ETV Bharat / bharat

ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ಜನರ ದಾಳಿ - CBI team attacked in Bihar

author img

By ETV Bharat Karnataka Team

Published : Jun 23, 2024, 10:13 PM IST

UGC NET PAPER LEAK: ಬಿಹಾರದ ನಾವಡ ಜಿಲ್ಲೆಯಲ್ಲಿ ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗೆ ತೆರಳಿದ್ದ ಸಿಬಿಐ ತಂಡದ ಮೇಲೆ ಜನರ ಗುಂಪು ದಾಳಿ ನಡೆಸಲಾಗಿದೆ. ಓರ್ವ ಯುವತಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

Mob attack on CBI team in Bihar
ಬಿಹಾರದಲ್ಲಿ ಸಿಬಿಐ ತಂಡದ ಮೇಲೆಯೇ ಜನರ ದಾಳಿ (ETV Bharat)

ನಾವಡ (ಬಿಹಾರ): ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗಾಗಿ ಬಿಹಾರದ ನಾವಡ ಜಿಲ್ಲೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ದಾಳಿ ಮಾಡಲಾಗಿದೆ. ಅಂದಾಜು 150-200 ಜನರ ಗುಂಪು ಈ ದಾಳಿ ನಡೆಸಿದೆ. ಈ ಸಂಬಂಧ ರಾಜೌಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, 8 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ.

ಇಲ್ಲಿನ ಮುರ್ಹೆನಾ-ಕಾಸಿಯಾದಿಹ್‌ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಯುಜಿಸಿ ನೆಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿತ ಯುವಕ ನೀಡಿದ ಮಾಹಿತಿಯ ಮೇರೆಗೆ ಸಿಬಿಐ ತಂಡವು ಯುವತಿಯ ಪತ್ತೆಗಾಗಿ ರಾಜೌಲಿ ಪ್ರದೇಶಕ್ಕೆ ತೆರಳಿತ್ತು. ಈ ವೇಳೆ, ತನಿಖಾ ತಂಡದ ಮೇಲೆ ದಾಳಿ ನಡೆದಿದೆ.

ಇದರ ನಡುವೆಯೂ ಸಿಬಿಐ ತಂಡವು ಎರಡು ಮೊಬೈಲ್ ಫೋನ್‌ಗಳು ಮತ್ತು ಕೆಲವು ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಯುಜಿಸಿ ನೆಟ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ಘಟನೆಯಲ್ಲಿ ಸಿಬಿಐ ತಂಡದ ವಾಹನ ಚಾಲಕನಿಗೆ ತೀವ್ರವಾಗಿ ಥಳಿಸಲಾಗಿದೆ. ಸಿಬಿಐ ತಂಡ ಜತೆಗಿದ್ದ ನಾವಡ ಜಿಲ್ಲಾ ಪೊಲೀಸ್ ತಂಡ ಮೇಲೂ ದಾಳಿ ನಡೆಸಲಾಗಿದೆ. ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?: ಸಿಬಿಐ ತಂಡವು ಮುರ್ಹೆನಾದ ಕಾಸಿಯಾಡಿಹ್ ಗ್ರಾಮದ ನಿವಾಸಿ ಫೂಲ್‌ಚಂದ್ ಪ್ರಸಾದ್ ಮತ್ತು ಪತ್ನಿ ಬಬಿತಾ ದೇವಿ ಮನೆಯ ಮೇಲೆ ದಾಳಿ ಮಾಡಿದ ವೇಳೆ ಪರಿಶೀಲನೆ ಬಳಿಕ ಹಿಂತಿರುಗುತ್ತಿತ್ತು. ಈ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಸುಮಾರು 200-300 ಜನರು ಜಮಾಯಿಸಿ ಸಿವಿಲ್ ಡ್ರೆಸ್‌ನಲ್ಲಿದ್ದ ಸಿಬಿಐ ತಂಡವನ್ನು ಸುತ್ತುವರೆದಿದ್ದಾರೆ. ಅಲ್ಲದೇ, ಇವರನ್ನು ನಕಲಿ ಅಧಿಕಾರಿಗಳು ಎಂದು ಜನರು ಕರೆದಿದ್ದಾರೆ.

ಆಗ ಸಿಬಿಐ ಅಧಿಕಾರಿಗಳು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಜನರ ಗುಂಪು ಅಧಿಕಾರಿಗಳ ಮಾತನ್ನು ಕೇಳದೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದೆ. ಬಳಿಕ ರಾಜೌಲಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ನಂತರ ಪರಿಸ್ಥಿತಿ ಸಹಜವಾಗಿದೆ. ಈ ದಾಳಿಯಲ್ಲಿ ಸಿಬಿಐ ತಂಡದ ಚಾಲಕ ಸಂಜಯ್ ಸೋನಿ ಗಾಯಗೊಂಡಿದ್ದು, ಅಧಿಕಾರಿಯೊಬ್ಬರ ಅಂಗಿ ಹರಿದಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ, ಮುರ್ಹೆನಾ ಪಂಚಾಯತ್​ ಸದಸ್ಯ ಮಿಥ್ಲೇಶ್ ಪ್ರಸಾದ್ ಮಹಿಳಾ ಪೇದೆಯೊಬ್ಬರನ್ನು ನಿಂದಿಸಿದ್ದು, ಸಿಬಿಐ ಅಧಿಕಾರಿಗಳ ಮೇಲೂ ದಾಳಿ ಮುಂದಾಗಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಎಸ್‌ಹೆಚ್‌ಒ, ಇನ್‌ಸ್ಪೆಕ್ಟರ್‌ ರಾಜೇಶ್‌ಕುಮಾರ್‌ ಮಾತನಾಡಿ, ಸಿಬಿಐ ಮತ್ತು ಪೊಲೀಸ್‌ ತಂಡದ ಮೇಲೆ ದಾಳಿ ಕುರಿತಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಓರ್ವ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತರನ್ನು ಕಾಸಿಯಾಡಿ ಗ್ರಾಮದ ನಿವಾಸಿ ಫೂಲಚಂದ್ ಪ್ರಸಾದ್ ಪುತ್ರಿ ರಾಧಾ ಕುಮಾರಿ ಅಲಿಯಾಸ್ ಮಧು, ಶ್ರವಣ್ ಕುಮಾರ್ ಪುತ್ರ ಪ್ರಿನ್ಸ್ ಕುಮಾರ್, ಚುಂಚುನ್ ಪ್ರಸಾದ್ ಪುತ್ರ ಲಲನ್ ಕುಮಾರ್ ಮತ್ತು ರಾಜೇಂದ್ರ ಪ್ರಸಾದ್ ಪುತ್ರ ಅಮರ್ಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಈಗಾಗಲೇ ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೀಟ್​ ಪರೀಕ್ಷೆ ಅಕ್ರಮ ಆರೋಪ: ತನಿಖೆ ಆರಂಭಿಸಿದ ಸಿಬಿಐ, ಬಿಹಾರ ಬಳಿಕ ಮಹಾರಾಷ್ಟ್ರದಲ್ಲೂ ಇಬ್ಬರ ಬಂಧನ

ನಾವಡ (ಬಿಹಾರ): ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗಾಗಿ ಬಿಹಾರದ ನಾವಡ ಜಿಲ್ಲೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ದಾಳಿ ಮಾಡಲಾಗಿದೆ. ಅಂದಾಜು 150-200 ಜನರ ಗುಂಪು ಈ ದಾಳಿ ನಡೆಸಿದೆ. ಈ ಸಂಬಂಧ ರಾಜೌಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, 8 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ.

ಇಲ್ಲಿನ ಮುರ್ಹೆನಾ-ಕಾಸಿಯಾದಿಹ್‌ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಯುಜಿಸಿ ನೆಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿತ ಯುವಕ ನೀಡಿದ ಮಾಹಿತಿಯ ಮೇರೆಗೆ ಸಿಬಿಐ ತಂಡವು ಯುವತಿಯ ಪತ್ತೆಗಾಗಿ ರಾಜೌಲಿ ಪ್ರದೇಶಕ್ಕೆ ತೆರಳಿತ್ತು. ಈ ವೇಳೆ, ತನಿಖಾ ತಂಡದ ಮೇಲೆ ದಾಳಿ ನಡೆದಿದೆ.

ಇದರ ನಡುವೆಯೂ ಸಿಬಿಐ ತಂಡವು ಎರಡು ಮೊಬೈಲ್ ಫೋನ್‌ಗಳು ಮತ್ತು ಕೆಲವು ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಯುಜಿಸಿ ನೆಟ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ಘಟನೆಯಲ್ಲಿ ಸಿಬಿಐ ತಂಡದ ವಾಹನ ಚಾಲಕನಿಗೆ ತೀವ್ರವಾಗಿ ಥಳಿಸಲಾಗಿದೆ. ಸಿಬಿಐ ತಂಡ ಜತೆಗಿದ್ದ ನಾವಡ ಜಿಲ್ಲಾ ಪೊಲೀಸ್ ತಂಡ ಮೇಲೂ ದಾಳಿ ನಡೆಸಲಾಗಿದೆ. ಬಳಿಕ ಸಿಬಿಐ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?: ಸಿಬಿಐ ತಂಡವು ಮುರ್ಹೆನಾದ ಕಾಸಿಯಾಡಿಹ್ ಗ್ರಾಮದ ನಿವಾಸಿ ಫೂಲ್‌ಚಂದ್ ಪ್ರಸಾದ್ ಮತ್ತು ಪತ್ನಿ ಬಬಿತಾ ದೇವಿ ಮನೆಯ ಮೇಲೆ ದಾಳಿ ಮಾಡಿದ ವೇಳೆ ಪರಿಶೀಲನೆ ಬಳಿಕ ಹಿಂತಿರುಗುತ್ತಿತ್ತು. ಈ ಸಮಯದಲ್ಲಿ ಕುಟುಂಬ ಸದಸ್ಯರು ಮತ್ತು ಸುಮಾರು 200-300 ಜನರು ಜಮಾಯಿಸಿ ಸಿವಿಲ್ ಡ್ರೆಸ್‌ನಲ್ಲಿದ್ದ ಸಿಬಿಐ ತಂಡವನ್ನು ಸುತ್ತುವರೆದಿದ್ದಾರೆ. ಅಲ್ಲದೇ, ಇವರನ್ನು ನಕಲಿ ಅಧಿಕಾರಿಗಳು ಎಂದು ಜನರು ಕರೆದಿದ್ದಾರೆ.

ಆಗ ಸಿಬಿಐ ಅಧಿಕಾರಿಗಳು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಜನರ ಗುಂಪು ಅಧಿಕಾರಿಗಳ ಮಾತನ್ನು ಕೇಳದೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದೆ. ಬಳಿಕ ರಾಜೌಲಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ನಂತರ ಪರಿಸ್ಥಿತಿ ಸಹಜವಾಗಿದೆ. ಈ ದಾಳಿಯಲ್ಲಿ ಸಿಬಿಐ ತಂಡದ ಚಾಲಕ ಸಂಜಯ್ ಸೋನಿ ಗಾಯಗೊಂಡಿದ್ದು, ಅಧಿಕಾರಿಯೊಬ್ಬರ ಅಂಗಿ ಹರಿದಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ, ಮುರ್ಹೆನಾ ಪಂಚಾಯತ್​ ಸದಸ್ಯ ಮಿಥ್ಲೇಶ್ ಪ್ರಸಾದ್ ಮಹಿಳಾ ಪೇದೆಯೊಬ್ಬರನ್ನು ನಿಂದಿಸಿದ್ದು, ಸಿಬಿಐ ಅಧಿಕಾರಿಗಳ ಮೇಲೂ ದಾಳಿ ಮುಂದಾಗಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಎಸ್‌ಹೆಚ್‌ಒ, ಇನ್‌ಸ್ಪೆಕ್ಟರ್‌ ರಾಜೇಶ್‌ಕುಮಾರ್‌ ಮಾತನಾಡಿ, ಸಿಬಿಐ ಮತ್ತು ಪೊಲೀಸ್‌ ತಂಡದ ಮೇಲೆ ದಾಳಿ ಕುರಿತಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಓರ್ವ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತರನ್ನು ಕಾಸಿಯಾಡಿ ಗ್ರಾಮದ ನಿವಾಸಿ ಫೂಲಚಂದ್ ಪ್ರಸಾದ್ ಪುತ್ರಿ ರಾಧಾ ಕುಮಾರಿ ಅಲಿಯಾಸ್ ಮಧು, ಶ್ರವಣ್ ಕುಮಾರ್ ಪುತ್ರ ಪ್ರಿನ್ಸ್ ಕುಮಾರ್, ಚುಂಚುನ್ ಪ್ರಸಾದ್ ಪುತ್ರ ಲಲನ್ ಕುಮಾರ್ ಮತ್ತು ರಾಜೇಂದ್ರ ಪ್ರಸಾದ್ ಪುತ್ರ ಅಮರ್ಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಈಗಾಗಲೇ ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೀಟ್​ ಪರೀಕ್ಷೆ ಅಕ್ರಮ ಆರೋಪ: ತನಿಖೆ ಆರಂಭಿಸಿದ ಸಿಬಿಐ, ಬಿಹಾರ ಬಳಿಕ ಮಹಾರಾಷ್ಟ್ರದಲ್ಲೂ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.