ETV Bharat / bharat

ಜಾರ್ಖಂಡ್ ನಂತರ ಹೈದರಾಬಾದ್​​ಗೆ ಬಂದ ಬಿಹಾರ ಕಾಂಗ್ರೆಸ್​ ಶಾಸಕರು

author img

By ETV Bharat Karnataka Team

Published : Feb 5, 2024, 6:31 AM IST

ಹೈದರಾಬಾದ್​​ನಲ್ಲಿ ವಾಸ್ತವ್ಯ ಹೂಡಿರುವ ಜೆಎಂಎಂ - ಕಾಂಗ್ರೆಸ್ ಶಾಸಕರು ಜಾರ್ಖಂಡ್​ಗೆ ವಾಪಸ್​ ಆಗಿದ್ದರೆ, ಇದೀಗ ಬಿಹಾರ ಕಾಂಗ್ರೆಸ್​ ಶಾಸಕರು ಹೈದರಾಬಾದ್​ಗೆ ಆಗಮಿಸಿದ್ದಾರೆ.

After Jharkhand, Bihar Congress MLAs also land in Hyderabad
ಜಾರ್ಖಂಡ್ ನಂತರ ಹೈದರಾಬಾದ್​​ಗೆ ಬಂದ ಬಿಹಾರ ಕಾಂಗ್ರೆಸ್​ ಶಾಸಕರು

ಹೈದರಾಬಾದ್/ಪಾಟ್ನಾ: ಜಾರ್ಖಂಡ್ ಶಾಸಕರು ಹೈದರಾಬಾದ್‌ಗೆ ಬಂದು ವಾಪಸ್​​ ಹೋದ ಬಳಿಕ ಇದೀಗ ಬಿಹಾರದ ಕಾಂಗ್ರೆಸ್​ ಶಾಸಕರು ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಬಿಜೆಪಿಯ ಆಮಿಷಗಳಿಂದ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಈ ಬಿಹಾರ ಶಾಸಕರು ಹೈದರಾಬಾದ್​ಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟು 19 ಪಕ್ಷದ ಶಾಸಕರ ಪೈಕಿ ಕನಿಷ್ಠ 16 ಶಾಸಕರು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪಾಟ್ನಾದಿಂದ ಆಗಮಿಸಿದ ಇವರನ್ನೆಲ್ಲ ಹೈದರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ರೆಸಾರ್ಟ್‌ಯೊಂದಕ್ಕೆ ಕರೆದೊಯ್ಯಲಾಗಿದೆ. ಫೆಬ್ರವರಿ 11 ರವರೆಗೆ ಇವರೆಲ್ಲ ಅಲ್ಲಿಯೇ ಉಳಿಯುವ ಸಾಧ್ಯತೆಯಿದೆ. ಸಿದ್ಧಾರ್ಥ, ಅಬಿದುರ್ ರೆಹಮಾನ್ ಮತ್ತು ವಿಜಯ್ ಶಂಕರ್ ದುಬೆ ಎಂಬ ಮೂವರು ಶಾಸಕರು ಆರೋಗ್ಯದ ಕಾರಣದಿಂದ ಹೈದರಾಬಾದ್​ಗೆ ಆಗಮಿಸಿಲ್ಲ ಎಂದು ಹೇಳಲಾಗಿದೆ.

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಬಿಹಾರದ ಈ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ. ಫೆಬ್ರವರಿ 12 ರಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಈ ಸ್ಥಳಾಂತರ ಮಾಡಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಸರ್ಕಾರಕ್ಕೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಆದೇಶಿಸಿರುವ ಹಿನ್ನೆಲೆಯಲ್ಲಿ 12 ರಂದು ಪ್ಲೋರ್​ ಟೆಸ್ಟ್​​​ ನಡೆಯಲಿದೆ. ಸಿಎಂ ನಿತೀಶ್​ ಕುಮಾರ್​​ 'ಮಹಾಘಟಬಂಧನ್' ಜತೆ ಸಂಬಂಧ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷ ಕಾಂಗ್ರೆಸ್​ ಆಗಿದೆ.

ಕಾಂಗ್ರೆಸ್ ಹೈಕಮಾಂಡ್​​​​​​​​​​ ಬಿಹಾರದ ಕೈ ಶಾಸಕರನ್ನು ದೆಹಲಿಗೆ ಕರೆಯಿಸಿಕೊಂಡಿತ್ತು. ಹೈಕಮಾಂಡ್​ ಕರೆಯ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಈ ಎಲ್ಲ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೇ ವೇಳೆ ಈ ಎಲ್ಲ ಶಾಸಕರನ್ನು ಹೈದರಾಬಾದ್​ಗೆ ಕಳುಹಿಸಿಕೊಡಲಾಗಿತ್ತು.

ಜನವರಿ 28ರಂದು ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದ ನಂತರ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು, ತಮ್ಮ ಶಾಸಕರ ಮೇಲೆ ನಿಗಾ ಇಡುವಂತೆ ಕಾಂಗ್ರೆಸ್ ನಾಯಕತ್ವವನ್ನು ಕೇಳಿಕೊಂಡಿದ್ದರು. ಆದರೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮರುದಿನ ರಾಜ್ಯದ ಕಿಶನ್‌ಗಂಜ್ ತಲುಪಿದ ಹಿನ್ನೆಲೆಯಲ್ಲಿ ಅವರೆಲ್ಲ ಬಿಹಾರದಲ್ಲೇ ಉಳಿದುಕೊಂಡಿದ್ದರು.

ಮೊತ್ತೊಂದೆಡೆ, ಹೈದರಾಬಾದ್​ನಲ್ಲಿ ವಾಸ್ತವ್ಯ ಹೂಡಿದ್ದ ಜೆಎಂಎಂ ಹಾಗೂ ಇತರ ಶಾಸಕರು ಇಂದು ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಹೈದರಾಬಾದ್​ನಿಂದ ಜಾರ್ಖಂಡ್​ಗೆ ವಾಪಸ್​ ಆಗಿದ್ದಾರೆ. ಆದರೆ ಬಿಹಾರದ ಕಾಂಗ್ರೆಸ್​ ಶಾಸಕರು ಹೈದರಾಬಾದ್‌ಗೆ ಆಗಮಿಸಿದ್ದಾರೆ. ಚಂಪೈ ಸೊರೇನ್ ನೇತೃತ್ವದ ಜಾರ್ಖಂಡ್‌ನ ಹೊಸ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸುವ ಸಾಧ್ಯತೆಯಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಎರಡು ದಿನಗಳ ನಂತರ ಶುಕ್ರವಾರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಚಂಪೈ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನು ಓದಿ: ನಾಳೆ ವಿಶ್ವಾಸಮತಯಾಚನೆ: ಹೈದರಾಬಾದ್​ನಿಂದ ಜಾರ್ಖಂಡ್​ನತ್ತ ಶಾಸಕರ ಪಯಣ

ಹೈದರಾಬಾದ್/ಪಾಟ್ನಾ: ಜಾರ್ಖಂಡ್ ಶಾಸಕರು ಹೈದರಾಬಾದ್‌ಗೆ ಬಂದು ವಾಪಸ್​​ ಹೋದ ಬಳಿಕ ಇದೀಗ ಬಿಹಾರದ ಕಾಂಗ್ರೆಸ್​ ಶಾಸಕರು ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಬಿಜೆಪಿಯ ಆಮಿಷಗಳಿಂದ ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಈ ಬಿಹಾರ ಶಾಸಕರು ಹೈದರಾಬಾದ್​ಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟು 19 ಪಕ್ಷದ ಶಾಸಕರ ಪೈಕಿ ಕನಿಷ್ಠ 16 ಶಾಸಕರು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪಾಟ್ನಾದಿಂದ ಆಗಮಿಸಿದ ಇವರನ್ನೆಲ್ಲ ಹೈದರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ರೆಸಾರ್ಟ್‌ಯೊಂದಕ್ಕೆ ಕರೆದೊಯ್ಯಲಾಗಿದೆ. ಫೆಬ್ರವರಿ 11 ರವರೆಗೆ ಇವರೆಲ್ಲ ಅಲ್ಲಿಯೇ ಉಳಿಯುವ ಸಾಧ್ಯತೆಯಿದೆ. ಸಿದ್ಧಾರ್ಥ, ಅಬಿದುರ್ ರೆಹಮಾನ್ ಮತ್ತು ವಿಜಯ್ ಶಂಕರ್ ದುಬೆ ಎಂಬ ಮೂವರು ಶಾಸಕರು ಆರೋಗ್ಯದ ಕಾರಣದಿಂದ ಹೈದರಾಬಾದ್​ಗೆ ಆಗಮಿಸಿಲ್ಲ ಎಂದು ಹೇಳಲಾಗಿದೆ.

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಬಿಹಾರದ ಈ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ. ಫೆಬ್ರವರಿ 12 ರಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಈ ಸ್ಥಳಾಂತರ ಮಾಡಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಸರ್ಕಾರಕ್ಕೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಆದೇಶಿಸಿರುವ ಹಿನ್ನೆಲೆಯಲ್ಲಿ 12 ರಂದು ಪ್ಲೋರ್​ ಟೆಸ್ಟ್​​​ ನಡೆಯಲಿದೆ. ಸಿಎಂ ನಿತೀಶ್​ ಕುಮಾರ್​​ 'ಮಹಾಘಟಬಂಧನ್' ಜತೆ ಸಂಬಂಧ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷ ಕಾಂಗ್ರೆಸ್​ ಆಗಿದೆ.

ಕಾಂಗ್ರೆಸ್ ಹೈಕಮಾಂಡ್​​​​​​​​​​ ಬಿಹಾರದ ಕೈ ಶಾಸಕರನ್ನು ದೆಹಲಿಗೆ ಕರೆಯಿಸಿಕೊಂಡಿತ್ತು. ಹೈಕಮಾಂಡ್​ ಕರೆಯ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಈ ಎಲ್ಲ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೇ ವೇಳೆ ಈ ಎಲ್ಲ ಶಾಸಕರನ್ನು ಹೈದರಾಬಾದ್​ಗೆ ಕಳುಹಿಸಿಕೊಡಲಾಗಿತ್ತು.

ಜನವರಿ 28ರಂದು ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾದ ನಂತರ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು, ತಮ್ಮ ಶಾಸಕರ ಮೇಲೆ ನಿಗಾ ಇಡುವಂತೆ ಕಾಂಗ್ರೆಸ್ ನಾಯಕತ್ವವನ್ನು ಕೇಳಿಕೊಂಡಿದ್ದರು. ಆದರೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮರುದಿನ ರಾಜ್ಯದ ಕಿಶನ್‌ಗಂಜ್ ತಲುಪಿದ ಹಿನ್ನೆಲೆಯಲ್ಲಿ ಅವರೆಲ್ಲ ಬಿಹಾರದಲ್ಲೇ ಉಳಿದುಕೊಂಡಿದ್ದರು.

ಮೊತ್ತೊಂದೆಡೆ, ಹೈದರಾಬಾದ್​ನಲ್ಲಿ ವಾಸ್ತವ್ಯ ಹೂಡಿದ್ದ ಜೆಎಂಎಂ ಹಾಗೂ ಇತರ ಶಾಸಕರು ಇಂದು ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಹೈದರಾಬಾದ್​ನಿಂದ ಜಾರ್ಖಂಡ್​ಗೆ ವಾಪಸ್​ ಆಗಿದ್ದಾರೆ. ಆದರೆ ಬಿಹಾರದ ಕಾಂಗ್ರೆಸ್​ ಶಾಸಕರು ಹೈದರಾಬಾದ್‌ಗೆ ಆಗಮಿಸಿದ್ದಾರೆ. ಚಂಪೈ ಸೊರೇನ್ ನೇತೃತ್ವದ ಜಾರ್ಖಂಡ್‌ನ ಹೊಸ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸುವ ಸಾಧ್ಯತೆಯಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಎರಡು ದಿನಗಳ ನಂತರ ಶುಕ್ರವಾರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಚಂಪೈ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನು ಓದಿ: ನಾಳೆ ವಿಶ್ವಾಸಮತಯಾಚನೆ: ಹೈದರಾಬಾದ್​ನಿಂದ ಜಾರ್ಖಂಡ್​ನತ್ತ ಶಾಸಕರ ಪಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.