ETV Bharat / bharat

ಶೀಘ್ರದಲ್ಲೇ ಪ್ರಧಾನಿಯಿಂದ 'ಕ್ರಿಸ್​ ಸಿಟಿ'ಗೆ ಶಂಕು ಸ್ಥಾಪನೆ: ಆಂಧ್ರದ ಮೊದಲ ಫೀಲ್ಡ್​​ ಸ್ಮಾರ್ಟ್​ ಇಂಡಸ್ಟ್ರಿಯಲ್​ ಸಿಟಿ ಇದು - green field smart industrial City

author img

By ETV Bharat Karnataka Team

Published : Aug 28, 2024, 12:29 PM IST

ಚೆನ್ನೈ - ಬೆಂಗಳೂರು ಇಂಡಸ್ಟ್ರಿ ಕಾರಿಡಾರ್​​ ಭಾಗವಾಗಿ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಕ್ರಿಸ್​ ಸಿಟಿ ಅಭಿವೃದ್ಧಿಗೆ ಕೇಂದ್ರ ಅನುಮತಿ ನೀಡಿದೆ.

first green field smart industrial Kris City - PM will lay the foundation stone
ಕ್ರಿಸ್​ ಸಿಟಿ (ಈಟಿವಿ ಭಾರತ್​​)

ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗಿರುವ ಮೊದಲ ಗ್ರೀನ್​ ಫೀಲ್ಡ್​​ ಸ್ಮಾರ್ಟ್​​ ಇಂಡಸ್ಟ್ರಿ ನಗರ ಕ್ರಿಸ್​ ಸಿಟಿ ನಿರ್ಮಾಣಕ್ಕೆ ಸಿದ್ಧವಾಗಿದೆ. ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಿಸ್​ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಕ್ರಿಸ್​ ಸಿಟಿ?: ಈ ಹಿಂದಿನ ಟಿಡಿಪಿ ಸರ್ಕಾರದಲ್ಲಿ (2014-19)ರಲ್ಲಿ ಚೆನ್ನೈ - ಬೆಂಗಳೂರು ಇಂಡಸ್ಟ್ರಿ ಕಾರಿಡಾರ್​​ ಭಾಗವಾಗಿ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಕ್ರಿಸ್​ ಸಿಟಿ ಅಭಿವೃದ್ಧಿಗೆ ಕೇಂದ್ರ ಅನುಮತಿ ನೀಡಿತು. ಐದು ವರ್ಷದ ಹಿಂದೆ ಈ ಟೆಂಡರ್​​ ಅಂತಿಮಗೊಳಿಸಲು ವಿಳಂಬ ಮಾಡಿತು. ಚುನಾವಣೆಗೆ ಮುನ್ನ ಈ ಟೆಂಡರ್​ ಪ್ರಕ್ರಿಯೆಯನ್ನು ಬಿರುಸಾಗಿ ಮುಗಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಲಯ ಸಂಘಟನೆಯ ನ್ಯಾಷನಲ್​ ಇಂಡಸ್ಟ್ರಿಯಲ್​ ಕಾರಿಡರ್​​​ ಡೆವಲ್ಮಪೆಂಟ್​ ಅಂಡ್​ ಇಂಪ್ಲಿಮೆಟೆಷನ್​ ಟ್ರಸ್ಟ್​ (ಎನ್​ಐಸಿಡಿಐಸಿಟಿ)ಯಲ್ಲಿನ ಸಹಭಾಗಿತ್ವದಲ್ಲಿ ಈ ಯೋಜನೆ ನಡೆಸಲಾಗುವುದು. ಸರ್ಕಾರವೂ ಸೆಮಿಕಂಡಕ್ಟರ್​ ಉತ್ಪಾದನಾ ಕೈಗಾರಿಕೆಗಳಿಗೆ ಉತ್ತಮ ದೃಷ್ಟಿ ಹಿನ್ನೆಲೆ ಕ್ರಿಸ್​ ಸಿಟಿ ಮತ್ತು ಅಚುತಪುರಂ ಎಸ್​ಇಜೆಡ್​​ಗೆ ಪ್ರಾಧ್ಯಾನತೆ ನೀಡಲು ನಿರ್ಧರಿಸಿದೆ.

ಮೂರು ಹಂತದಲ್ಲಿ 11,096 ಎಕರೆಯಲ್ಲಿ ತಲೆ ಎತ್ತಲಿರುವ ನಗರ:

  • ಜಾಕೊಬ್ಸ್​ ಇಂಜಿನಿಯರಿಂಗ್​ ಗ್ರೂಪ್ಸ್​​, ಅಂತಾರಾಷ್ಟ್ರೀಯ ಗುಣಮಟ್ಟದ ಜೊತೆ ಕ್ರಿಸ್​ ನಗರಕ್ಕೆ ಮಾಸ್ಟರ್​ ಪ್ಲಾನ್​ ಮತ್ತು ಮಾದರಿ ತಯಾರಿಸಿದೆ.
  • ಮೊದಲ ಹಂತದಲ್ಲಿ ಕೇಂದ್ರವೂ ಎಪಿಐಐಸಿಯ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. ಇದು 2,134 ಎಕರೆ ಪ್ರದೇಶದ 1,054.6 ಕೋಟಿಯ ಅಭಿವೃದ್ಧಿ ಸೌಕರ್ಯ ಹೊಂದಿದೆ.
  • ಸರ್ಕಾರವೂ ಇದರಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹಸಿರು ವಲಯ, ನಡಿಗೆ ಮತ್ತು ಸೈಕ್ಲಿಲಿಂಗ್​​ ಟ್ರಾಕ್​​, ಉದ್ಯೋಗಿಗಳ ನಿವಾಸದ ಪ್ರದೇಶ, ಫುಡ್​ ಕೋರ್ಡ್​ ಕೆಲಸಕ್ಕೆ ನೆರಳಿನಂತಹ ಕಟ್ಟಡಗಳನ್ನು ನಿರ್ಮಾಣ ಮಾಡಲಿದೆ.
  • ರಾಜ್ಯ ಸರ್ಕಾರದ ಹಂಚಿಕೆ ಅಡಿ ಭೂಮಿ ನೀಡಿದಾಗ ಎನ್​ಐಸಿಡಿಐಸಿಟಿ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡಲಿದೆ.
  • ಈ ಯೋಜನೆಯ ಮೊದಲ ಹಂತದ ಅಭಿವೃದ್ಧಿ ಮತ್ತು ಮೂಲ ಸೌಕರ್ಯದ ಮೂಲಕ 18,458 ಕೋಟಿ ಹೂಡಿಕೆ ಮತ್ತು 88 ಸಾವಿರ ಜನರಿಗೆ ಉದ್ಯೋಗವನ್ನು ಅಂದಾಜು ಮಾಡಲಾಗಿದೆ.
  • ಸರ್ಕಾರವೂ ಸಾಗರಮಾಲಾ ಯೋಜನೆ ಜೊತೆಗೆ ಕೃಷ್ಣಪಟ್ಟಣಂ ಬಂದರು ಮತ್ತು ಸಮುದ್ರ ವೆಚ್ಚದ ಅಡಿ ರಸ್ತೆ ಅಭಿವೃದ್ಧಿ ಮಾಡಲಿದೆ. ಇದು ಕೇವಲ ಸಾರಿಗೆ ವ್ಯವಸ್ಥೆ ಮಾತ್ರ ನೀಡುವುದಿಲ್ಲ. ಇದು ಬೆಂಗಳೂರು, ಅನಂತಪುರ ಮತ್ತು ವಿಜಯವಾಡ, ಚೆನ್ನೈಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ INS​​​​​ ಅರಿಘಾಟ್​: ಈ ಜಲಾಂತರ್ಗಾಮಿಯ ವಿಶೇಷತೆ ಏನು ಗೊತ್ತೆ?

ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗಿರುವ ಮೊದಲ ಗ್ರೀನ್​ ಫೀಲ್ಡ್​​ ಸ್ಮಾರ್ಟ್​​ ಇಂಡಸ್ಟ್ರಿ ನಗರ ಕ್ರಿಸ್​ ಸಿಟಿ ನಿರ್ಮಾಣಕ್ಕೆ ಸಿದ್ಧವಾಗಿದೆ. ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಿಸ್​ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಕ್ರಿಸ್​ ಸಿಟಿ?: ಈ ಹಿಂದಿನ ಟಿಡಿಪಿ ಸರ್ಕಾರದಲ್ಲಿ (2014-19)ರಲ್ಲಿ ಚೆನ್ನೈ - ಬೆಂಗಳೂರು ಇಂಡಸ್ಟ್ರಿ ಕಾರಿಡಾರ್​​ ಭಾಗವಾಗಿ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಕ್ರಿಸ್​ ಸಿಟಿ ಅಭಿವೃದ್ಧಿಗೆ ಕೇಂದ್ರ ಅನುಮತಿ ನೀಡಿತು. ಐದು ವರ್ಷದ ಹಿಂದೆ ಈ ಟೆಂಡರ್​​ ಅಂತಿಮಗೊಳಿಸಲು ವಿಳಂಬ ಮಾಡಿತು. ಚುನಾವಣೆಗೆ ಮುನ್ನ ಈ ಟೆಂಡರ್​ ಪ್ರಕ್ರಿಯೆಯನ್ನು ಬಿರುಸಾಗಿ ಮುಗಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಲಯ ಸಂಘಟನೆಯ ನ್ಯಾಷನಲ್​ ಇಂಡಸ್ಟ್ರಿಯಲ್​ ಕಾರಿಡರ್​​​ ಡೆವಲ್ಮಪೆಂಟ್​ ಅಂಡ್​ ಇಂಪ್ಲಿಮೆಟೆಷನ್​ ಟ್ರಸ್ಟ್​ (ಎನ್​ಐಸಿಡಿಐಸಿಟಿ)ಯಲ್ಲಿನ ಸಹಭಾಗಿತ್ವದಲ್ಲಿ ಈ ಯೋಜನೆ ನಡೆಸಲಾಗುವುದು. ಸರ್ಕಾರವೂ ಸೆಮಿಕಂಡಕ್ಟರ್​ ಉತ್ಪಾದನಾ ಕೈಗಾರಿಕೆಗಳಿಗೆ ಉತ್ತಮ ದೃಷ್ಟಿ ಹಿನ್ನೆಲೆ ಕ್ರಿಸ್​ ಸಿಟಿ ಮತ್ತು ಅಚುತಪುರಂ ಎಸ್​ಇಜೆಡ್​​ಗೆ ಪ್ರಾಧ್ಯಾನತೆ ನೀಡಲು ನಿರ್ಧರಿಸಿದೆ.

ಮೂರು ಹಂತದಲ್ಲಿ 11,096 ಎಕರೆಯಲ್ಲಿ ತಲೆ ಎತ್ತಲಿರುವ ನಗರ:

  • ಜಾಕೊಬ್ಸ್​ ಇಂಜಿನಿಯರಿಂಗ್​ ಗ್ರೂಪ್ಸ್​​, ಅಂತಾರಾಷ್ಟ್ರೀಯ ಗುಣಮಟ್ಟದ ಜೊತೆ ಕ್ರಿಸ್​ ನಗರಕ್ಕೆ ಮಾಸ್ಟರ್​ ಪ್ಲಾನ್​ ಮತ್ತು ಮಾದರಿ ತಯಾರಿಸಿದೆ.
  • ಮೊದಲ ಹಂತದಲ್ಲಿ ಕೇಂದ್ರವೂ ಎಪಿಐಐಸಿಯ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. ಇದು 2,134 ಎಕರೆ ಪ್ರದೇಶದ 1,054.6 ಕೋಟಿಯ ಅಭಿವೃದ್ಧಿ ಸೌಕರ್ಯ ಹೊಂದಿದೆ.
  • ಸರ್ಕಾರವೂ ಇದರಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹಸಿರು ವಲಯ, ನಡಿಗೆ ಮತ್ತು ಸೈಕ್ಲಿಲಿಂಗ್​​ ಟ್ರಾಕ್​​, ಉದ್ಯೋಗಿಗಳ ನಿವಾಸದ ಪ್ರದೇಶ, ಫುಡ್​ ಕೋರ್ಡ್​ ಕೆಲಸಕ್ಕೆ ನೆರಳಿನಂತಹ ಕಟ್ಟಡಗಳನ್ನು ನಿರ್ಮಾಣ ಮಾಡಲಿದೆ.
  • ರಾಜ್ಯ ಸರ್ಕಾರದ ಹಂಚಿಕೆ ಅಡಿ ಭೂಮಿ ನೀಡಿದಾಗ ಎನ್​ಐಸಿಡಿಐಸಿಟಿ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡಲಿದೆ.
  • ಈ ಯೋಜನೆಯ ಮೊದಲ ಹಂತದ ಅಭಿವೃದ್ಧಿ ಮತ್ತು ಮೂಲ ಸೌಕರ್ಯದ ಮೂಲಕ 18,458 ಕೋಟಿ ಹೂಡಿಕೆ ಮತ್ತು 88 ಸಾವಿರ ಜನರಿಗೆ ಉದ್ಯೋಗವನ್ನು ಅಂದಾಜು ಮಾಡಲಾಗಿದೆ.
  • ಸರ್ಕಾರವೂ ಸಾಗರಮಾಲಾ ಯೋಜನೆ ಜೊತೆಗೆ ಕೃಷ್ಣಪಟ್ಟಣಂ ಬಂದರು ಮತ್ತು ಸಮುದ್ರ ವೆಚ್ಚದ ಅಡಿ ರಸ್ತೆ ಅಭಿವೃದ್ಧಿ ಮಾಡಲಿದೆ. ಇದು ಕೇವಲ ಸಾರಿಗೆ ವ್ಯವಸ್ಥೆ ಮಾತ್ರ ನೀಡುವುದಿಲ್ಲ. ಇದು ಬೆಂಗಳೂರು, ಅನಂತಪುರ ಮತ್ತು ವಿಜಯವಾಡ, ಚೆನ್ನೈಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ INS​​​​​ ಅರಿಘಾಟ್​: ಈ ಜಲಾಂತರ್ಗಾಮಿಯ ವಿಶೇಷತೆ ಏನು ಗೊತ್ತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.