ನಿಡಗುಂದಿ ಮುದ್ದೇಶ್ವರ ದೇವಸ್ಥಾನದ ಹುಂಡಿಗೆ ಕನ್ನ: ಜಾತ್ರೆಗೆ ಮುನ್ನವೇ ಹಣ ಕದ್ದೊಯ್ದ ಖದೀಮರು - ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣ
🎬 Watch Now: Feature Video

ವಿಜಯಪುರ: ದೇವಸ್ಥಾನದಲ್ಲಿನ ಹುಂಡಿ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ನಿಡಗುಂದಿಯಲ್ಲಿರುವ ಶ್ರೀ ಮುದ್ದೇಶ್ವರ ದೇವಸ್ಥಾನದ ಹುಂಡಿಯಲ್ಲಿನ ಹಣ ಕಳ್ಳತನವಾಗಿದೆ. ಪ್ರತಿವರ್ಷ ಮಾರ್ಚ್ನಲ್ಲಿ ಜಾತ್ರೆ ನಡೆಯುತ್ತಿದ್ದು, ಜಾತ್ರೆವೇಳೆ ಹುಂಡಿಯ ಹಣ ತೆಗೆಯಲಾಗುತ್ತಿತ್ತು. ಆದ್ರೆ ಜಾತ್ರೆ ಮುನ್ನವೇ ಖದೀಮರು ಕೈಚಳಕ ತೋರಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.