ETV Bharat / bharat

ಕೇರಳಕ್ಕೆ ಮಾರ್ಚ್​ 31ರೊಳಗೆ ವಿಶೇಷ ಪ್ಯಾಕೇಜ್ ಕೊಡುವ ಬಗ್ಗೆ ಪರಿಗಣಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ

ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಕೇರಳ ರಾಜ್ಯವನ್ನು ಪಾರು ಮಾಡಲು ಮಾರ್ಚ್​ 31ರೊಳಗೆ ವಿಶೇಷ ಪ್ಯಾಕೇಜ್ ಕೊಡುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

author img

By ETV Bharat Karnataka Team

Published : Mar 12, 2024, 5:47 PM IST

Updated : Mar 12, 2024, 7:45 PM IST

Supreme Court
ಸುಪ್ರೀಂಕೋರ್ಟ್

ನವದೆಹಲಿ: ಕೇರಳದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಒಂದು ಸಲದ ಪ್ಯಾಕೇಜ್ ಒದಗಿಸಲು ಪರಿಗಣಿಸುವಂತೆ ಮತ್ತು ಸ್ವಲ್ಪ ಉದಾರತೆ ತೋರಲು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮಾರ್ಚ್​ 31ರೊಳಗೆ ವಿಶೇಷ ಪ್ಯಾಕೇಜ್ ಕೊಡುವಂತೆ ಸರ್ವೋಚ್ಛ ನ್ಯಾಯಾಲಯವು ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೆ.ವಿ.ವಿಶ್ವನಾಥ ಅವರನ್ನೊಳಗೊಂಡ ಪೀಠ ಇದರ ವಿಚಾರಣೆ ನಡೆಸಿ, ಸರ್ಕಾರವು ಸ್ವಲ್ಪ ಉದಾರವಾಗಬಹುದು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಬಾರಿ ಪ್ಯಾಕೇಜ್ ನೀಡಬಹುದು ಎಂದು ಕೇಂದ್ರದ ವಕೀಲರಿಗೆ ಸೂಚಿಸಿತು. ''ಮಾರ್ಚ್ 31ಕ್ಕಿಂತ ಮೊದಲು ವಿಶೇಷ ಪ್ಯಾಕೇಜ್ ನೀಡಿ. ಇತರ ರಾಜ್ಯಗಳಿಗಿಂತ ಕಠಿಣ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ. ಅಸ್ತಿತ್ವದಲ್ಲಿರುವ ರಾಜ್ಯಗಳಿಗೆ ನೀವು ಮುಂದಿನ ಬಾರಿ ಬಹುಶಃ ಉದಾರವಾದಿಗಳಾಗಿರುತ್ತೀರಿ'' ಎಂದು ನ್ಯಾಯಪೀಠ ತಿಳಿಸಿತು.

ಕೇರಳದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್​ಜಿ) ಎನ್.ವೆಂಕಟರಾಮನ್ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದರು. ಇದರ ವಿಚಾರಣೆಯ ಸಮಯದಲ್ಲಿ ಸದ್ಯಕ್ಕೆ ಹೆಚ್ಚುವರಿಯಾಗಿ 13,608 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯುವ ಕೇಂದ್ರದ ಪ್ರಸ್ತಾವನೆಯನ್ನು ರಾಜ್ಯವು ಒಪ್ಪಿಕೊಂಡಿದೆ. ಆದರೆ, ಹೆಚ್ಚುವರಿ 19,000 ಕೋಟಿ ಕುರಿತು ಮನವಿಯನ್ನು ಪರಿಗಣಿಸಲಾಗಿಲ್ಲ ಎಂದು ಸಿಬಲ್ ತಿಳಿಸಿದರು.

ಕೇರಳಕ್ಕೆ ಯಾವುದೇ ವಿಶೇಷತೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಕೇರಳದ ವಿಷಯವು ವಿಶೇಷ ಪ್ರಕರಣವಲ್ಲ. ಇತರ ರಾಜ್ಯಗಳಿಗೂ ವಿಶೇಷ ಅನುದಾನ ನಿರಾಕರಿಸಿದೆ. ಇದರಿಂದ ಈ ವಿಷಯದಲ್ಲಿ ಕೇಂದ್ರದ ಕೈಗಳನ್ನು ಕಟ್ಟಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಾದಿಸಿದರು. ಆಗ ಕೇರಳ ಸರ್ಕಾರ ಮತ್ತು ಕೇಂದ್ರ ಎರಡೂ ಮಧ್ಯಂತರ ಪರಿಹಾರವನ್ನು ರೂಪಿಸಬೇಕು. ಸದ್ಯಕ್ಕೆ ಕೇಂದ್ರದಿಂದ ಕೇರಳಕ್ಕೆ ವಿಶೇಷ ರಿಯಾಯಿತಿ ನೀಡಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು.

ಈ ಸಂದರ್ಭದಲ್ಲಿ ಬೇಲ್‌ಔಟ್ ಪ್ಯಾಕೇಜ್‌ಗಾಗಿ ಮತ್ತೊಂದು ದಕ್ಷಿಣ ರಾಜ್ಯವು ಮನವಿ ಮಾಡಿದೆ. ಇದು ಆ ರಾಜ್ಯದ ಬಜೆಟ್ ಪ್ಯಾಕೇಜ್‌ನ ಶೇ.100ಕ್ಕಿಂತ ಹೆಚ್ಚಾಗಿದೆ. ಇದರ ವ್ಯತ್ಯಾಸ ದೊಡ್ಡವಾಗಿದೆ. ನಾವು ಇತರ ಹಲವು ರಾಜ್ಯಗಳಿಗೆ ಇದೇ ರೀತಿಯ ಮನವಿಗಳನ್ನು ನಿರಾಕರಿಸಿದ್ದೇವೆ. ನಾವು ಈ ನಿರ್ದಿಷ್ಟ ರಾಜ್ಯಕ್ಕೆ ವಿರುದ್ಧವಾಗಿದ್ದೇವೆ ಎಂದು ಅಲ್ಲ ಎಂದು ಎನ್.ವೆಂಕಟರಾಮನ್ ಪೀಠದ ಗಮನ ಸೆಳೆದರು.

ಕೇಂದ್ರದ ಪ್ರಾಮಾಣಿಕತೆಯ ಬಗ್ಗೆ ನಮಗೆ ಸ್ವಲ್ಪವೂ ಸಂದೇಹವಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏನಾದರೂ ಮಾಡುವ ಸಾಧ್ಯತೆ ಅನ್ವೇಷಿಸಲು ನಾವು ನಿಮ್ಮನ್ನು ಕೇಳುತ್ತಿದ್ದೇವೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಹತೆಯಿಂದ ಮೊತ್ತವನ್ನು ಹೊಂದಿಸಬಹುದು. ವಿಶೇಷ ಪ್ರಕರಣವಾಗಿ ಕೇಂದ್ರವು ಏನನ್ನಾದರೂ ಮಾಡಲು ಅನ್ವೇಷಿಸಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು. ಆಗ ಕೇಂದ್ರದ ಪರ ವಕೀಲರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಾಲಯದ ಸಲಹೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮರಳುವುದಾಗಿ ತಿಳಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿತು.

ಇದನ್ನು ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೇ 3.75ರಷ್ಟು DA ಹೆಚ್ಚಿಸಿ ಸರ್ಕಾರದ ಆದೇಶ

ಕೇಂದ್ರ ಸರ್ಕಾರವು ಕಾರ್ಯಕಾರಿ ಕ್ರಮಗಳ ಮೂಲಕ ತನ್ನ ಆಯವ್ಯಯ ಪ್ರಕ್ರಿಯೆಯ ಮೇಲೆ ಹಿಡಿತ ಸಾಧಿಸಿದೆ ಎಂದು ಆರೋಪಿಸಿ ಸಂವಿಧಾನದ 131ನೇ ವಿಧಿಯಡಿ ಕೇರಳ ಸರ್ಕಾರವು ಮುಖ್ಯ ಕಾರ್ಯದರ್ಶಿ ಮೂಲಕ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಕೇಂದ್ರವು ತನ್ನ ಸ್ವಂತ ಹಣಕಾಸುಗಳನ್ನು ಸಾಲ ಪಡೆಯುವ ಮತ್ತು ನಿಯಂತ್ರಿಸುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ರಾಜ್ಯ ನೌಕರರಿಗೆ ವೇತನ, ಪಿಂಚಣಿ ಮತ್ತು ಭವಿಷ್ಯ ನಿಧಿಯ ಬಾಕಿ, ವಿವಿಧ ಕಲ್ಯಾಣ ಯೋಜನೆಗಳ ಅಡಿ ರಾಜ್ಯದ ಇತರ ಫಲಾನುಭವಿಗಳಿಗೆ ಅನುದಾನ ಒದಗಿಸಲು ತನ್ನ ಬಳಿ ಹಣವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಇದರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್​ ಈ ಹಿಂದೆ, ಈ ಸಮಸ್ಯೆ ಪರಿಹರಿಸಲು ರಾಜ್ಯ ಮತ್ತು ಕೇಂದ್ರಗಳು ಎರಡೂ ಸಭೆ ನಡೆಸುವಂತೆ ಸೂಚಿಸಿತ್ತು. ಈ ಸಂಬಂಧ ಅಧಿಕಾರಿಗಳ ನಡುವೆ ಸಭೆ ನಡೆದರೂ ಈ ಸಮಸ್ಯೆ ಬಗೆಹರಿದಿಲ್ಲ.

ಇದನ್ನೂ ಓದಿ: 5,8 ಮತ್ತು 9ನೇ ತರಗತಿಗಳ ಬೋರ್ಡ್​ ಪರೀಕ್ಷೆಗೆ ಸುಪ್ರೀಂ ತಡೆ

ನವದೆಹಲಿ: ಕೇರಳದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಒಂದು ಸಲದ ಪ್ಯಾಕೇಜ್ ಒದಗಿಸಲು ಪರಿಗಣಿಸುವಂತೆ ಮತ್ತು ಸ್ವಲ್ಪ ಉದಾರತೆ ತೋರಲು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮಾರ್ಚ್​ 31ರೊಳಗೆ ವಿಶೇಷ ಪ್ಯಾಕೇಜ್ ಕೊಡುವಂತೆ ಸರ್ವೋಚ್ಛ ನ್ಯಾಯಾಲಯವು ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೆ.ವಿ.ವಿಶ್ವನಾಥ ಅವರನ್ನೊಳಗೊಂಡ ಪೀಠ ಇದರ ವಿಚಾರಣೆ ನಡೆಸಿ, ಸರ್ಕಾರವು ಸ್ವಲ್ಪ ಉದಾರವಾಗಬಹುದು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಬಾರಿ ಪ್ಯಾಕೇಜ್ ನೀಡಬಹುದು ಎಂದು ಕೇಂದ್ರದ ವಕೀಲರಿಗೆ ಸೂಚಿಸಿತು. ''ಮಾರ್ಚ್ 31ಕ್ಕಿಂತ ಮೊದಲು ವಿಶೇಷ ಪ್ಯಾಕೇಜ್ ನೀಡಿ. ಇತರ ರಾಜ್ಯಗಳಿಗಿಂತ ಕಠಿಣ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ. ಅಸ್ತಿತ್ವದಲ್ಲಿರುವ ರಾಜ್ಯಗಳಿಗೆ ನೀವು ಮುಂದಿನ ಬಾರಿ ಬಹುಶಃ ಉದಾರವಾದಿಗಳಾಗಿರುತ್ತೀರಿ'' ಎಂದು ನ್ಯಾಯಪೀಠ ತಿಳಿಸಿತು.

ಕೇರಳದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್​ಜಿ) ಎನ್.ವೆಂಕಟರಾಮನ್ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದರು. ಇದರ ವಿಚಾರಣೆಯ ಸಮಯದಲ್ಲಿ ಸದ್ಯಕ್ಕೆ ಹೆಚ್ಚುವರಿಯಾಗಿ 13,608 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯುವ ಕೇಂದ್ರದ ಪ್ರಸ್ತಾವನೆಯನ್ನು ರಾಜ್ಯವು ಒಪ್ಪಿಕೊಂಡಿದೆ. ಆದರೆ, ಹೆಚ್ಚುವರಿ 19,000 ಕೋಟಿ ಕುರಿತು ಮನವಿಯನ್ನು ಪರಿಗಣಿಸಲಾಗಿಲ್ಲ ಎಂದು ಸಿಬಲ್ ತಿಳಿಸಿದರು.

ಕೇರಳಕ್ಕೆ ಯಾವುದೇ ವಿಶೇಷತೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಕೇರಳದ ವಿಷಯವು ವಿಶೇಷ ಪ್ರಕರಣವಲ್ಲ. ಇತರ ರಾಜ್ಯಗಳಿಗೂ ವಿಶೇಷ ಅನುದಾನ ನಿರಾಕರಿಸಿದೆ. ಇದರಿಂದ ಈ ವಿಷಯದಲ್ಲಿ ಕೇಂದ್ರದ ಕೈಗಳನ್ನು ಕಟ್ಟಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಾದಿಸಿದರು. ಆಗ ಕೇರಳ ಸರ್ಕಾರ ಮತ್ತು ಕೇಂದ್ರ ಎರಡೂ ಮಧ್ಯಂತರ ಪರಿಹಾರವನ್ನು ರೂಪಿಸಬೇಕು. ಸದ್ಯಕ್ಕೆ ಕೇಂದ್ರದಿಂದ ಕೇರಳಕ್ಕೆ ವಿಶೇಷ ರಿಯಾಯಿತಿ ನೀಡಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು.

ಈ ಸಂದರ್ಭದಲ್ಲಿ ಬೇಲ್‌ಔಟ್ ಪ್ಯಾಕೇಜ್‌ಗಾಗಿ ಮತ್ತೊಂದು ದಕ್ಷಿಣ ರಾಜ್ಯವು ಮನವಿ ಮಾಡಿದೆ. ಇದು ಆ ರಾಜ್ಯದ ಬಜೆಟ್ ಪ್ಯಾಕೇಜ್‌ನ ಶೇ.100ಕ್ಕಿಂತ ಹೆಚ್ಚಾಗಿದೆ. ಇದರ ವ್ಯತ್ಯಾಸ ದೊಡ್ಡವಾಗಿದೆ. ನಾವು ಇತರ ಹಲವು ರಾಜ್ಯಗಳಿಗೆ ಇದೇ ರೀತಿಯ ಮನವಿಗಳನ್ನು ನಿರಾಕರಿಸಿದ್ದೇವೆ. ನಾವು ಈ ನಿರ್ದಿಷ್ಟ ರಾಜ್ಯಕ್ಕೆ ವಿರುದ್ಧವಾಗಿದ್ದೇವೆ ಎಂದು ಅಲ್ಲ ಎಂದು ಎನ್.ವೆಂಕಟರಾಮನ್ ಪೀಠದ ಗಮನ ಸೆಳೆದರು.

ಕೇಂದ್ರದ ಪ್ರಾಮಾಣಿಕತೆಯ ಬಗ್ಗೆ ನಮಗೆ ಸ್ವಲ್ಪವೂ ಸಂದೇಹವಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏನಾದರೂ ಮಾಡುವ ಸಾಧ್ಯತೆ ಅನ್ವೇಷಿಸಲು ನಾವು ನಿಮ್ಮನ್ನು ಕೇಳುತ್ತಿದ್ದೇವೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಹತೆಯಿಂದ ಮೊತ್ತವನ್ನು ಹೊಂದಿಸಬಹುದು. ವಿಶೇಷ ಪ್ರಕರಣವಾಗಿ ಕೇಂದ್ರವು ಏನನ್ನಾದರೂ ಮಾಡಲು ಅನ್ವೇಷಿಸಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು. ಆಗ ಕೇಂದ್ರದ ಪರ ವಕೀಲರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಾಲಯದ ಸಲಹೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮರಳುವುದಾಗಿ ತಿಳಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿತು.

ಇದನ್ನು ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೇ 3.75ರಷ್ಟು DA ಹೆಚ್ಚಿಸಿ ಸರ್ಕಾರದ ಆದೇಶ

ಕೇಂದ್ರ ಸರ್ಕಾರವು ಕಾರ್ಯಕಾರಿ ಕ್ರಮಗಳ ಮೂಲಕ ತನ್ನ ಆಯವ್ಯಯ ಪ್ರಕ್ರಿಯೆಯ ಮೇಲೆ ಹಿಡಿತ ಸಾಧಿಸಿದೆ ಎಂದು ಆರೋಪಿಸಿ ಸಂವಿಧಾನದ 131ನೇ ವಿಧಿಯಡಿ ಕೇರಳ ಸರ್ಕಾರವು ಮುಖ್ಯ ಕಾರ್ಯದರ್ಶಿ ಮೂಲಕ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಕೇಂದ್ರವು ತನ್ನ ಸ್ವಂತ ಹಣಕಾಸುಗಳನ್ನು ಸಾಲ ಪಡೆಯುವ ಮತ್ತು ನಿಯಂತ್ರಿಸುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ರಾಜ್ಯ ನೌಕರರಿಗೆ ವೇತನ, ಪಿಂಚಣಿ ಮತ್ತು ಭವಿಷ್ಯ ನಿಧಿಯ ಬಾಕಿ, ವಿವಿಧ ಕಲ್ಯಾಣ ಯೋಜನೆಗಳ ಅಡಿ ರಾಜ್ಯದ ಇತರ ಫಲಾನುಭವಿಗಳಿಗೆ ಅನುದಾನ ಒದಗಿಸಲು ತನ್ನ ಬಳಿ ಹಣವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಇದರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್​ ಈ ಹಿಂದೆ, ಈ ಸಮಸ್ಯೆ ಪರಿಹರಿಸಲು ರಾಜ್ಯ ಮತ್ತು ಕೇಂದ್ರಗಳು ಎರಡೂ ಸಭೆ ನಡೆಸುವಂತೆ ಸೂಚಿಸಿತ್ತು. ಈ ಸಂಬಂಧ ಅಧಿಕಾರಿಗಳ ನಡುವೆ ಸಭೆ ನಡೆದರೂ ಈ ಸಮಸ್ಯೆ ಬಗೆಹರಿದಿಲ್ಲ.

ಇದನ್ನೂ ಓದಿ: 5,8 ಮತ್ತು 9ನೇ ತರಗತಿಗಳ ಬೋರ್ಡ್​ ಪರೀಕ್ಷೆಗೆ ಸುಪ್ರೀಂ ತಡೆ

Last Updated : Mar 12, 2024, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.