ETV Bharat / bharat

ದೀಪಾವಳಿಗೂ ಮುನ್ನವೇ ತೀವ್ರ ಹದಗೆಟ್ಟ ದೆಹಲಿ ವಾಯುಗುಣಮಟ್ಟ: ಕಳವಳ

ಜಾಹಂಗೀರ್​ಪುರ್​ ನಿರ್ವಹಣಾ ಕೇಂದ್ರದಲ್ಲಿ ವಾಯುಗುಣಮಟ್ಟವೂ ತೀವ್ರವಾಗಿದ್ದು, ಎಕ್ಯೂಐ 418 ಅಂಕಗಳಷ್ಟು ದಾಖಲಾಗಿದೆ. ವಿವೇಕ್​ ವಿಹಾರ್​ನಲ್ಲಿ 407 ಮತ್ತು ಆನಂದ್​ ವಿಹಾರ್​ನಲ್ಲಿ 402 ದಾಖಲಾಗಿದೆ.

Delhis Air Quality Crisis Turning Into A Public Health Emergency
ದೆಹಲಿ ವಾಯುಗುಣಮಟ್ಟ (ಸಂಗ್ರಹ ಚಿತ್ರ)
author img

By IANS

Published : 2 hours ago

ನವದೆಹಲಿ: ದೀಪಾವಳಿಗೆ ಮುನ್ನವೇ ರಾಷ್ಟ್ರ ರಾಜಧಾನಿಯ ಹವಾಮಾನ ಹದಗೆಟ್ಟಿದೆ. ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ ದಟ್ಟ ಹೊಗೆಯ ಮಬ್ಬು ವಾತಾವರಣವನ್ನು ಸೃಷ್ಟಿ ಮಾಡಿದೆ. ಎಕ್ಯೂಐ 363 ಪಾಯಿಂಟ್ಸ್​​​​​​​​ ದಾಖಲಾಗಿದೆ ಇದು ವಾಯುಗುಣಮಟ್ಟ ತೀವ್ರ ಕಳಪೆ ವಲಯಕ್ಕೆ ಜಾರಿದೆ.

ಜಾಹಂಗೀರ್​ಪುರ್​ ನಿರ್ವಹಣಾ ಕೇಂದ್ರದಲ್ಲಿ ವಾಯುಗುಣಮಟ್ಟವೂ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಎಕ್ಯೂಐ 418 ದಾಖಲಾಗಿದೆ. ವಿವೇಕ್​ ವಿಹಾರ್​ನಲ್ಲಿ 407 ಮತ್ತು ಆನಂದ್​ ವಿಹಾರ್​ನಲ್ಲಿ 402 ದಾಖಲಾಗಿದೆ.

ಬೆಳಗ್ಗೆ 9 ಗಂಟೆಗೆ ಸೋನಿಯಾ ವಿಹಾರ್​ನಲ್ಲಿ ಎಕ್ಯೂಐ ತೀವ್ರ ಕಳಪೆ ವರ್ಗದಲ್ಲಿದ್ದು, 398 ದಾಖಲಾಗಿದೆ. ವಾಜಿರ್​ಪುರ್​ಲ್ಲಿ 396 ದಾಖಲಾಗಿದೆ. ಒಟ್ಟಾರೆ ನಗರದ ಎಕ್ಯೂಐ ಬೆಳಗ್ಗೆ 9ಕ್ಕೆ 363 ಇದೆ.

ಎಚ್ಚರಿಕೆಯ ಸಂದೇಶ ರವಾನಿಸಿದ ವಾಯು ನಿಯಂತ್ರಣ ಮಂಡಳಿ: ಕಳಪೆ ವಾಯು ಗುಣಮಟ್ಟದಿಂದಾಗಿ ನಗರದಲ್ಲಿ ದಟ್ಟ ಹೊಗೆಯ ಪದರ ಕಂಡು ಬಂದಿದ್ದು, ಎಲ್ಲಾ ಹವಾಮಾನ ನಿರ್ವಹಣಾ ಕೇಂದ್ರವೂ ಕೆಂಪು ವಲಯಕ್ಕೆ ಜಾರಿದೆ. ಕೆಲವು ಪ್ರದೇಶಗಳು ಮರೂನ್​ ವಲಯದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬಣ್ಣ ಆಧಾರಿತ ಕೋಡ್​ ಎಚ್ಚರಿಕೆ ನೀಡಿದೆ.

ಪರಿಸರ ಗುಣಮಟ್ಟ ಕಾಪಾಡಲು ಹರಸಾಹಸ: ಗ್ರೇಡೆಡ್​ ರೆಸ್ಪಾನ್ಸ್​ ಅಕ್ಷನ್​ ಪ್ಲಾನ್ ಮಾಪನ ಅನುಸಾರ ಸದ್ಯ ನಗರವೂ ಎರಡು ಹಂತದ ಮಾಲಿನ್ಯ ವಿರೋಧಿಯಲ್ಲಿದೆ. ಇದರ ಅನ್ವಯ ಕೆಲವು ಪ್ರದೇಶದಲ್ಲಿ ಕಠಿಣ ಕ್ರಮ ಅನುಸರಿಸಲಾಗಿದೆ. ಅದರ ಅನುಸಾರ ಶಾಲೆಗಳನ್ನು ಬಂದ್​ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಈ ನಡುವೆ ಬುಧವಾರ ನಗರದ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಆರ್ದ್ರತೆ ಮಟ್ಟವೂ ಬೆಳಗ್ಗೆ 8ಕ್ಕೆ ಶೇ 83ರಷ್ಟಿತ್ತು. ಈ ದಿನ ಶುಭ್ರ ಆಕಾಶ ಇರಲಿದ್ದು, ಅತಿ ಹೆಚ್ಚಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್​ ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಚಳಿಗಾಲಕ್ಕೂ ಮುನ್ನ ದೆಹಲಿಯಲ್ಲಿ ಇಂತಹದ್ದೇ ವಾತಾವರಣ: ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲದ ಆರಂಭಕ್ಕೆ ಮುನ್ನವೇ ದೆಹಲಿ ವಾಯುಗುಣಮಟ್ಟ ಹದಗೆಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗುತ್ತದೆ. ಈ ಹದಗೆಟ್ಟ ವಾಯುಗುಣಮಟ್ಟ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: 34 ವರ್ಷದ ಹಳೇ ಕೇಸಲ್ಲಿ 90ರ ವೃದ್ಧ ಅರೆಸ್ಟ್; ಆಂಬ್ಯುಲೆನ್ಸ್​ನಲ್ಲಿ ಕರೆತಂದು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸರು!

ನವದೆಹಲಿ: ದೀಪಾವಳಿಗೆ ಮುನ್ನವೇ ರಾಷ್ಟ್ರ ರಾಜಧಾನಿಯ ಹವಾಮಾನ ಹದಗೆಟ್ಟಿದೆ. ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ ದಟ್ಟ ಹೊಗೆಯ ಮಬ್ಬು ವಾತಾವರಣವನ್ನು ಸೃಷ್ಟಿ ಮಾಡಿದೆ. ಎಕ್ಯೂಐ 363 ಪಾಯಿಂಟ್ಸ್​​​​​​​​ ದಾಖಲಾಗಿದೆ ಇದು ವಾಯುಗುಣಮಟ್ಟ ತೀವ್ರ ಕಳಪೆ ವಲಯಕ್ಕೆ ಜಾರಿದೆ.

ಜಾಹಂಗೀರ್​ಪುರ್​ ನಿರ್ವಹಣಾ ಕೇಂದ್ರದಲ್ಲಿ ವಾಯುಗುಣಮಟ್ಟವೂ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಎಕ್ಯೂಐ 418 ದಾಖಲಾಗಿದೆ. ವಿವೇಕ್​ ವಿಹಾರ್​ನಲ್ಲಿ 407 ಮತ್ತು ಆನಂದ್​ ವಿಹಾರ್​ನಲ್ಲಿ 402 ದಾಖಲಾಗಿದೆ.

ಬೆಳಗ್ಗೆ 9 ಗಂಟೆಗೆ ಸೋನಿಯಾ ವಿಹಾರ್​ನಲ್ಲಿ ಎಕ್ಯೂಐ ತೀವ್ರ ಕಳಪೆ ವರ್ಗದಲ್ಲಿದ್ದು, 398 ದಾಖಲಾಗಿದೆ. ವಾಜಿರ್​ಪುರ್​ಲ್ಲಿ 396 ದಾಖಲಾಗಿದೆ. ಒಟ್ಟಾರೆ ನಗರದ ಎಕ್ಯೂಐ ಬೆಳಗ್ಗೆ 9ಕ್ಕೆ 363 ಇದೆ.

ಎಚ್ಚರಿಕೆಯ ಸಂದೇಶ ರವಾನಿಸಿದ ವಾಯು ನಿಯಂತ್ರಣ ಮಂಡಳಿ: ಕಳಪೆ ವಾಯು ಗುಣಮಟ್ಟದಿಂದಾಗಿ ನಗರದಲ್ಲಿ ದಟ್ಟ ಹೊಗೆಯ ಪದರ ಕಂಡು ಬಂದಿದ್ದು, ಎಲ್ಲಾ ಹವಾಮಾನ ನಿರ್ವಹಣಾ ಕೇಂದ್ರವೂ ಕೆಂಪು ವಲಯಕ್ಕೆ ಜಾರಿದೆ. ಕೆಲವು ಪ್ರದೇಶಗಳು ಮರೂನ್​ ವಲಯದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬಣ್ಣ ಆಧಾರಿತ ಕೋಡ್​ ಎಚ್ಚರಿಕೆ ನೀಡಿದೆ.

ಪರಿಸರ ಗುಣಮಟ್ಟ ಕಾಪಾಡಲು ಹರಸಾಹಸ: ಗ್ರೇಡೆಡ್​ ರೆಸ್ಪಾನ್ಸ್​ ಅಕ್ಷನ್​ ಪ್ಲಾನ್ ಮಾಪನ ಅನುಸಾರ ಸದ್ಯ ನಗರವೂ ಎರಡು ಹಂತದ ಮಾಲಿನ್ಯ ವಿರೋಧಿಯಲ್ಲಿದೆ. ಇದರ ಅನ್ವಯ ಕೆಲವು ಪ್ರದೇಶದಲ್ಲಿ ಕಠಿಣ ಕ್ರಮ ಅನುಸರಿಸಲಾಗಿದೆ. ಅದರ ಅನುಸಾರ ಶಾಲೆಗಳನ್ನು ಬಂದ್​ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಈ ನಡುವೆ ಬುಧವಾರ ನಗರದ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಆರ್ದ್ರತೆ ಮಟ್ಟವೂ ಬೆಳಗ್ಗೆ 8ಕ್ಕೆ ಶೇ 83ರಷ್ಟಿತ್ತು. ಈ ದಿನ ಶುಭ್ರ ಆಕಾಶ ಇರಲಿದ್ದು, ಅತಿ ಹೆಚ್ಚಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್​ ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಚಳಿಗಾಲಕ್ಕೂ ಮುನ್ನ ದೆಹಲಿಯಲ್ಲಿ ಇಂತಹದ್ದೇ ವಾತಾವರಣ: ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲದ ಆರಂಭಕ್ಕೆ ಮುನ್ನವೇ ದೆಹಲಿ ವಾಯುಗುಣಮಟ್ಟ ಹದಗೆಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗುತ್ತದೆ. ಈ ಹದಗೆಟ್ಟ ವಾಯುಗುಣಮಟ್ಟ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: 34 ವರ್ಷದ ಹಳೇ ಕೇಸಲ್ಲಿ 90ರ ವೃದ್ಧ ಅರೆಸ್ಟ್; ಆಂಬ್ಯುಲೆನ್ಸ್​ನಲ್ಲಿ ಕರೆತಂದು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.