ETV Bharat / bharat

ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ಇನ್ನಿಲ್ಲ..

author img

By ETV Bharat Karnataka Team

Published : Feb 26, 2024, 6:48 PM IST

Ghazal Maestro Pankaj Udhas Passes Away: ಗಜಲ್ ಮಾಂತ್ರಿಕ ಪಂಕಜ್ ಉಧಾಸ್ (72) ಅವರು ಇಂದು ನಿಧನರಾಗಿದ್ದಾರೆ.

ಪಂಕಜ್ ಉದಾಸ್
ಪಂಕಜ್ ಉದಾಸ್

ಮುಂಬೈ : ಖ್ಯಾತ ಭಾರತೀಯ ಗಜಲ್ ಗಾಯಕ ಪಂಕಜ್ ಉಧಾಸ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಅವರ ನಿಧನದ ಸುದ್ದಿಯು ಸಂಗೀತ ರಂಗ ಮತ್ತು ಪ್ರಪಂಚದಾದ್ಯಂತ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ. ಉಧಾಸ್ ಅವರು ಭಾವಪೂರ್ಣವಾದ ನಿರೂಪಣೆಗಳು ಮತ್ತು ಸುಮಧುರ ಧ್ವನಿಗೆ ಹೆಸರುವಾಸಿಯಾಗಿದ್ದರು. ಅವರು ಮರೆಯಲಾಗದ ಸಂಗೀತದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.

ಗುಜರಾತ್‌ನ ಜೆಟ್‌ಪುರದಲ್ಲಿ ಜನಿಸಿದ್ದ ಪಂಕಜ್ ರಾಜ್‌ಕೋಟ್‌ನ ಸಂಗೀತ ನಾಟ್ಯ ಅಕಾಡೆಮಿಗೆ ಸೇರಿಕೊಂಡರು. ಅಲ್ಲಿ ಅವರು ತಬಲಾ ನುಡಿಸುವಲ್ಲಿ ತಮ್ಮ ಕೌಶಲ್ಯವನ್ನು ಮೆರೆದರು. ನಂತರ ಅವರು ವಿಲ್ಸನ್ ಕಾಲೇಜು ಮತ್ತು ಮುಂಬೈನ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು. ಅದೇ ಸಮಯದಲ್ಲಿ ಮಾಸ್ಟರ್ ನವರಂಗ್ ಅವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ಗಾಯನ ಸಂಗೀತದಲ್ಲಿ ತರಬೇತಿ ಪಡೆದರು.

ಉಧಾಸ್ ಅವರ ಸಂಗೀತ ಪಯಣವು 'ಕಾಮ್ನಾ' ಚಿತ್ರದಲ್ಲಿನ ಅವರ ಮೊದಲ ಏಕವ್ಯಕ್ತಿ ಗೀತೆಯೊಂದಿಗೆ ಪ್ರಾರಂಭವಾಯಿತು. ಈ ಹಾಡನ್ನು ಉಷಾ ಖನ್ನಾ ಅವರು ಸಂಯೋಜಿಸಿದ್ದು, ನಕ್ಷ್ ಲಿಯಾಲ್‌ಪುರಿಯನ್ನು ಅವರು ಬರೆದಿದ್ದಾರೆ. ಚಲನಚಿತ್ರದ ವೈಫಲ್ಯದ ಹೊರತಾಗಿಯೂ, ಅವರ ನಿರೂಪಣೆಯು ಅಪಾರ ಮೆಚ್ಚುಗೆಯನ್ನು ಗಳಿಸಿತು. ಬಳಿಕ ಉಧಾಸ್ ಗಜಲ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಗಜಲ್ ಗಾಯಕರಾಗಿ ವೃತ್ತಿಜೀವನವನ್ನು ಮುಂದುವರಿಸಲು ಉರ್ದುವನ್ನು ಕರಗತ ಮಾಡಿಕೊಂಡರು.

2006ರಲ್ಲಿ ಪಂಕಜ್ ಉಧಾಸ್ ಅವರು ಗಜಲ್ ಗಾಯನ ಕಲೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಕ್ಯಾನ್ಸರ್ ರೋಗಿಗಳು ಮತ್ತು ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ಬೆಂಬಲಿಸುವ ಅವರ ಮಹತ್ವದ ಲೋಕೋಪಕಾರಿ ಪ್ರಯತ್ನಗಳು ಸೇರಿದಂತೆ ಮೂರು ದಶಕಗಳ ಕಾಲ ಅವರ ಪ್ರಸಿದ್ಧ ವೃತ್ತಿಜೀವನದ ಉದ್ದಕ್ಕೂ, ಉಧಾಸ್​ ಎಂಬತ್ತರ ದಶಕದ ಗಜಲ್ ಸಂಗೀತದಲ್ಲಿ ಮುಂಚೂಣಿಯಲ್ಲಿದ್ದರು. ಚಂಡಿ ಜೈಸಾ ರಂಗ್, ಆಪ್ ಜಿಂಕೆ ಕರೀಬ್ ಹೋತೆ ಹೈ, ಸಬ್ಕೋ ಮಾಲೂಮ್ ಹೈ, ಮೈನ್ ಶರಾಬಿ ನಹೀನ್ ಮತ್ತು ಏಕ್ ತರಫ್ ಉಸ್ಕಾ ಘರ್ ನಂತಹ ಸ್ಮರಣೀಯ ಹಿಟ್‌ಗಳನ್ನು ನೀಡಿದರು.

ಬಾಲಿವುಡ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಪಂಕಜ್: ನಾಮ್ ವಿತ್ ಚಿತ್ತಿ ಆಯೀ ಹೈ, ಜಿಯೇ ತೋ ಜಿಯೇ ಕೈಸೆ ಒಳಗೊಂಡ ಸಾಜನ್ ಮತ್ತು ನಾ ಕಜ್ರೆ ಕಿ ಧಾರ್ ಸೇರಿದಂತೆ ಮೊಹ್ರಾ ಮುಂತಾದ ಚಲನಚಿತ್ರಗಳಲ್ಲಿನ ಟಾಪ್ ಗಜಲ್ ಸಂಗೀತದೊಂದಿದೆ ಉಧಾಸ್ ಬಾಲಿವುಡ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ಪರ ಕಾವೇರಿ ನದಿ ನೀರಿಗಾಗಿ ಹೋರಾಡಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ನಿಧನ

ಮುಂಬೈ : ಖ್ಯಾತ ಭಾರತೀಯ ಗಜಲ್ ಗಾಯಕ ಪಂಕಜ್ ಉಧಾಸ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಅವರ ನಿಧನದ ಸುದ್ದಿಯು ಸಂಗೀತ ರಂಗ ಮತ್ತು ಪ್ರಪಂಚದಾದ್ಯಂತ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ. ಉಧಾಸ್ ಅವರು ಭಾವಪೂರ್ಣವಾದ ನಿರೂಪಣೆಗಳು ಮತ್ತು ಸುಮಧುರ ಧ್ವನಿಗೆ ಹೆಸರುವಾಸಿಯಾಗಿದ್ದರು. ಅವರು ಮರೆಯಲಾಗದ ಸಂಗೀತದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.

ಗುಜರಾತ್‌ನ ಜೆಟ್‌ಪುರದಲ್ಲಿ ಜನಿಸಿದ್ದ ಪಂಕಜ್ ರಾಜ್‌ಕೋಟ್‌ನ ಸಂಗೀತ ನಾಟ್ಯ ಅಕಾಡೆಮಿಗೆ ಸೇರಿಕೊಂಡರು. ಅಲ್ಲಿ ಅವರು ತಬಲಾ ನುಡಿಸುವಲ್ಲಿ ತಮ್ಮ ಕೌಶಲ್ಯವನ್ನು ಮೆರೆದರು. ನಂತರ ಅವರು ವಿಲ್ಸನ್ ಕಾಲೇಜು ಮತ್ತು ಮುಂಬೈನ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು. ಅದೇ ಸಮಯದಲ್ಲಿ ಮಾಸ್ಟರ್ ನವರಂಗ್ ಅವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತ್ರೀಯ ಗಾಯನ ಸಂಗೀತದಲ್ಲಿ ತರಬೇತಿ ಪಡೆದರು.

ಉಧಾಸ್ ಅವರ ಸಂಗೀತ ಪಯಣವು 'ಕಾಮ್ನಾ' ಚಿತ್ರದಲ್ಲಿನ ಅವರ ಮೊದಲ ಏಕವ್ಯಕ್ತಿ ಗೀತೆಯೊಂದಿಗೆ ಪ್ರಾರಂಭವಾಯಿತು. ಈ ಹಾಡನ್ನು ಉಷಾ ಖನ್ನಾ ಅವರು ಸಂಯೋಜಿಸಿದ್ದು, ನಕ್ಷ್ ಲಿಯಾಲ್‌ಪುರಿಯನ್ನು ಅವರು ಬರೆದಿದ್ದಾರೆ. ಚಲನಚಿತ್ರದ ವೈಫಲ್ಯದ ಹೊರತಾಗಿಯೂ, ಅವರ ನಿರೂಪಣೆಯು ಅಪಾರ ಮೆಚ್ಚುಗೆಯನ್ನು ಗಳಿಸಿತು. ಬಳಿಕ ಉಧಾಸ್ ಗಜಲ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಗಜಲ್ ಗಾಯಕರಾಗಿ ವೃತ್ತಿಜೀವನವನ್ನು ಮುಂದುವರಿಸಲು ಉರ್ದುವನ್ನು ಕರಗತ ಮಾಡಿಕೊಂಡರು.

2006ರಲ್ಲಿ ಪಂಕಜ್ ಉಧಾಸ್ ಅವರು ಗಜಲ್ ಗಾಯನ ಕಲೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಕ್ಯಾನ್ಸರ್ ರೋಗಿಗಳು ಮತ್ತು ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ಬೆಂಬಲಿಸುವ ಅವರ ಮಹತ್ವದ ಲೋಕೋಪಕಾರಿ ಪ್ರಯತ್ನಗಳು ಸೇರಿದಂತೆ ಮೂರು ದಶಕಗಳ ಕಾಲ ಅವರ ಪ್ರಸಿದ್ಧ ವೃತ್ತಿಜೀವನದ ಉದ್ದಕ್ಕೂ, ಉಧಾಸ್​ ಎಂಬತ್ತರ ದಶಕದ ಗಜಲ್ ಸಂಗೀತದಲ್ಲಿ ಮುಂಚೂಣಿಯಲ್ಲಿದ್ದರು. ಚಂಡಿ ಜೈಸಾ ರಂಗ್, ಆಪ್ ಜಿಂಕೆ ಕರೀಬ್ ಹೋತೆ ಹೈ, ಸಬ್ಕೋ ಮಾಲೂಮ್ ಹೈ, ಮೈನ್ ಶರಾಬಿ ನಹೀನ್ ಮತ್ತು ಏಕ್ ತರಫ್ ಉಸ್ಕಾ ಘರ್ ನಂತಹ ಸ್ಮರಣೀಯ ಹಿಟ್‌ಗಳನ್ನು ನೀಡಿದರು.

ಬಾಲಿವುಡ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಪಂಕಜ್: ನಾಮ್ ವಿತ್ ಚಿತ್ತಿ ಆಯೀ ಹೈ, ಜಿಯೇ ತೋ ಜಿಯೇ ಕೈಸೆ ಒಳಗೊಂಡ ಸಾಜನ್ ಮತ್ತು ನಾ ಕಜ್ರೆ ಕಿ ಧಾರ್ ಸೇರಿದಂತೆ ಮೊಹ್ರಾ ಮುಂತಾದ ಚಲನಚಿತ್ರಗಳಲ್ಲಿನ ಟಾಪ್ ಗಜಲ್ ಸಂಗೀತದೊಂದಿದೆ ಉಧಾಸ್ ಬಾಲಿವುಡ್‌ನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕದ ಪರ ಕಾವೇರಿ ನದಿ ನೀರಿಗಾಗಿ ಹೋರಾಡಿದ್ದ ಹಿರಿಯ ವಕೀಲ ಪಾಲಿ ನಾರಿಮನ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.