ಧಾವಂತದಲ್ಲಿ ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಕಾನ್​ಸ್ಟೇಬಲ್​ - ಮಹಿಳೆ ಜೀವ ಉಳಿಸಿದ ಕಾನ್​ಸ್ಟೇಬಲ್​

🎬 Watch Now: Feature Video

thumbnail

By

Published : May 8, 2022, 10:39 PM IST

ಜೋಧ್​ಪುರ: ಮಹಿಳೆಯೋರ್ವಳು ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದಾಗ ಕಾಲು ಜಾರಿ ರೈಲಿನ ಕೆಳಗೆ ಸಿಲುಕುತ್ತಿದ್ದಳು. ಈ ಕ್ಷಣದಲ್ಲಿ ದೇವರಂತೆ ಬಂದ ರೈಲ್ವೆ ಕಾನ್​ಸ್ಟೇಬಲ್​ ಒಬ್ಬರು ಆಕೆಯನ್ನು ಬಚಾವ್​ ಮಾಡಿ ಪ್ರಾಣ ಉಳಿಸಿದ ಘಟನೆ ಜೋಧ್‌ಪುರ ನಿಲ್ದಾಣದಲ್ಲಿ ನಡೆದಿದೆ. ಜಮ್ಮು- ತಾವಿ ಎಕ್ಸ್​ಪ್ರೆಸ್​ ರೈಲು ಜೋಧ್​ಪುರ ನಿಲ್ದಾಣದಲ್ಲಿ ನಿಧಾನವಾಗಿ ಹೊರಟಿದ್ದಾಗ ರೈಲನ್ನು ಏರಲು ಮುಂದಾದ ಮಹಿಳೆ ಕೈ ಜಾರಿ ಫ್ಲಾಟ್​ಫಾರ್ಮ್​ ಮತ್ತು ರೈಲಿನ ಮಧ್ಯೆ ಬಿದ್ದಿದ್ದಾಳೆ. ಇದನ್ನು ಕಂಡ ಪೊಲೀಸ್​ ಸಜನ್​ರಾಯ್ ಎಂಬುವರು​ ತಕ್ಷಣವೇ ಆಕೆಯ ಕೈ ಹಿಡಿದು ಎಳೆದುಕೊಂಡು ರಕ್ಷಿಸಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.