ETV Bharat / bharat

ಬುದ್ಧದೇವ್ ಭಟ್ಟಾಚಾರ್ಜಿಗೆ ಸರ್ಕಾರದ 'ಗನ್ ಸೆಲ್ಯೂಟ್'​ ಬೇಡ: ಸಿಪಿಐ-ಎಂ - Buddhadeb Bhattacharjee

author img

By ETV Bharat Karnataka Team

Published : Aug 9, 2024, 4:46 PM IST

ದಿವಂಗತ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿಯವರಿಗೆ ಸರ್ಕಾರದಿಂದ ಗನ್​ ಸೆಲ್ಯೂಟ್ ನೀಡುವ​ ಪ್ರಸ್ತಾಪವನ್ನು ಸಿಪಿಐ-ಎಂ ತಿರಸ್ಕರಿಸಿದೆ.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ (IANS)

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ 'ಗನ್ ಸೆಲ್ಯೂಟ್' ನೀಡುವ ಸರ್ಕಾರದ ಪ್ರಸ್ತಾಪವನ್ನು ಸಿಪಿಐ-ಎಂ ನಾಯಕತ್ವ ಶುಕ್ರವಾರ ತಿರಸ್ಕರಿಸಿದೆ. ಗುರುವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ ಸರ್ಕಾರದಿಂದ ಗನ್ ಸೆಲ್ಯೂಟ್ ಗೌರವ ನೀಡಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ ಸಿಪಿಐ-ಎಂ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ.

ದಕ್ಷಿಣ ಕೋಲ್ಕತಾದ ಪಾಮ್ ಅವೆನ್ಯೂದಲ್ಲಿರುವ ಎರಡು ಬೆಡ್ ರೂಮ್​ಗಳ ಅಪಾರ್ಟ್​ಮೆಂಟ್​ನಲ್ಲಿ ಸರಳವಾಗಿ ಬದುಕಿದ ಅವರ ಜೀವನಶೈಲಿಯನ್ನು ಗೌರವಿಸುವ ಸಲುವಾಗಿ ಗನ್ ಸೆಲ್ಯೂಟ್ ನಿರಾಕರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಅವರ ಪತ್ನಿ ಮೀರಾ ಭಟ್ಟಾಚಾರ್ಜಿ ಸೇರಿದಂತೆ ಅವರ ಕುಟುಂಬ ಸದಸ್ಯರು ಸಹ ಇಂಥ ಯಾವುದೇ ರೀತಿಯ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.

ಗನ್ ಸೆಲ್ಯೂಟ್ ಘೋಷಣೆಗೂ ಭಟ್ಟಾಚಾರ್ಜಿಯವರ ಅಂತಿಮ ಯಾತ್ರೆಯಲ್ಲಿ ಪಕ್ಷವು ನಡೆಸಲಿರುವ ಕಾರ್ಯಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ.

"ಬುದ್ಧದೇವ್ ಭಟ್ಟಾಚಾರ್ಜಿ ತಮ್ಮ ಜೀವನದುದ್ದಕ್ಕೂ ಅತ್ಯಂತ ಸರಳವಾಗಿ ಬಾಳಿ ಬದುಕಿದ್ದಾರೆ. ಹೀಗಾಗಿ ಅವರಿಗೆ ಗನ್ ಸೆಲ್ಯೂಟ್ ನೀಡುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

2011 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಅಧಿಕಾರದಿಂದ ಕೆಳಗಿಳಿದು ರೈಟರ್ಸ್​ ಬಿಲ್ಡಿಂಗ್​ನ ಸೆಕ್ರೆಟರಿಯೇಟ್​ನಿಂದ ಕೊನೆಯ ಬಾರಿಗೆ ಹೊರ ಬಂದ ನಂತರ ಮಾಜಿ ಮುಖ್ಯಮಂತ್ರಿಯಾಗಿ ಸರ್ಕಾರದಿಂದ ಪಡೆಯಬಹುದಾಗಿದ್ದ ಯಾವುದೇ ಸವಲತ್ತುಗಳನ್ನು ಅವರು ನಿರಾಕರಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

"ಐಷಾರಾಮಿ ಅಥವಾ ವೈಭವದಂತಹ ಪದಗಳು ಬುದ್ಧದೇವ್ ಭಟ್ಟಾಚಾರ್ಜಿ ಅವರ ನಿಘಂಟಿನಲ್ಲಿಯೇ ಇರಲಿಲ್ಲ. ಅವರು ತಮ್ಮ ಅಧಿಕಾರದ ಕೊನೆಯ ದಿನದಿಂದಲೂ ತಮ್ಮ ಎರಡು ಬೆಡ್​ರೂಮಿನ ಮನೆಯಲ್ಲಿ ಸಂತೋಷವಾಗಿ ಬದುಕಿದ್ದರು. ಹೀಗಾಗಿ ಅವರ ಅಂತಿಮ ಯಾತ್ರೆಯಲ್ಲಿ ಅವರ ಸರಳ, ನಿಷ್ಕಪಟ ಜೀವನಶೈಲಿಯನ್ನು ಗೌರವಿಸಬೇಕು ಎಂಬುದು ಅವರ ಕುಟುಂಬ ಸದಸ್ಯರು ಮತ್ತು ಪಕ್ಷದ ಆಶಯವಾಗಿದೆ" ಎಂದು ಸಿಪಿಐ-ಎಂ ರಾಜ್ಯ ಸಮಿತಿ ಸದಸ್ಯರೊಬ್ಬರು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಅವರು ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಆಸ್ಪತ್ರೆಗೆ ದಾಖಲಾದಾಗಲೆಲ್ಲಾ ತಾವು ಶಾಂತಿಯಿಂದ ಬದುಕುವ ತಮ್ಮ ಎರಡು ಬೆಡ್​ರೂಮಿನ ಅಪಾರ್ಟ್​ಮೆಂಟ್​ಗೆ ಮರಳಲು ಸಾಧ್ಯವಾಗುವಂತೆ ಬೇಗನೆ ಡಿಸ್ಚಾರ್ಜ್​ ಮಾಡುವಂತೆ ಮನವಿ ಮಾಡುತ್ತಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಮಾನಹಾನಿ ಪ್ರಕರಣ: ಯೂಟ್ಯೂಬರ್ ಸವುಕ್ಕು ಶಂಕರ್ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಆದೇಶ - YouTuber Savukku Shankar

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ 'ಗನ್ ಸೆಲ್ಯೂಟ್' ನೀಡುವ ಸರ್ಕಾರದ ಪ್ರಸ್ತಾಪವನ್ನು ಸಿಪಿಐ-ಎಂ ನಾಯಕತ್ವ ಶುಕ್ರವಾರ ತಿರಸ್ಕರಿಸಿದೆ. ಗುರುವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ ಸರ್ಕಾರದಿಂದ ಗನ್ ಸೆಲ್ಯೂಟ್ ಗೌರವ ನೀಡಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ ಸಿಪಿಐ-ಎಂ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ.

ದಕ್ಷಿಣ ಕೋಲ್ಕತಾದ ಪಾಮ್ ಅವೆನ್ಯೂದಲ್ಲಿರುವ ಎರಡು ಬೆಡ್ ರೂಮ್​ಗಳ ಅಪಾರ್ಟ್​ಮೆಂಟ್​ನಲ್ಲಿ ಸರಳವಾಗಿ ಬದುಕಿದ ಅವರ ಜೀವನಶೈಲಿಯನ್ನು ಗೌರವಿಸುವ ಸಲುವಾಗಿ ಗನ್ ಸೆಲ್ಯೂಟ್ ನಿರಾಕರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಅವರ ಪತ್ನಿ ಮೀರಾ ಭಟ್ಟಾಚಾರ್ಜಿ ಸೇರಿದಂತೆ ಅವರ ಕುಟುಂಬ ಸದಸ್ಯರು ಸಹ ಇಂಥ ಯಾವುದೇ ರೀತಿಯ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.

ಗನ್ ಸೆಲ್ಯೂಟ್ ಘೋಷಣೆಗೂ ಭಟ್ಟಾಚಾರ್ಜಿಯವರ ಅಂತಿಮ ಯಾತ್ರೆಯಲ್ಲಿ ಪಕ್ಷವು ನಡೆಸಲಿರುವ ಕಾರ್ಯಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ.

"ಬುದ್ಧದೇವ್ ಭಟ್ಟಾಚಾರ್ಜಿ ತಮ್ಮ ಜೀವನದುದ್ದಕ್ಕೂ ಅತ್ಯಂತ ಸರಳವಾಗಿ ಬಾಳಿ ಬದುಕಿದ್ದಾರೆ. ಹೀಗಾಗಿ ಅವರಿಗೆ ಗನ್ ಸೆಲ್ಯೂಟ್ ನೀಡುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

2011 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಅಧಿಕಾರದಿಂದ ಕೆಳಗಿಳಿದು ರೈಟರ್ಸ್​ ಬಿಲ್ಡಿಂಗ್​ನ ಸೆಕ್ರೆಟರಿಯೇಟ್​ನಿಂದ ಕೊನೆಯ ಬಾರಿಗೆ ಹೊರ ಬಂದ ನಂತರ ಮಾಜಿ ಮುಖ್ಯಮಂತ್ರಿಯಾಗಿ ಸರ್ಕಾರದಿಂದ ಪಡೆಯಬಹುದಾಗಿದ್ದ ಯಾವುದೇ ಸವಲತ್ತುಗಳನ್ನು ಅವರು ನಿರಾಕರಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

"ಐಷಾರಾಮಿ ಅಥವಾ ವೈಭವದಂತಹ ಪದಗಳು ಬುದ್ಧದೇವ್ ಭಟ್ಟಾಚಾರ್ಜಿ ಅವರ ನಿಘಂಟಿನಲ್ಲಿಯೇ ಇರಲಿಲ್ಲ. ಅವರು ತಮ್ಮ ಅಧಿಕಾರದ ಕೊನೆಯ ದಿನದಿಂದಲೂ ತಮ್ಮ ಎರಡು ಬೆಡ್​ರೂಮಿನ ಮನೆಯಲ್ಲಿ ಸಂತೋಷವಾಗಿ ಬದುಕಿದ್ದರು. ಹೀಗಾಗಿ ಅವರ ಅಂತಿಮ ಯಾತ್ರೆಯಲ್ಲಿ ಅವರ ಸರಳ, ನಿಷ್ಕಪಟ ಜೀವನಶೈಲಿಯನ್ನು ಗೌರವಿಸಬೇಕು ಎಂಬುದು ಅವರ ಕುಟುಂಬ ಸದಸ್ಯರು ಮತ್ತು ಪಕ್ಷದ ಆಶಯವಾಗಿದೆ" ಎಂದು ಸಿಪಿಐ-ಎಂ ರಾಜ್ಯ ಸಮಿತಿ ಸದಸ್ಯರೊಬ್ಬರು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಅವರು ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಆಸ್ಪತ್ರೆಗೆ ದಾಖಲಾದಾಗಲೆಲ್ಲಾ ತಾವು ಶಾಂತಿಯಿಂದ ಬದುಕುವ ತಮ್ಮ ಎರಡು ಬೆಡ್​ರೂಮಿನ ಅಪಾರ್ಟ್​ಮೆಂಟ್​ಗೆ ಮರಳಲು ಸಾಧ್ಯವಾಗುವಂತೆ ಬೇಗನೆ ಡಿಸ್ಚಾರ್ಜ್​ ಮಾಡುವಂತೆ ಮನವಿ ಮಾಡುತ್ತಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಮಾನಹಾನಿ ಪ್ರಕರಣ: ಯೂಟ್ಯೂಬರ್ ಸವುಕ್ಕು ಶಂಕರ್ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಆದೇಶ - YouTuber Savukku Shankar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.