ETV Bharat / bharat

52 ದಿನಗಳ ಅಮರನಾಥ ಯಾತ್ರೆ ಇಂದು ಮುಕ್ತಾಯ; ಸುಮಾರು 5 ಲಕ್ಷ ಯಾತ್ರಿಕರಿಂದ ದರ್ಶನ - AMARNATH YATRA

author img

By ETV Bharat Karnataka Team

Published : Aug 19, 2024, 10:49 AM IST

ಕೊನೆಯ ದಿನವಾದ ಇಂದು ಮಹಂತ್​ ಸ್ವಾಮಿ ದೀಪೇಂದ್ರ ಗಿರಿ ಅವರು ಛಾರಿ ಮುಬಾರಕ್​​ (ಪವಿತ್ರ ಬೆಳ್ಳಿಯ ದಂಡ) ಹೊತ್ತೊಯ್ಯಲಿದ್ದಾರೆ.

52days of  annual Amarnath Yatra conclude today on Shravan Purnima
ಬೆಳ್ಳಿ ತಂಡದೊಂದಿಗೆ ಸಾಧುಸಂತರು (ANI)

ಶ್ರೀನಗರ: ಕಳೆದ 52ದಿನಗಳಿಂದ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಸರಾಗವಾಗಿ ನಡೆದ ಅಮರನಾಥ ಯಾತ್ರೆ ಶ್ರಾವಣ ಪೌರ್ಣಿಮೆಯ ದಿನವಾದ ಇಂದು ಮುಕ್ತಾಯವಾಗುತ್ತಿದೆ. ಈ ವರ್ಷದ ಈ ಅಮರನಾಥ ಯಾತ್ರೆಯಲ್ಲಿ ಸುಮಾರು 5 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ.

ಕೊನೆಯ ದಿನವಾದ ಇಂದು ಮಹಂತ್​ ಸ್ವಾಮಿ ದೀಪೇಂದ್ರ ಗಿರಿ ಅವರು ಛಾರಿ ಮುಬಾರಕ್​​ (ಪವಿತ್ರ ಬೆಳ್ಳಿಯ ದಂಡ) ಹೊತ್ತೊಯ್ಯಲಿದ್ದಾರೆ. ಪಂಚತಾರ್ಣಿಯದಿಂದ ಅವರು ಪ್ರಯಾಣ ಬೆಳೆಸಲಿದ್ದಾರೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಈ ಯಾತ್ರೆ ಜೂನ್​ 29ರಂದು ಆರಂಭವಾಗಿದ್ದು, ಬಿಗಿ ಭದ್ರತೆಯೊಂದಿಗೆ ಸಾಗಿತ್ತು. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಎರಡು ಮಾರ್ಗವಾಗಿ ಅಮರನಾಥ ಯಾತ್ರೆ ಕೈಗೊಳ್ಳಲಾಗಿತ್ತು. ಜಮ್ಮುವಿನಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್​ ಎರಡು ಬೇಸ್​ ಮೂಲಕ ಈ ಯಾತ್ರೆ ಸಾಗಿತ್ತು. ಈ ಯಾತ್ರಾ ಮಾರ್ಗದುದ್ದಕ್ಕೂ ಪೊಲೀಸರು ಮತ್ತು ಸಿಎಪಿಎಫ್​ ಭದ್ರತೆ ನೀಡಿದ್ದರು. ವೃತ್ತಿಪರ ಮತ್ತು ತಾಂತ್ರಿಕ ಸುಸಜ್ಜಿತ ಭದ್ರತೆಯನ್ನು ನಡೆಸಲಾಗಿದ್ದು, ಸ್ಥಳೀಯರು ಸಂಪೂರ್ಣ ಸಹಕಾರದಿಂದ ಯಾತ್ರೆ ಯಶಸ್ವಿಯಾಗಿ ಸಾಗಿತು.

ಅಂತಿಮ ದಿನವಾದ ಇಂದು ಭಕ್ತರೊಂದಿಗೆ ಸಾಧುಗಳು ಪಂಚತಾರ್ಣಿಯಿಂದ ಯಾತ್ರೆ ಪ್ರಾರಂಭಿಸಿದ್ದು, ಸಮುದ್ರಮಟ್ಟದಿಂದ 3888 ಮೀಟರ್​ ಎತ್ತರದಲ್ಲಿರುವ ಹಿಮಲಿಂಗದ ದರ್ಶನ ಪಡೆಯಲಿದ್ದಾರೆ. ಪೂರ್ಣಿಮೆಯ ಆರಂಭದಿಂದ ಇಲ್ಲಿ ಹಿಮದ ಆಕೃತಿ ಶಿವಲಿಂಗ ಬೆಳೆಯುತ್ತದೆ ಮತ್ತು ಕ್ಷೀಣಿಸುತ್ತದೆ. ಈ ದೇಗುಲವು ಶಿವನ ಪೌರಾಣಿಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ.

ಛಾರಿ ಮುಬಾರಕ್​ ಆಗಸ್ಟ್​ 14ರಂದು ದಶಮಿ ಅಖಾರ ದೇಗುಲದಿಂದ ತೆರಳಿತ್ತು. ಅನೇಕ ದೇಗುಲಗಳಲ್ಲಿ ಪೂಜೆ ಬಳಿಕ ಪಹಲ್ಗಾಮ್​ನಲ್ಲಿ ಎರಡು ರಾತ್ರಿ ಇದ್ದು ಆಗಸ್ಟ್​ 16ರಿಂದ ಗುಹೆಯತ್ತ ಪ್ರಯಾಣ ನಡೆಸಿತು.

ಅಮರನಾಥ ಯಾತ್ರೆಯನ್ನು ಶಾಂತಿ, ಸುವ್ಯವಸ್ಥೆ ಜೊತೆಗೆ ಸರಾಗವಾಗಿ ವ್ಯವಸ್ಥೆ ನಿರ್ವಹಿಸಿದ ಹಿನ್ನೆಲೆ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ನೇತೃತ್ವದ ಅಮರನಾಥಜಿ ದೇಗುಲ ಮಂಡಳಿ ಕಾರ್ಯಕ್ಕೆ ದಿಪೇಂದ್ರ ಗಿರಿ ಸಂತಸ ವ್ಯಕ್ತಪಡಿಸಿದ್ದಾರೆ.

ಗುಹಾ ದೇಗುಲದ ಮಾರ್ಗದಲ್ಲಿ ಅಗಲೀಕರಣ ಸೇರಿದಂತೆ ಅನೇಕ ಸೌಲಭ್ಯ ಒದಗಿಸಿದ ಹಿನ್ನೆಲೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದೆ. ಛಾರಿ ಮುಬಾರಕ್​ನಲ್ಲಿ ಮನುಕುಲದ ಶಾಂತಿ ಮತ್ತು ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಶಾಂತಿ ಮತ್ತು ಸಮೃದ್ಧಿಗೂ ಪ್ರಾರ್ಥಿಸಲಾಗಿದೆ ಎಂದು ದಿಪೇಂದ್ರ ಗಿರಿ ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ: ಹೊಸ ದಾಖಲೆ ಬರೆದ ಅಮರನಾಥ ಯಾತ್ರೆ; ರಕ್ಷಾ ಬಂಧನ್​ ದಿನದಂದು ಮುಕ್ತಾಯ

ಶ್ರೀನಗರ: ಕಳೆದ 52ದಿನಗಳಿಂದ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಸರಾಗವಾಗಿ ನಡೆದ ಅಮರನಾಥ ಯಾತ್ರೆ ಶ್ರಾವಣ ಪೌರ್ಣಿಮೆಯ ದಿನವಾದ ಇಂದು ಮುಕ್ತಾಯವಾಗುತ್ತಿದೆ. ಈ ವರ್ಷದ ಈ ಅಮರನಾಥ ಯಾತ್ರೆಯಲ್ಲಿ ಸುಮಾರು 5 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ.

ಕೊನೆಯ ದಿನವಾದ ಇಂದು ಮಹಂತ್​ ಸ್ವಾಮಿ ದೀಪೇಂದ್ರ ಗಿರಿ ಅವರು ಛಾರಿ ಮುಬಾರಕ್​​ (ಪವಿತ್ರ ಬೆಳ್ಳಿಯ ದಂಡ) ಹೊತ್ತೊಯ್ಯಲಿದ್ದಾರೆ. ಪಂಚತಾರ್ಣಿಯದಿಂದ ಅವರು ಪ್ರಯಾಣ ಬೆಳೆಸಲಿದ್ದಾರೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಈ ಯಾತ್ರೆ ಜೂನ್​ 29ರಂದು ಆರಂಭವಾಗಿದ್ದು, ಬಿಗಿ ಭದ್ರತೆಯೊಂದಿಗೆ ಸಾಗಿತ್ತು. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಎರಡು ಮಾರ್ಗವಾಗಿ ಅಮರನಾಥ ಯಾತ್ರೆ ಕೈಗೊಳ್ಳಲಾಗಿತ್ತು. ಜಮ್ಮುವಿನಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್​ ಎರಡು ಬೇಸ್​ ಮೂಲಕ ಈ ಯಾತ್ರೆ ಸಾಗಿತ್ತು. ಈ ಯಾತ್ರಾ ಮಾರ್ಗದುದ್ದಕ್ಕೂ ಪೊಲೀಸರು ಮತ್ತು ಸಿಎಪಿಎಫ್​ ಭದ್ರತೆ ನೀಡಿದ್ದರು. ವೃತ್ತಿಪರ ಮತ್ತು ತಾಂತ್ರಿಕ ಸುಸಜ್ಜಿತ ಭದ್ರತೆಯನ್ನು ನಡೆಸಲಾಗಿದ್ದು, ಸ್ಥಳೀಯರು ಸಂಪೂರ್ಣ ಸಹಕಾರದಿಂದ ಯಾತ್ರೆ ಯಶಸ್ವಿಯಾಗಿ ಸಾಗಿತು.

ಅಂತಿಮ ದಿನವಾದ ಇಂದು ಭಕ್ತರೊಂದಿಗೆ ಸಾಧುಗಳು ಪಂಚತಾರ್ಣಿಯಿಂದ ಯಾತ್ರೆ ಪ್ರಾರಂಭಿಸಿದ್ದು, ಸಮುದ್ರಮಟ್ಟದಿಂದ 3888 ಮೀಟರ್​ ಎತ್ತರದಲ್ಲಿರುವ ಹಿಮಲಿಂಗದ ದರ್ಶನ ಪಡೆಯಲಿದ್ದಾರೆ. ಪೂರ್ಣಿಮೆಯ ಆರಂಭದಿಂದ ಇಲ್ಲಿ ಹಿಮದ ಆಕೃತಿ ಶಿವಲಿಂಗ ಬೆಳೆಯುತ್ತದೆ ಮತ್ತು ಕ್ಷೀಣಿಸುತ್ತದೆ. ಈ ದೇಗುಲವು ಶಿವನ ಪೌರಾಣಿಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ.

ಛಾರಿ ಮುಬಾರಕ್​ ಆಗಸ್ಟ್​ 14ರಂದು ದಶಮಿ ಅಖಾರ ದೇಗುಲದಿಂದ ತೆರಳಿತ್ತು. ಅನೇಕ ದೇಗುಲಗಳಲ್ಲಿ ಪೂಜೆ ಬಳಿಕ ಪಹಲ್ಗಾಮ್​ನಲ್ಲಿ ಎರಡು ರಾತ್ರಿ ಇದ್ದು ಆಗಸ್ಟ್​ 16ರಿಂದ ಗುಹೆಯತ್ತ ಪ್ರಯಾಣ ನಡೆಸಿತು.

ಅಮರನಾಥ ಯಾತ್ರೆಯನ್ನು ಶಾಂತಿ, ಸುವ್ಯವಸ್ಥೆ ಜೊತೆಗೆ ಸರಾಗವಾಗಿ ವ್ಯವಸ್ಥೆ ನಿರ್ವಹಿಸಿದ ಹಿನ್ನೆಲೆ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ನೇತೃತ್ವದ ಅಮರನಾಥಜಿ ದೇಗುಲ ಮಂಡಳಿ ಕಾರ್ಯಕ್ಕೆ ದಿಪೇಂದ್ರ ಗಿರಿ ಸಂತಸ ವ್ಯಕ್ತಪಡಿಸಿದ್ದಾರೆ.

ಗುಹಾ ದೇಗುಲದ ಮಾರ್ಗದಲ್ಲಿ ಅಗಲೀಕರಣ ಸೇರಿದಂತೆ ಅನೇಕ ಸೌಲಭ್ಯ ಒದಗಿಸಿದ ಹಿನ್ನೆಲೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದೆ. ಛಾರಿ ಮುಬಾರಕ್​ನಲ್ಲಿ ಮನುಕುಲದ ಶಾಂತಿ ಮತ್ತು ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಶಾಂತಿ ಮತ್ತು ಸಮೃದ್ಧಿಗೂ ಪ್ರಾರ್ಥಿಸಲಾಗಿದೆ ಎಂದು ದಿಪೇಂದ್ರ ಗಿರಿ ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ: ಹೊಸ ದಾಖಲೆ ಬರೆದ ಅಮರನಾಥ ಯಾತ್ರೆ; ರಕ್ಷಾ ಬಂಧನ್​ ದಿನದಂದು ಮುಕ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.