ETV Bharat / bharat

ಭಾನುವಾರದೊಳಗೆ ಪ್ರಕರಣ​ ಭೇದಿಸದಿದ್ದರೆ ಸಿಬಿಐ ತನಿಖೆಗೆ ಹಸ್ತಾಂತರ: ಸಿಎಂ ಮಮತಾ ಬ್ಯಾನರ್ಜಿ - Junior Doctor Rape And Murder

author img

By ANI

Published : Aug 12, 2024, 3:38 PM IST

ಬಂಗಾಳದಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು, ಘಟನೆಯ ದಿನ ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ, ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ (ANI)

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ಇಂದು (ಸೋಮವಾರ) ಮುಷ್ಕರ ನಡೆಸುತ್ತಿದ್ದಾರೆ. ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಕರಣವನ್ನು ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣವನ್ನು ಭಾನುವಾರದೊಳಗೆ ರಾಜ್ಯ ಪೊಲೀಸರು ಭೇದಿಸದೇ ಹೋದಲ್ಲಿ, ಸಿಬಿಐ ತನಿಖೆಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಪೊಲೀಸ್​ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇನೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ, ತ್ವರಿತ ನ್ಯಾಯಾಲಯ ರಚಿಸಿ ತನಿಖೆ ನಡೆಸಬೇಕು. ಆಸ್ಪತ್ರೆಯೊಳಗೆ ವೈದ್ಯೆಯ ಮೇಲೆ ಅಮಾನುಷ ಕೃತ್ಯ ಹೇಗೆ ನಡೆಯಿತು ಎಂಬುದು ಅರ್ಥವಾಗುತ್ತಿಲ್ಲ. ಆರ್​ಜಿ ಕರ್​​ ಆಸ್ಪತ್ರೆಯ ಪ್ರಾಂಶುಪಾಲರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ರಾಜ್ಯ ಪೊಲೀಸರಿಗೆ ಭಾನುವಾರ ಅಂತಿಮ ಗಡುವು ನೀಡಲಾಗಿದೆ. ಬಳಿಕ ಪ್ರಕರಣ ಸಿಬಿಐಗೆ ನೀಡಲಾಗುವುದು ಎಂದರು.

ವೈದ್ಯೆಯ ಮೇಲೆ ನಡೆದ ಅಮಾನುಷ ಕೃತ್ಯ ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಡರೇಷನ್​ ಆಫ್​ ರೆಸಿಡೆಂಟ್​ ಡಾಕ್ಟರ್ಸ್​ ಅಸೋಸಿಯೇಷನ್​ (ಫೋರ್ಡಾ) ಕರೆ ನೀಡಿದ ಪ್ರತಿಭಟನೆಗೆ ವೈದ್ಯರು ಆಸ್ಪತ್ರೆಗಳ ಹೊರಗೆ ಧರಣಿ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ತ್ವರಿತ ನ್ಯಾಯಾಲಯ ರಚನೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಕೇಂದ್ರ ರಕ್ಷಣಾ ಕಾಯಿದೆ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಆಸ್ಪತ್ರೆ ಅಧೀಕ್ಷಕ ವಜಾ: ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಆರ್​ಜಿ ಕರ್​ ಆಸ್ಪತ್ರೆಯ ಅಧೀಕ್ಷಕ, ಉಪ ಪ್ರಾಂಶುಪಾಲರೂ ಆಗಿದ್ದ ಸಂಜಯ್ ಬಶಿಷ್ಠ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಆಸ್ಪತ್ರೆಯ ಪ್ರಾಂಶುಪಾಲರಾಗಿದ್ದ ಸಂದೀಪ್ ಗೋಶ್ ಕೂಡ ರಾಜೀನಾಮೆ ನೀಡಿದ್ದಾರೆ.

ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ತಮ್ಮ ವಿರುದ್ಧ ಮಾನಹಾನಿ ಮಾಡಲಾಗುತ್ತಿದೆ. ಮೃತ ವೈದ್ಯೆ ನನ್ನ ಮಗಳಿದ್ದಂತೆ. ಪ್ರಕರಣದ ತನಿಖೆಗಾಗಿ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ.

ರಾತ್ರಿ ಪಾಳಿಯಲ್ಲಿದ್ದವರಿಗೆ ನೋಟಿಸ್​: ಇನ್ನು, ಘಟನೆ ನಡೆದ ದಿನ ವೈದ್ಯೆಯ ಜೊತೆಗೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ. ಮೂವರು ಕಿರಿಯ ವೈದ್ಯರು ಮತ್ತು ಒಬ್ಬ ಹೋಂ ಗಾರ್ಡ್​ಗೆ ನೋಟಿಸ್​​ ರವಾನಿಸಲಾಗಿದೆ.

ಇದನ್ನೂ ಓದಿ: ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಆಸ್ಪತ್ರೆಯ ಅಧೀಕ್ಷಕನನ್ನು ಹುದ್ದೆಯಿಂದ ತೆಗೆದು ಹಾಕಿದ ಆರೋಗ್ಯ ಇಲಾಖೆ - DOCTOR RAPE AND MURDER CASE

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ಇಂದು (ಸೋಮವಾರ) ಮುಷ್ಕರ ನಡೆಸುತ್ತಿದ್ದಾರೆ. ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಕರಣವನ್ನು ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣವನ್ನು ಭಾನುವಾರದೊಳಗೆ ರಾಜ್ಯ ಪೊಲೀಸರು ಭೇದಿಸದೇ ಹೋದಲ್ಲಿ, ಸಿಬಿಐ ತನಿಖೆಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಪೊಲೀಸ್​ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇನೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ, ತ್ವರಿತ ನ್ಯಾಯಾಲಯ ರಚಿಸಿ ತನಿಖೆ ನಡೆಸಬೇಕು. ಆಸ್ಪತ್ರೆಯೊಳಗೆ ವೈದ್ಯೆಯ ಮೇಲೆ ಅಮಾನುಷ ಕೃತ್ಯ ಹೇಗೆ ನಡೆಯಿತು ಎಂಬುದು ಅರ್ಥವಾಗುತ್ತಿಲ್ಲ. ಆರ್​ಜಿ ಕರ್​​ ಆಸ್ಪತ್ರೆಯ ಪ್ರಾಂಶುಪಾಲರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ರಾಜ್ಯ ಪೊಲೀಸರಿಗೆ ಭಾನುವಾರ ಅಂತಿಮ ಗಡುವು ನೀಡಲಾಗಿದೆ. ಬಳಿಕ ಪ್ರಕರಣ ಸಿಬಿಐಗೆ ನೀಡಲಾಗುವುದು ಎಂದರು.

ವೈದ್ಯೆಯ ಮೇಲೆ ನಡೆದ ಅಮಾನುಷ ಕೃತ್ಯ ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಡರೇಷನ್​ ಆಫ್​ ರೆಸಿಡೆಂಟ್​ ಡಾಕ್ಟರ್ಸ್​ ಅಸೋಸಿಯೇಷನ್​ (ಫೋರ್ಡಾ) ಕರೆ ನೀಡಿದ ಪ್ರತಿಭಟನೆಗೆ ವೈದ್ಯರು ಆಸ್ಪತ್ರೆಗಳ ಹೊರಗೆ ಧರಣಿ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ತ್ವರಿತ ನ್ಯಾಯಾಲಯ ರಚನೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಕೇಂದ್ರ ರಕ್ಷಣಾ ಕಾಯಿದೆ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಆಸ್ಪತ್ರೆ ಅಧೀಕ್ಷಕ ವಜಾ: ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಆರ್​ಜಿ ಕರ್​ ಆಸ್ಪತ್ರೆಯ ಅಧೀಕ್ಷಕ, ಉಪ ಪ್ರಾಂಶುಪಾಲರೂ ಆಗಿದ್ದ ಸಂಜಯ್ ಬಶಿಷ್ಠ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಆಸ್ಪತ್ರೆಯ ಪ್ರಾಂಶುಪಾಲರಾಗಿದ್ದ ಸಂದೀಪ್ ಗೋಶ್ ಕೂಡ ರಾಜೀನಾಮೆ ನೀಡಿದ್ದಾರೆ.

ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ತಮ್ಮ ವಿರುದ್ಧ ಮಾನಹಾನಿ ಮಾಡಲಾಗುತ್ತಿದೆ. ಮೃತ ವೈದ್ಯೆ ನನ್ನ ಮಗಳಿದ್ದಂತೆ. ಪ್ರಕರಣದ ತನಿಖೆಗಾಗಿ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ.

ರಾತ್ರಿ ಪಾಳಿಯಲ್ಲಿದ್ದವರಿಗೆ ನೋಟಿಸ್​: ಇನ್ನು, ಘಟನೆ ನಡೆದ ದಿನ ವೈದ್ಯೆಯ ಜೊತೆಗೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ. ಮೂವರು ಕಿರಿಯ ವೈದ್ಯರು ಮತ್ತು ಒಬ್ಬ ಹೋಂ ಗಾರ್ಡ್​ಗೆ ನೋಟಿಸ್​​ ರವಾನಿಸಲಾಗಿದೆ.

ಇದನ್ನೂ ಓದಿ: ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ: ಆಸ್ಪತ್ರೆಯ ಅಧೀಕ್ಷಕನನ್ನು ಹುದ್ದೆಯಿಂದ ತೆಗೆದು ಹಾಕಿದ ಆರೋಗ್ಯ ಇಲಾಖೆ - DOCTOR RAPE AND MURDER CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.