ETV Bharat / bharat

250 ಕೋಟಿಗೂ ಅಧಿಕ ಅಕ್ರಮ ಆಸ್ತಿಗಳಿಕೆ ಆರೋಪ: ಹೆಚ್​ಎಂಡಿಎ ಮಾಜಿ ನಿರ್ದೇಶಕ ಚಂಚಲಗೂಡ ಜೈಲಿಗೆ

author img

By ETV Bharat Karnataka Team

Published : Feb 8, 2024, 12:22 PM IST

ಅಕ್ರಮ ಆಸ್ತಿಗಳಿಕೆ ಆರೋಪದಡಿ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವಬಾಲಕೃಷ್ಣ ಅವರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ನ್ಯಾಯಾಲಯವು ಅವರನ್ನ ಚಂಚಲಗೂಡ ಜೈಲಿಗೆ ಕಳುಹಿಸಿದೆ.

ಅಕ್ರಮ ಆಸ್ತಿಗಳಿಕೆ ಆರೋಪ
ಅಕ್ರಮ ಆಸ್ತಿಗಳಿಕೆ ಆರೋಪ

ಹೈದರಾಬಾದ್: ಅಕ್ರಮ ಆಸ್ತಿಗಳಿಕೆ ಆರೋಪದಡಿ ಬಂಧಿತರಾಗಿದ್ದ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವಬಾಲಕೃಷ್ಣ ಅವರ ಕಸ್ಟಡಿ ಅವಧಿ ಬುಧವಾರ ಮುಗಿದ ಹಿನ್ನೆಲೆ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಎಸಿಬಿ ಅಧಿಕಾರಿಗಳು ಚಂಚಲಗೂಡ ಜೈಲಿಗೆ ಕಳುಹಿಸಿದ್ದಾರೆ. ಒಟ್ಟು 8 ದಿನಗಳಲ್ಲಿ ಎಸಿಬಿ ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದು, ಶಿವಬಾಲಕೃಷ್ಣ ಅವರ ಆದಾಯದ ದೊಡ್ಡ ಲಿಸ್ಟೇ ಬಯಲಾಗಿದೆ.

ಶಿವಬಾಲಕೃಷ್ಣ ಹಾಗೂ ಅವರ ಕುಟುಂಬದವರು ಹಾಗೂ ಬೇನಾಮಿ ಹೆಸರಿನಲ್ಲಿ 214 ಎಕರೆ ಕೃಷಿ ಭೂಮಿ, 29 ನಿವೇಶನಗಳು ಹಾಗೂ 8 ಮನೆಗಳು ಇರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಅಲ್ಲಿನ ಎಸಿಬಿ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮೂರು ದಿನಗಳಿಂದ ಎಚ್‌ಎಂಡಿಎ ಕೇಂದ್ರ ಕಚೇರಿಯಲ್ಲಿ ಎಸಿಬಿ ತಪಾಸಣೆ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಶಿವಬಾಲಕೃಷ್ಣ ಅವರು ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಿರುವ ಅನುಮತಿಗಳ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಸಿದ್ದಿಪೇಟೆ ಜಿಲ್ಲೆಯ ಅಲ್ಲಾಪುರ ಗ್ರಾಮದ ಶಿವಬಾಲಕೃಷ್ಣ ಒಟ್ಟು 214 ಎಕರೆ ಪೈಕಿ 102 ಎಕರೆಯನ್ನು ಜನಗಾಮ ಜಿಲ್ಲೆಯೊಂದರಲ್ಲೇ ಖರೀದಿಸಿರುವುದು ಗಮನಕ್ಕೆ ಬಂದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ 66 ಎಕರೆ, ನಾಗರಕರ್ನೂಲ್‌ನಲ್ಲಿ 39, ಸಿದ್ದಿಪೇಟೆಯಲ್ಲಿ ಏಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ಅರ್ಧ ಎಕರೆ ಜಮೀನು ಇರುವುದು ತನಿಖೆ ವೇಳೆ ಬಯಲಾಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 12, ಯಾದಾದ್ರಿಯಲ್ಲಿ 8, ಸಂಗಾರೆಡ್ಡಿಯಲ್ಲಿ 3, ವಿಶಾಖಪಟ್ಟಣ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ತಲಾ 2 ಮತ್ತು ಮೇಡ್ಚಲ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ತಲಾ ಒಂದರಂತೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಪುಪ್ಪಲಗುಡದಲ್ಲಿರುವ ವಿಲ್ಲಾ ಹೊರತುಪಡಿಸಿ, ಹೈದರಾಬಾದ್‌ನಲ್ಲಿ 4 ಮತ್ತು ರಂಗಾರೆಡ್ಡಿಯಲ್ಲಿ 3 ಐಷಾರಾಮಿ ಮನೆಗಳಿವೆ ಎಂದು ಎಸಿಬಿ ಹೇಳಿದೆ.

ಇನ್ನು ಶಿವಬಾಲಕೃಷ್ಣ ಅವರ ಸಹೋದರ ಶಿವನವೀನ್ ಅವರನ್ನು ಎಸಿಬಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದೆ. ಶಿವನವೀನ್ ತನ್ನ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು . ಹಾಗೇ ಶಿವನವೀನ್ ಪತ್ನಿ ಅರುಣಾ ಹಾಗೂ ಸೋದರ ಸಂಬಂಧಿ ಪೆಂಟಾ ಭರತಕುಮಾರ್ ಅವರು ಶಿವಬಾಲಕೃಷ್ಣ ಹೆಸರಿನಲ್ಲಿ ಅಪಾರ ಪ್ರಮಾಣದ ಆಸ್ತಿಯನ್ನು ಕೂಡಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೂವರ ವಿಚಾರಣೆಗೆ ಅಧಿಕಾರಿಗಳು ಗಮನ ಹರಿಸಿದ್ದಾರೆ. ಸೂಕ್ತ ಸಾಕ್ಷ್ಯಾಧಾರ ಸಿಗದಿದ್ದರೆ ಅವರನ್ನೂ ಬಂಧಿಸುವ ಸಾಧ್ಯತೆ ಇದೆ. ಇವೆಲ್ಲದರ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಇಡಿಗಳಿಗೆ ಮಾಹಿತಿ ನೀಡಲು ಬೇನಾಮಿ ಕಾಯ್ದೆಯನ್ನು ಅನ್ವಯಿಸಲು ಎಸಿಬಿ ಮುಂದಾಗಿದೆ ಎಂದು ಮಾಹಿತಿ ಇದೆ.

ಇನ್ನು ಎಸಿಬಿ ಶೋಧದ ವೇಳೆ ಶಿವಬಾಲಕೃಷ್ಣ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ 15 ಬ್ಯಾಂಕ್ ಖಾತೆಗಳು ಇರುವುದು ಪತ್ತೆಯಾಗಿದೆ. ಆಯಾ ಖಾತೆಗಳ ಹೆಸರಿನಲ್ಲಿರುವ ಲಾಕರ್​ಗಳನ್ನು ತೆರೆಯಲು ಯತ್ನಿಸಿದ್ದಾರೆ. ಶಿವಬಾಲಕೃಷ್ಣ ಎಂಬುವವರ ಹೆಸರಿನಲ್ಲಿರುವ ಲಾಕರ್ ಒಂದನ್ನು ತೆರೆದಾಗ ಪದವೀಧರರ ಪಾಸ್ ಬುಕ್ ಸೇರಿ 18 ತೊಲ ಚಿನ್ನ ಪತ್ತೆಯಾಗಿದೆ. ಲೆಕ್ಕಪತ್ರ ತೋರಿಸದ ಕಾರಣ ಅದನ್ನು ಜಪ್ತಿ ಮಾಡಲಾಗಿದೆ. ಶಿವಬಾಲಕೃಷ್ಣ ಅವರು ತಮ್ಮ ಕಡತಗಳಿಗೆ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ದೂರುಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ಜಂಟಿ ನಿರ್ದೇಶಕ ಸುಧೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ

ಹೈದರಾಬಾದ್: ಅಕ್ರಮ ಆಸ್ತಿಗಳಿಕೆ ಆರೋಪದಡಿ ಬಂಧಿತರಾಗಿದ್ದ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವಬಾಲಕೃಷ್ಣ ಅವರ ಕಸ್ಟಡಿ ಅವಧಿ ಬುಧವಾರ ಮುಗಿದ ಹಿನ್ನೆಲೆ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಎಸಿಬಿ ಅಧಿಕಾರಿಗಳು ಚಂಚಲಗೂಡ ಜೈಲಿಗೆ ಕಳುಹಿಸಿದ್ದಾರೆ. ಒಟ್ಟು 8 ದಿನಗಳಲ್ಲಿ ಎಸಿಬಿ ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದು, ಶಿವಬಾಲಕೃಷ್ಣ ಅವರ ಆದಾಯದ ದೊಡ್ಡ ಲಿಸ್ಟೇ ಬಯಲಾಗಿದೆ.

ಶಿವಬಾಲಕೃಷ್ಣ ಹಾಗೂ ಅವರ ಕುಟುಂಬದವರು ಹಾಗೂ ಬೇನಾಮಿ ಹೆಸರಿನಲ್ಲಿ 214 ಎಕರೆ ಕೃಷಿ ಭೂಮಿ, 29 ನಿವೇಶನಗಳು ಹಾಗೂ 8 ಮನೆಗಳು ಇರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಅಲ್ಲಿನ ಎಸಿಬಿ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮೂರು ದಿನಗಳಿಂದ ಎಚ್‌ಎಂಡಿಎ ಕೇಂದ್ರ ಕಚೇರಿಯಲ್ಲಿ ಎಸಿಬಿ ತಪಾಸಣೆ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಶಿವಬಾಲಕೃಷ್ಣ ಅವರು ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಿರುವ ಅನುಮತಿಗಳ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಸಿದ್ದಿಪೇಟೆ ಜಿಲ್ಲೆಯ ಅಲ್ಲಾಪುರ ಗ್ರಾಮದ ಶಿವಬಾಲಕೃಷ್ಣ ಒಟ್ಟು 214 ಎಕರೆ ಪೈಕಿ 102 ಎಕರೆಯನ್ನು ಜನಗಾಮ ಜಿಲ್ಲೆಯೊಂದರಲ್ಲೇ ಖರೀದಿಸಿರುವುದು ಗಮನಕ್ಕೆ ಬಂದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ 66 ಎಕರೆ, ನಾಗರಕರ್ನೂಲ್‌ನಲ್ಲಿ 39, ಸಿದ್ದಿಪೇಟೆಯಲ್ಲಿ ಏಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ಅರ್ಧ ಎಕರೆ ಜಮೀನು ಇರುವುದು ತನಿಖೆ ವೇಳೆ ಬಯಲಾಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 12, ಯಾದಾದ್ರಿಯಲ್ಲಿ 8, ಸಂಗಾರೆಡ್ಡಿಯಲ್ಲಿ 3, ವಿಶಾಖಪಟ್ಟಣ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ತಲಾ 2 ಮತ್ತು ಮೇಡ್ಚಲ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ತಲಾ ಒಂದರಂತೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಪುಪ್ಪಲಗುಡದಲ್ಲಿರುವ ವಿಲ್ಲಾ ಹೊರತುಪಡಿಸಿ, ಹೈದರಾಬಾದ್‌ನಲ್ಲಿ 4 ಮತ್ತು ರಂಗಾರೆಡ್ಡಿಯಲ್ಲಿ 3 ಐಷಾರಾಮಿ ಮನೆಗಳಿವೆ ಎಂದು ಎಸಿಬಿ ಹೇಳಿದೆ.

ಇನ್ನು ಶಿವಬಾಲಕೃಷ್ಣ ಅವರ ಸಹೋದರ ಶಿವನವೀನ್ ಅವರನ್ನು ಎಸಿಬಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದೆ. ಶಿವನವೀನ್ ತನ್ನ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು . ಹಾಗೇ ಶಿವನವೀನ್ ಪತ್ನಿ ಅರುಣಾ ಹಾಗೂ ಸೋದರ ಸಂಬಂಧಿ ಪೆಂಟಾ ಭರತಕುಮಾರ್ ಅವರು ಶಿವಬಾಲಕೃಷ್ಣ ಹೆಸರಿನಲ್ಲಿ ಅಪಾರ ಪ್ರಮಾಣದ ಆಸ್ತಿಯನ್ನು ಕೂಡಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೂವರ ವಿಚಾರಣೆಗೆ ಅಧಿಕಾರಿಗಳು ಗಮನ ಹರಿಸಿದ್ದಾರೆ. ಸೂಕ್ತ ಸಾಕ್ಷ್ಯಾಧಾರ ಸಿಗದಿದ್ದರೆ ಅವರನ್ನೂ ಬಂಧಿಸುವ ಸಾಧ್ಯತೆ ಇದೆ. ಇವೆಲ್ಲದರ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಇಡಿಗಳಿಗೆ ಮಾಹಿತಿ ನೀಡಲು ಬೇನಾಮಿ ಕಾಯ್ದೆಯನ್ನು ಅನ್ವಯಿಸಲು ಎಸಿಬಿ ಮುಂದಾಗಿದೆ ಎಂದು ಮಾಹಿತಿ ಇದೆ.

ಇನ್ನು ಎಸಿಬಿ ಶೋಧದ ವೇಳೆ ಶಿವಬಾಲಕೃಷ್ಣ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ 15 ಬ್ಯಾಂಕ್ ಖಾತೆಗಳು ಇರುವುದು ಪತ್ತೆಯಾಗಿದೆ. ಆಯಾ ಖಾತೆಗಳ ಹೆಸರಿನಲ್ಲಿರುವ ಲಾಕರ್​ಗಳನ್ನು ತೆರೆಯಲು ಯತ್ನಿಸಿದ್ದಾರೆ. ಶಿವಬಾಲಕೃಷ್ಣ ಎಂಬುವವರ ಹೆಸರಿನಲ್ಲಿರುವ ಲಾಕರ್ ಒಂದನ್ನು ತೆರೆದಾಗ ಪದವೀಧರರ ಪಾಸ್ ಬುಕ್ ಸೇರಿ 18 ತೊಲ ಚಿನ್ನ ಪತ್ತೆಯಾಗಿದೆ. ಲೆಕ್ಕಪತ್ರ ತೋರಿಸದ ಕಾರಣ ಅದನ್ನು ಜಪ್ತಿ ಮಾಡಲಾಗಿದೆ. ಶಿವಬಾಲಕೃಷ್ಣ ಅವರು ತಮ್ಮ ಕಡತಗಳಿಗೆ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ದೂರುಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ಜಂಟಿ ನಿರ್ದೇಶಕ ಸುಧೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.