ಮನೆಯವರೊಂದಿಗೆ ಫೋನ್ನಲ್ಲಿ ಮಾತನಾಡಿದ ಅನುಭವ್.. - ಉಜಿರೆ ಬಾಲಕ ನಾಪತ್ತೆ ಪ್ರಕರಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9935152-thumbnail-3x2-chaii.jpg)
ಬೆಳ್ತಂಗಡಿ: ಡಿ.17 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯ ಸಮೀಪದ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲೀಕರ ಮಗ ಅನುಭವ್ (8) ಹಣಕ್ಕಾಗಿ ಅಪಹರಿಸಲಾಗಿತ್ತು. ಇದು ರಾಜ್ಯದಲ್ಲೆಡೆ ಸುದ್ದಿಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ಕು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಇಂದು ಬೆಳಗ್ಗೆ ಕೋಲಾರದ ಸಮೀಪ ಮಾಲೂರಿನಲ್ಲಿ ಬಾಲಕ ಹಾಗೂ ಅಪಹರಣ ಮಾಡಿದ ಆರೋಪಿಗಳು ಪತ್ತೆಯಾಗಿದ್ದರು. ಇದೀಗ ಅನುಭವ್ ತನ್ನ ಅಜ್ಜ - ಅಜ್ಜಿ, ಅಣ್ಣ ಹಾಗೂ ದೊಡ್ಡಮ್ಮನ ಜೊತೆ ಪೋನ್ ನಲ್ಲಿ ಮಾತನಾಡಿದ್ದು, ಮನೆಯಲ್ಲಿ ಸಂತಸ ಮೂಡಿದೆ.