ಕೊರೊನಾ ವಾರಿಯರ್ಸ್ಗೆ ದಾಸೋಹ ವ್ಯವಸ್ಥೆ: ಕಾಲು ತೊಳೆದು ಬರಮಾಡಿಕೊಂಡ ಸಮಿತಿ
![ETV Thumbnail thumbnail](https://etvbharatimages.akamaized.net/etvbharat/prod-images/320-214-7027171-146-7027171-1588402153911.jpg)
ಕುಣಿಗಲ್ ಪಟ್ಟಣದಲ್ಲಿ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್ಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕ ದಿನಾಚರಣೆ ಅಂಗವಾಗಿ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್ ಕಾಲು ತೊಳೆದು, ಹೂಮಳೆ ಸುರಿಸಲಾಯ್ತು. ಬಳಿಕ ಗುಲಾಬಿ ಹೂಗಳನ್ನು ನೀಡಿ ಆತ್ಮೀಯವಾಗಿ ಸೇವೆಯನ್ನು ಶ್ಲಾಘಿಸಲಾಗಿದೆ.