ETV Bharat / bharat

ಬೀದಿಗೆ ಬಂದ ಭರತಪುರ ರಾಜಮನೆತನದ ಕೌಟುಂಬಿಕ ಗಲಾಟೆ: ಪತ್ನಿಯಿಂದ ಜೀವನಾಂಶ ಕೇಳಿದ ಮಾಜಿ ಸಚಿವ! - Bharatpur Royal Family Dispute

author img

By ETV Bharat Karnataka Team

Published : May 19, 2024, 6:10 PM IST

ರಾಜಸ್ಥಾನದ ಭರತಪುರ ರಾಜಮನೆತನದ ಸದಸ್ಯ, ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ತಮ್ಮ ಪತ್ನಿ ಮತ್ತು ಮಗನ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ವೇಳೆ, ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಮಗ ಅನಿರುದ್ಧ್ ಸಿಂಗ್ ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Bharatpur Royal Family Members Divya Singh, Anirudh Singh and Vishvendra Singh
ಭರತಪುರ ರಾಜಮನೆತನದ ದಿವ್ಯಾ ಸಿಂಗ್, ಅನಿರುದ್ಧ್ ಸಿಂಗ್ ಮತ್ತು ವಿಶ್ವೇಂದ್ರ ಸಿಂಗ್ (ETV Bharat)

ಭರತಪುರ (ರಾಜಸ್ಥಾನ): ರಾಜಸ್ಥಾನದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದಾದ ಭರತಪುರ ರಾಜಮನೆತನದ ಕೌಟುಂಬಿಕ ಗಲಾಟೆ ಈಗ ಬೀದಿಗೆ ಬಂದಿದೆ. ರಾಜಮನೆತನದ ಸದಸ್ಯ, ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ತಮ್ಮ ಪತ್ನಿ ಮತ್ತು ಮಗ ಸೇರಿಕೊಂಡು ನನಗೆ ಥಳಿಸಿದ್ದಾರೆ. ಸರಿಯಾದ ಊಟವನ್ನೂ ನೀಡುತ್ತಿಲ್ಲ ಮತ್ತು ಜನರನ್ನು ಭೇಟಿಯಾಗಲು ಸಹ ಅನುಮತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಪತ್ನಿ ಮತ್ತು ಮಗನಿಂದ ಜೀವನಾಂಶಕ್ಕೂ ಸಿಂಗ್ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ, ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಮಗ ಅನಿರುದ್ಧ್ ಸಿಂಗ್ ಇಬ್ಬರೂ ವಿಶ್ವೇಂದ್ರ ಸಿಂಗ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣದಲ್ಲಿ ನಾವೇ ನಿಜವಾದ ಸಂತ್ರಸ್ತರು ಎಂದು ಹೇಳಿಕೊಂಡಿದ್ದಾರೆ.

ರಾಜಮನೆತನದ ಸದಸ್ಯರಾದ ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ತಮ್ಮ ಪತ್ನಿ ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಪುತ್ರ ಅನಿರುದ್ಧ್ ಸಿಂಗ್ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದು, ಇಬ್ಬರಿಂದಲೂ ತಿಂಗಳಿಗೆ 5 ಲಕ್ಷ ರೂ. ಜೀವನಾಂಶ ಕೊಡಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ, ನನ್ನನ್ನು ಮನೆ (ಮೋತಿ ಮಹಲ್) ತೊರೆಯುವಂತೆ ಮಾಡಲಾಗಿದೆ. ನಾನು ಅಲೆಮಾರಿ ಜೀವನ ನಡೆಸುತ್ತಿದ್ದೇನೆ. ಕೆಲವೊಮ್ಮೆ ನಾನು ಸರ್ಕಾರಿ ಮನೆಯಲ್ಲಿ ಮತ್ತು ಕೆಲವೊಮ್ಮೆ ಹೋಟೆಲ್‌ನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕೊಲೆಗೆ ಸಂಚು ಆರೋಪ: ಮುಂದುವರೆದು, ನಾನು ಒಂದು ಕೋಣೆಗೆ ಬಂಧಿಯಾಗಿದ್ದೆ. ನಾನು ಭರತಪುರಕ್ಕೆ ಬಂದಾಗ ನನಗೆ ಮನೆಯೊಳಗೆ ಪ್ರವೇಶಿಸಲು ಸಹ ಅನುಮತಿಸುವುದಿಲ್ಲ. ಇನ್ಮುಂದೆ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗನ ಜೊತೆ ಇರಲು ಸಾಧ್ಯವಿಲ್ಲ. ಪತ್ನಿ ಮತ್ತು ಮಗ ಇಬ್ಬರು ಸೇರಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ. ನನ್ನ ಜೀವನವನ್ನು ಕೊನೆಗೊಳಿಸುವುದೇ ಅವರ ಉದ್ದೇಶವಾಗಿದೆ. ನಂತರ ಎಲ್ಲ ಆಸ್ತಿಯನ್ನು ದೋಚಬಹುದು ಎಂದು ಯೋಜನೆಯಲ್ಲಿದ್ದಾರೆ ಎಂದೂ ವಿಶ್ವೇಂದ್ರ ಸಿಂಗ್ ಆರೋಪಿಸಿದ್ದಾರೆ.

ಪತ್ನಿ ಮತ್ತು ಮಗ ನನಗೆ ಚಹಾ ಮತ್ತು ನೀರು ಕೊಡುವುದನ್ನೂ ನಿಲ್ಲಿಸಿದ್ದಾರೆ. ಅವರ ನಡವಳಿಕೆ ಸುಧಾರಿಸಬಹುದು ಎಂದು ನಾನು ಭಾವಿಸಿದ್ದೆ. ಅದು ಇದುವರೆಗೂ ಸಾಧ್ಯವಾಗಿಲ್ಲ. ನನ್ನ ಬಟ್ಟೆಗಳನ್ನು ಬಾವಿಗೆ ಎಸೆದಿದ್ದಾರೆ. ಕಾಗದ ಪತ್ರಗಳು, ದಾಖಲೆಗಳು ಇತ್ಯಾದಿಗಳನ್ನು ಹರಿದು ಹಾಕಿ, ಕೊಠಡಿಗಳಿಂದ ವಸ್ತುಗಳನ್ನು ಹೊರಹಾಕಿದ್ದಾರೆ. ನನ್ನ ಕೋಣೆಗೆ ಬೀಗ ಹಾಕಿ, ನನ್ನನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ್ದಾರೆ. ಹೀಗಾಗಿ ನಾನು ಮನೆಯಿಂದ ಹೊರಹೋಗಬೇಕಾಗಿದೆ. ಮನೆಯಿಂದ ಹೊರಡುವಾಗ ನನ್ನ ಬಳಿಯಿದ್ದ ಬಟ್ಟೆಯನ್ನು ಮಾತ್ರ ತಂದಿದ್ದೇನೆ. ಅಂದಿನಿಂದ ನಾನು ಹೀಗೆಯೇ ಬದುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ, ತಾವು ಹೃದಯ ರೋಗಿ ಎಂದು ಹೇಳಿಕೊಂಡಿರುವ ವಿಶ್ವೇಂದ್ರ ಸಿಂಗ್, ನನಗೆ ಎರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. 2021 ಮತ್ತು 2022ರಲ್ಲಿ ಎರಡು ಬಾರಿ ಕೊರೊನಾ ಸಹ ಬಂದಿತ್ತು. ಆದರೆ, ಪತ್ನಿ, ಮಗನಿಂದ ಮಾನಸಿಕ ನೆಮ್ಮದಿ ಸಿಗುತ್ತಿಲ್ಲ. ಆರ್ಥಿಕ ಸಹಾಯವನ್ನೂ ಮಾಡುತ್ತಿಲ್ಲ. ನನ್ನ ತಂದೆಯಿಂದ ಉಯಿಲಿನ ಮೂಲಕ ಪಡೆದ ಆಸ್ತಿಯನ್ನು ನಾನು ಹೊಂದಿದ್ದೇನೆ. ಮೋತಿ ಮಹಲ್, ಕೋಠಿ ದರ್ಬಾರ್, ಗೋಲ್‌ಬಾಗ್ ಕಾಂಪ್ಲೆಕ್ಸ್, ಸೂರಜ್ ಮಹಲ್ ಸೇರಿ ಅರಮನೆಯ ಆಸ್ತಿಯನ್ನು ನನಗೆ ಹಿಂದಿರುಗಿಸಬೇಕೆಂದು ಸಿಂಗ್ ಒತ್ತಾಯಿಸಿದ್ದಾರೆ.

ವಿಶ್ವೇಂದ್ರ ಸಿಂಗ್ ಆರೋಪ ಸುಳ್ಳು: ಜೀವನಾಂಶಕ್ಕಾಗಿ ವಿಶ್ವೇಂದ್ರ ಸಿಂಗ್ ಉಪವಿಭಾಗಾಧಿಕಾರಿಗೆ ಪತ್ರ ಬರೆದ ಬೆನ್ನಲ್ಲೇ ಭಾನುವಾರ ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಹಾಗೂ ಪುತ್ರ ಅನಿರುದ್ಧ್ ಸಿಂಗ್ ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕಳೆದ 30 ವರ್ಷಗಳಲ್ಲಿ ನಾನು ಯಾವುದನ್ನೂ ಬಾಯಿ ಬಿಟ್ಟಿಲ್ಲ. ಕಳೆದ 30 ವರ್ಷಗಳಲ್ಲಿ ನನಗೆ ಏನಾಗಿದೆ ಎಂದು ಹೇಳಿದರೆ, ಪ್ರಕರಣವು ಸುಪ್ರೀಂ ಕೋರ್ಟ್‌ಗೆ ತಲುಪಬಹುದು. ಎಲ್ಲ ಆಸ್ತಿಗಳು ಮಾರಾಟ ಮಾಡಲಾಗಿದೆ. ಈಗ ಮೋತಿ ಮಹಲ್ ಮಾತ್ರ ಉಳಿದಿದೆ. ಇದನ್ನೂ ಮಾರಾಟ ಮಾಡಲು ಮುಂದಾದಾಗ ಇಡೀ ಸಮಸ್ಯೆ ಶುರುವಾಗಿದೆ. ಏನೇ ಆಗಲಿ ನಾನು ಜೀವಂತವಾಗಿರುವ ತನಕವೂ ಮೋತಿ ಮಹಲ್ ಉಳಿಸಲು ಪ್ರಯತ್ನಿಸುತ್ತೇನೆ ಎಂದು ದಿವ್ಯಾ ಸಿಂಗ್ ತಿಳಿಸಿದ್ದಾರೆ.

ಪುತ್ರ ಅನಿರುದ್ಧ್ ಸಿಂಗ್ ಮಾತನಾಡಿ, ನಾವು ಥಳಿಸಿದ್ದೇವೆ ಮತ್ತು ಊಟ ನೀಡಿಲ್ಲ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಅಗತ್ಯವಿದ್ದಲ್ಲಿ ನನ್ನ ತಂದೆ ವಿರುದ್ಧ ಆರ್ಥಿಕ ವಂಚನೆ ಹಾಗೂ ಅಕ್ರಮ ಆಸ್ತಿ ಮಾರಾಟದ ಸಾಕ್ಷ್ಯವನ್ನು ನ್ಯಾಯಮಂಡಳಿಗೆ ಹಾಜರುಪಡಿಸುತ್ತೇವೆ. ಈಗ ಪತ್ರ ಬರೆದಿರುವುದು ಒತ್ತಡ ತಂತ್ರಗಳಲ್ಲದೆ ಬೇರೇನೂ ಅಲ್ಲ. ನನ್ನ ತಾಯಿ ಮತ್ತು ನಾನು ಕಾನೂನಿನ ಬಗ್ಗೆ ಹೆಚ್ಚಿನ ನಂಬಿಕೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಮ್ರ ಯುಗದಿಂದ ಹಿಡಿದು ಮಹಾಭಾರತ ಕಾಲದ ಕುರುಹುಗಳು ಪತ್ತೆ; ಗಮನ ಸೆಳೆದ ಮೂಳೆಯಿಂದ ತಯಾರಿಸಿದ ಸೂಜಿ!

ಭರತಪುರ (ರಾಜಸ್ಥಾನ): ರಾಜಸ್ಥಾನದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದಾದ ಭರತಪುರ ರಾಜಮನೆತನದ ಕೌಟುಂಬಿಕ ಗಲಾಟೆ ಈಗ ಬೀದಿಗೆ ಬಂದಿದೆ. ರಾಜಮನೆತನದ ಸದಸ್ಯ, ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ತಮ್ಮ ಪತ್ನಿ ಮತ್ತು ಮಗ ಸೇರಿಕೊಂಡು ನನಗೆ ಥಳಿಸಿದ್ದಾರೆ. ಸರಿಯಾದ ಊಟವನ್ನೂ ನೀಡುತ್ತಿಲ್ಲ ಮತ್ತು ಜನರನ್ನು ಭೇಟಿಯಾಗಲು ಸಹ ಅನುಮತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಪತ್ನಿ ಮತ್ತು ಮಗನಿಂದ ಜೀವನಾಂಶಕ್ಕೂ ಸಿಂಗ್ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ, ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಮಗ ಅನಿರುದ್ಧ್ ಸಿಂಗ್ ಇಬ್ಬರೂ ವಿಶ್ವೇಂದ್ರ ಸಿಂಗ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣದಲ್ಲಿ ನಾವೇ ನಿಜವಾದ ಸಂತ್ರಸ್ತರು ಎಂದು ಹೇಳಿಕೊಂಡಿದ್ದಾರೆ.

ರಾಜಮನೆತನದ ಸದಸ್ಯರಾದ ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ತಮ್ಮ ಪತ್ನಿ ಮಾಜಿ ಸಂಸದೆ ದಿವ್ಯಾ ಸಿಂಗ್ ಮತ್ತು ಪುತ್ರ ಅನಿರುದ್ಧ್ ಸಿಂಗ್ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದು, ಇಬ್ಬರಿಂದಲೂ ತಿಂಗಳಿಗೆ 5 ಲಕ್ಷ ರೂ. ಜೀವನಾಂಶ ಕೊಡಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ, ನನ್ನನ್ನು ಮನೆ (ಮೋತಿ ಮಹಲ್) ತೊರೆಯುವಂತೆ ಮಾಡಲಾಗಿದೆ. ನಾನು ಅಲೆಮಾರಿ ಜೀವನ ನಡೆಸುತ್ತಿದ್ದೇನೆ. ಕೆಲವೊಮ್ಮೆ ನಾನು ಸರ್ಕಾರಿ ಮನೆಯಲ್ಲಿ ಮತ್ತು ಕೆಲವೊಮ್ಮೆ ಹೋಟೆಲ್‌ನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕೊಲೆಗೆ ಸಂಚು ಆರೋಪ: ಮುಂದುವರೆದು, ನಾನು ಒಂದು ಕೋಣೆಗೆ ಬಂಧಿಯಾಗಿದ್ದೆ. ನಾನು ಭರತಪುರಕ್ಕೆ ಬಂದಾಗ ನನಗೆ ಮನೆಯೊಳಗೆ ಪ್ರವೇಶಿಸಲು ಸಹ ಅನುಮತಿಸುವುದಿಲ್ಲ. ಇನ್ಮುಂದೆ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗನ ಜೊತೆ ಇರಲು ಸಾಧ್ಯವಿಲ್ಲ. ಪತ್ನಿ ಮತ್ತು ಮಗ ಇಬ್ಬರು ಸೇರಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ. ನನ್ನ ಜೀವನವನ್ನು ಕೊನೆಗೊಳಿಸುವುದೇ ಅವರ ಉದ್ದೇಶವಾಗಿದೆ. ನಂತರ ಎಲ್ಲ ಆಸ್ತಿಯನ್ನು ದೋಚಬಹುದು ಎಂದು ಯೋಜನೆಯಲ್ಲಿದ್ದಾರೆ ಎಂದೂ ವಿಶ್ವೇಂದ್ರ ಸಿಂಗ್ ಆರೋಪಿಸಿದ್ದಾರೆ.

ಪತ್ನಿ ಮತ್ತು ಮಗ ನನಗೆ ಚಹಾ ಮತ್ತು ನೀರು ಕೊಡುವುದನ್ನೂ ನಿಲ್ಲಿಸಿದ್ದಾರೆ. ಅವರ ನಡವಳಿಕೆ ಸುಧಾರಿಸಬಹುದು ಎಂದು ನಾನು ಭಾವಿಸಿದ್ದೆ. ಅದು ಇದುವರೆಗೂ ಸಾಧ್ಯವಾಗಿಲ್ಲ. ನನ್ನ ಬಟ್ಟೆಗಳನ್ನು ಬಾವಿಗೆ ಎಸೆದಿದ್ದಾರೆ. ಕಾಗದ ಪತ್ರಗಳು, ದಾಖಲೆಗಳು ಇತ್ಯಾದಿಗಳನ್ನು ಹರಿದು ಹಾಕಿ, ಕೊಠಡಿಗಳಿಂದ ವಸ್ತುಗಳನ್ನು ಹೊರಹಾಕಿದ್ದಾರೆ. ನನ್ನ ಕೋಣೆಗೆ ಬೀಗ ಹಾಕಿ, ನನ್ನನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ್ದಾರೆ. ಹೀಗಾಗಿ ನಾನು ಮನೆಯಿಂದ ಹೊರಹೋಗಬೇಕಾಗಿದೆ. ಮನೆಯಿಂದ ಹೊರಡುವಾಗ ನನ್ನ ಬಳಿಯಿದ್ದ ಬಟ್ಟೆಯನ್ನು ಮಾತ್ರ ತಂದಿದ್ದೇನೆ. ಅಂದಿನಿಂದ ನಾನು ಹೀಗೆಯೇ ಬದುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ, ತಾವು ಹೃದಯ ರೋಗಿ ಎಂದು ಹೇಳಿಕೊಂಡಿರುವ ವಿಶ್ವೇಂದ್ರ ಸಿಂಗ್, ನನಗೆ ಎರಡು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. 2021 ಮತ್ತು 2022ರಲ್ಲಿ ಎರಡು ಬಾರಿ ಕೊರೊನಾ ಸಹ ಬಂದಿತ್ತು. ಆದರೆ, ಪತ್ನಿ, ಮಗನಿಂದ ಮಾನಸಿಕ ನೆಮ್ಮದಿ ಸಿಗುತ್ತಿಲ್ಲ. ಆರ್ಥಿಕ ಸಹಾಯವನ್ನೂ ಮಾಡುತ್ತಿಲ್ಲ. ನನ್ನ ತಂದೆಯಿಂದ ಉಯಿಲಿನ ಮೂಲಕ ಪಡೆದ ಆಸ್ತಿಯನ್ನು ನಾನು ಹೊಂದಿದ್ದೇನೆ. ಮೋತಿ ಮಹಲ್, ಕೋಠಿ ದರ್ಬಾರ್, ಗೋಲ್‌ಬಾಗ್ ಕಾಂಪ್ಲೆಕ್ಸ್, ಸೂರಜ್ ಮಹಲ್ ಸೇರಿ ಅರಮನೆಯ ಆಸ್ತಿಯನ್ನು ನನಗೆ ಹಿಂದಿರುಗಿಸಬೇಕೆಂದು ಸಿಂಗ್ ಒತ್ತಾಯಿಸಿದ್ದಾರೆ.

ವಿಶ್ವೇಂದ್ರ ಸಿಂಗ್ ಆರೋಪ ಸುಳ್ಳು: ಜೀವನಾಂಶಕ್ಕಾಗಿ ವಿಶ್ವೇಂದ್ರ ಸಿಂಗ್ ಉಪವಿಭಾಗಾಧಿಕಾರಿಗೆ ಪತ್ರ ಬರೆದ ಬೆನ್ನಲ್ಲೇ ಭಾನುವಾರ ಪತ್ನಿ, ಮಾಜಿ ಸಂಸದೆ ದಿವ್ಯಾ ಸಿಂಗ್ ಹಾಗೂ ಪುತ್ರ ಅನಿರುದ್ಧ್ ಸಿಂಗ್ ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕಳೆದ 30 ವರ್ಷಗಳಲ್ಲಿ ನಾನು ಯಾವುದನ್ನೂ ಬಾಯಿ ಬಿಟ್ಟಿಲ್ಲ. ಕಳೆದ 30 ವರ್ಷಗಳಲ್ಲಿ ನನಗೆ ಏನಾಗಿದೆ ಎಂದು ಹೇಳಿದರೆ, ಪ್ರಕರಣವು ಸುಪ್ರೀಂ ಕೋರ್ಟ್‌ಗೆ ತಲುಪಬಹುದು. ಎಲ್ಲ ಆಸ್ತಿಗಳು ಮಾರಾಟ ಮಾಡಲಾಗಿದೆ. ಈಗ ಮೋತಿ ಮಹಲ್ ಮಾತ್ರ ಉಳಿದಿದೆ. ಇದನ್ನೂ ಮಾರಾಟ ಮಾಡಲು ಮುಂದಾದಾಗ ಇಡೀ ಸಮಸ್ಯೆ ಶುರುವಾಗಿದೆ. ಏನೇ ಆಗಲಿ ನಾನು ಜೀವಂತವಾಗಿರುವ ತನಕವೂ ಮೋತಿ ಮಹಲ್ ಉಳಿಸಲು ಪ್ರಯತ್ನಿಸುತ್ತೇನೆ ಎಂದು ದಿವ್ಯಾ ಸಿಂಗ್ ತಿಳಿಸಿದ್ದಾರೆ.

ಪುತ್ರ ಅನಿರುದ್ಧ್ ಸಿಂಗ್ ಮಾತನಾಡಿ, ನಾವು ಥಳಿಸಿದ್ದೇವೆ ಮತ್ತು ಊಟ ನೀಡಿಲ್ಲ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಅಗತ್ಯವಿದ್ದಲ್ಲಿ ನನ್ನ ತಂದೆ ವಿರುದ್ಧ ಆರ್ಥಿಕ ವಂಚನೆ ಹಾಗೂ ಅಕ್ರಮ ಆಸ್ತಿ ಮಾರಾಟದ ಸಾಕ್ಷ್ಯವನ್ನು ನ್ಯಾಯಮಂಡಳಿಗೆ ಹಾಜರುಪಡಿಸುತ್ತೇವೆ. ಈಗ ಪತ್ರ ಬರೆದಿರುವುದು ಒತ್ತಡ ತಂತ್ರಗಳಲ್ಲದೆ ಬೇರೇನೂ ಅಲ್ಲ. ನನ್ನ ತಾಯಿ ಮತ್ತು ನಾನು ಕಾನೂನಿನ ಬಗ್ಗೆ ಹೆಚ್ಚಿನ ನಂಬಿಕೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಮ್ರ ಯುಗದಿಂದ ಹಿಡಿದು ಮಹಾಭಾರತ ಕಾಲದ ಕುರುಹುಗಳು ಪತ್ತೆ; ಗಮನ ಸೆಳೆದ ಮೂಳೆಯಿಂದ ತಯಾರಿಸಿದ ಸೂಜಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.