ETV Bharat / bharat

ಮಾಧ್ಯಮ, ಸಿನಿಮಾ, ಕೃಷಿ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ರಾಮೋಜಿ ರಾವ್ ಛಾಪು ಅಗಾಧ - Ramoji Rao passed away

author img

By ETV Bharat Karnataka Team

Published : Jun 8, 2024, 9:01 AM IST

Updated : Jun 8, 2024, 11:48 AM IST

ಮಾಧ್ಯಮ, ಕೃಷಿ, ಸಿನಿಮಾ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರ ವಿಭಿನ್ನ ಛಾಪು ಮೂಡಿಸಿದ ರಾಮೋಜಿ ರಾವ್ ಇಹಲೋಕ ತ್ಯಜಿಸಿದ್ದಾರೆ. ರಾಮೋಜಿ ರಾವ್ ಅವರು ನಡೆದು ಬಂದ ಸಾಧನೆಯ ಮಾರ್ಗಗಳು ಇಲ್ಲಿದೆ ಓದಿ.

Ramoji Rao  Eenadu  ETV Bharat  Film city
ಮಾಧ್ಯಮ ಸಾಮ್ರಾಜ್ಯ ನಿರ್ಮಿಸಿದ ರಾಮೋಜಿ ರಾವ್ ಅಸ್ತಂಗತ (ETV Bharat)

ಅಕ್ಷರ ಸಂತ ರಾಮೋಜಿ ರಾವ್​ ಅವರು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಾಧ್ಯಮಲೋಕದಲ್ಲಿ ಮಿಂಚಿದ, ರಾಮೋಜಿ ಫಿಲ್ಮ್​ಸಿಟಿಯನ್ನು ವಿಶ್ವ ವಿಖ್ಯಾತಿಗೊಳಿಸಿದ ರಾಮೋಜಿ ರಾವ್ ಇನ್ನಿಲ್ಲ. ಆದರೆ ಅವರು ಬಿಟ್ಟುಹೋದ ಅನೇಕ ಹೆಜ್ಜೆಗುರುತುಗಳು ಅಜರಾಮರ. ಅವರ ಸಾಧನೆಯ ಹಾದಿ ಇಲ್ಲಿದೆ.

  • ರಾಮೋಜಿ ರಾವ್ ಅವರು 1936ರ ನವೆಂಬರ್ 16 ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು.
  • ರಾಮೋಜಿಯವರು ಈನಾಡು ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದರು.
  • ಈನಾಡು 10ನೇ ಆಗಸ್ಟ್ 1974 ರಂದು ವಿಶಾಖಪಟ್ಟಣಂ ತೀರದಲ್ಲಿ ಪ್ರಾರಂಭವಾಯಿತು.
  • ರಾಮೋಜಿಯವರು ಸ್ಥಾಪಿಸಿದ ಈನಾಡು ದಿನಪತ್ರಿಕೆ ತೆಲುಗು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
  • ತೆಲುಗು ಪತ್ರಿಕಾ ಲೋಕದಲ್ಲಿ 'ಈನಾಡು' ಹೊಸ ಯುಗವನ್ನು ಆರಂಭಿಸಿದೆ.
  • ಈನಾಡು ಆರಂಭವಾದ ನಾಲ್ಕೇ ವರ್ಷಗಳಲ್ಲಿ ಓದುಗರಿಂದ ಭಾರಿ ಮೆಚ್ಚುಗೆ ಗಳಿಸಿತು.
  • ಈನಾಡು ಜೊತೆಗೆ ಪ್ರಮುಖ ಮೈಲಿಗಲ್ಲು ಆಗಿರುವ ಮುನ್ನಡೆಯುತ್ತಿರುವ ಸಿತಾರಾ ಸಿನಿಪತ್ರಿಕೆ
  • ಬಹುಮುಖ ಪ್ರತಿಭೆ.. ಕಠಿಣ ಪರಿಶ್ರಮ.. ಇವು ರಾಮೋಜಿಯವರ ಅಸ್ತ್ರ
  • ಹೊಸ ಸಾಧನೆ ಮಾರ್ಗಗಳನ್ನು ಸೃಷ್ಟಿಸುತ್ತಿರುವುದು ರಾಮೋಜಿಯವರಿಗೆ ಕರಗತ
  • ತನ್ನ ಗುರಿಯನ್ನು ಸಾಧಿಸಲು ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ
  • ರಾಮೋಜಿ ರಾವ್ ಅವರು ರೈತರ ಪರವಾಗಿ ಉದ್ಯಮಿಯಾಗಿ ಬೆಳೆದರು
  • ರಾಮೋಜಿ ರಾವ್ ಮಾಧ್ಯಮ ಸಾಮ್ರಾಜ್ಯವನ್ನು ಕಟ್ಟಿದರು
  • ರಾಮೋಜಿ ರಾವ್ ಅವರು ಅದ್ಭುತ ಫಿಲ್ಮ್‌ಸಿಟಿಯನ್ನು ನಿರ್ಮಿಸಿದ್ದಾರೆ
  • ರಾಮೋಜಿ ರಾವ್ ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು
  • ರಾಮೋಜಿ ರಾವ್ ಅವರು ಕೊನೆಯ ಕ್ಷಣದವರೆಗೂ ಜನಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು
  • ರಾಮೋಜಿ ರಾವ್ ಅವರು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಅಳಿಸಲಾಗದ ಛಾಪು ಮೂಡಿಸಿದರು
  • ಈನಾಡು ದಿನಪತ್ರಿಕೆಯ ಮೂಲಕ ಸಾವಿರಾರು ಪತ್ರಕರ್ತರನ್ನು ದೇಶಕ್ಕೆ ನೀಡಿದ ರಾಮೋಜಿಯವರಿಗೆ ಸಲ್ಲುತ್ತದೆ
  • ರಾಮೋಜಿಯವರು ಟಿವಿ ಇಂಡಸ್ಟ್ರಿಯ ಮೂಲಕ ಸಾವಿರಾರು ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದವರು
  • ದೂರದರ್ಶನ ಲೋಕದಲ್ಲಿ ರಾಮೋಜಿ ರಾವ್ ಅಳಿಸಲಾಗದ ಛಾಪು ಮೂಡಿಸಿದರು
  • ಪ್ರತಿಕ್ಷಣದ ವರ್ಲ್ಡ್ ವ್ಯೂಗಾಗಿ ರಾಮೋಜಿಯವರು 13 ಭಾಷೆಗಳಲ್ಲಿ ETV ಸುದ್ದಿ ಸ್ಟ್ರೀಮ್ ಆರಂಭಿಸಿ ಗಮನ ಸೆಳೆದಿದ್ದಾರೆ.
  • ಮಾಧ್ಯಮ ಕ್ಷೇತ್ರಕ್ಕೆ ರಾಮೋಜಿ ರಾವ್ ಮೊದಲ ಹೆಜ್ಜೆ ಇಟ್ಟಿದ್ದು 1969ರಲ್ಲಿ
  • ರಾಮೋಜಿ ರಾವ್ ಮೊದಲಿಗೆ ಅನ್ನದಾತ ಪತ್ರಿಕೆ ಪ್ರಾರಂಭಿಸಿದರು.
  • ಕೃಷಿಯಲ್ಲಿ ಆಧುನಿಕ ವಿಧಾನಗಳು ಮತ್ತು ತಂತ್ರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು
  • ಕೃಷಿ ಕ್ಷೇತ್ರದಲ್ಲಿ ಅನ್ನದಾತ ಪತ್ರಿಕೆ ಮೂಲಕ ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಿದವರು ರಾಮೋಜಿ

ಹಣಕಾಸಿನ ಕ್ಷೇತ್ರದಲ್ಲೂ ರಾಮೋಜಿ ರಾವ್ ಮೇರು ಸಾಧನೆ:

  • ರಾಮೋಜಿ ರಾವ್ ಅವರು 1962 ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌ಗಳನ್ನು ಸ್ಥಾಪಿಸಿದರು
  • ದೇಶದ ಅಗ್ರ ಚಿಟ್‌ಫಂಡ್‌ಗಳ ಕಂಪನಿಯಾಗಿ ಮಾರ್ಗದರ್ಶಿ ಕೂಡ ಒಂದಾಗಿದೆ
  • ಲಕ್ಷಾಂತರ ಗ್ರಾಹಕರಿಗೆ ಸೇವೆಗೆ ಮಾರ್ಗದರ್ಶಿ ಹೆಸರು ವಾಸಿಯಾಗಿದೆ
  • ಮಾರ್ಗದರ್ಶಿ ಚಿಟ್‌ಫಂಡ್‌ಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದರು
  • ಸದ್ಯ ಮಾರ್ಗದರ್ಶಿ ಸಂಸ್ಥೆ ಆರಂಭವಾದಾಗಿನಿಂದ ಈವರೆಗೆ 113ಕ್ಕೂ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ
  • ಮಾರ್ಗದರ್ಶಿ ಲಕ್ಷಾಂತರ ಕುಟುಂಬಗಳ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಚಿಟ್ ಫಂಡ್ ಉದ್ಯಮದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ.

ಭಾರತೀಯ ಚಲನಚಿತ್ರೋದ್ಯಮ ಹೊಸ ಎತ್ತರಕ್ಕೆ ಕೊಂಡೊಯ್ದ ರಾಮೋಜಿ:

  • ರಾಮೋಜಿ ಫಿಲಂಸಿಟಿ ಇಡೀ ಸಿನಿ ಜಗತ್ತು ಹೈದರಾಬಾದ್‌ನತ್ತ ನೋಡುವಂತೆ ಮಾಡಿತು
  • ಸಿನಿಮಾ ನಿರ್ಮಾಣದ ಎಲ್ಲ ಸೇವೆಗಳನ್ನು ಒಂದೇ ಕಡೆ ನೀಡಿದ ರಾಮೋಜಿಯವರು ಚಿತ್ರನಗರಿ ನಿರ್ಮಾಣ ಮಾಡಿದರು
  • ರಾಮೋಜಿ ಫಿಲ್ಮ್ ಸಿಟಿ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದೆ
  • ಫಿಲ್ಮ್‌ಸಿಟಿಯು ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ
  • ಉಷಾಕಿರಣ ಮೂವೀಸ್ ಮೂಲಕ ರಾಮೋಜಿ ವಿವಿಧ ಭಾಷೆಗಳಲ್ಲಿ 87 ಸಿನಿಮಾಗಳನ್ನು ನಿರ್ಮಿಸಿದ್ದಾರೆ
  • ಉಷಾಕಿರಣ್ ಮೂವೀಸ್ ಬ್ಯಾನರ್ ಮೂಲಕ ಅನೇಕ ನಟರು ಪರಿಚಯವಾಗಿದ್ದಾರೆ ಮತ್ತು ನಟರು ಟಾಪ್ ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ
  • ಭಾರತೀಯ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ರಾಮೋಜಿ ಅವರಿಗೆ ಸಲ್ಲುತ್ತದೆ.

ಶಿಕ್ಷಣ ಕ್ಷೇತ್ರದಲ್ಲೂ ರಾಮೋಜಿ ವಿಶೇಷ ಸಾಧನೆ:

  • ರಾಮಾದೇವಿ ಪಬ್ಲಿಕ್ ಸ್ಕೂಲ್ ಮೂಲಕ ಶಿಕ್ಷಣ ಕ್ಷೇತ್ರದಲ್ಲೂ ರಾಮೋಜಿ ವಿಶೇಷ ಛಾಪು ಮೂಡಿಸಿದ್ದಾರೆ.
  • ರಾಮೋಜಿ ರಾವ್ ಅವರು ಶಿಕ್ಷಣದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದರು

ಜನರ ಕಷ್ಟಕ್ಕೆ ಸ್ಪಂದಿಸಿದ ರಾಮೋಜಿ:

  • ರಾಮೋಜಿ ಅವರು ಚಂಡಮಾರುತದಿಂದ ಹಾನಿಗೊಳಗಾದ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಮನೆಗಳ ನಿರ್ಮಾಣ
  • 1977ರಲ್ಲಿ ಪಾಲಕಾಯತಿಪ್ಪದಲ್ಲಿ 112 ಮನೆಗಳ ನಿರ್ಮಾಣ
  • 1996ರಲ್ಲಿ ಚಂಡಮಾರುತ ಪೀಡಿತ ಗ್ರಾಮಗಳಲ್ಲಿ 42 ಶಾಲಾ ಕಟ್ಟಡಗಳ ನಿರ್ಮಾಣ
  • 1999ರಲ್ಲಿ ಒಡಿಶಾದ ಕೊನಗುಲಿಯಲ್ಲಿ ಚಂಡಮಾರುತ ಸಂತ್ರಸ್ತರಿಗೆ 60 ಮನೆಗಳ ನಿರ್ಮಾಣ
  • ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಡಿ ರಾಮೋಜಿ ಗ್ರಾಮಗಳ ಕಾರ್ಯ
  • ರಮಾದೇವಿ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡ ರಾಮೋಜಿರಾವ್​

ಮಾತೃಭಾಷೆ ಸಂರಕ್ಷಣೆಗೆ ರಾಮೋಜಿ ರಾವ್ ಪಣ:

  • ರಾಮೋಜಿ ರಾವ್ ಮಾತೃಭಾಷೆಯ ಸಂರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿದರು
  • ರಾಮೋಜಿ ಅವರು 'ತೆಲುಗು ವೆಲುಗು' (Telugu Velugu) ಮಾಸಪತ್ರಿಕೆಯನ್ನು ಪ್ರಕಟಿಸಿ ಮಾತೃಭಾಷೆಯ ಬೆಳವಣಿಗೆಗೆ ಶ್ರಮಿಸಿದರು
  • ರಾಮೋಜಿಯವರು ಬಾಲ ಭಾರತದ ಮೂಲಕ ಮಕ್ಕಳಲ್ಲಿ ಪ್ರಗತಿಪರ ಚಿಂತನೆಯನ್ನು ಮೂಡಿಸಲು ಪ್ರಯತ್ನಿಸಿದರು

ಇದನ್ನೂ ಓದಿ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ - ramoji rao passed away

ಅಕ್ಷರ ಸಂತ ರಾಮೋಜಿ ರಾವ್​ ಅವರು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಾಧ್ಯಮಲೋಕದಲ್ಲಿ ಮಿಂಚಿದ, ರಾಮೋಜಿ ಫಿಲ್ಮ್​ಸಿಟಿಯನ್ನು ವಿಶ್ವ ವಿಖ್ಯಾತಿಗೊಳಿಸಿದ ರಾಮೋಜಿ ರಾವ್ ಇನ್ನಿಲ್ಲ. ಆದರೆ ಅವರು ಬಿಟ್ಟುಹೋದ ಅನೇಕ ಹೆಜ್ಜೆಗುರುತುಗಳು ಅಜರಾಮರ. ಅವರ ಸಾಧನೆಯ ಹಾದಿ ಇಲ್ಲಿದೆ.

  • ರಾಮೋಜಿ ರಾವ್ ಅವರು 1936ರ ನವೆಂಬರ್ 16 ರಂದು ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದರು.
  • ರಾಮೋಜಿಯವರು ಈನಾಡು ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದರು.
  • ಈನಾಡು 10ನೇ ಆಗಸ್ಟ್ 1974 ರಂದು ವಿಶಾಖಪಟ್ಟಣಂ ತೀರದಲ್ಲಿ ಪ್ರಾರಂಭವಾಯಿತು.
  • ರಾಮೋಜಿಯವರು ಸ್ಥಾಪಿಸಿದ ಈನಾಡು ದಿನಪತ್ರಿಕೆ ತೆಲುಗು ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
  • ತೆಲುಗು ಪತ್ರಿಕಾ ಲೋಕದಲ್ಲಿ 'ಈನಾಡು' ಹೊಸ ಯುಗವನ್ನು ಆರಂಭಿಸಿದೆ.
  • ಈನಾಡು ಆರಂಭವಾದ ನಾಲ್ಕೇ ವರ್ಷಗಳಲ್ಲಿ ಓದುಗರಿಂದ ಭಾರಿ ಮೆಚ್ಚುಗೆ ಗಳಿಸಿತು.
  • ಈನಾಡು ಜೊತೆಗೆ ಪ್ರಮುಖ ಮೈಲಿಗಲ್ಲು ಆಗಿರುವ ಮುನ್ನಡೆಯುತ್ತಿರುವ ಸಿತಾರಾ ಸಿನಿಪತ್ರಿಕೆ
  • ಬಹುಮುಖ ಪ್ರತಿಭೆ.. ಕಠಿಣ ಪರಿಶ್ರಮ.. ಇವು ರಾಮೋಜಿಯವರ ಅಸ್ತ್ರ
  • ಹೊಸ ಸಾಧನೆ ಮಾರ್ಗಗಳನ್ನು ಸೃಷ್ಟಿಸುತ್ತಿರುವುದು ರಾಮೋಜಿಯವರಿಗೆ ಕರಗತ
  • ತನ್ನ ಗುರಿಯನ್ನು ಸಾಧಿಸಲು ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ
  • ರಾಮೋಜಿ ರಾವ್ ಅವರು ರೈತರ ಪರವಾಗಿ ಉದ್ಯಮಿಯಾಗಿ ಬೆಳೆದರು
  • ರಾಮೋಜಿ ರಾವ್ ಮಾಧ್ಯಮ ಸಾಮ್ರಾಜ್ಯವನ್ನು ಕಟ್ಟಿದರು
  • ರಾಮೋಜಿ ರಾವ್ ಅವರು ಅದ್ಭುತ ಫಿಲ್ಮ್‌ಸಿಟಿಯನ್ನು ನಿರ್ಮಿಸಿದ್ದಾರೆ
  • ರಾಮೋಜಿ ರಾವ್ ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು
  • ರಾಮೋಜಿ ರಾವ್ ಅವರು ಕೊನೆಯ ಕ್ಷಣದವರೆಗೂ ಜನಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು
  • ರಾಮೋಜಿ ರಾವ್ ಅವರು ಪ್ರವೇಶಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಅಳಿಸಲಾಗದ ಛಾಪು ಮೂಡಿಸಿದರು
  • ಈನಾಡು ದಿನಪತ್ರಿಕೆಯ ಮೂಲಕ ಸಾವಿರಾರು ಪತ್ರಕರ್ತರನ್ನು ದೇಶಕ್ಕೆ ನೀಡಿದ ರಾಮೋಜಿಯವರಿಗೆ ಸಲ್ಲುತ್ತದೆ
  • ರಾಮೋಜಿಯವರು ಟಿವಿ ಇಂಡಸ್ಟ್ರಿಯ ಮೂಲಕ ಸಾವಿರಾರು ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದವರು
  • ದೂರದರ್ಶನ ಲೋಕದಲ್ಲಿ ರಾಮೋಜಿ ರಾವ್ ಅಳಿಸಲಾಗದ ಛಾಪು ಮೂಡಿಸಿದರು
  • ಪ್ರತಿಕ್ಷಣದ ವರ್ಲ್ಡ್ ವ್ಯೂಗಾಗಿ ರಾಮೋಜಿಯವರು 13 ಭಾಷೆಗಳಲ್ಲಿ ETV ಸುದ್ದಿ ಸ್ಟ್ರೀಮ್ ಆರಂಭಿಸಿ ಗಮನ ಸೆಳೆದಿದ್ದಾರೆ.
  • ಮಾಧ್ಯಮ ಕ್ಷೇತ್ರಕ್ಕೆ ರಾಮೋಜಿ ರಾವ್ ಮೊದಲ ಹೆಜ್ಜೆ ಇಟ್ಟಿದ್ದು 1969ರಲ್ಲಿ
  • ರಾಮೋಜಿ ರಾವ್ ಮೊದಲಿಗೆ ಅನ್ನದಾತ ಪತ್ರಿಕೆ ಪ್ರಾರಂಭಿಸಿದರು.
  • ಕೃಷಿಯಲ್ಲಿ ಆಧುನಿಕ ವಿಧಾನಗಳು ಮತ್ತು ತಂತ್ರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿದರು
  • ಕೃಷಿ ಕ್ಷೇತ್ರದಲ್ಲಿ ಅನ್ನದಾತ ಪತ್ರಿಕೆ ಮೂಲಕ ಹೊಸ ಕೃಷಿ ಕ್ರಾಂತಿಗೆ ನಾಂದಿ ಹಾಡಿದವರು ರಾಮೋಜಿ

ಹಣಕಾಸಿನ ಕ್ಷೇತ್ರದಲ್ಲೂ ರಾಮೋಜಿ ರಾವ್ ಮೇರು ಸಾಧನೆ:

  • ರಾಮೋಜಿ ರಾವ್ ಅವರು 1962 ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌ಗಳನ್ನು ಸ್ಥಾಪಿಸಿದರು
  • ದೇಶದ ಅಗ್ರ ಚಿಟ್‌ಫಂಡ್‌ಗಳ ಕಂಪನಿಯಾಗಿ ಮಾರ್ಗದರ್ಶಿ ಕೂಡ ಒಂದಾಗಿದೆ
  • ಲಕ್ಷಾಂತರ ಗ್ರಾಹಕರಿಗೆ ಸೇವೆಗೆ ಮಾರ್ಗದರ್ಶಿ ಹೆಸರು ವಾಸಿಯಾಗಿದೆ
  • ಮಾರ್ಗದರ್ಶಿ ಚಿಟ್‌ಫಂಡ್‌ಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದರು
  • ಸದ್ಯ ಮಾರ್ಗದರ್ಶಿ ಸಂಸ್ಥೆ ಆರಂಭವಾದಾಗಿನಿಂದ ಈವರೆಗೆ 113ಕ್ಕೂ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ
  • ಮಾರ್ಗದರ್ಶಿ ಲಕ್ಷಾಂತರ ಕುಟುಂಬಗಳ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಚಿಟ್ ಫಂಡ್ ಉದ್ಯಮದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ.

ಭಾರತೀಯ ಚಲನಚಿತ್ರೋದ್ಯಮ ಹೊಸ ಎತ್ತರಕ್ಕೆ ಕೊಂಡೊಯ್ದ ರಾಮೋಜಿ:

  • ರಾಮೋಜಿ ಫಿಲಂಸಿಟಿ ಇಡೀ ಸಿನಿ ಜಗತ್ತು ಹೈದರಾಬಾದ್‌ನತ್ತ ನೋಡುವಂತೆ ಮಾಡಿತು
  • ಸಿನಿಮಾ ನಿರ್ಮಾಣದ ಎಲ್ಲ ಸೇವೆಗಳನ್ನು ಒಂದೇ ಕಡೆ ನೀಡಿದ ರಾಮೋಜಿಯವರು ಚಿತ್ರನಗರಿ ನಿರ್ಮಾಣ ಮಾಡಿದರು
  • ರಾಮೋಜಿ ಫಿಲ್ಮ್ ಸಿಟಿ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ಎಂಬ ಗಿನ್ನೆಸ್ ದಾಖಲೆ ನಿರ್ಮಿಸಿದೆ
  • ಫಿಲ್ಮ್‌ಸಿಟಿಯು ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ
  • ಉಷಾಕಿರಣ ಮೂವೀಸ್ ಮೂಲಕ ರಾಮೋಜಿ ವಿವಿಧ ಭಾಷೆಗಳಲ್ಲಿ 87 ಸಿನಿಮಾಗಳನ್ನು ನಿರ್ಮಿಸಿದ್ದಾರೆ
  • ಉಷಾಕಿರಣ್ ಮೂವೀಸ್ ಬ್ಯಾನರ್ ಮೂಲಕ ಅನೇಕ ನಟರು ಪರಿಚಯವಾಗಿದ್ದಾರೆ ಮತ್ತು ನಟರು ಟಾಪ್ ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ
  • ಭಾರತೀಯ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ರಾಮೋಜಿ ಅವರಿಗೆ ಸಲ್ಲುತ್ತದೆ.

ಶಿಕ್ಷಣ ಕ್ಷೇತ್ರದಲ್ಲೂ ರಾಮೋಜಿ ವಿಶೇಷ ಸಾಧನೆ:

  • ರಾಮಾದೇವಿ ಪಬ್ಲಿಕ್ ಸ್ಕೂಲ್ ಮೂಲಕ ಶಿಕ್ಷಣ ಕ್ಷೇತ್ರದಲ್ಲೂ ರಾಮೋಜಿ ವಿಶೇಷ ಛಾಪು ಮೂಡಿಸಿದ್ದಾರೆ.
  • ರಾಮೋಜಿ ರಾವ್ ಅವರು ಶಿಕ್ಷಣದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದರು

ಜನರ ಕಷ್ಟಕ್ಕೆ ಸ್ಪಂದಿಸಿದ ರಾಮೋಜಿ:

  • ರಾಮೋಜಿ ಅವರು ಚಂಡಮಾರುತದಿಂದ ಹಾನಿಗೊಳಗಾದ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಮನೆಗಳ ನಿರ್ಮಾಣ
  • 1977ರಲ್ಲಿ ಪಾಲಕಾಯತಿಪ್ಪದಲ್ಲಿ 112 ಮನೆಗಳ ನಿರ್ಮಾಣ
  • 1996ರಲ್ಲಿ ಚಂಡಮಾರುತ ಪೀಡಿತ ಗ್ರಾಮಗಳಲ್ಲಿ 42 ಶಾಲಾ ಕಟ್ಟಡಗಳ ನಿರ್ಮಾಣ
  • 1999ರಲ್ಲಿ ಒಡಿಶಾದ ಕೊನಗುಲಿಯಲ್ಲಿ ಚಂಡಮಾರುತ ಸಂತ್ರಸ್ತರಿಗೆ 60 ಮನೆಗಳ ನಿರ್ಮಾಣ
  • ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಡಿ ರಾಮೋಜಿ ಗ್ರಾಮಗಳ ಕಾರ್ಯ
  • ರಮಾದೇವಿ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡ ರಾಮೋಜಿರಾವ್​

ಮಾತೃಭಾಷೆ ಸಂರಕ್ಷಣೆಗೆ ರಾಮೋಜಿ ರಾವ್ ಪಣ:

  • ರಾಮೋಜಿ ರಾವ್ ಮಾತೃಭಾಷೆಯ ಸಂರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿದರು
  • ರಾಮೋಜಿ ಅವರು 'ತೆಲುಗು ವೆಲುಗು' (Telugu Velugu) ಮಾಸಪತ್ರಿಕೆಯನ್ನು ಪ್ರಕಟಿಸಿ ಮಾತೃಭಾಷೆಯ ಬೆಳವಣಿಗೆಗೆ ಶ್ರಮಿಸಿದರು
  • ರಾಮೋಜಿಯವರು ಬಾಲ ಭಾರತದ ಮೂಲಕ ಮಕ್ಕಳಲ್ಲಿ ಪ್ರಗತಿಪರ ಚಿಂತನೆಯನ್ನು ಮೂಡಿಸಲು ಪ್ರಯತ್ನಿಸಿದರು

ಇದನ್ನೂ ಓದಿ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ - ramoji rao passed away

Last Updated : Jun 8, 2024, 11:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.