿಸರ ವಾಯು ಗುಣಮಟ್ಟದ ಮಾನದಂಡಗಳು ಬಹಳ ದುರ್ಬಲವಾಗಿವೆ.

ಭಾರತೀಯ ಮಾನದಂಡಕ್ಕಿಂತ ಕಡಿಮೆ ಮತ್ತು ಡಬ್ಲ್ಯುಎಚ್ಒ ಮಾನದಂಡಕ್ಕಿಂತ ಹೆಚ್ಚಿನ ಮಟ್ಟಗಳಲ್ಲಿಯೂ ಮಾನವರ ಸಾವಿನ ಮೇಲೆ ಗಮನಾರ್ಹ ಪರಿಣಾಮಗಳು ನಮ್ಮ ಅಧ್ಯಯನದಲ್ಲಿ ಕಂಡು ಬಂದಿವೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ವಿಷಯದಲ್ಲಿ ನಮ್ಮ ಮಾನದಂಡಗಳು ಅಗತ್ಯವಿರುವಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಗಾಳಿಯ ಗುಣಮಟ್ಟದ ಮಾನದಂಡವನ್ನು ಏಕೆ ಪರಿಷ್ಕರಿಸಬೇಕು ಎಂಬುದಕ್ಕೆ ಕಾರಣವೆಂದರೆ- ನಾವು ಉತ್ತಮ ಅಥವಾ ಕೆಟ್ಟ ಗಾಳಿಯ ಗುಣಮಟ್ಟವನ್ನು ವರ್ಗೀಕರಿಸುವ ವಿಧಾನವು ನಮ್ಮ ಪ್ರಸ್ತುತ ಮಾನದಂಡವನ್ನು ಅವಲಂಬಿಸಿರುತ್ತದೆ. ಆದ್ದರಿಂದ 60 ಕ್ಕಿಂತ ಕಡಿಮೆ ಏನನ್ನಾದರೂ ಉತ್ತಮ ಗಾಳಿಯ ಗುಣಮಟ್ಟದ ದಿನವೆಂದು ಪರಿಗಣಿಸಲಾಗುತ್ತದೆ ಮತ್ತು ವಾಯುಮಾಲಿನ್ಯದ ಹಾನಿಗಳನ್ನು ಸಂವಹನ ಮಾಡಲು ಬಳಸುವ ನಮ್ಮ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 60 ಕ್ಕಿಂತ ಮೇಲ್ಪಟ್ಟ ಯಾವುದನ್ನಾದರೂ ಕಳಪೆ ಅಥವಾ ತೀವ್ರ ಅಥವಾ ತೀವ್ರವಾದ ಪ್ಲಸ್ ಇತ್ಯಾದಿ ಎಂದು ಪರಿಗಣಿಸಲಾಗುತ್ತದೆ.

ಈಟಿವಿ ಭಾರತ್ : ಕಡಿಮೆ ಮಾಲಿನ್ಯ ಹೊಂದಿರುವ ಭಾರತದ ಕೆಲ ನಗರಗಳಲ್ಲಿ ಕೂಡ ವಾಯುಮಾಲಿನ್ಯದಿಂದಾಗಿ ಸಾವು ಸಂಭವಿಸುತ್ತಿವೆ ಎಂದು ನಿಮ್ಮ ಅಧ್ಯಯನ ಹೇಳಿರುವುದು ಏಕೆ?

ಭಾರ್ಗವ್ ಕೃಷ್ಣ: ಭಾರತ ನಿಗದಿಪಡಿಸಿದ ಪರಿಸರ ವಾಯು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತಿರುವ ಬೆಂಗಳೂರು ಮತ್ತು ಹೈದರಾಬಾದ್ ನಂತಹ ನಗರಗಳಲ್ಲಿಯೂ ಗಮನಾರ್ಹ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ವಾಯು ಮಾಲಿನ್ಯದ ಕಾರಣದಿಂದ ಈ ಪ್ರತಿಯೊಂದು ನಗರಗಳಲ್ಲಿ ಪ್ರತಿವರ್ಷ 2,000 ರಿಂದ 4000 ಸಾವು ಸಂಭವಿಸುತ್ತಿವೆ. ಅಂದರೆ ಪರಿಸರ ಮಾಲಿನ್ಯ ನಿಯಂತ್ರಿಸುವ ಮಾನದಂಡಗಳೇ ಪರಿಣಾಮಕಾರಿಯಾಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ಈಟಿವಿ ಭಾರತ್ : ಅಂದರೆ ಕಡಿಮೆ ಮಾಲಿನ್ಯಕಾರಿ ಎಂದು ವರ್ಗೀಕರಿಸಲಾದ ನಗರಗಳು ವಾಸ್ತವದಲ್ಲಿ ಕಡಿಮೆ ಮಾಲಿನ್ಯ ಹೊಂದಿಲ್ಲವೇ?

ಭಾರ್ಗವ್ ಕೃಷ್ಣ: ಹೌದು. ಬದಲಿಗೆ, ದೆಹಲಿಯಂಥ ಇತರ ನಗರಗಳಿಗೆ ಹೋಲಿಸಿದರೆ ಅವು ಕಡಿಮೆ ಕಲುಷಿತವಾಗಿವೆ ಅಷ್ಟೇ.

ಈಟಿವಿ ಭಾರತ್: ಹಾಗಾದರೆ ವಾಯುಮಾಲಿನ್ಯದಿಂದಲೇ ಸಾವೊಂದು ಸಂಭವಿಸಿದೆ ಎಂದು ಅಧ್ಯಯನ ಹೇಗೆ ಹೇಳುತ್ತದೆ? ಮಾನದಂಡ ಏನು?

ಭಾರ್ಗವ್ ಕೃಷ್ಣ: ಈ ಅಧ್ಯಯನವು ಜನಸಂಖ್ಯೆಯ ಮಟ್ಟದಲ್ಲಿದೆಯೇ ಹೊರತು ವೈಯಕ್ತಿಕ ಮಟ್ಟದಲ್ಲಿ ಇಲ್ಲ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವಲ್ಲಿನ ದೈನಂದಿನ ವ್ಯತ್ಯಾಸಗಳು ಪ್ರತಿದಿನ ಸಂಭವಿಸುವ ಸಾವುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆಯೇ ಎಂಬುದನ್ನು ನಾವು ಪರಿಶೀಲಿಸಿದ್ದೇವೆ. ಇತರ ಯಾವುದೇ ಗಮನಾರ್ಹ ಅಂಶಗಳು (ಹೃದ್ರೋಗದ ಮಟ್ಟಗಳು, ಧೂಮಪಾನದ ಪ್ರಮಾಣ, ವಯಸ್ಸಾಗುವಿಕೆ, ಶ್ವಾಸಕೋಶದ ಪರಿಸ್ಥಿತಿಗಳು, ಆಹಾರ, ಬೊಜ್ಜು) ಇತ್ಯಾದಿಗಳು ದಿನದಿಂದ ದಿನಕ್ಕೆ ಬದಲಾಗುವುದಿಲ್ಲವಾದ್ದರಿಂದ, ಇದು ವಾಯುಮಾಲಿನ್ಯದ ಪರಿಣಾಮವನ್ನು ಮಾತ್ರ ಪರಿಣಾಮಕಾರಿಯಾಗಿ ಪ್ರತ್ಯೇಕಿಸುತ್ತದೆ. ವಾಯುಮಾಲಿನ್ಯ ಮತ್ತು ಸಾವುಗಳ ನಡುವಿನ ಸಂಬಂಧವನ್ನು ದೈನಂದಿನ ಆಧಾರದ ಮೇಲೆ (ಹವಾಮಾನ, ಕಾಲೋಚಿತತೆ, ತಾಪಮಾನ, ಆರ್ದ್ರತೆ) ಪ್ರಭಾವಿಸುವ ಅಂಶಗಳಿಗೆ ನಾವು ಹೊಂದಿಸುತ್ತೇವೆ ಮತ್ತು ಸಾರಾಂಶದಲ್ಲಿ ನಾವು ಕಾರಣಗಳ ಸಂಬಂಧವನ್ನು ಕಂಡುಕೊಂಡಿದ್ದೇವೆ.

ಈಟಿವಿ ಭಾರತ್: ನಿಮ್ಮ ಅಧ್ಯಯನದಲ್ಲಿ ಹಲವಾರು ಬಾರಿ ಅಲ್ಪಾವಧಿಯ ಒಡ್ಡಿಕೊಳ್ಳುವಿಕೆಯನ್ನು ಪ್ರಸ್ತಾಪಿಸಲಾಗಿದೆ. ನೀವು ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಭಾರ್ಗವ್ ಕೃಷ್ಣ: ನಾವು ಅಲ್ಪಾವಧಿಯ ಒಡ್ಡುವಿಕೆಯನ್ನು ಕಳೆದ 48 ಗಂಟೆಗಳಲ್ಲಿನ ಒಡ್ಡಿಕೊಳ್ಳುವಿಕೆ ಎಂದು ವ್ಯಾಖ್ಯಾನಿಸುತ್ತೇವೆ.

ಈಟಿವಿ ಭಾರತ್: ಉದಾಹರಣೆಗೆ ನಾನು ಭಾರತದ ಒಂದು ನಗರದಲ್ಲಿ ವಾಸಿಸುತ್ತಿದ್ದೇನೆ ಎಂದುಕೊಳ್ಳೋಣ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಪ್ರತಿದಿನ ಪ್ರಯಾಣಿಸುತ್ತೇನೆ ಎಂದುಕೊಳ್ಳೋಣ. ಇಂಥ ಪರಿಸ್ಥಿತಿಗಳಲ್ಲಿ ನನ್ನನ್ನು ನಾನು ಮಾಲಿನ್ಯದಿಂದ ಹೇಗೆ ರಕ್ಷಿಸಿಕೊಳ್ಳುವುದು?

ಭಾರ್ಗವ್ ಕೃಷ್ಣ: ನೀವು ಯಾವ ವಿಧಾನದ ಸಾರಿಗೆ ಬಳಸುತ್ತೀರಿ ಎಂಬುದನ್ನು ಅವಲಂಬಿಸಿ ಅಲ್ಪಾವಧಿಯ ಒಡ್ಡಿಕೊಳ್ಳುವಿಕೆಗಳು ಸಾಕಷ್ಟು ಹೆಚ್ಚಾಗಿರಬಹುದು. ಉದಾಹರಣೆಗೆ, ದೆಹಲಿಗೆ ಸಂಬಂಧಿಸಿದಂತೆ ಒಂದು ಅಧ್ಯಯನ ವರದಿ ಪ್ರಕಟವಾಗಿದೆ. ಅದರ ಪ್ರಕಾರ ನೀವು ದೀರ್ಘಕಾಲದವರೆಗೆ ಟ್ರಾಫಿಕ್​ನಲ್ಲಿ ಇದ್ದರೆ ಆ ಅವಧಿಯಲ್ಲಿ ನಿಮ್ಮ ಒಡ್ಡಿಕೊಳ್ಳುವಿಕೆಯು ಪ್ರತಿ ಘನ ಮೀಟರ್​ಗೆ 800 ಅಥವಾ 1000 ಮೈಕ್ರೋಗ್ರಾಂಗಳಿಗಿಂತ ಹೆಚ್ಚಾಗಬಹುದು. ಇದು ನೀವು ಒಡ್ಡಿಕೊಳ್ಳಬಹುದಾದ ಸುರಕ್ಷಿತ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ ನೀವು ತೆರೆದ ವಾಹನದಲ್ಲಿ, ಆಟೋ ರಿಕ್ಷಾ ಅಥವಾ ಬಸ್ ಅಥವಾ ಸೈಕಲ್ ಅಥವಾ ಮೋಟಾರ್ ಸೈಕಲ್​ ಮೂಲಕ ಪ್ರಯಾಣಿಸುವಾಗ ಈ ಮಟ್ಟದ ಒಡ್ಡಿಕೊಳ್ಳುವಿಕೆಯನ್ನು ಗಮನಿಸಲಾಗಿದೆ. ಇಂಥ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವ ಮೂಲಕ ಜನ ಮಾಲಿನ್ಯದಿಂದ ರಕ್ಷಣೆ ಪಡೆಯಬಹುದು.

ಈಟಿವಿ ಭಾರತ್: ವಾಹನಗಳಿಂದ ಹೊರಸೂಸುವ ಮಾಲಿನ್ಯವೇ ಹೆಚ್ಚು ಅಪಾಯಕಾರಿ ಎಂಬುದು ನಿಮ್ಮ ಅಭಿಪ್ರಾಯವೇ?

ಭಾರ್ಗವ್ ಕೃಷ್ಣ: ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲಿನಂತಹ ಯಾವುದೇ ರೀತಿಯ ದಹನದಿಂದ ಉಂಟಾಗುವ ಮಾಲಿನ್ಯವಿರಬಹುದು, ಕಾರು ಅಥವಾ ಬಸ್ ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಸುಡುವುದರಿಂದ ಉಂಟಾಗುವ ಮಾಲಿನ್ಯವಾಗಿರಬಹುದು, ಅಡುಗೆ ಮಾಡಲು ನಿಮ್ಮ ಮನೆಯಲ್ಲಿ ಕಟ್ಟಿಗೆ ಅಥವಾ ಸಗಣಿಯನ್ನು ಸುಡುವುದಾಗಿರಬಹುದು.. ಹೀಗೆ ಏನನ್ನಾದರೂ ಸುಡುವ ಪರಿಣಾಮವಾಗಿ ಉತ್ಪತ್ತಿಯಾಗುವ ಎಲ್ಲಾ ಹೊರಸೂಸುವಿಕೆಗಳು ವಿಶೇಷವಾಗಿ ಹಾನಿಕಾರಕವಾಗಿವೆ.

ಈಟಿವಿ ಭಾರತ್: ಸಾಮಾನ್ಯವಾಗಿ ನಗರಗಳಲ್ಲಿ ಯಾರೂ ಉರುವಲು ಬಳಸಿ ಅಡುಗೆ ಮಾಡುವುದಿಲ್ಲ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರು ಒಲೆಗಳನ್ನು ಬಳಸಿ ಅಡುಗೆ ಮಾಡುತ್ತಾರೆ.

ಭಾರ್ಗವ್ ಕೃಷ್ಣ: ಇದು ನಿಜವಾಗಿರಬಹುದು. ಆದರೆ ಅನೇಕ ನಗರ ಕೇಂದ್ರಗಳಲ್ಲಿ ಇನ್ನೂ ಅನೌಪಚಾರಿಕ ವಸಾಹತುಗಳು ಅಥವಾ ಕೊಳೆಗೇರಿಗಳಿವೆ. ಅಲ್ಲಿನ ಜನ ಅಡುಗೆಗಾಗಿ ಉರುವಲು ಅಥವಾ ಸಗಣಿಯನ್ನು ಅವಲಂಬಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಹೀಗಾಗಿ ಬಹುತೇಕ ನಗರಗಳಲ್ಲಿ ಕೂಡ 8 ರಿಂದ 10 ಪ್ರತಿಶತದಷ್ಟು ಜನ ಸಾಂಪ್ರದಾಯಿಕ ಇಂಧನಗಳನ್ನೇ ಅವಲಂಬಿಸಿದ್ದಾರೆ.

ಇದನ್ನೂ ಓದಿ: ಪ್ರಾಣಿಗಳಿಗೆ ಬರುವ ಎಲ್ಲಾ ರೋಗಗಳು ಮಾನವರಿಗೆ ಸಾಂಕ್ರಾಮಿಕವಲ್ಲ: ಪಶುಸಂಗೋಪನೆ ಇಲಾಖೆ ಮಾಹಿತಿ - World Zoonoses Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.