ಗೋಮಾತೆಗೆ ಸಹಜ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಈ ಯುವಕರು
ಬಾಗಲಕೋಟೆ: ನವನಗರದ ಸೆಕ್ಟರ್ ನಂಬರ್ 38ರ ರಸ್ತೆಬದಿಯಲ್ಲಿ ಆಕಳೊಂದಕ್ಕೆ ಅಲ್ಲಾಭಕ್ಷ್ ಹನಿ ಹಾಗೂ ಬಂದೆನವಾಜ್ ಬಿಜಾಪುರ ಎಂಬ ಇಬ್ಬರು ಯುವಕರು ಸಹಜ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಯುವಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ.