ETV Bharat / bharat

ಜ್ಞಾನವಾಪಿ ಪ್ರಕರಣ: ನಮ್ಮನ್ನೂ ಕಕ್ಷಿದಾರರನ್ನಾಗಿ ಮಾಡಿ ಎಂದು ಕೋರ್ಟ್​ ಮೆಟ್ಟಿಲೇರಿದ ಹರಿಹರ ಪುತ್ರಿಯರು - Gyanvapi Case

author img

By ETV Bharat Karnataka Team

Published : Jul 16, 2024, 12:53 PM IST

Updated : Jul 16, 2024, 1:08 PM IST

ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ 1991 ರ ಮುಖ್ಯ ಪ್ರಕರಣದ ವಿಚಾರಣೆ ನಡೆಯಲಿದೆ. ಹರಿಹರ ಪಾಂಡೆ ಈ ಪ್ರಕರಣದಲ್ಲಿ ಪ್ರಮುಖ ಫಿರ್ಯಾದುದಾರರಾಗಿದ್ದಾರೆ. ಅವರ ಮರಣದ ನಂತರ ಇದೀಗ ಅವರ ಮೂವರು ಪುತ್ರಿಯರು ಈ ಪ್ರಕರಣದಲ್ಲಿ ತಮ್ಮನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

VARANASI NEWS  VARANASI FASTTRACK COURT  GYANVAPI MAIN CASE PETITIONER
ಜ್ಞಾನವಾಪಿ ಪ್ರಕರಣ (ETV Bharat)

ವಾರಾಣಸಿ (ಉತ್ತರಪ್ರದೇಶ): ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಶೃಂಗಾರ ಗೌರಿ ಪ್ರಕರಣ ಮತ್ತು ಪ್ರಮುಖ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಮಂಗಳವಾರ, ವಾರಾಣಸಿಯ ತ್ವರಿತ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ 1991 ರ ಮುಖ್ಯ ಪ್ರಕರಣದ ವಿಚಾರಣೆ ನಡೆಯಲಿದೆ.

ಈ ಪ್ರಕರಣದ ಅರ್ಜಿದಾರ ಹರಿಹರ ಪಾಂಡೆ ನಿಧನರಾಗಿರುವುದು ಗಮನಾರ್ಹ. ಈಗ ಅವರ ಪುತ್ರಿಯರು ನಮ್ಮನ್ನು ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ, ತಮ್ಮ ತಂದೆಯ ಪರಂಪರೆ ಮತ್ತು ಅವರ ಕನಸುಗಳನ್ನು ನನಸಾಗಿಸಲು ಹೆಣ್ಣುಮಕ್ಕಳಿಗೆ ಸಹಭಾಗಿತ್ವ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ವಾಸ್ತವವಾಗಿ, ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ 1991 ರ ವಿಶ್ವೇಶ್ವರಯ್ಯ ಅವರ ಪ್ರಕರಣದ ವಿಚಾರಣೆಯು ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗದ ಪ್ರಶಾಂತ್ ಕುಮಾರ್ ಅವರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹರಿಹರ ಪಾಂಡೆ ಈ ಪ್ರಕರಣದಲ್ಲಿ ಪ್ರಮುಖ ಫಿರ್ಯಾದಿಯಾಗಿ ಭಾಗಿಯಾಗಿದ್ದರು. ಆದರೆ, ಅವರ ಮರಣದ ನಂತರ ಇದೀಗ ಅವರ ಮೂವರು ಪುತ್ರಿಯರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು 5 ದಿನಗಳ ಕಾಲಾವಕಾಶ ನೀಡಿತ್ತು.

ಆಕ್ಷೇಪಣೆ ಸಲ್ಲಿಕೆಗೆ ಇಂದು ಅವಕಾಶ ಇದ್ದು ಆ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದೆ. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎರಡೂ ಕಡೆಯವರಿಗೆ ನ್ಯಾಯಾಲಯ ಹೇಳಿತ್ತು. ಈ ಪ್ರಕರಣದ ಪರ ವಕೀಲ ವಿಜಯ ಶಂಕರ್ ರಸ್ತೋಗಿ ಹರಿಹರ ಪುತ್ರಿಯರ ಪರವಾಗಿ ಅಫಿಡವಿಟ್ ಸಹಿತ ಅರ್ಜಿ ಸಲ್ಲಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ವೇಳೆ ಹೊಸ ಪಕ್ಷಗಳನ್ನು ಸೇರಿಸಬೇಡಿ ಎಂದು ಮನವಿ ಮಾಡಿದ್ದರು. ಆದರೂ ಆಕ್ಷೇಪಣೆ ಸಲ್ಲಿಸಿದ ನಂತರ, ಪಕ್ಷ ಮಾಡುವ ಬಗ್ಗೆ ನ್ಯಾಯಾಲಯವು ತನ್ನ ನಿರ್ಧಾರ ಬಹಿರಂಗ ಪಡಿಸಲಿದೆ.

ಓದಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು - Gauri Lankesh murder case

ವಾರಾಣಸಿ (ಉತ್ತರಪ್ರದೇಶ): ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಶೃಂಗಾರ ಗೌರಿ ಪ್ರಕರಣ ಮತ್ತು ಪ್ರಮುಖ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಮಂಗಳವಾರ, ವಾರಾಣಸಿಯ ತ್ವರಿತ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ 1991 ರ ಮುಖ್ಯ ಪ್ರಕರಣದ ವಿಚಾರಣೆ ನಡೆಯಲಿದೆ.

ಈ ಪ್ರಕರಣದ ಅರ್ಜಿದಾರ ಹರಿಹರ ಪಾಂಡೆ ನಿಧನರಾಗಿರುವುದು ಗಮನಾರ್ಹ. ಈಗ ಅವರ ಪುತ್ರಿಯರು ನಮ್ಮನ್ನು ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ, ತಮ್ಮ ತಂದೆಯ ಪರಂಪರೆ ಮತ್ತು ಅವರ ಕನಸುಗಳನ್ನು ನನಸಾಗಿಸಲು ಹೆಣ್ಣುಮಕ್ಕಳಿಗೆ ಸಹಭಾಗಿತ್ವ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ವಾಸ್ತವವಾಗಿ, ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ 1991 ರ ವಿಶ್ವೇಶ್ವರಯ್ಯ ಅವರ ಪ್ರಕರಣದ ವಿಚಾರಣೆಯು ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗದ ಪ್ರಶಾಂತ್ ಕುಮಾರ್ ಅವರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹರಿಹರ ಪಾಂಡೆ ಈ ಪ್ರಕರಣದಲ್ಲಿ ಪ್ರಮುಖ ಫಿರ್ಯಾದಿಯಾಗಿ ಭಾಗಿಯಾಗಿದ್ದರು. ಆದರೆ, ಅವರ ಮರಣದ ನಂತರ ಇದೀಗ ಅವರ ಮೂವರು ಪುತ್ರಿಯರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು 5 ದಿನಗಳ ಕಾಲಾವಕಾಶ ನೀಡಿತ್ತು.

ಆಕ್ಷೇಪಣೆ ಸಲ್ಲಿಕೆಗೆ ಇಂದು ಅವಕಾಶ ಇದ್ದು ಆ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದೆ. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎರಡೂ ಕಡೆಯವರಿಗೆ ನ್ಯಾಯಾಲಯ ಹೇಳಿತ್ತು. ಈ ಪ್ರಕರಣದ ಪರ ವಕೀಲ ವಿಜಯ ಶಂಕರ್ ರಸ್ತೋಗಿ ಹರಿಹರ ಪುತ್ರಿಯರ ಪರವಾಗಿ ಅಫಿಡವಿಟ್ ಸಹಿತ ಅರ್ಜಿ ಸಲ್ಲಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ವೇಳೆ ಹೊಸ ಪಕ್ಷಗಳನ್ನು ಸೇರಿಸಬೇಡಿ ಎಂದು ಮನವಿ ಮಾಡಿದ್ದರು. ಆದರೂ ಆಕ್ಷೇಪಣೆ ಸಲ್ಲಿಸಿದ ನಂತರ, ಪಕ್ಷ ಮಾಡುವ ಬಗ್ಗೆ ನ್ಯಾಯಾಲಯವು ತನ್ನ ನಿರ್ಧಾರ ಬಹಿರಂಗ ಪಡಿಸಲಿದೆ.

ಓದಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು - Gauri Lankesh murder case

Last Updated : Jul 16, 2024, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.