ETV Bharat / bharat

ಟಿಎಂಸಿ ತೊರೆದು ಮತ್ತೆ ಕಾಂಗ್ರೆಸ್‌ ಸೇರಿದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಪುತ್ರ - ABHIJIT MUKHERJEE REJOINS CONGRESS

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅಭಿಜಿತ್​ ಮುಖರ್ಜಿ ಇದೀಗ ಟಿಎಂಸಿ ಜೊತೆಗಿನ ನಾಲ್ಕು ವರ್ಷದ ಸಖ್ಯ ತೊರೆದಿದ್ದಾರೆ.

ex-president-pranab-mukherjees-son-abhijit-mukherjee-rejoins-congress-after-4-years-in-tmc
ಮತ್ತೆ ಕಾಂಗ್ರೆಸ್​ ಸೇರಿದ ಅಭಿಜಿತ್​ ಮುಖರ್ಜಿ (IANS)
author img

By ETV Bharat Karnataka Team

Published : Feb 12, 2025, 4:47 PM IST

ಕೋಲ್ಕತ್ತಾ(ಪಶ್ಟಿಮ ಬಂಗಾಳ): ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಪುತ್ರ ಅಭಿಜಿತ್​ ಮುಖರ್ಜಿ ಇಂದು ಮತ್ತೆ ಕಾಂಗ್ರೆಸ್​ ಸೇರಿದರು. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್​ ತೊರೆದಿದ್ದ ಇವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು. ಇದೀಗ ಮರಳಿ ಗೂಡಿಗೆ ಎಂಬಂತೆ ಪಕ್ಷಕ್ಕೆ ಬಂದ ಮುಖರ್ಜಿಯನ್ನು ಪಶ್ಚಿಮ ಬಂಗಾಳ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಮಿರ್​ ಆತ್ಮೀಯವಾಗಿ ಬರಮಾಡಿಕೊಂಡರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮುಖರ್ಜಿ, "ಕಾಂಗ್ರೆಸ್​ ಮತ್ತು ರಾಜಕೀಯದಲ್ಲಿ ಇದು ನನ್ನ ಎರಡನೇ ಹುಟ್ಟು. ಕಳೆದ ವರ್ಷ ಜೂನ್​ನಲ್ಲಿಯೇ ಕಾಂಗ್ರೆಸ್​ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಯಿತು. ಕಾಂಗ್ರೆಸ್​ ತೊರೆದು ಟಿಎಂಸಿ ಸೇರಿದ್ದು ತಪ್ಪಾಯಿತು. ಇದಕ್ಕಾಗಿ ಕ್ಷಮೆಯಾಚಿಸುವೆ. ಪಕ್ಷ ನನಗೆ ಎರಡನೇ ಅವಕಾಶ ನೀಡುತ್ತಿರುವುದಕ್ಕೆ ಸಂತಸವಾಗಿದೆ" ಎಂದರು.

"2021ರ ಜುಲೈನಲ್ಲಿ ಕಾಂಗ್ರೆಸ್​ ತೊರೆದು ಟಿಎಂಸಿ ಸೇರಿದ್ದ ಮುಖರ್ಜಿ ನಾಲ್ಕು ವರ್ಷಗಳ ಬಳಿಕ ಮತ್ತೆ ಪಕ್ಷ ಸೇರಿದ್ದಾರೆ. ಇದು ದೊಡ್ಡ ಬೆಳವಣಿಗೆ" ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸುಭಂಕರ್​​ ಸರ್ಕಾರ್​ ತಿಳಿಸಿದರು.

ಅಭಿಜಿತ್ ಮುಖರ್ಜಿ ಕಾಂಗ್ರೆಸ್​ನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿಯೂ ಮತ್ತು ಒಂದು ಬಾರಿ ಪಶ್ಚಿಮ ಬಂಗಾಳ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದಾದ ಬಳಿಕ ರಾಜಕೀಯ ಚಟುವಟಿಕೆಯಿಂದ ಕೊಂಚ ಕಾಲ ದೂರ ಉಳಿದರು.

ಅಭಿಜಿತ್‌ ಮುಖರ್ಜಿ ತಂದೆ ದಿ.ಪ್ರಣಬ್​ ಮುಖರ್ಜಿ ಅವರು ಕಾಂಗ್ರೆಸ್‌ನ ಹಿರಿಯ ಧುರೀಣರಾಗಿದ್ದರು.​ ಕೇಂದ್ರದಲ್ಲಿ ಹಲವು ಸಚಿವ ಸ್ಥಾನಗಳನ್ನು ಅಲಂಕರಿಸಿದ್ದರು.

ಇದನ್ನೂ ಓದಿ: ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿಆರ್​ಆರ್​ ಮೂಲಕ 2.5 ಲಕ್ಷ ಕೋಟಿ ರೂ. ಹೂಡಲು ಆರ್​ಬಿಐ ನಿರ್ಧಾರ

ಇದನ್ನೂ ಓದಿ: ಟೆಂಪಲ್​ ರನ್​ಗೆ ಮುಂದಾದ ಪವನ್​ ಕಲ್ಯಾಣ್​: ಕೇರಳ - ತಮಿಳುನಾಡು ದೇಗುಲಗಳಿಗೆ ಭೇಟಿ

ಕೋಲ್ಕತ್ತಾ(ಪಶ್ಟಿಮ ಬಂಗಾಳ): ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಪುತ್ರ ಅಭಿಜಿತ್​ ಮುಖರ್ಜಿ ಇಂದು ಮತ್ತೆ ಕಾಂಗ್ರೆಸ್​ ಸೇರಿದರು. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್​ ತೊರೆದಿದ್ದ ಇವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು. ಇದೀಗ ಮರಳಿ ಗೂಡಿಗೆ ಎಂಬಂತೆ ಪಕ್ಷಕ್ಕೆ ಬಂದ ಮುಖರ್ಜಿಯನ್ನು ಪಶ್ಚಿಮ ಬಂಗಾಳ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಮಿರ್​ ಆತ್ಮೀಯವಾಗಿ ಬರಮಾಡಿಕೊಂಡರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮುಖರ್ಜಿ, "ಕಾಂಗ್ರೆಸ್​ ಮತ್ತು ರಾಜಕೀಯದಲ್ಲಿ ಇದು ನನ್ನ ಎರಡನೇ ಹುಟ್ಟು. ಕಳೆದ ವರ್ಷ ಜೂನ್​ನಲ್ಲಿಯೇ ಕಾಂಗ್ರೆಸ್​ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಯಿತು. ಕಾಂಗ್ರೆಸ್​ ತೊರೆದು ಟಿಎಂಸಿ ಸೇರಿದ್ದು ತಪ್ಪಾಯಿತು. ಇದಕ್ಕಾಗಿ ಕ್ಷಮೆಯಾಚಿಸುವೆ. ಪಕ್ಷ ನನಗೆ ಎರಡನೇ ಅವಕಾಶ ನೀಡುತ್ತಿರುವುದಕ್ಕೆ ಸಂತಸವಾಗಿದೆ" ಎಂದರು.

"2021ರ ಜುಲೈನಲ್ಲಿ ಕಾಂಗ್ರೆಸ್​ ತೊರೆದು ಟಿಎಂಸಿ ಸೇರಿದ್ದ ಮುಖರ್ಜಿ ನಾಲ್ಕು ವರ್ಷಗಳ ಬಳಿಕ ಮತ್ತೆ ಪಕ್ಷ ಸೇರಿದ್ದಾರೆ. ಇದು ದೊಡ್ಡ ಬೆಳವಣಿಗೆ" ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸುಭಂಕರ್​​ ಸರ್ಕಾರ್​ ತಿಳಿಸಿದರು.

ಅಭಿಜಿತ್ ಮುಖರ್ಜಿ ಕಾಂಗ್ರೆಸ್​ನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿಯೂ ಮತ್ತು ಒಂದು ಬಾರಿ ಪಶ್ಚಿಮ ಬಂಗಾಳ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದಾದ ಬಳಿಕ ರಾಜಕೀಯ ಚಟುವಟಿಕೆಯಿಂದ ಕೊಂಚ ಕಾಲ ದೂರ ಉಳಿದರು.

ಅಭಿಜಿತ್‌ ಮುಖರ್ಜಿ ತಂದೆ ದಿ.ಪ್ರಣಬ್​ ಮುಖರ್ಜಿ ಅವರು ಕಾಂಗ್ರೆಸ್‌ನ ಹಿರಿಯ ಧುರೀಣರಾಗಿದ್ದರು.​ ಕೇಂದ್ರದಲ್ಲಿ ಹಲವು ಸಚಿವ ಸ್ಥಾನಗಳನ್ನು ಅಲಂಕರಿಸಿದ್ದರು.

ಇದನ್ನೂ ಓದಿ: ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿಆರ್​ಆರ್​ ಮೂಲಕ 2.5 ಲಕ್ಷ ಕೋಟಿ ರೂ. ಹೂಡಲು ಆರ್​ಬಿಐ ನಿರ್ಧಾರ

ಇದನ್ನೂ ಓದಿ: ಟೆಂಪಲ್​ ರನ್​ಗೆ ಮುಂದಾದ ಪವನ್​ ಕಲ್ಯಾಣ್​: ಕೇರಳ - ತಮಿಳುನಾಡು ದೇಗುಲಗಳಿಗೆ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.