ETV Bharat / bharat

ಸಿಎಂ ಶಿಂಧೆ ನಿವಾಸದಲ್ಲಿ ಅದ್ಧೂರಿ ಗಣೇಶ ಆರತಿ; ಹಲವು ವಿದೇಶಿ ರಾಯಭಾರಿ, ಅಧಿಕಾರಿಗಳು ಭಾಗಿ - Foreign diplomats in Ganesh Aarti

author img

By ANI

Published : Sep 12, 2024, 12:31 PM IST

ಶ್ರೀಲಂಕಾ, ಮಾರಿಷಿಯಸ್​, ಸ್ವೀಡನ್​, ಸ್ವಿಟ್ಜರ್ಲ್ಯಾಂಡ್​, ಯುಎಇ, ಯುಎಸ್​ಎ, ಯೆಮೆನ್​, ದಕ್ಷಿಣ ಕೊರಿಯಾಮ ಚಿಲಿ, ಚೀನಾ ಸೇರಿದಂತೆ ಹಲವು ದೇಶದ ರಾಯಭಾರಿಗಳು ಈ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

foreign-diplomats-of-various-countries-took-part-in-ganesh-aarti-at-mh-cm-eknath-shinde-home
ಗಣೇಶ ಆರತಿಯಲ್ಲಿ ಭಾಗಿಯಾದ ವಿದೇಶಿ ರಾಜತಾಂತ್ರಿಕ ಅಧಿಕಾರಿಗಳು (ANI)

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮನೆಯಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ವಿದೇಶಿ ರಾಜತಾಂತ್ರಿಕರು ಭಾಗಿಯಾಗಿ ಗಮನ ಸೆಳೆದರು.

ಈ ಕುರಿತು ಮುಖ್ಯಮಂತ್ರಿ ಕೂಡ ಎಕ್ಸ್​ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಗತ್ತಿನ ಅನೇಕ ದೇಶದ ರಾಯಭಾರಿಗಳು ಮತ್ತು ವಿದೇಶಾಂಗ ವ್ಯವಹಾರದ ಅಧಿಕಾರಿಗಳು ತಮ್ಮ ವರ್ಷ ನಿವಾಸದಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗಜಮುಖನಿಗೆ ನಮನ ಸಲ್ಲಿಸಿದರು ಎಂದು ತಿಳಿಸಿದ್ದಾರೆ.

ಸಂಸದ ಡಾ ಶ್ರೀಕಾಂತ್​ ಶಿಂಥೆ, ಸಂಸದ ಮಿಲಿಂದ್​ ಡಿಯೋರಾ, ಮಾಜಿ ಸಂಸದ ರಾಹುಲ್​ ಶೆವಾಲೆ ಹಾಗೂ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.

ಶ್ರೀಲಂಕಾ ರಾಯಭಾರಿ, ಮಾರಿಷಿಯಸ್​, ಸ್ವೀಡನ್​, ಸ್ವಿಟ್ಜರ್ಲ್ಯಾಂಡ್​, ಯುಎಇ, ಯುಎಸ್​ಎ, ಯೆಮೆನ್​, ದಕ್ಷಿಣ ಕೊರಿಯಾ, ಚಿಲಿ, ಚೀನಾ, ಮೆಕ್ಸಿಕೊ, ಜರ್ಮನಿ, ಇಂಡೋನೇಷ್ಯಾ, ಇರಾಕ್​, ಇರಾನ್​, ಐರ್ಲೆಂಡ್​, ಇಟಲಿ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಹ್ರೇನ್​ ಮತ್ತು ಬೆಲಾರಸ್​ ರಾಯಭಾರಿಗಳು ಭಾಗಿಯಾದರು. ಎಲ್ಲಾ ರಾಯಭಾರಿಗಳಿಗೆ ಆತ್ಮೀಯವಾಗಿ ಸ್ವಾಗತಿಸಿ ಮತ್ತು ಅವರನ್ನು ವಿಶೇಷ ಉಡುಗೊರೆಯೊಂದಿಗೆ ಗೌರವಿಸಲಾಗಿದೆ ಎಂದು ಶಿಂಧೆ ಎಕ್ಸ್​ ಪೋಸ್ಟ್​ ನಲ್ಲಿ ವಿವರಿಸಿದ್ದಾರೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ಹಬ್ಬವನ್ನು ವಿಶೇಷವಾಗಿ ಅತಿಥಿಗಳಿಗಾಗಿ ಆಯೋಜಿಸಲಾಗಿತ್ತು. ಹಲವು ದೇಶದ ರಾಯಭಾರಿಗಳು ಅತ್ಯುತ್ಸಾಹದಿಂದ ಭಾಗಿಯಾಗಿ ಗಣೇಶ ಹಬ್ಬವನ್ನು ಸಂಭ್ರಮಿಸಿದರು. ಅವರಿಗೆ ಗಣೇಶನಿಗೆ ಪ್ರೀತಿಯಾದ ಮೋದಕವನ್ನು ಪ್ರಸಾದವಾಗಿ ನೀಡಲಾಗಿದೆ ಎಂದು ಕೂಡ ಮತ್ತೊಂದು ಪೋಸ್ಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಗಣೇಶ ಚತುರ್ಥಿಯಿಂದ ಆರಂಭವಾಗುವ ಹಬ್ಬವು ಅನಂತ ಚತುರ್ದಶಿವರೆಗೆ 10 ದಿನಗಳ ಕಾಲ ಆಚರಣೆ ಮಾಡಲಾಗುವುದು.

ಇದನ್ನೂ ಓದಿ: ವಯನಾಡ್ ದುರಂತದಲ್ಲಿ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಯುವತಿಯ ಭಾವಿ ಪತಿ ರಸ್ತೆ ಅಪಘಾತದಲ್ಲಿ ಸಾವು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮನೆಯಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ವಿದೇಶಿ ರಾಜತಾಂತ್ರಿಕರು ಭಾಗಿಯಾಗಿ ಗಮನ ಸೆಳೆದರು.

ಈ ಕುರಿತು ಮುಖ್ಯಮಂತ್ರಿ ಕೂಡ ಎಕ್ಸ್​ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಗತ್ತಿನ ಅನೇಕ ದೇಶದ ರಾಯಭಾರಿಗಳು ಮತ್ತು ವಿದೇಶಾಂಗ ವ್ಯವಹಾರದ ಅಧಿಕಾರಿಗಳು ತಮ್ಮ ವರ್ಷ ನಿವಾಸದಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗಜಮುಖನಿಗೆ ನಮನ ಸಲ್ಲಿಸಿದರು ಎಂದು ತಿಳಿಸಿದ್ದಾರೆ.

ಸಂಸದ ಡಾ ಶ್ರೀಕಾಂತ್​ ಶಿಂಥೆ, ಸಂಸದ ಮಿಲಿಂದ್​ ಡಿಯೋರಾ, ಮಾಜಿ ಸಂಸದ ರಾಹುಲ್​ ಶೆವಾಲೆ ಹಾಗೂ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.

ಶ್ರೀಲಂಕಾ ರಾಯಭಾರಿ, ಮಾರಿಷಿಯಸ್​, ಸ್ವೀಡನ್​, ಸ್ವಿಟ್ಜರ್ಲ್ಯಾಂಡ್​, ಯುಎಇ, ಯುಎಸ್​ಎ, ಯೆಮೆನ್​, ದಕ್ಷಿಣ ಕೊರಿಯಾ, ಚಿಲಿ, ಚೀನಾ, ಮೆಕ್ಸಿಕೊ, ಜರ್ಮನಿ, ಇಂಡೋನೇಷ್ಯಾ, ಇರಾಕ್​, ಇರಾನ್​, ಐರ್ಲೆಂಡ್​, ಇಟಲಿ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಹ್ರೇನ್​ ಮತ್ತು ಬೆಲಾರಸ್​ ರಾಯಭಾರಿಗಳು ಭಾಗಿಯಾದರು. ಎಲ್ಲಾ ರಾಯಭಾರಿಗಳಿಗೆ ಆತ್ಮೀಯವಾಗಿ ಸ್ವಾಗತಿಸಿ ಮತ್ತು ಅವರನ್ನು ವಿಶೇಷ ಉಡುಗೊರೆಯೊಂದಿಗೆ ಗೌರವಿಸಲಾಗಿದೆ ಎಂದು ಶಿಂಧೆ ಎಕ್ಸ್​ ಪೋಸ್ಟ್​ ನಲ್ಲಿ ವಿವರಿಸಿದ್ದಾರೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ಹಬ್ಬವನ್ನು ವಿಶೇಷವಾಗಿ ಅತಿಥಿಗಳಿಗಾಗಿ ಆಯೋಜಿಸಲಾಗಿತ್ತು. ಹಲವು ದೇಶದ ರಾಯಭಾರಿಗಳು ಅತ್ಯುತ್ಸಾಹದಿಂದ ಭಾಗಿಯಾಗಿ ಗಣೇಶ ಹಬ್ಬವನ್ನು ಸಂಭ್ರಮಿಸಿದರು. ಅವರಿಗೆ ಗಣೇಶನಿಗೆ ಪ್ರೀತಿಯಾದ ಮೋದಕವನ್ನು ಪ್ರಸಾದವಾಗಿ ನೀಡಲಾಗಿದೆ ಎಂದು ಕೂಡ ಮತ್ತೊಂದು ಪೋಸ್ಟ್​ನಲ್ಲಿ ಮಾಹಿತಿ ನೀಡಿದ್ದಾರೆ.

ಗಣೇಶ ಚತುರ್ಥಿಯಿಂದ ಆರಂಭವಾಗುವ ಹಬ್ಬವು ಅನಂತ ಚತುರ್ದಶಿವರೆಗೆ 10 ದಿನಗಳ ಕಾಲ ಆಚರಣೆ ಮಾಡಲಾಗುವುದು.

ಇದನ್ನೂ ಓದಿ: ವಯನಾಡ್ ದುರಂತದಲ್ಲಿ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಯುವತಿಯ ಭಾವಿ ಪತಿ ರಸ್ತೆ ಅಪಘಾತದಲ್ಲಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.